Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಉಗುರಿನ ಅಂದಕ್ಕೆ ಬೇಕು ಅಲೋವೆರಾ-ಜೇನಿನ ಮಿಶ್ರಣ
ಉಗುರುಗಳೂ ಸಹ ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಉಗುರಿನ ಅಂದವನ್ನು ಹೆಚ್ಚಿಸಲು ಅನೇಕ ಬಗೆಯ ಸಾಧನಗಳನ್ನು ಬಳಸಲಾಗುತ್ತಿದೆ. ಉಗುರಿನ ಸೌಂದರ್ಯವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದಲ್ಲದೇ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾಗಿ ಉಗುರಿನ ಹೊರಪದರದ ಚರ್ಮದ ಅಂದವನ್ನು ಹೆಚ್ಚಿಸಲು ವಿಶಿಷ್ಟ ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.
ಬಿರುಕುಬಿಟ್ಟ ಉಗುರಿನ ಹೊರಪದರವು ನಿಮ್ಮನ್ನು ಹೆಚ್ಚು ಚಿಂತೆಗೆ ಈಡು ಮಾಡುವುದಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದು ನಿಜಕ್ಕೂ ಅನಾರೋಗ್ಯಕರ ಬೆಳವಣಿಗೆ. ಇದರಿಂದ ಧೂಳು, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ನಿಮ್ಮ ಉಗುರಿನ ಒಳಕ್ಕೆ ಹೊಕ್ಕು ಚರ್ಮದ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚರ್ಮ ಒಣಗುವಿಕೆ, ತಾಪಮಾನದ ಇಳಿಕೆ, ಬಿಸಿಲಿನ ಶಾಖಕ್ಕೆ ಒಡ್ಡುವುದು ಮತ್ತು ದುಷ್ಪರಿಣಾಮ ಉಂಟಾಗುವ ರಾಸಾಯನಿಕಗಳ ಬಳಕೆ. ಚರ್ಮದ ತೇವಾಂಶದ ಪ್ರಮಾಣವು ಕಡಿಮೆಯಾದಾಗ ಉಗುರಿನ ಮೇಲ್ಭಾಗ ಹಾಳಾಗಿ ಹೊರಪದರವು ಬಿರುಕು ಬೀಳುತ್ತದೆ. ಚಿಂತಿಸದಿರಿ, ಈ ತೊಂದರೆಗೆ ನಿಮ್ಮ ಬಳಿಯೇ ಇದೆ ಸೂಕ್ತ ಪರಿಹಾರ. ಇದಕ್ಕೆ ಸೂಕ್ತ ಪರಿಹಾರವೆಂದರೆ ಜೇನು, ಅಲೋವೆರಾ ರಸ ಮತ್ತು ಆಲಿವ್ ತೈಲದ ಬಳಕೆ. ಜೇನು ಉಗುರಿನ ಪದರವನ್ನು ಮೃದುಗೊಳಿಸುವುದಲ್ಲದೆ ಬಿರುಕನ್ನು ಮತ್ತು ಒಣಗುವುದನ್ನು ತಡೆಯುತ್ತದೆ. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಇದು ಹೇಗೆ ಉಪಯೋಗವಾಗುತ್ತದೆ?
ಆಲಿವ್ ತೈಲವು ಚರ್ಮದ ಒಳಗಿನಿಂದಲೇ ತೇವಾಂಶವನ್ನು ನೀಡಿ ಉಗುರಿನ ಒಳ ಅಂಗಾಂಶವನ್ನು ಸದೃಢಗೊಳಿಸುತ್ತದೆ. ಅಲೋವೆರಾ ಚರ್ಮದ ಬಿರುಕನ್ನು ನಿವಾರಿಸುತ್ತದೆ. ಅಲೋವೆರಾ ಪ್ರಬಲವಾದ ಸೂಕ್ಷ್ಮಜೀವಿನಿರೋಧಕ ಸಾಧನವಾಗಿದ್ದು, ಇದರಿಂದ ಸೋಂಕನ್ನು ಬಹುಬೇಗ ನಿವಾರಿಸುತ್ತದೆ ಮತ್ತು ಸತ್ತ ಜೀವಕೋಶಗಳನ್ನು ಹೊರಹಾಕಿ ನಿಮ್ಮ ಚರ್ಮವನ್ನು ಮೃದುಗೊಳಿಸಿ ನಾಜೂಕಾಗಿಸುತ್ತದೆ.
ಉಪಯೋಗಿಸುವುದು ಹೇಗೆ?
1 ಚಮಚ ಅಲೋವೆರಾ ರಸಕ್ಕೆ 1 ಚಮಚ ಕಚ್ಚಾ ಜೇನು ತುಪ್ಪವನ್ನು ಬೆರೆಸಿ. ನಂತರ 1 ಚಮಚ ಆಲಿವ್ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳ ಚರ್ಮದ ಭಾಗಕ್ಕೆ ಮತ್ತು ಉಗುರಿನ ಕೆಳಭಾಗಕ್ಕೆ ಸುಮಾರು 4 ರಿಂದ 5 ನಿಮಿಷಗಳ ಕಾಲ ನಯವಾಗಿ ಹಚ್ಚಿ. ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ
ಈ ಪ್ರಕ್ರಿಯೆಯನ್ನು ಎರಡರಿಂದ ಮೂರು ಬಾರಿ ಪ್ರತಿವಾರ ಅನುಸರಿಸಿ. ಇದರಿಂದ ಒರಟಾದ, ಬಿರುಕಾದ ಉಗುರಿನ ಹೊರಪದರವು ನಾಜೂಕಾಗಿ ಮಗುವಿನಂತೆ ಚರ್ಮವು ಮೃದುಗೊಳ್ಳುತ್ತದೆ. ಆದರೆ ಜಾಗೃತವಾಗಿರಿ, ಯಾವುದೇ ಕಾರಣಕ್ಕೂ ಬಿರುಕುಬಿಟ್ಟ ಉಗುರಿನ ಹೊರಪದರದ ಭಾಗವನ್ನು ಭೌತಿಕವಾಗಿ ಹೊರತೆಗೆಯಬೇಡಿ. ಇದು ನೋವುಂಟು ಮಾಡಿ ಸೋಂಕಿಗೆ ಎಡೆಮಾಡಿಕೊಡುತ್ತದೆ.



Click it and Unblock the Notifications

