Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕೂದಲುದುರುವ ಸಮಸ್ಯೆಗೆ, ಬರೀ ಎರಡೇ ದಿನಗಳಲ್ಲಿ ಪರಿಹಾರ!
ಪ್ರತಿ ಬಾರಿ ಕೂದಲು ಬಾಚಿಕೊಂಡಾಗಲೂ ಕೂದಲುಗಳು ತುಂಡಾಗಿ ಬಾಚಣಿಕೆಯಲ್ಲಿ ಭಾರೀ ಸಂಖ್ಯೆಯಲ್ಲಿ ಬರುತ್ತಿವೆಯೇ? ಅದರಲ್ಲೂ ಬುಡದಿಂದಲೇ ಕಿತ್ತು ಬಂದ ಕೂದಲ ಸಂಖ್ಯೆ ಹೆಚ್ಚಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಕೂದಲು ಬುಡದಿಂದಲೇ ಉದುರಲು ಪ್ರಮುಖ ಕಾರಣ ಕೂದಲ ಬುಡ ಸಡಿಲವಾಗಿರುವುದು. ಇದರ ಪರಿಣಾಮದಿಂದ ತಲೆಗೂದಲು ತೆಳ್ಳಗಾಗುವ, ಬಕ್ಕತಲೆ ಆವರಿಸುವ ಸಾಧ್ಯತೆ ಹೆಚ್ಚುತ್ತದೆ.
ಕೂದಲು ಉದುರುವುದು ಖಂಡಿತವಾಗಿಯೂ ಅನಾರೋಗ್ಯದ ಲಕ್ಷಣವಾಗಿದ್ದು ಇದಕ್ಕೆ ಕೂದಲ ಪೋಷಣೆಯಲ್ಲಿ ಕೊರತೆಯ ಸಹಿತ ಅಸಮರ್ಪಕ ಆಹಾರ ಸೇವನೆ, ಹಾರ್ಮೋನುಗಳಲ್ಲಿ ಏರುಪೇರು, ಗಾಳಿಯಲ್ಲಿನ ಪ್ರದೂಷಕಾ ಕಣಗಳು, ಔಷಧಿಗಳ ಅಡ್ಡ ಪರಿಣಾಮಗಳು ಮೊದಲಾದ ಕಾರಣಗಳಿವೆ. ಕೂದಲೇ ಇಲ್ಲದಿದ್ದ ಬಳಿಕ ಇದರಿಂದ ವಿವಿಧ ಕೇಶವಿನ್ಯಾಸವನ್ನು ಹೇಗೆ ಮಾಡಿಕೊಳ್ಳುವಿರಿ? ಆದ್ದರಿಂದ ಕೂದಲು ಉದುರದಂತೆ, ಉದುರಿದರೂ ಆದಷ್ಟು ಬೇಗ ಇದನ್ನು ಮತ್ತೆ ಬೆಳೆಯುವಂತೆ ಮಾಡುವಲ್ಲಿಯೇ ಜಾಣತನ ಅಡಗಿದೆ. ಕೂದಲುದುರುವ ಸಮಸ್ಯೆಗೆ,ಇಲ್ಲಿದೆ ಪರ್ಫೆಕ್ಟ್ ಮನೆಮದ್ದು

ಉದುರಿದ ಕೂದಲು ಮತ್ತೆ ಬೆಳೆಯಲು (ಅನುವಂಶಿಕವಾಗಿ ಇದು ಮತ್ತೆ ಬೆಳೆಯಬಾರದು ಎಂಬ ಸೂಚನೆಯಿಂದ ಎದುರಾಗುವ ಬಕ್ಕತಲೆಯ ಸ್ಥಿತಿಯ ಹೊರತಾಗಿ) ಕೂದಲ ಬುಡಕ್ಕೆ ನೀಡುವ ಪೋಷಣೆ ಮತ್ತು ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಸಾಧ್ಯವಿದೆ. ಕೆಲವು ಆಹಾರಗಳ ಮೂಲಕ ಚರ್ಮದ ಒಳಭಾಗದಲ್ಲಿ ಪೋಷಣೆ ನೀಡಬಹುದು.
ಅಂತೆಯೇ ಕೂದಲಿನ ಹೊರಭಾಗದಲ್ಲಿ ನೀಡುವ ಪೋಷಣೆಯೂ ಕೂದಲು ಉದುರುವುದನ್ನು ನಿಲ್ಲಿಸಲು ನೆರವಾಗುತ್ತದೆ. ಈ ಶಕ್ತಿಯನ್ನು ಪಡೆದಿರುವ ಒಂದು ಅಧ್ಬುತ ಲೇಪ ಎರಡೇ ದಿನದಲ್ಲಿ ತನ್ನ ಪ್ರಭಾವದಿಂದ ಕೂದಲು ಉದುರುವುದನ್ನು ನಿಲ್ಲಿಸಲು ಸಾಧ್ಯವಾಗಿದೆ. ಈ ಅದ್ಭುತ ಲೇಪವನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಲಾಗಿದೆ. ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ
ಅಗತ್ಯವಿರುವ ಸಾಮಾಗ್ರಿಗಳು:
*ತೆಂಗಿನ ಹಾಲು: ಎರಡು ದೊಡ್ಡಚಮಚ
*ಮೆಂತೆ ಕಾಳು: ಒಂದು ಚಿಕ್ಕ ಚಮಚ
*ನೆಲ್ಲಿಕಾಯಿ: ಒಂದು (ದೊಡ್ಡ ಗಾತ್ರದ್ದು, ಸಿಗದಿದ್ದರೆ ಎರಡು ಚಿಕ್ಕ ಗಾತ್ರದವು), ಬೀಜ ನಿವಾರಿಸಿದ ತಿರುಳು ಸಂಗ್ರಹಿಸಿ.
ಈ ಮೂರೂ ಸಾಮಾಗ್ರಿಗಳ ಪೋಷಕಾಂಶಗಳು ಒಟ್ಟಾದರೆ ಕೂದಲ ಬುಡಕ್ಕೆ ಅತಿ ಹೆಚ್ಚಿನ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕೂದಲ ಬುಡಗಳು ದೃಢಗೊಳ್ಳುತ್ತವೆ ಹಾಗೂ ಇಲ್ಲಿಂದ ಕೂದಲನ್ನು ಬಿಡದೇ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಸುಂದರ ಕೂದಲಿನ ಆರೈಕೆಗೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್...
ತೆಂಗಿನ ಹಾಲಿನಲ್ಲಿ ಸಮೃದ್ಧವಾಗಿರುವ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟುಗಳು ಕೂದಲ ಬುಡದ ಚರ್ಮಕ್ಕೆ ಪೋಷಣೆಯನ್ನು ನೀಡಿ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಕೂದಲು ಉದುರುವ, ಬಕ್ಕತಲೆ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಮೆಂತೆಕಾಳು ಮತ್ತು ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೂದಲ ಬುಡಕ್ಕೆ ಪೋಷಣೆ ನೀಡುವ ಮೂಲಕ ಈ ಬುಡದಿಂದ ಆರೋಗ್ಯಕರ ಕೂದಲು ಮತ್ತೆ ಹುಟ್ಟಲು ನೆರವಾಗುತ್ತವೆ. ಅಲ್ಲದೇ ಈಗಾಗಲೇ ಉದುರಿ ಖಾಲಿಬಿದ್ದಿದ್ದ ಕೂದಲ ಬುಡಗಳಿಂದಲೂ ಹೊಸ ಕೂದಲು ಚಿಗುರಲು ನೆರವಾಗುತ್ತದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸೊಂಪಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳೆದ ಕೂದಲು ಕಾಂತಿಯುಕ್ತ ಮತ್ತು ದಟ್ಟನಾಗಿರಲೂ ಸಾಧ್ಯವಾಗುತ್ತದೆ.
ಈ ಲೇಪವನ್ನು ತಯಾರಿಸುವ ಕ್ರಮ:
*ಮೇಲೆ ವಿವರಿಸಲಾದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್ನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ.
ಬಳಿಕ ತೆಳ್ಳಗಿನ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ.
*ಈ ರಸವನ್ನು ತೆಳ್ಳಗಿನ ಬ್ರಶ್ ಬಳಸಿ ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೆ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ *ಸುಮಾರು ಐದು ನಿಮಿಷಗಳ ಕಾಲ ಬೆರಳುಗಳಿಂದ ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಇರಿ. ಬಳಿಕ ಹದಿನೈದು ನಿಮಿಷ ಕಾಲ ಹಾಗೇ ಒಣಗಳು ಬಿಡಿ. ನಂತರ ಸೌಮ್ಯ ಶಾಂಪೂ ಹಾಗೂ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ನಂತರ ದಪ್ಪ ಟವೆಲ್ ಸುತ್ತಿಕೊಂಡು ನೀರನ್ನು ಹೀರುವಂತೆ ಮಾಡಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!



Click it and Unblock the Notifications














