Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಬರೀ ಮೂರೇ ಸ್ಟೆಪ್ಗಳಲ್ಲಿ ಪಾದಗಳ ಅಂದ-ಚೆಂದ ಹೆಚ್ಚಿಸಿಕೊಳ್ಳಿ!
ಭೂಮಿ ಮೇಲೆ ಮನುಷ್ಯನು ಪ್ರಕೃತಿ ಮೇಲೆ ಮಾಡುತ್ತಿರುವಂತಹ ಕೆಲವೊಂದು ಕುಕೃತ್ಯಗಳಿಂದಾಗಿ ವಿಶ್ವದೆಲ್ಲೆಡೆಯಲ್ಲಿ ಈಗ ಹವಾಮಾನ ವೈಪರಿತ್ಯವು ಉಂಟಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಸಂಪೂರ್ಣ ವಾತಾವರಣವು ಏರುಪೇರಾಗಿದೆ. ಅತಿಯಾದ ಮಳೆ, ಚಳಿ ಹಾಗೂ ಸೆಕೆಯಿಂದಾಗಿ ಪ್ರತಿಯೊಬ್ಬರು ಕಂಗೆಟ್ಟಿದ್ದಾರೆ. ಅದರಲ್ಲೂ ಭಾರತದಲ್ಲಿ ಮುಂದಿನ ಎರಡು ತಿಂಗಳು ಉರಿ ಬಿಸಿಲಿನಲ್ಲಿ ಕಾಲ ಕಳೆಯಬೇಕು. ತೀವ್ರ ಬಿಸಿಲಿನಿಂದಾಗಿ ಈಗಾಗಲೇ ನದಿ, ಕೊಳ್ಳ, ಹೊಳೆಗಳು ಬತ್ತಿ ಹೋಗಿದೆ. ನೀರಿಗಾಗಿ ಹಾಹಾಕಾರ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಸಮಯದಲ್ಲಿ ಹೊರಗಿನ ವಾತಾವರಣಕ್ಕೆ ಅನುಗುಣವಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಅದರಲ್ಲೂ ಬಿಸಿಲಿನಿಂದಾಗಿ ನಮ್ಮ ಪಾದಗಳ ಮೇಲೆ ಅತಿಯಾದ ಒತ್ತಡ ಬೀಳುವುದು ಮತ್ತು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಇರುವುದು ಕೂಡ ಇದಕ್ಕೆ ಕಾರಣವಗಿದೆ. ಬೇಸಿಗೆ ಸಮಯದಲ್ಲಿ ಹಸ್ತಾಲಂಕಾರ ಮತ್ತು ಪಾದೋಪಚಾರ ಮಾಡಿಕೊಳ್ಳಲು ನೀವು ನಿರ್ಧರಿಸಿರಬಹುದು. ಆದರೆ ಇದಕ್ಕೆ ತುಂಬಾ ಹಣ ವೆಚ್ಚ ಮಾಡಬೇಕಾಗುತ್ತದೆ ಮತ್ತು ಪಾದೋಪಚಾರದಿಂದ ಪಾದದ ಸಮಸ್ಯೆಗಳು ನಿವಾರಣೆ ಆಗುವುದು ತುಂಬಾ ಕಡಿಮೆ. ಯಾಕೆಂದರೆ ಪಾದಗಳು ಯಾವಾಗಲೂ ಬಿಸಿಲು, ಧೂಳು ಇತ್ಯಾದಿಗಳ ದಾಳಿಗೆ ಸಿಲುಕುವುದು. ಬೇಸಿಗೆಯಲ್ಲಿ ಬಿಸಿಲು, ಧೂಳು, ಬೆವರು ಮತ್ತು ಇತರ ಕೆಲವು ಕಾರಣಗಳಿಂದಾಗಿ ನೀವು ಪಾದೋಪಚಾರ ಮಾಡಿಕೊಳ್ಳುವುದು ವ್ಯರ್ಥ. ಬೇಸಿಗೆಯಲ್ಲಿ ನೀವು ಪಾದಗಳ ಬಗ್ಗೆ ಕಾಳಜಿ ವಹಿಸಲು ಬಯಸಿದ್ದಾರೆ ಆಗ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿ.

