Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಮಿರಮಿರನೇ ಮಿಂಚುವ ಕೂದಲಿಗಾಗಿ ಮೆಂತೆ ಕರಿಬೇವಿನ ಎಣ್ಣೆ
ಮೆಂತೆ ಕಾಳು ಹಾಗೂ ಕರಿಬೇವನ್ನು ಬಳಸಿಕೊಂಡು ತಯಾರಿಸುವಂತಹ ಎಣ್ಣೆಯಿಂದ ಕೂದಲಿನ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ತಿಳಿದುಕೊಳ್ಳಿ...
ಹೆಣ್ಣಿನ ಸೌಂದರ್ಯವೆಂಬುದು ಆಕೆಯ ಸುಂದರವಾದ ಮುಖಾರವಿಂದ ಮತ್ತು ಕೂದಲಿನಲ್ಲಿ ಅಡಗಿರುವ ಗುಟ್ಟಾಗಿದೆ. ಸ್ತ್ರೀ ತಮ್ಮ ಸುಂದರ ಮುಖಾರವಿಂದ ಮತ್ತು ಹೊಳೆಯುವ ಕೂದಲಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಮಾರುಕಟ್ಟೆಗೆ ಕಾಲಿಡುವ ಅತ್ಯುನ್ನತ ಸೌಂದರ್ಯ ಉತ್ಪನ್ನಗಳು ಮತ್ತು ಶಾಂಪೂ ಕಂಡೀಷನರ್ಗಳನ್ನು ಖರೀದಿಸಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಆತುರದಲ್ಲಿರುತ್ತಾರೆ.
ಇಂದಿನ ಆಧುನಿಕ ಜೀವನ ಪದ್ಧತಿ ಮತ್ತು ಕ್ಷಣಹೊತ್ತು ಕೂಡ ಬಿಡುವೇ ಇಲ್ಲದಿರುವುದು ಇಂತಹ ಉತ್ಪನ್ನಗಳ ಕಡೆಗೆ ಮಹಿಳೆಯರನ್ನು ಆಕರ್ಷಿತಗೊಳಿಸುತ್ತಿದೆ. ಹಿಂದೆ ನಮ್ಮ ಅಜ್ಜಿ, ತಾಯಿ ಮಾಡುತ್ತಿದ್ದ ಮನೆಮದ್ದುಗಳ ಬಳಕೆಗೆ ನಾವು ಇಂದು ವಿದಾಯ ಹೇಳಿದ್ದೇವೆ. ಅದನ್ನೆಲ್ಲಾ ಮಾಡಲು ಸಮಯ ಇಲ್ಲವೆಂದೋ ಇಲ್ಲವೇ ಉದಾಸೀನವೆಂದೋ ನಾವು ಹೇಳುತ್ತಿದ್ದೇವೆ. ಆದರೆ ನಿಮ್ಮ ಕೂದಲು ಮತ್ತು ತ್ವಚೆಗಾಗಿ ಈ ಮನೆಯ ಔಷಧಗಳನ್ನು ನೀವು ಬಳಸಲೇಬೇಕು ಎಂದೇ ಇಂದಿನ ಲೇಖನದಲ್ಲಿ ಸಲಹೆ ನೀಡುತ್ತಿದ್ದೇವೆ.

ನೈಸರ್ಗಿಕವಾಗಿ ದೊರೆಯುವ ಯಾವುದೇ ಉತ್ಪನ್ನಗಳು ಕೂದಲು ಮತ್ತು ಸೌಂದರ್ಯವನ್ನು ವೃದ್ಧಿಸಲಿವೆ. ಇಂದಿನ ಲೇಖನದಲ್ಲಿ ನಿಮ್ಮ ಕೂದಲಿನ ಪೋಷಣೆಯನ್ನು ಮಾಡಿ ನಳನಳಿಸುವ ಕೂದಲನ್ನು ಪಡೆದುಕೊಳ್ಳಲು ಸಹಕಾರಿ ಎಂದೆನಿಸಿರುವ ಉತ್ತಮ ಎಣ್ಣೆ ತಯಾರಿಯೊಂದನ್ನು ತಿಳಿಸುತ್ತಿದ್ದೇವೆ. ಮೆಂತೆ ಬೀಜ ಮತ್ತು ಕರಿಬೇವು ಮೊದಲಾದ ಔಷಧೀಯ ಗುಣಗಳನ್ನು ಹೊಂದಿರುವ ಸಾಮಾಗ್ರಿಗಳಿಂದ ಈ ಎಣ್ಣೆಯನ್ನು ತಯಾರು ಮಾಡಬಹುದಾಗಿದ್ದು, ಒಮ್ಮೆ ಈ ಎಣ್ಣೆ ತಯಾರಿಗಾಗಿ ನಿಮ್ಮ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಮತ್ತು ಅದ್ಭುತ ಫಲಿತಾಂಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.
