Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಉಗುರಿನ ಅಂದಕ್ಕೆ ಬೇಕು ಅಲೋವೆರಾ-ಜೇನಿನ ಮಿಶ್ರಣ
ಉಗುರುಗಳೂ ಸಹ ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಉಗುರಿನ ಅಂದವನ್ನು ಹೆಚ್ಚಿಸಲು ಅನೇಕ ಬಗೆಯ ಸಾಧನಗಳನ್ನು ಬಳಸಲಾಗುತ್ತಿದೆ. ಉಗುರಿನ ಸೌಂದರ್ಯವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದಲ್ಲದೇ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾಗಿ ಉಗುರಿನ ಹೊರಪದರದ ಚರ್ಮದ ಅಂದವನ್ನು ಹೆಚ್ಚಿಸಲು ವಿಶಿಷ್ಟ ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.
ಬಿರುಕುಬಿಟ್ಟ ಉಗುರಿನ ಹೊರಪದರವು ನಿಮ್ಮನ್ನು ಹೆಚ್ಚು ಚಿಂತೆಗೆ ಈಡು ಮಾಡುವುದಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದು ನಿಜಕ್ಕೂ ಅನಾರೋಗ್ಯಕರ ಬೆಳವಣಿಗೆ. ಇದರಿಂದ ಧೂಳು, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ನಿಮ್ಮ ಉಗುರಿನ ಒಳಕ್ಕೆ ಹೊಕ್ಕು ಚರ್ಮದ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚರ್ಮ ಒಣಗುವಿಕೆ, ತಾಪಮಾನದ ಇಳಿಕೆ, ಬಿಸಿಲಿನ ಶಾಖಕ್ಕೆ ಒಡ್ಡುವುದು ಮತ್ತು ದುಷ್ಪರಿಣಾಮ ಉಂಟಾಗುವ ರಾಸಾಯನಿಕಗಳ ಬಳಕೆ. ಚರ್ಮದ ತೇವಾಂಶದ ಪ್ರಮಾಣವು ಕಡಿಮೆಯಾದಾಗ ಉಗುರಿನ ಮೇಲ್ಭಾಗ ಹಾಳಾಗಿ ಹೊರಪದರವು ಬಿರುಕು ಬೀಳುತ್ತದೆ. ಚಿಂತಿಸದಿರಿ, ಈ ತೊಂದರೆಗೆ ನಿಮ್ಮ ಬಳಿಯೇ ಇದೆ ಸೂಕ್ತ ಪರಿಹಾರ. ಇದಕ್ಕೆ ಸೂಕ್ತ ಪರಿಹಾರವೆಂದರೆ ಜೇನು, ಅಲೋವೆರಾ ರಸ ಮತ್ತು ಆಲಿವ್ ತೈಲದ ಬಳಕೆ. ಜೇನು ಉಗುರಿನ ಪದರವನ್ನು ಮೃದುಗೊಳಿಸುವುದಲ್ಲದೆ ಬಿರುಕನ್ನು ಮತ್ತು ಒಣಗುವುದನ್ನು ತಡೆಯುತ್ತದೆ. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಇದು ಹೇಗೆ ಉಪಯೋಗವಾಗುತ್ತದೆ?
ಆಲಿವ್ ತೈಲವು ಚರ್ಮದ ಒಳಗಿನಿಂದಲೇ ತೇವಾಂಶವನ್ನು ನೀಡಿ ಉಗುರಿನ ಒಳ ಅಂಗಾಂಶವನ್ನು ಸದೃಢಗೊಳಿಸುತ್ತದೆ. ಅಲೋವೆರಾ ಚರ್ಮದ ಬಿರುಕನ್ನು ನಿವಾರಿಸುತ್ತದೆ. ಅಲೋವೆರಾ ಪ್ರಬಲವಾದ ಸೂಕ್ಷ್ಮಜೀವಿನಿರೋಧಕ ಸಾಧನವಾಗಿದ್ದು, ಇದರಿಂದ ಸೋಂಕನ್ನು ಬಹುಬೇಗ ನಿವಾರಿಸುತ್ತದೆ ಮತ್ತು ಸತ್ತ ಜೀವಕೋಶಗಳನ್ನು ಹೊರಹಾಕಿ ನಿಮ್ಮ ಚರ್ಮವನ್ನು ಮೃದುಗೊಳಿಸಿ ನಾಜೂಕಾಗಿಸುತ್ತದೆ.
ಉಪಯೋಗಿಸುವುದು ಹೇಗೆ?
1 ಚಮಚ ಅಲೋವೆರಾ ರಸಕ್ಕೆ 1 ಚಮಚ ಕಚ್ಚಾ ಜೇನು ತುಪ್ಪವನ್ನು ಬೆರೆಸಿ. ನಂತರ 1 ಚಮಚ ಆಲಿವ್ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳ ಚರ್ಮದ ಭಾಗಕ್ಕೆ ಮತ್ತು ಉಗುರಿನ ಕೆಳಭಾಗಕ್ಕೆ ಸುಮಾರು 4 ರಿಂದ 5 ನಿಮಿಷಗಳ ಕಾಲ ನಯವಾಗಿ ಹಚ್ಚಿ. ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ
ಈ ಪ್ರಕ್ರಿಯೆಯನ್ನು ಎರಡರಿಂದ ಮೂರು ಬಾರಿ ಪ್ರತಿವಾರ ಅನುಸರಿಸಿ. ಇದರಿಂದ ಒರಟಾದ, ಬಿರುಕಾದ ಉಗುರಿನ ಹೊರಪದರವು ನಾಜೂಕಾಗಿ ಮಗುವಿನಂತೆ ಚರ್ಮವು ಮೃದುಗೊಳ್ಳುತ್ತದೆ. ಆದರೆ ಜಾಗೃತವಾಗಿರಿ, ಯಾವುದೇ ಕಾರಣಕ್ಕೂ ಬಿರುಕುಬಿಟ್ಟ ಉಗುರಿನ ಹೊರಪದರದ ಭಾಗವನ್ನು ಭೌತಿಕವಾಗಿ ಹೊರತೆಗೆಯಬೇಡಿ. ಇದು ನೋವುಂಟು ಮಾಡಿ ಸೋಂಕಿಗೆ ಎಡೆಮಾಡಿಕೊಡುತ್ತದೆ.



Click it and Unblock the Notifications