ಸತ್ತ ಚರ್ಮ ಕಿತ್ತು ಹಾಕುವುದು(ಎಕ್ಸ್ಫಾಲಿಯೇಶನ್) ಅಗತ್ಯವಾಗಿರುವುದು
ಸೌಂದರ್ಯದ ಆರೈಕೆಯಲ್ಲಿ ಕಿತ್ತುಹಾಕುವಂತಹ ವಿಧಾನವು ತುಂಬಾ ಅಗತ್ಯವಾಗಿರುವುದು. ಆದರೆ ನಮ್ಮಲ್ಲಿ ಹೆಚ್ಚಿನವರು ಈ ವಿಧಾನವನ್ನು ಕಡೆಗಣಿ ಸುವರು. ಅದರಲ್ಲೂ ಪಾದದ ವಿಚಾರದಲ್ಲಿ ಇದು ಸಿದ್ಧ. ಸ್ನಾನ ಮಾಡುವ ವೇಳೆ ಪಾದಗಳನ್ನು ಉಜ್ಜಿಕೊಳ್ಳುವ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿಲ್ಲ. ಬದಲಿಗೆ ನೀವು ಡಿ ಟ್ಯಾನಿಂಗ್ ಎಕ್ಸ್ಫಾಲಿಯೇಶನ್, ಚರ್ಮಕ್ಕೆ ಪುನರ್ಶ್ಚೇತನ ನೀಡುವಂತಹ ಎಕ್ಸ್ಫಾಲಿಯೇಶನ್ ಬಗ್ಗೆ ಹೇಳುತ್ತಿದ್ದೇವೆ. ಡಿ ಟ್ಯಾನಿಂಗ್ ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವ ಪಾದಗಳ ಸ್ಕ್ರಬ್ ಗಳನ್ನು ನೀವು ತುಂಬಾ ಸುಲಭವಾಗಿ ಬಳಸಿಕೊಳ್ಳಬಹುದು.ಎರಡು ಚಮಚ ಸಕ್ಕರೆ ಹರಳು ತೆಗೆದುಕೊಳ್ಳಿ. ಇದನ್ನು ಎರಡು ಚಮಚ ಆಲಿವ್ ತೈಲದ ಜತೆಗೆ ಬೆರೆಸಿಕೊಳ್ಳಿ. ಈಗ ಪಾದಗಳಿಗೆ ಸ್ಕ್ರಬ್ ಮಾಡಿ. ವಾರದಲ್ಲಿ ಎರಡು ಸಲ ನೀವು ಹೀಗೆ ಮಾಡಿ.

ದೀರ್ಘ ಕಾಲ ನೆನಸಿಡಬೇಡಿ
ದೀರ್ಘಕಾಲ ತನಕ ಪಾದಗಳನ್ನು ನೀರಿನಲ್ಲಿ ಅದ್ದಿಡಬಾರದು. ಯಾಕೆಂದರೆ ಇದರಿಂದ ಪಾದಗಳು ಮತ್ತಷ್ಟು ಒಣಗುವುದು. ಯಾಕೆಂದರೆ ದೀರ್ಘ ಕಾಲ ಅದ್ದಿಟ್ಟರೆ ಅದರಿಂದ ದೇಹದಲ್ಲಿರುವ ನೈಸರ್ಗಿಕ ಎಣ್ಣೆಯು ಕಡಿಮೆ ಆಗುವುದು.

