Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಕೂದಲುದುರುವ ಸಮಸ್ಯೆಗೆ, ಬರೀ ಎರಡೇ ದಿನಗಳಲ್ಲಿ ಪರಿಹಾರ!
ಪ್ರತಿ ಬಾರಿ ಕೂದಲು ಬಾಚಿಕೊಂಡಾಗಲೂ ಕೂದಲುಗಳು ತುಂಡಾಗಿ ಬಾಚಣಿಕೆಯಲ್ಲಿ ಭಾರೀ ಸಂಖ್ಯೆಯಲ್ಲಿ ಬರುತ್ತಿವೆಯೇ? ಅದರಲ್ಲೂ ಬುಡದಿಂದಲೇ ಕಿತ್ತು ಬಂದ ಕೂದಲ ಸಂಖ್ಯೆ ಹೆಚ್ಚಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಕೂದಲು ಬುಡದಿಂದಲೇ ಉದುರಲು ಪ್ರಮುಖ ಕಾರಣ ಕೂದಲ ಬುಡ ಸಡಿಲವಾಗಿರುವುದು. ಇದರ ಪರಿಣಾಮದಿಂದ ತಲೆಗೂದಲು ತೆಳ್ಳಗಾಗುವ, ಬಕ್ಕತಲೆ ಆವರಿಸುವ ಸಾಧ್ಯತೆ ಹೆಚ್ಚುತ್ತದೆ.
ಕೂದಲು ಉದುರುವುದು ಖಂಡಿತವಾಗಿಯೂ ಅನಾರೋಗ್ಯದ ಲಕ್ಷಣವಾಗಿದ್ದು ಇದಕ್ಕೆ ಕೂದಲ ಪೋಷಣೆಯಲ್ಲಿ ಕೊರತೆಯ ಸಹಿತ ಅಸಮರ್ಪಕ ಆಹಾರ ಸೇವನೆ, ಹಾರ್ಮೋನುಗಳಲ್ಲಿ ಏರುಪೇರು, ಗಾಳಿಯಲ್ಲಿನ ಪ್ರದೂಷಕಾ ಕಣಗಳು, ಔಷಧಿಗಳ ಅಡ್ಡ ಪರಿಣಾಮಗಳು ಮೊದಲಾದ ಕಾರಣಗಳಿವೆ. ಕೂದಲೇ ಇಲ್ಲದಿದ್ದ ಬಳಿಕ ಇದರಿಂದ ವಿವಿಧ ಕೇಶವಿನ್ಯಾಸವನ್ನು ಹೇಗೆ ಮಾಡಿಕೊಳ್ಳುವಿರಿ? ಆದ್ದರಿಂದ ಕೂದಲು ಉದುರದಂತೆ, ಉದುರಿದರೂ ಆದಷ್ಟು ಬೇಗ ಇದನ್ನು ಮತ್ತೆ ಬೆಳೆಯುವಂತೆ ಮಾಡುವಲ್ಲಿಯೇ ಜಾಣತನ ಅಡಗಿದೆ. ಕೂದಲುದುರುವ ಸಮಸ್ಯೆಗೆ,ಇಲ್ಲಿದೆ ಪರ್ಫೆಕ್ಟ್ ಮನೆಮದ್ದು

ಉದುರಿದ ಕೂದಲು ಮತ್ತೆ ಬೆಳೆಯಲು (ಅನುವಂಶಿಕವಾಗಿ ಇದು ಮತ್ತೆ ಬೆಳೆಯಬಾರದು ಎಂಬ ಸೂಚನೆಯಿಂದ ಎದುರಾಗುವ ಬಕ್ಕತಲೆಯ ಸ್ಥಿತಿಯ ಹೊರತಾಗಿ) ಕೂದಲ ಬುಡಕ್ಕೆ ನೀಡುವ ಪೋಷಣೆ ಮತ್ತು ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಸಾಧ್ಯವಿದೆ. ಕೆಲವು ಆಹಾರಗಳ ಮೂಲಕ ಚರ್ಮದ ಒಳಭಾಗದಲ್ಲಿ ಪೋಷಣೆ ನೀಡಬಹುದು.