ಬೇಕಾದ ಸಾಮಾಗ್ರಿಗಳು
*2 ಚಮಚಗಳಷ್ಟು ಮೆಂತೆ ಬೀಜಗಳು
*ಅರ್ಧ ಬೌಲ್ ತೆಂಗಿನೆಣ್ಣೆ
*ಒಂದು ಚಮಚಗಳಷ್ಟು ಆಲೀವ್ ಎಣ್ಣೆ
*10-20 ಕರಿಬೇವಿನೆಸಳು
ಬೇಕಾಗುವ ಸಮಯ: 10 ನಿಮಿಷಗಳು
ಮಾಡುವ ವಿಧಾನ
* ಅರ್ಧ ಬೌಲ್ನಷ್ಟು ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿಕೊಳ್ಳಿ
* ಈಗ 2 ಚಮಚಗಳಷ್ಟು ಮೆಂತೆ ಬೀಜವನ್ನು ಸೇರಿಸಿ ಮತ್ತು ಅದನ್ನು ತೆಂಗಿನೆಣ್ಣೆಯೊಂದಿಗೆ ಕಾಯಿಸಿ.
*ಬೀಜಗಳು ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗುವವರೆಗೆ ಕಾಯಿರಿ
*ಈಗ ಒಂದು ಚಮಚಗಳಷ್ಟು ಆಲೀವ್ ಎಣ್ಣೆಯನ್ನು ಇದಕ್ಕೆ ಸೇರಿಸಿ
*10-20 ಕರಿಬೇವಿನೆಸಳನ್ನು ಎಣ್ಣೆಗೆ ಹಾಕಿ ಮತ್ತು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಇದನ್ನು ಕುದಿಸಿ.
*ಎಣ್ಣೆಯು ಗಾಢ ಕಂದು ವರ್ಣಕ್ಕೆ ಬಂದು ನಂತರ ಕಪ್ಪಾಗುತ್ತದೆ ಅಲ್ಲಿಯವರೆಗೆ ಎಣ್ಣೆಯನ್ನು ನೀವು ಕುದಿಸಬೇಕು.
*ಕೆಲವು ಸಮಯಗಳ ಕಾಲ ಎಣ್ಣೆ ತಣ್ಣಗಾಗಲು ಬಿಡಿ
*ಕರಿಬೇವಿನೆಸಳನ್ನು ಚೆನ್ನಾಗಿ ಹುಡಿ ಮಾಡಿ ಎಣ್ಣೆಯೊಂದಿಗೆ ಮಿಶ್ರ ಮಾಡಿ
*ಎಣ್ಣೆಯನ್ನು ಬಸಿದುಕೊಂಡು ನಿತ್ಯವೂ ಬಳಸಿ
ಕರಿಬೇವಿನೆಸಳಿನ ಪ್ರಯೋಜನಗಳು
*ಕರಿಬೇವಿನಲ್ಲಿ ಹೆಚ್ಚು ಪ್ರಮಾಣದ ಪ್ರೊಟೀನ್ ಅಂಶಗಳು ಮತ್ತು ಬೀಟಾ ಕ್ಯಾರೊಟಿನ್ ಇದ್ದು ಇದು ಕೂದಲು ಉದುರುವುದು ಮತ್ತು ತೆಳ್ಳಗಾಗುವ ಸಮಸ್ಯೆಯನ್ನು ತಡೆಯುತ್ತದೆ. ಅಂತೆಯೇ ಇದನ್ನು ಬಳಸಿಕೊಂಡು ತಯಾರಿಸುವ ಎಣ್ಣೆಯಿಂದ ಬಕ್ಕತಲೆಯನ್ನು ನಿವಾರಣೆ ಮಾಡಿಕೊಳ್ಳಬಹುದು.
