Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ವೀಕೆಂಡ್ ನಲ್ಲಿ ವಿನೆಗರ್ ನಿಂದ ಹೇರ್ ಕೇರ್ ಮಾಡಿ

ಕೂದಲಿನ ಪೋಷಣೆಗೆ ವಿನೆಗರ್ ಬಳಕೆ ಹೇಗೆ?
* ನೈಸರ್ಗಿಕ ಹೇರ್ ಕಂಡೀಶನರ್: ವೈಟ್ ಅಥವಾ ಆಪಲ್ ಸೈಡರ್ ವಿನೆಗರನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಕೂದಲಿಗೆ ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಹೆಚ್ಚಾಗಿ ಕೂದಲನ್ನು ಗಟ್ಟಿಗೊಳಿಸಿ, ತುಂಡಾಗುವುದನ್ನು ತಪ್ಪಿಸುತ್ತದೆ.
ಎಣ್ಣೆ ಕೂದಲಿದ್ದವರಿಗೆ: ಸ್ವಲ್ಪ ನಿಂಬೆರಸದೊಂದಿಗೆ ವಿನೆಗರ್ ಬೆರೆಸಿ ಅದನ್ನು ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು.
* ಕೂದಲಿಗೆ ಹೊಳಪು ನೀಡಲು: ವಿನೆಗರ್ ಕೂದಲಿಗೆ ನೈಸರ್ಗಿಕವಾಗಿ ಹೊಳಪು ನೀಡುತ್ತದೆ. ಇದು ಕೂದಲನ್ನು ಮೃದುಗೊಳಿಸುವುದಲ್ಲದೆ ಕೂದಲು ಅತಿ ಸಿಕ್ಕಾಗುವುದನ್ನೂ ನಿವಾರಿಸುತ್ತದೆ. ಆದ್ದರಿಂದ ಕೂದಲನ್ನು ಶಾಂಪೂವಿನಿಂದ ತೊಳೆದ ನಂತರ ನೀರಿನೊಂದಿಗೆ ವಿನೆಗರ್ ಬಳಸಿ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆದುಕೊಂಡರೆ ಹೊಳಪು ಪಡೆದುಕೊಳ್ಳಬಹುದು.
* ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ: ಕೂದಲಿನ ಬುಡದ ಚರ್ಮ ಒಣಗುವುದೇ ತಲೆಹೊಟ್ಟಿಗೆ ಕಾರಣ. ವಿನೆಗರ್ ನೊಂದಿಗೆ ಬಾದಾಮಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಕೂದಲಿನ ಬುಡದ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ. ಇದು ತಲೆಹೊಟ್ಟಿಗೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತೆ.
* ನೇರ ಕೂದಲಿಗೆ: ತುಂಬಾ ಒರಟಾದ ಕೂದಲಿಗೆ ಆಪಲ್ ಸೈಡರ್ ವಿನೆಗರ್ ಬಳಸಿದರೆ ಕೂದಲು ಮೃದುಗೊಳ್ಳುತ್ತದೆ. ಸ್ನಾನ ಮಾಡಿದ ನಂತರ ಕೂದಲು ಸ್ವಲ್ಪ ನೇರವಾಗಿರುವಂತೆ ಗೋಚರಿಸುತ್ತದೆ.
* ಬಾಚಣಿಕೆ ಶುದ್ಧವಾಗಿರಿಸಲು ವಿನೆಗರ್ ಬಳಕೆ: ವಿನೆಗರ್ ಮಿಶ್ರಿತ ನೀರಿನಲ್ಲಿ ಬಾಚಣಿಕೆಯನ್ನು ನೆನೆಸಿದರೆ ಅದು ಬೇಗನೆ ಕೊಳೆಯಿಂದ ಮುಕ್ತಗೊಳ್ಳುವುದಲ್ಲದೆ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳೂ ಉಳಿಯುವುದಿಲ್ಲ.



Click it and Unblock the Notifications