ಒರಟಾದ ಕಲ್ಲನ್ನು ನಿಯಮಿತವಾಗಿ ಬಳಕೆ ಮಾಡಿ
ಪಾದಗಳಿಗೆ ಸ್ಕ್ರಬ್ ಮಾಡಿಕೊಳ್ಳಲು ನೀವು ಪ್ರತಿನಿತ್ಯವು ಒರಟಾದ ಕಲ್ಲು ಬಳಸಿಕೊಳ್ಳಬೇಕು ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ಇದನ್ನು ಬಳಕೆ ಮಾಡಿಕೊಳ್ಳಬೇಕು. ತುಂಬಾ ನಯವಾಗಿರುವ ಪಾದಗಳಿಗೆ ಸ್ವಲ್ಪ ಮೆತ್ತಗೆ ಸ್ಕ್ರಬ್ ಮಾಡಿಕೊಳ್ಳಿ. ಪಾದವು ತುಂಬಾ ಗಡುಸಾಗಿದ್ದರೆ ಆಗ ನೀವು ನಿಯಮಿತವಾಗಿ ಒರಟಾದ ಕಲ್ಲಿನಿಂದ ಸ್ಕ್ರಬ್ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.

ಸಾಕ್ಸ್ ಇಲ್ಲದೆ ಶೂ ಧರಿಸಬೇಡಿ
ಶೂ ಧರಿಸುವಾಗ ಅಥವಾ ಪಾದವನ್ನು ಮುಚ್ಚುವಂತಹ ಯಾವುದೇ ಚಪ್ಪಲಿ ಧರಿಸುವ ವೇಳೆ ಸಾಕ್ಸ್ ಧರಿಸದೆ ಇರಬೇಡಿ. ಸಾಕ್ಸ್ ಹಾಕಿಕೊಳ್ಳುವ ಮೊದಲು ಸ್ವಲ್ಪ ಪೌಡರ್ ಹಾಕಿಕೊಳ್ಳಿ.

ಪಾದಗಳಿಗೆ ಮೊಶ್ಚಿರೈಸ್ ಮಾಡಿ
ಈ ವಿಧಾನವನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತೇವೆ. ದೇಹಕ್ಕೆ ಮೊಶ್ಚಿರೈಸ್ ಮಾಡುವ ವೇಳೆ ನಾವು ಪಾದಗಳನ್ನು ಸಂಪೂರ್ಣವಾಗಿ ಕಡೆಗಣನೆ ಮಾಡುತ್ತೇವೆ. ಪಾದಗಳನ್ನು ತೊಳೆದುಕೊಂಡ ಬಳಿಕ ಮಲಗುವ ಮೊದಲು ಪಾದಗಳಿಗೆ ಸರಿಯಾಗಿ ಮೊಶ್ಚಿರೈಸ್ ಮಾಡಿಕೊಳ್ಳಿ. ನೀವು ಇದಕ್ಕಾಗಿ ಯಾವುದೇ ಮೊಶ್ಚಿರೈಸರ್ನ್ನು ಬಳಸಿಕೊಳ್ಳಬಹುದು. ಇದರಿಂದ ಪಾದಗಳು ತುಂಬಾ ನಯ ಹಾಗೂ ಸುಂದರವಾಗುವುದು.

ಸನ್ ಸ್ಕ್ರೀನ್ ಮರೆಯಬೇಡಿ
ಬಿಸಿಲಿಗೆ ಮನೆಯಿಂದ ಹೊರಗಡೆ ಹೋಗುವ ವೇಳೆ ನೀವು ಸನ್ ಸ್ಕ್ರೀನ್ ಹಾಕಿಕೊಳ್ಳಲು ಮರೆಯಬೇಡಿ. ಸೂರ್ಯನ ಕಿರಣಗಳಿಂದಾಗಿ ಕಪ್ಪು ಕಲೆಗಳು ಮೂಡಬಹುದು. ನೀವು ಪಾದಗಳನ್ನು ಹೊರಗಡೆ ಹೋಗುವಾಗ ಮುಚ್ಚಿಕೊಳ್ಳಿ ಅಥವಾ ಸನ್ ಸ್ಕ್ರೀನ್ ಬಳಸಿಕೊಳ್ಳಿ.



Click it and Unblock the Notifications