*ಕರಿಬೇವಿನೆಲೆಯಲ್ಲಿ ಅಮೀನೊ ಆಸಿಡ್ ಇದ್ದು ಇದು ಕೂದಲಿನ ಕೋಶಗಳನ್ನು ಬಲಶಾಲಿಯನ್ನಾಗಿಸುತ್ತದೆ ಮತ್ತು ಅವನ್ನು ಆರೋಗ್ಯವಾಗಿರಿಸುತ್ತದೆ. ಅದಲ್ಲದೆ ಕರಿಬೇವು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು, ತಲೆಹೊಟ್ಟನ್ನು ಹೋಗಲಾಡಿಸಿ, ಕೂದಲಿನ ಕೋಶಗಳನ್ನು ಬಲಪಡಿಸುತ್ತದೆ ಅಂತೆಯೇ ಕೂದಲು ಬೆಳೆಯುವಂತೆ ಮಾಡುತ್ತದೆ.
ಮೆಂತೆ ಬೀಜದ ಪ್ರಯೋಜನಗಳು
*ವಿಟಮಿನ್ ಬಿ ಮೆಂತೆಯಲ್ಲಿದ್ದು, ಕೂದಲು ಅಕಾಲಿಕವಾಗಿ ನೆರೆಯುವನ್ನು ತಡೆಯುತ್ತದೆ. ಅಂತೆಯೇ ಕೂದಲಿನ ಬೇರಿಗೆ ಬೇಕಾದ ಶಕ್ತಿಯನ್ನು ಒದಗಿಸಿ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಕೂದಲು ಹೊಳೆಯುವಂತೆ ಮಾಡುವ ಲೆಸಿತಿನ್ ಅಂಶವು ಮೆಂತೆಯಲ್ಲಿದ್ದು, ನಿಮ್ಮ ತಲೆಬುರುಡೆಗೆ ಇದು ದೃಢತೆಯನ್ನು ನೀಡಲಿದೆ.
*ಮೆಂತೆದಲ್ಲಿ ಹೆಚ್ಚು ಪ್ರಮಾಣದ ಉತ್ಕರ್ಷಣ ನಿರೋಧಿ ಅಂಶಗಳಿದ್ದು, ತಲೆಬುರುಡೆಯು ಹೆಚ್ಚು ಕಾಲ ಮಾಯಿಶ್ಚರೈಸ್ ಆಗಿರುವಂತೆ ಇದು ನೋಡಿಕೊಳ್ಳುತ್ತದೆ. ಅಂತೆಯೇ ಕೂದಲಿನ ಮೃತಕೋಶಗಳನ್ನು ಇದು ನಿವಾರಿಸುತ್ತದೆ. ಇದು ಕೂದಲಿನ ಬೇರನ್ನು ದೃಢಪಡಿಸಿ ನಿಮ್ಮ ಕೂದಲಿನ ಹಾನಿಯನ್ನು ತಡೆಯುತ್ತದೆ.
ಈ ಎಣ್ಣೆಯನ್ನು ಬಳಸುವುದರಿಂದ ಉಂಟಾಗುವ ಪ್ರಯೋಜನಗಳು
*ಹಾನಿಗೊಳಗಾದ ಬೇರುಗಳನ್ನು ಇದು ಉಪಚರಿಸುತ್ತದೆ
*ನಿಮ್ಮ ತಲೆಬುರುಡೆಯನ್ನು ಇದು ಮಾಯಿಶ್ಚರೈಸ್ ಆಗಿ ಇರಿಸುತ್ತದೆ
*ಕೂದಲು ಬೆಳೆಯುವಲ್ಲಿ ಸಹಕಾರಿ
*ಕೂದಲು ಉದುರುವುದನ್ನು ತಡೆಯುತ್ತದೆ
*ಕೂದಲಿನ ಸೀಳು ತುದಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ
*ಕೂದಲು ಅಕಾಲಿಕ ನೆರೆಯುವುದನ್ನು ಹೋಗಲಾಡಿಸುತ್ತದೆ
*ತಲೆಹೊಟ್ಟಿಗೆ ಉತ್ತಮ ಔಷಧಿ
*ತಲೆಬುರುಡೆಯ ಸೋಂಕನ್ನು ನಿವಾರಿಸುತ್ತದೆ.



Click it and Unblock the Notifications