ಅಂತೆಯೇ ಕೂದಲಿನ ಹೊರಭಾಗದಲ್ಲಿ ನೀಡುವ ಪೋಷಣೆಯೂ ಕೂದಲು ಉದುರುವುದನ್ನು ನಿಲ್ಲಿಸಲು ನೆರವಾಗುತ್ತದೆ. ಈ ಶಕ್ತಿಯನ್ನು ಪಡೆದಿರುವ ಒಂದು ಅಧ್ಬುತ ಲೇಪ ಎರಡೇ ದಿನದಲ್ಲಿ ತನ್ನ ಪ್ರಭಾವದಿಂದ ಕೂದಲು ಉದುರುವುದನ್ನು ನಿಲ್ಲಿಸಲು ಸಾಧ್ಯವಾಗಿದೆ. ಈ ಅದ್ಭುತ ಲೇಪವನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಲಾಗಿದೆ. ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ
ಅಗತ್ಯವಿರುವ ಸಾಮಾಗ್ರಿಗಳು:
*ತೆಂಗಿನ ಹಾಲು: ಎರಡು ದೊಡ್ಡಚಮಚ
*ಮೆಂತೆ ಕಾಳು: ಒಂದು ಚಿಕ್ಕ ಚಮಚ
*ನೆಲ್ಲಿಕಾಯಿ: ಒಂದು (ದೊಡ್ಡ ಗಾತ್ರದ್ದು, ಸಿಗದಿದ್ದರೆ ಎರಡು ಚಿಕ್ಕ ಗಾತ್ರದವು), ಬೀಜ ನಿವಾರಿಸಿದ ತಿರುಳು ಸಂಗ್ರಹಿಸಿ.
ಈ ಮೂರೂ ಸಾಮಾಗ್ರಿಗಳ ಪೋಷಕಾಂಶಗಳು ಒಟ್ಟಾದರೆ ಕೂದಲ ಬುಡಕ್ಕೆ ಅತಿ ಹೆಚ್ಚಿನ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕೂದಲ ಬುಡಗಳು ದೃಢಗೊಳ್ಳುತ್ತವೆ ಹಾಗೂ ಇಲ್ಲಿಂದ ಕೂದಲನ್ನು ಬಿಡದೇ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಸುಂದರ ಕೂದಲಿನ ಆರೈಕೆಗೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್...
ತೆಂಗಿನ ಹಾಲಿನಲ್ಲಿ ಸಮೃದ್ಧವಾಗಿರುವ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟುಗಳು ಕೂದಲ ಬುಡದ ಚರ್ಮಕ್ಕೆ ಪೋಷಣೆಯನ್ನು ನೀಡಿ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಕೂದಲು ಉದುರುವ, ಬಕ್ಕತಲೆ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಮೆಂತೆಕಾಳು ಮತ್ತು ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೂದಲ ಬುಡಕ್ಕೆ ಪೋಷಣೆ ನೀಡುವ ಮೂಲಕ ಈ ಬುಡದಿಂದ ಆರೋಗ್ಯಕರ ಕೂದಲು ಮತ್ತೆ ಹುಟ್ಟಲು ನೆರವಾಗುತ್ತವೆ. ಅಲ್ಲದೇ ಈಗಾಗಲೇ ಉದುರಿ ಖಾಲಿಬಿದ್ದಿದ್ದ ಕೂದಲ ಬುಡಗಳಿಂದಲೂ ಹೊಸ ಕೂದಲು ಚಿಗುರಲು ನೆರವಾಗುತ್ತದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸೊಂಪಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳೆದ ಕೂದಲು ಕಾಂತಿಯುಕ್ತ ಮತ್ತು ದಟ್ಟನಾಗಿರಲೂ ಸಾಧ್ಯವಾಗುತ್ತದೆ.
ಈ ಲೇಪವನ್ನು ತಯಾರಿಸುವ ಕ್ರಮ:
*ಮೇಲೆ ವಿವರಿಸಲಾದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್ನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ.
ಬಳಿಕ ತೆಳ್ಳಗಿನ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ.
*ಈ ರಸವನ್ನು ತೆಳ್ಳಗಿನ ಬ್ರಶ್ ಬಳಸಿ ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೆ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ *ಸುಮಾರು ಐದು ನಿಮಿಷಗಳ ಕಾಲ ಬೆರಳುಗಳಿಂದ ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಇರಿ. ಬಳಿಕ ಹದಿನೈದು ನಿಮಿಷ ಕಾಲ ಹಾಗೇ ಒಣಗಳು ಬಿಡಿ. ನಂತರ ಸೌಮ್ಯ ಶಾಂಪೂ ಹಾಗೂ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ನಂತರ ದಪ್ಪ ಟವೆಲ್ ಸುತ್ತಿಕೊಂಡು ನೀರನ್ನು ಹೀರುವಂತೆ ಮಾಡಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!



Click it and Unblock the Notifications


