Just In
- 36 min ago ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- 3 hrs ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 4 hrs ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 5 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
Don't Miss
- Movies ಕಬೀರ್ ಸಿಂಗ್ ನನ್ನ ಬದುಕಿನ ಬಹುದೊಡ್ಡ ತಪ್ಪು ಎಂದ ನಟ ; ಕೆರಳಿ ಕೆಂಡವಾದ ಸಂದೀಪ್ ರೆಡ್ಡಿ ವಂಗಾ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈರುಳ್ಳಿ ಜ್ಯೂಸ್' ಬಳಸಿ-ಕೂದಲು ಸೊಂಪಾಗಿ ಬೆಳೆಯುತ್ತೆ!
ಸೌಂದರ್ಯದಲ್ಲಿ
ಪ್ರಮುಖವಾಗಿ
ಪರಿಗಣಿಸಬಹುದಾದ
ಕೂದಲು
ತುಂಬಾ
ಪ್ರಾಮುಖ್ಯತೆ
ಪಡೆಯುತ್ತದೆ.
ಮಾನವ
ದೇಹದ
ಹೆಚ್ಚಿನ
ಭಾಗದಲ್ಲಿ
ಕೂದಲು
ಇರುವುದು.
ಆದರೆ
ಇದರ
ಉಪಯೋಗ
ನಮಗೆ
ತಿಳಿದಿಲ್ಲದೆ
ಇರುವ
ಕಾರಣದಿಂದ
ಹೆಚ್ಚಿನವರು
ಇಂದಿನ
ದಿನಗಳಲ್ಲಿ
ಇದನ್ನು
ಕೀಳಿಸುತ್ತಾರೆ.
ಆದರೆ
ಕೂದಲು
ದೇಹದ
ಉಷ್ಣತೆಯನ್ನು
ಕಾಪಾಡುತ್ತದೆ.
ಅದರಲ್ಲೂ
ಪ್ರಮುಖವಾಗಿ
ತಲೆಯ
ಕೂದಲನ್ನು
ನಾವು
ತುಂಬಾ
ಗಂಭೀರವಾಗಿ
ಪರಿಗಣಿಸುತ್ತೇವೆ.
ಯಾಕೆಂದರೆ
ಇದು
ದೇಹದ
ಬೇರೆ
ಭಾಗದ
ಕೂದಲಿಗಿಂತ
ತುಂಬಾ
ಭಿನ್ನವಾಗಿರುವುದು.
ಇದರ
ಆರೈಕೆಯನ್ನು
ಮಾಡುತ್ತೇವೆ.
ಆದರೆ
ಇಂದಿನ
ದಿನಗಳಲ್ಲಿ
ಕೂದಲು
ಉದುರುವ
ಸಮಸ್ಯೆ
ಪ್ರತಿಯೊಬ್ಬರನ್ನು
ಕಾಡುವುದು.
ಕೂದಲು
ತೆಳುವಾಗಿ
ಉದುರುವುದು.
ಅಕಾಲಿಕ
ಕೂದಲು
ಉದುರುವಿಕೆ
ಚಿಂತೆಯುಂಟು
ಮಾಡುವ
ವಿಚಾರವಾಗಿದೆ.
ಆಧುನಿಕ
ಜೀವನ
ಶೈಲಿ
ಅಳವಡಿಸಿಕೊಂಡಿರುವ
ಹೆಚ್ಚಿನ
ಜನರು
ಇಂದಿನ
ದಿನಗಳಲ್ಲಿ
20
ಮತ್ತು
30ರ
ಹರೆಯದಲ್ಲೇ
ಬೋಳು
ತಲೆ
ಸಮಸ್ಯೆಗೆ
ಗುರಿಯಾಗುತ್ತಾರೆ.
ಒತ್ತಡದ
ಜೀವನಶೈಲಿ,
ಅನುವಂಶೀಯತೆ
ಅಥವಾ
ಅನಾರೋಗ್ಯಕರ
ಆಹಾರ
ಶೈಲಿ
ಇದಕ್ಕೆ
ಪ್ರಮುಖ
ಕಾರಣವಾಗಿದೆ.
ಕಾರಣ
ಏನೇ
ಆಗಿದ್ದರೂ
ಈ
ಸಮಸ್ಯೆ
ನಿವಾರಣೆ
ಮಾಡುವುದು
ಅತೀ
ಅಗತ್ಯ.
ಬೋಳು
ತಲೆಯವರು
ಮತ್ತೆ
ಕೂದಲು
ಬರಲು
ಹಲವಾರು
ರೀತಿಯ
ಪ್ರಯತ್ನ
ಮಾಡುವರು.
ಇದೆಲ್ಲಕ್ಕಿಂತಲೂ ತುಂಬಾ ಪರಿಣಾಮಕಾರಿ ವಿಧಾನವೆಂದರೆ ಆಯುರ್ವೇದ. ಆಯುರ್ವೇದದ ಪ್ರಕಾರ ಕೂದಲು ಮರಳಿ ಪಡೆಯಲು ಇರುವ ಉಪಾಯವೆಂದರೆ ಅದು ಈರುಳ್ಳಿ. ಇದರಲ್ಲಿರುವ ಸಲ್ಪರ್ ಅಂಶವು ಕೂದಲಿನ ಇತರ ಕೆಲವು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವುದು. ಇದರಿಂದ ಈರುಳ್ಳಿಯನ್ನು ಕೂದಲಿಗೆ ಒಳ್ಳೆಯ ಮನೆಮದ್ದು ಎಂದು ಪರಿಗಣಿಸಲಾಗಿದೆ.
