Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುವುದು!
ಧೂಳಿನ ಸಮಸ್ಯೆ, ಪೋಷಕಾಂಶ ರಹಿತವಾದ ಆಹಾರ, ಆನುವಂಶಿಕವಾದ ಕಾರಣ, ಎಸಿ ರೂಮ್ಗಳಲ್ಲಿ ದೀರ್ಘಕಾಲ ಕುಳಿತಿರುವುದು. ಹೀಗೆ ಅನೇಕ ಕಾರಣಗಳಿಂದ ಅಕಾಲಿಕವಾದ ಕೂದಲುದುರುವಿಕೆಯನ್ನು ಕಾಣಬಹುದು. ಹಿಂದಿನ ಕಾಲದಲ್ಲಿ ಕೂದಲುದುರುವಿಕೆ ಹಾಗೂ ಬಣ್ಣಗಳ ಬದಲಾವಣೆಯಾಗುವುದು ಎಂದರೆ ವಯಸ್ಸಾದ ಸಂಕೇತವಾಗಿತ್ತು. ವಯಸ್ಸಾದಂತೆ ಕೂದಲಿನ ಬಣ್ಣ ಬಿಳಿಯಾಗುವುದು, ಕೂದಲು ಉದುರಿ ಬೋಳು ತಲೆಯಾಗುತ್ತಿತ್ತು. ಆದರೀಗ ಚಿಕ್ಕ ವಯಸ್ಸಿನಲ್ಲೇ ವಿಪರೀತವಾದ ಕೂದಲುದುರುವಿಕೆ, ಬೊಕ್ಕು ತಲೆಯ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಈ ಸಮಸ್ಯೆಗೆ ಕೂದಲಿನ ಕಸಿಮಾಡುವದು ಹಾಗೂ ವಿಶೇಷ ಬಗೆಯ ಚಿಕಿತ್ಸಾ ಕ್ರಮಗಳು ಚಾಲ್ತಿಯಲ್ಲಿವೆ. ಆದರೆ ಅವು ಕೈಗೆಟುಕದಷ್ಟು ದುಬಾರಿ ಬೆಲೆಯಲ್ಲಿವೆ. ಅದೆಷ್ಟೇ ಚಿಕಿತ್ಸೆ ಅಥವಾ ಔಷಧಗಳ ಸೇವನೆ ಮಾಡಿದರೂ ನೈಸರ್ಗಿಕವಾಗಿ ಇರುವ ಕೇಶರಾಶಿಯಷ್ಟು ಸುಂದರ ಅಥವಾ ಗುಣಮಟ್ಟವಿರುವುದಿಲ್ಲ. ಹಾಗಾಗಿ ಆದಷ್ಟು ಆಯುರ್ವೇದದ ರೀತಿಯಲ್ಲಿಯೇ ಕೇಶಗಳ ಆರೈಕೆ ಮಾಡಬೇಕು. ಇಲ್ಲವಾದರೆ ಕೆಲವು ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆಗಳಿರುತ್ತವೆ.
ನೀವು ಅಥವಾ ನಿಮ್ಮ ಹತ್ತಿದವರು ಈ ಸಮಸ್ಯೆಗಳಿಂದಲೇ ಬೇಸತ್ತಿದ್ದಾರೆ ಎಂದಾದರೆ ಈರುಳ್ಳಿಯಿಂದ ಆರೈಕೆ ಮಾಡಿಕೊಳ್ಳಿ. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಅಧಿಕವಾಗಿರುವುದು. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ತಲೆಯಲ್ಲಿ ಹೆಚ್ಚು ಎಣ್ಣೆ ಶ್ರವಿಸುವಿಕೆ, ತಲೆ ಹೊಟ್ಟುಗಳನ್ನು ನಿವಾರಿಸುತ್ತದೆ. ಶೀಘ್ರದಲ್ಲಿ ಕೇಶಗಳ ಬೆಳವಣಿಗೆ ಹಾಗೂ ಹುಟ್ಟನ್ನು ಪಡೆದುಕೊಳ್ಳುವಂತೆ ಮಾಡುವುದು. ಈರುಳ್ಳಿಯ ರಸವನ್ನು ಹೇಗೆ ಬಳಸುವುದು ಎನ್ನುವ ಗೊಂದಲವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ... ಪರಿಹಾರವನ್ನು ತಿಳಿದುಕೊಳ್ಳಿ...
