Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಕುತ್ತಿಗೆಯಲ್ಲಿ ನೆರಿಗೆಗಳಿವೆಯೇ? ಈ ಸರಳ ಮನೆಮದ್ದುಗಳೇ ಸಾಕು
ಮುಖದ ಚರ್ಮದಂತೆಯೇ ಕುತ್ತಿಗೆಯ ಚರ್ಮವೂ ಸೂಕ್ಷ್ಮವಾಗಿದ್ದು ಹೆಚ್ಚಿನ ಕಾಳಜಿಯ ಅಗತ್ಯವಾಗಿದೆ. ಸೂಕ್ತ ಆರೈಕೆಯ ಮೂಲಕ ಕುತ್ತಿಗೆಯಲ್ಲಿ ನೆರಿಗೆಗಳನ್ನು ಮೂಡದಿರುವಂತೆ ನೋಡಿಕೊಳ್ಳಬಹುದು.
ಬಿಸಿಲಿಗೆ ನೇರವಾಗಿ ಒಡ್ಡಿದ ಪರಿಣಾಮವಾಗಿ ಮುಖ, ಕೈ ಮತ್ತು ಕುತ್ತಿಗೆಗಳ ಚರ್ಮ ಕಪ್ಪಗಾಗುತ್ತವೆ. ಆದರೆ ಕುತ್ತಿಗೆಯ ಚರ್ಮದಲ್ಲಿ ಇನ್ನೂ ಹೆಚ್ಚಾಗಿ ನೆರಿಗೆಗಳು ಮೂಡುತ್ತವೆ. ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳು ಈ ನೆರಿಗೆಗಳ ಹೊರಭಾಗ ಹೆಚ್ಚು ಕಪ್ಪಾಗಿ ಮಡಚಿದ್ದ ಭಾಗ ಕಡಿಮೆ ಕಪ್ಪಾಗುವ ಕಾರಣ ಈ ನೆರಿಗೆಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ. ಈ ನೆರಿಗೆಗಳಿಗೆ ಇನ್ನೂ ಕೆಲವಾರು ಕಾರಣಗಳಿವೆ. ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!
ಆದರೆ ಇದು ಮೂಡಿದುದನ್ನು ಗಮನಿಸಿದ ಬಳಿಕ ತಡಮಾಡದೇ ತಕ್ಷಣವೇ ಸರಿಪಡಿಸಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಮುಖದ ಚರ್ಮದಂತೆಯೇ ಕುತ್ತಿಗೆಯ ಚರ್ಮವೂ ಸೂಕ್ಷ್ಮವಾಗಿದ್ದು ಹೆಚ್ಚಿನ ಕಾಳಜಿಯ ಅಗತ್ಯವಾಗಿದೆ. ಸೂಕ್ತ ಆರೈಕೆಯ ಮೂಲಕ ಕುತ್ತಿಗೆಯಲ್ಲಿ ನೆರಿಗೆಗಳನ್ನು ಮೂಡದಿರುವಂತೆ ನೋಡಿಕೊಳ್ಳಬಹುದು. ಮುಖ್ಯವಾಗಿ ಈ ಚರ್ಮದಲ್ಲಿಯೂ ಸಾಕಷ್ಟು ಆರ್ದ್ರತೆ ಇರುವಂತೆ ನೋಡಿಕೊಳ್ಳುವ ಮೂಲಕ ನೆರಿಗೆಗಳು ಮೂಡುವುದಿಲ್ಲ. ಬನ್ನಿ, ಈ ನೆರಿಗೆಗಳಿಗೆ ಸೂಕ್ತ ಮನೆಮದ್ದುಗಳು ಏನಿವೆ ಎಂಬುದನ್ನು ನೋಡೋಣ....

ಬಾಳೆಹಣ್ಣು
ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಚರ್ಮದಲ್ಲಿ ನೆರಿಗೆ ಮೂಡುವುದನ್ನು ತಡೆಯುತ್ತವೆ. ಇದಕ್ಕಾಗಿ ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಲೇಪನ ತಯಾರಿಸಿ. ಇದಕ್ಕೆ ಕೊಂಚವೇ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖ ಮೇಲೆತ್ತಿ ಕುತ್ತಿಗೆಯ ಮೇಲೆ ತೆಳುವಾಗಿ ಲೇಪಿಸಿ ಮುಖ ಮೇಲೆತ್ತಿರುವಂತೆಯೇ ಸುಮಾರು ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ವೃದ್ದಾಪ್ಯದ ಚಿಹ್ನೆಗಳನ್ನು ದೂರಾಗಿಸಲು ನೆರವಾಗುತ್ತದೆ. ಕೆಲವು ಹನಿ ಬಾದಾಮಿ ಎಣ್ಣೆಯನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕೊಂಚವೇ ಬಿಸಿ ಮಾಡಿ ಬೆರಳುಗಳಿಂದ ಮುಖ ಮೇಲೆತ್ತಿರುವಂತೆ ಕುತ್ತಿಗೆಯ ಕೆಳಭಾಗದಿಂದ ಮೇಲಕ್ಕೆ ಬರುವಂತೆ ನಯವಾಗಿ ಮಸಾಜ್ ಮಾಡಿ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಪುನರಾವರ್ತಿಸಿದರೆ ಕುತ್ತಿಗೆಯ ನೆರಿಗೆಗಳು ಶೀಘ್ರವೇ ಕಡಿಮೆಯಾಗುತ್ತವೆ. ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಪಪ್ಪಾಯಿ ಹಣ್ಣು
ಚೆನ್ನಾಗಿ ಹಣ್ಣಾದ ಪಪ್ಪಾಯಿಯಲ್ಲಿಯೂ ಉತ್ತಮ ಪ್ರಮಾನದ ಆಂಟಿ ಆಕ್ಸಿಡೆಂಟುಗಳಿದ್ದು ಕುತ್ತಿಗೆಯ ನೆರಿಗೆಗಳನ್ನು ನಿವಾರಿಸಲು ಅತ್ಯುತ್ತಮವಾಗಿದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಕೆಲವು ತುಂಡುಗಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಕೆಲವು ಹನಿ ಜೇನು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಸಿಶುಂಠಿ
ಹಸಿಶುಂಠಿಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ನೆರಿಗೆಗಳನ್ನು ನಿವಾರಿಸುವಲ್ಲಿ ಅದ್ಭುತ ಪರಿಣಾಮ ಬೀರುತ್ತದೆ. ಸುಮಾರು ಒಂದಿಂಚಿನಷ್ಟು ಹಸಿಶುಂಠಿಯನ್ನು ತುರಿದು ಇದನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸಕ್ಕೆ ಕೆಲವು ಹನಿ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.



Click it and Unblock the Notifications