ಕೂದಲು
ಉದುರುವಿಕೆಗೆ
ಈರುಳ್ಳಿ
ರಸದ
ಚಮತ್ಕಾರ
ಕೂದಲಿನ
ಹೊಸ
ಕೋಶಗಳ
ಬೆಳವಣಿಗೆ
ಕಾರಣವಾಗಿರುವ
ಕಾಲಜನ್
ಬಿಡುಗಡೆಯನ್ನು
ಇದು
ಉತ್ತೇಜಿಸುವುದು.
ಕೂದಲಿನ
ಚೀಲಗಳಿಗೆ
ರಕ್ತ
ಸಂಚಾರ
ವೃದ್ಧಿಸುವುದು.
ಇದರಿಂದ
ಕೂದಲು
ಪೋಷಕಾಂಶ
ಪಡೆದುಕೊಂಡು
ಬೆಳೆಯುವುದು.
ಹೊಸ
ಕೂದಲಿನ
ಬೆಳವಣಿಗೆ
ಅಡ್ಡಿಯಾಗುವಂತಹ
ಬ್ಯಾಕ್ಟೀರಿಯಾ
ಮತ್ತು
ಶಿಲೀಂಧ್ರಿಯಗಳನ್ನು
ಈರುಳ್ಳಿಯಲ್ಲಿರುವ
ಪ್ರತಿಜೀವಕವು
ನಾಶ
ಮಾಡುವುದು.
ಈರುಳ್ಳಿಯು
ಕೂದಲನ್ನು
ಬಲಿಷ್ಠವಾಗಿಸಿ
ಹಾನಿಯಾಗದಂತೆ
ಮತ್ತು
ಉದುರುದಂತೆ
ತಡೆಯುವುದು.
ಈರುಳ್ಳಿಯಿಂದ
ಕೂದಲಿಗೆ
ಸಿಗುವಂತಹ
ಲಾಭಗಳು
1.ಈರುಳ್ಳಿಯಲ್ಲಿರುವಂತಹ
ಪ್ರಬಲ
ಕಿಣ್ವಗಳು
ಅಕಾಲಿಕವಾಗಿ
ಕೂದಲು
ಬಿಳಿಯಾಗುವುದನ್ನು
ತಡೆಯುವುದು.
2.ತಲೆಹೊಟ್ಟು
ಮತ್ತು
ತಲೆಬುರುಡೆಯ
ಸೋಂಕಿಗೆ
ಕಾರಣವಾಗುವಂತಹ
ಬ್ಯಾಕ್ಟೀರಿಯಾಗಳನ್ನು
ಈರುಳ್ಳಿಯಲ್ಲಿರುವ
ಬ್ಯಾಕ್ಟೀರಿಯಾ
ವಿರೋಧಿ
ಅಂಶಗಳು
ಕೊಲ್ಲುವುದು.
3.ಕೂದಲು
ದಪ್ಪವಾಗಲು
ಇದು
ಒಳ್ಳೆಯ
ಮದ್ದು.
ಇದು
ಕಾಲಜನ್
ಬಿಡುಗಡೆ
ಹೆಚ್ಚಿಸಿ
ಕೂದಲಿನ
ಕೋಶಗಳು
ಮತ್ತೆ
ಬೆಳೆಯಲು
ಇದು
ನೆರವಾಗುವುದು.
4.ಇದರಲ್ಲಿರುವ ಸಲ್ಫರ್ ಅಂಶವು ಹೇನುಗಳನ್ನು ತೆಗೆದುಹಾಕುವುದು. ಹೇನು ನಿವಾರಣೆ ಮಾಡುವಂತಹ ಮದ್ದುಗಳಿಂದ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುವುದು. ಆದರೆ ಈರುಳ್ಳಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
5.ಅನುವಂಶೀಯವಾಗಿ ಕೂದಲು ಉದುರುವಿಕೆ ಸಮಸ್ಯೆಗೆ ಈರುಳ್ಳಿ ತುಂಬಾ ಪರಿಣಾಮಕಾರಿ. ಹೆಚ್ಚಿನ ಭಾರತೀಯ ಮನೆಗಳಲ್ಲಿ ಈರುಳ್ಳಿಯನ್ನು ಆಹಾರ ಕ್ರಮದಲ್ಲಿ ಬಳಸಿಕೊಳ್ಳುವರು.
ಕೂದಲಿನ ಸಮಸ್ಯೆಗಳಿಗೆ ಇದರ ರಸ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಈರುಳ್ಳಿ ತುಂಡರಿಸಿಕೊಂಡು ಅದನ್ನು ರುಬ್ಬಿ ರಸ ತೆಗೆಯಬೇಕು. ಇದರ ಘಾಟು ಸ್ವಲ್ಪ ಮಟ್ಟಿಗೆ ಆಗಿಬರದು. ಆದರೆ ಈ ಮದ್ದು ಮಾತ್ರ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿ...