Just In
- 8 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 8 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 9 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 10 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News 1951 ರಿಂದ 2019 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನು ಕ್ಷಣಾರ್ಧದಲ್ಲಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ!
ಮಿರಮಿರನೆ ಮಿಂಚುವ ಕಪ್ಪು ಕೂದಲು ದೈವದತ್ತ ಕೊಡುಗೆ. ಇಳಿಬಿದ್ದ ಕೇಶರಾಶಿ ಗರಿಗೆದರಿದ ನವಿಲಿನ ನಾಟ್ಯದಂತೆ. ದಟ್ಟವಾದ ಕೇಶರಾಶಿಯ ಮೋಹ ಪ್ರತಿಯೊಬ್ಬ ಮಹಿಳೆಯರ ಕನಸಾಗಿರುತ್ತದೆ. ಆದರೆ ಇಂದಿನ ಯುವತಿಯರು ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಕೂದಲು ಉದುರುವ ಸಮಸ್ಯೆಯಿಂದಾಗಿದೆ. ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನ ತರುಣಿಯರು ಮಹಿಳೆಯರು ಅನುಭವಿಸುತ್ತಿದ್ದು ಇದಕ್ಕಾಗಿ ವೈದ್ಯರುಗಳ ಮೊರೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ.
ನಿಮ್ಮ ನಿದ್ದೆಗೆಡಿಸುವ ತಲೆಗೂದಲಿನ ಸಮಸ್ಯೆಗೆ ಅಂತ್ಯಹಾಡಲೆಂದೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಟಿಪ್ಸ್ಗಳೊಂದಿಗೆ ಬಂದಿರುವೆವು. ಹೆಚ್ಚಿನ ರಾಸಾಯನಿಕ ಅಂಶಗಳನ್ನು ಕೂದಲಿಗೆ ಬಳಸುತ್ತಿರುವುದು ಮತ್ತು ನಿತ್ಯದ ಜೀವನದಲ್ಲಿ ನೀವು ಅನುಭವಿಸುತ್ತಿರುವ ಮಾನಸಿಕ ಒತ್ತಡ, ನಿದ್ದೆಯ ಕೊರತೆ, ಪ್ರೋಟೀನ್ ವಿಟಮಿನ್ಗಳ ಅಭಾವ ಕೂದಲಿನ ಉದುರುವಿಕೆ ಕಾರಣವಾಗಿವೆ. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕಿರುವ ಪರಿಹಾರಗಳೆಂದರೆ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದಾಗಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು, ಮುಂದೆ ಓದಿ...
ತಲೆಯ ಮಸಾಜ್
ತಲೆಬುಡದ ರಕ್ತ ಸಂಚಾರವನ್ನು ಹೆಚ್ಚಿಸುವ ಮಸಾಜ್ ವಿಷಕಾರಿ ಅಂಶಗಳನ್ನು ತೊಡೆದು ಹಾಕುತ್ತದೆ. ಎಣ್ಣೆಯನ್ನು ಬಳಸಿ ಇಲ್ಲವೇ ಹಾಗೆಯೇ ಕೂಡ ಮಸಾಜ್ ಅನ್ನು ನೀವು ಕೈಗೊಳ್ಳಬಹುದು. ಬಿಸಿ ಎಣ್ಣೆಯನ್ನು ಕೂದಲಿನ ಮಸಾಜ್ಗಾಗಿ ಬಳಸುವುದರಿಂದ ಇದು ಕೂದಲಿನ ಒಣಗುವಿಕೆಯ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಕೋಶಗಳನ್ನು ಸಮೃದ್ಧಗೊಳಿಸುತ್ತವೆ. ಬಾದಾಮಿ, ತೆಂಗಿನೆಣ್ಣೆ, ಹರಳೆಣ್ಣೆಯನ್ನು ಬಿಸಿ ಎಣ್ಣೆ ಮಸಾಜ್ಗಾಗಿ ಬಳಸಬಹುದಾಗಿದೆ.
ವಾರಕ್ಕೊಮ್ಮೆ ತಲೆ ಮಸಾಜ್-ಇದರ ಅನುಭವವೇ ಬೇರೆ!
ನೆಲ್ಲಿಕಾಯಿ ಸೇವನೆ
ವಿಟಮಿನ್ ಸಿಯನ್ನು ಹೇರಳವಾಗಿ ಒಳಗೊಂಡಿರುವ ನೆಲ್ಲಿಕಾಯಿ ಸೇವನೆಯನ್ನು ನಿತ್ಯವೂ ಮಾಡುವುದರಿಂದ ಕೂದಲಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅಮಿನೊ ಆಸಿಡ್ಸ್, ಮಿನರಲ್ಸ್, ಫ್ಲಾವನೊಯ್ಡ್ಸ್, ಟ್ಯಾನಿನ್ಗಳನ್ನು ನೆಲ್ಲಿಕಾಯಿ ಒಳಗೊಂಡಿದೆ. ಕೂದಲು ಉದುರುವಿಕೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಹಸಿ ಅಥವಾ ಒಣಗಿದ ನೆಲ್ಲಿಕಾಯಿಯ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ.
ನೆಲ್ಲಿಕಾಯಿ ಸೇವನೆ
ತಾಜಾ ಆಗಿರುವ ನೆಲ್ಲಿಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ನೆಲ್ಲಿಕಾಯಿ ಹಣ್ಣುಗಳನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀವು ಇತರ ಪದಾರ್ಥಗಳ ಜೊತೆಗೆ ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಬಹುದು. ಒಂದು ಟೇಬಲ್ ಚಮಚ ಆಮ್ಲಾ ಪುಡಿಗೆ ಎರಡು ಟೇಬಲ್ ಚಮಚ ಬಿಸಿಯಾಗಿರುವ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಕೂದಲ ಬುಡಕ್ಕೆ ಲೇಪಿಸಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ. ಎರಡು ಗಂಟೆ ಬಿಟ್ಟು ನಂತರ ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ.
ಅಗಸೆ ಬೀಜಗಳ ಸೇವನೆ
ಫ್ಲಾಕ್ಸ್ ಬೀಜಗಳು ಅಥವಾ ಅಗಸೆ ಬೀಜಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉಪಯೋಗಕಾರಿಯಾದ ಬೀಜಗಳು ಆಗಿರುತ್ತವೆ. ಇದನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದೆ. ಪ್ರಾಚೀನ ಪ್ರಾಚ್ಯ ವಸ್ತುಗಳ ಉತ್ಪನ್ನಗಳಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಇದನ್ನು ಮೊದಲು ಈಜಿಪ್ಟ್ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರಂತೆ. ಇದನ್ನು ಇದರಲ್ಲಿರುವ ಸ್ವಾಭಾವಿಕ ನಾರಿನಂಶಕ್ಕಾಗಿ ಬೆಳೆಯಲು ಆರಂಭಿಸಿದರಂತೆ. ಇದು ಭಾರತದಲ್ಲಿ ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಅಗಸೆ ಬೀಜಗಳ ಸೇವನೆ
ಕೂದಲಿನ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಮತ್ತು ದುರ್ಬಲ ಕೂದಲನ್ನು ಪೋಷಿಸುವ ಅಗಸೆ ಬೀಜಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ. ಸೆಲೇನಿಯಮ್, ಅಮಿನೊ ಆಸಿಡ್ಸ್, ಕ್ಯಾಲ್ಶಿಯಮ್, ಫಾಸ್ಫರಸ್, ಬಿ ವಿಟಮಿನ್ಗಳನ್ನು ಅಗಸೆ ಒಳಗೊಂಡಿದೆ. ಒಮೇಗಾ 3 ಆಸಿಡ್ಸ್ ಕೂಡ ಇದರಲ್ಲಿದೆ. ಸಲಾಡ್, ಸಿಹಿ ತಿನಿಸುಗಳಲ್ಲಿ ಅಗಸೆ ಬೀಜಗಳನ್ನು ಪುಡಿ ಮಾಡಿಕೊಂಡು ಕೂಡ ಸೇವಿಸಬಹುದಾಗಿದೆ.