ಹಂತ-1
ಒಂದು ಈರುಳ್ಳಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಸಿಪ್ಪೆಯನ್ನು ನುಣಚಿ ತೆಗೆಯಿರಿ. ನಂತರ ಮಿಕ್ಸರ್/ಬೆಂಡರ್ನಲ್ಲಿ ರುಬ್ಬಿಕೊಳ್ಳಿ. ಒಂದು ಜರಡಿಯಲ್ಲಿ ಹಾಕಿ ಆದಷ್ಟು ರಸವನ್ನು ಬೇರ್ಪಡಿಸಿ. ಪಡೆದುಕೊಂಡ ರಸವನ್ನು ಒಂದು ಬೌಲ್ನಲ್ಲಿ ಹಾಕಿ ಪಕ್ಕಕ್ಕೆ ಇಡಿ.
ಹಂತ-2
ಟೇಬಲ್ ತೆಂಗಿನ ಎಣ್ಣೆಯನ್ನು ಬೌಲ್ನಲ್ಲಿ ತೆಗೆದುಕೊಳ್ಳಿ. ತೆಂಗಿನೆಣ್ಣೆಯಲ್ಲಿರುವ ಲೂರಿಕ್ ಆಸಿಡ್ ಹಾನಿಗೊಳಗಾದ ಕೇಶಗಳ ಕೋಶವನ್ನು ದುರಸ್ಥಿ ಮಾಡುತ್ತದೆ. ಅಲ್ಲದೆ ಹೊಸ ಕೂದಲಿನ ಹುಟ್ಟಿಗೂ ಸಹಕರಿಸುತ್ತದೆ.
ಹಂತ -3
ತೆಂಗಿನೆಣ್ಣೆಯ ಬೌಲ್ಗೆ 1 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿಮಾಡಿ. ಬಿಸಿಯಾದ ಎಣ್ಣೆ ಮಿಶ್ರಣ ತಣ್ಣಗಾಗಲು ಬಿಡಿ. ಇದರಲ್ಲಿರುವ ಮಾಯಿಶ್ಚರೈಸ್ ಅಂಶವು ಕೇಶರಾಶಿಯನ್ನು ಆರೋಗ್ಯ ಪೂರ್ಣವಾಗಿರುವಂತೆ ಮಾಡುತ್ತದೆ.
ಹಂತ-4
ತಣ್ಣಗಾದ ಎಣ್ಣೆ ಮಿಶ್ರಣಕ್ಕೆ ಈರುಳ್ಳಿ ರಸವನ್ನು ಸೇರಿಸಿ. ಈರುಳ್ಳಿ ರಸದ ವಾಸನೆಯನ್ನು ತಡೆಗಟ್ಟಲು ತಕ್ಷಣವೇ 3 ಹನಿ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣದಲ್ಲಿ ವಿಟಮಿನ್ ಸಿ ದ್ವಿಗುಣವಾಗಿ ಇರುತ್ತದೆ. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡಿ ಆರೈಕೆ ಮಾಡುತ್ತವೆ.
ಹಂತ-5
ವಿಶಾಲವಾದ ಹಲ್ಲುಗಳ ಬಾಚಣಿಕೆ/ಜಡಕು ಬಿಡಿಸುವ ಬಾಚಣಿಕೆಯನ್ನು ಬಳಸಿಕೊಂಡು ಕೂದಲು ರಾಶಿಯಲ್ಲಿರುವ ಗಂಟು ಅಥವಾ ಸುಕ್ಕನ್ನು ಬಿಡಿಸಿಕೊಳ್ಳಬೇಕು. ನಂತರ ನೆತ್ತಿಯ ಮಧ್ಯ ಭಾಗದಿಂದ ಕೆಳಭಾಗದವರೆಗೆ ಒಂದು ರೇಖೆಯನ್ನು ಹಾಕುವಂತೆ ಮಾಡಿ, ಕೇಶರಾಶಿಯ ಎರಡು ಭಾಗವನ್ನು ಮಾಡಿ. ನಂತರ ತುದಿಯಿಂದ ಪುನಃ ಬಾಚಿಕೊಳ್ಳಿ.