ಪ್ರೋಟೀನ್ ಮತ್ತು ಕಬ್ಬಿಣದ ಅಂಶಗಳಿರುವ ಆಹಾರಗಳು
ಅಗತ್ಯವಾಗಿರುವ ಪ್ರೋಟೋನ್ಗಳ ಸೇವನೆಯನ್ನು ಮಾಡದಿರುವುದು ಕೂಡ ಕೂದಲಿನ ಉದುರುವಿಕೆಗೆ ಕಾರಣವಾಗಿದೆ. ಬೇಳೆಕಾಳುಗಳು, ದ್ವಿದಳ ಧಾನ್ಯಗಳು, ಮಟನ್, ಚಿಕನ್ಗಳ ಸೇವನೆಯಿಂದ ಅಗತ್ಯವಾಗಿರುವ ಪ್ರೋಟೀನ್ಗಳು ದೊರೆಯುತ್ತವೆ. ಇದರಿಂದ ಕೂಡ ಕೂದಲಿನ ಬೆಳವಣಿಗೆ ವೇಗವಾಗಿ ನಡೆಯುತ್ತದೆ.
ನೈಸರ್ಗಿಕ ಉಪಚಾರ
ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆದುಕೊಂಡ ನಂತರ ನೈಸರ್ಗಿಕ ಉಪಚಾರಗಳನ್ನು ನಡೆಸಿ. ಲಿಂಬೆ, ಪುದೀನಾ, ರೋಸ್ಮೇರಿ, ಲ್ಯಾವೆಂಡರ್, ಮೆಂತೆ ಮತ್ತು ನೆಲ್ಲಿಕಾಯಿಯನ್ನು ಒಳಗೊಂಡಿರುವ ನೈಸರ್ಗಿಕ ಉಪಚಾರಗಳನ್ನು ಬಳಸಿ. ಈ ಗಿಡಮೂಲಿಕೆಗಳನ್ನು ಚೆನ್ನಾಗಿ ಕುದಿಸಿ ಅವುಗಳ ರಸದಿಂದ ಕೂದಲನ್ನು ತೊಳೆದುಕೊಳ್ಳಿ.
ಒತ್ತಡ ಬೇಡ
ಕೂದಲು ಉದುರುವಿಕೆ ಮತ್ತು ನೆರೆತಕ್ಕೆ ಮುಖ್ಯ ಕಾರಣ ಒತ್ತಡವಾಗಿದೆ. ಒತ್ತಡವನ್ನು ನಿವಾರಿಸುವ ಚಟುವಟಿಕೆಗಳನ್ನು ನಿಮ್ಮದಾಗಿಸಿಕೊಳ್ಳಿ. ಈ ಚಟುವಟಿಕೆಗಳು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸಿ ಅದರ ಬೆಳವಣಿಗೆಗೆ ಕಾರಣವಾಗುತ್ತದೆ.
ನಿಯಮಿತ ವ್ಯಾಯಾಮ
ನಿಯಮಿತ ವ್ಯಾಯಾಮ ನಿಮ್ಮಲ್ಲಿ ಬೆವರನ್ನು ಉಂಟುಮಾಡುತ್ತದೆ. ಅಂತೆಯೇ ಕೂದಲಿನ ಕೋಶಗಳನ್ನು ತೋಯಿಸುತ್ತವೆ. ಕೂದಲಿನ ಕೋಶಗಳಲ್ಲಿ ಅಡಗಿರುವ ಮೃತಕೋಶಗಳು ಮತ್ತು ಎಣ್ಣೆ ಹೊರಹೋದಾಗ ಕೂದಲು ಬೆಳೆಯಲು ಆರಂಭಗೊಳ್ಳುತ್ತದೆ. ವ್ಯಾಯಮವು ರಕ್ತದ ಪರಿಚಲನೆಯನ್ನು ತುದಿಯಿಂದ ಬುಡದವರೆಗೆ ಮಾಡುತ್ತದೆ ಹಾಗೂ ಕೂದಲಿಗೆ ಬೇಕಾದ ನ್ಯೂಟ್ರೀನ್ಗಳು ಮತ್ತು ಆಮ್ಲಜನಕವನ್ನು ಪೂರೈಸುತ್ತದೆ.