ಹಂತ-6
ಈಗ ತಯಾರಿಸಿಕೊಂಡ ಮಿಶ್ರಣವನ್ನು ನೆತ್ತಿ ಹಾಗೂ ಕೂದಲಿನ ಬುಡಭಾಗದಲ್ಲಿ ಅನ್ವಯಿಸಿ. ಐದು ನಿಮಿಷಗಳಕಾಲ ನೆತ್ತಿಯಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ರಕ್ತ ಸಂಚಾರದ ಹರಿವನ್ನು ಉತ್ತೇಜಿಸುವುದು. ಜೊತೆಗೆ ಮಿಶ್ರಣವು ಸರಿಯಾಗಿ ಹೀರಿಕೊಳ್ಳುವಂತೆ ಮಾಡಲಾಗುವುದು.
ಹಂತ-7
ನಂತರ 45 ನಿಮಿಷಗಳ ಕಾಲ ಬಿಡಬೇಕು. ಬಳಿಕ ಸಾವಯವ ಶಾಂಪೂಗಳನ್ನು ಬಳಸಿ ಕೇಶರಾಶಿಯನ್ನು ತೊಳೆಯಿರಿ. ಎಣ್ಣೆಯ ಪ್ರಮಾಣ ಹೆಚ್ಚಿರುವುದರಿಂದ ಕಂಡೀಷನರ್ ಬಳಸಿ ತೊಳೆಯುವ ಅಗತ್ಯ ಇರುವುದಿಲ್ಲ.
ಹಂತ-8
ನಿಮ್ಮ ಕೇಶರಾಶಿಯನ್ನು ಅತಿಯಾಗಿ ಉಜ್ಜುವ ಪ್ರಕ್ರಿಯೆಗೆ ಒಳಗಾಗುವಂತೆ ಮಾಡದಿರಿ. ಎರಡು ಹನಿ ತೆಂಗಿನ ಎಣ್ಣೆಯನ್ನು ಅಂಗೈಯಲ್ಲಿ ಹಾಕಿಕೊಂಡು, ಕೂದಲ ಬುಡದಿಂದ ತುದಿಯವರೆಗೂ ಸವರಿಕೊಳ್ಳಿ. ಎಣ್ಣೆಯನ್ನು ಅತಿಯಾಗಿ ಬಳಸಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಹಾಗೊಮ್ಮೆ ಮಾಡಿದರೆ ಕೇಶರಾಶಿಯು ಜಿಡ್ಡಿನಿಂದ ಕೂಡಿರುತ್ತವೆ.
ಎಚ್ಚರಿಕೆ
ಈರುಳ್ಳಿ ಹಾಗೂ ಅದಕ್ಕೆ ಬಳಸಿದ ಉತ್ಪನ್ನಗಳು ನಿಮಗೆ ಅಲರ್ಜಿ ಇರುವುದೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ನಂತರ ಅನ್ವಯಕ್ಕೆ ಮುಂದಾಗಿ.
ಫಲಿತಾಂಶ
ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮುಂದುವರಿಸಿದರೆ 2 ತಿಂಗಳೊಳಗೆ ಬೋಳಾದ ತಲೆಯ ಭಾಗದಲ್ಲಿ ಕೂದಲು ಹುಟ್ಟುವುದು. ಕೂದಲು ದಟ್ಟವಾಗಿ ಬೆಳೆದು ಆರೋಗ್ಯ ಪೂರ್ಣವಾಗಿರುವಂತೆ ಮಾಡುತ್ತದೆ