Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Stories of Strength: ದಾಲ್ ಸರೋವರದಲ್ಲೊಂದು ತೇಲುವ ಆ್ಯಂಬುಲೆನ್ಸ್: ಇದರ ಹಿಂದಿದೆ ಮಾನವೀಯ ಕತೆ
ಕೋವಿಡ್ 2ನೇ ಅಲೆಯಲ್ಲಿ ಕೊರೊನಾ ಸೋಂಕಿನ ತೀವ್ರ ಸ್ವರೂಪದಿಂದ ಆತಂಕದಲ್ಲಿರುವ ಜನರಿಗೆ Stories Of Strength ಮೂಲಕ ಧೈರ್ಯ ತುಂಬುವ ಪ್ರಯತ್ನವನ್ನು ಒನ್ಇಂಡಿಯಾ ಮಾಡುತ್ತಿದೆ.
ಕೊರೊನಾ ಪಾಸಿಟಿವ್ನಿಂದ ಚೇತರಿಸಿಕೊಂಡವರು ತಾವು ಕೊರೊನಾವನ್ನು ಗೆದ್ದ ಅನುಭವ ಹೇಳುವ ಮೂಲಕ ಅಥವಾ ಕೊರೊನಾ ಸೋಂಕಿನ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಈ ಭೂಮಿಯಲ್ಲಿ ಇನ್ನೂ ಜೀವಂತವಾಗಿದೆ ಎಂದು ಸಾಬೀತು ಮಾಡುತ್ತಿರುವ ಪುಣ್ಯ ವ್ಯಕ್ತಿಗಳನ್ನು ಪರಿಚಯಿಸುವುದೇ Stories Of Strengthನ ಮೂಲ ಉದ್ದೇಶವಾಗಿದೆ.

ನಾವು ಇಲ್ಲಿ ತಾರೀಖ್ ಪಟ್ಲೂ ಎಂಬ ವ್ಯಕ್ತಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಭಾರತದ ಮೊದಲ ತೇಲುವಆ್ಯಂಬುಲೆನ್ಸ್ನ ಮಾಲೀಕ. ದಾಲ್ ಸರೋವರ ಹಾಗೂ ಕಾಶ್ಮೀರ ನಡುವೆ ಓಡಾಡುತ್ತಿರುವ ಈ ಆ್ಯಂಬುಲೆನ್ಸ್ ಅನೇಕ ರೋಗಿಗಳ ಜೀವ ರಕ್ಷಕವಾಗಿದೆ.

ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ತಾರೀಖ್ ಪಟ್ಲೂ
ಕಾಶ್ಮೀರದಿಂದ ಲೇಕ್ ಸರೋರವರದ ಕಡೆಗೆ, ಲೇಕ್ ಸರೋವರದಿಂದ ಕಾಶ್ಮೀರದ ಕಡೆಗೆ ನಿತ್ಯ ಚಲಿಸುವ ಈಆ್ಯಂಬುಲೆನ್ಸ್ ನಿತ್ಯ ಜನರಿಗೆ ಕೋವಿಡ್ 19 ಸಂದರ್ಭದಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆವಹಿಸಬೇಕೆಂದು ಹೇಳುತ್ತಿದೆ. ಹೌದು ತಾರೀಖ್ ಪಟ್ಲೂ ತನ್ನ ಬೋಟ್ ಚಲಾಯಿಸುತ್ತಾ ಅಲ್ಲಿ ನೆಲೆಸಿರುವ ಜನರಲ್ಲಿ ಕೋವಿಡ್ 19 ಎದುರಿಸಲು ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೆಂದು ಕೂಗಿ ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

ಸೋಂಕಿತರಿಗೆ ಆಶಾಕಿರಣವಾಗಿರುವಆ್ಯಂಬುಲೆನ್ಸ್ ಬೋಟ್
ಬೇರೆ ಸಾರಿಗೆ ಸೌಕರ್ಯವಿಲ್ಲದೆ ಕಂಗೆಟ್ಟಿದ್ದ ಇಲ್ಲಿಯ ಜನರಿಗೆ ಈ ಬೋಟ್ ಒಂದು ವರದಾನವಾಗಿದೆ. ಪಟ್ಲೂ ಸೋಂಕಿತರನ್ನು ತನ್ನ ಆ್ಯಂಬುಲೆನ್ಸ್ ಬೋಟ್ನಲ್ಲಿ ಕೊಂಡೊಯ್ಯುವುದು, ಕರೆದುಕೊಂಡು ಬರುವುದು ಮಾಡುತ್ತಿದ್ದಾರೆ. ಸೋಂಕಿತರನ್ನು ಕೊಂಡೊಯ್ಯಲು ಎಲ್ಲಾ ವ್ಯವಸ್ಥೆ ಈ ಬೋಟ್ನಲ್ಲಿದೆ. ಸ್ಟ್ರೆಚ್ಚರ್ ಇದೆ, ಆಕ್ಸಿ ಮೀಟರ್, ಗ್ಲುಕೋಮೀಟರ್ ವ್ಯವಸ್ಥೆ ಈ ಬೋಟ್ನಲ್ಲಿದೆ. ಸದ್ಯದಲ್ಲಿಯೇ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಪಟ್ಲೂ ತಿಳಿಸಿದ್ದಾರೆ.

ಸ್ವಂತ ಖರ್ಚಿನಲ್ಲಿಯೇ ಬೋಟ್ ಅನ್ನುಆ್ಯಂಬುಲೆನ್ಸ್ ಮಾಡಿರುವ ಪಟ್ಲೂ
ಪಟ್ಲೂ ತನ್ನ ಬೋಟ್ ಅನ್ನು ಸ್ವಂತ ಖರ್ಚಿನಲ್ಲಿ ಆ್ಯಂಬುಲೆನ್ಸ್ಆಗಿ ಮಾರ್ಪಡಿಸಿದ್ದಾರೆ. ಇಲ್ಲಿಯ ಆಡಳಿತ ವ್ಯವಸ್ಥೆ ಕೂಡ ಈ ಕುರಿತು ಹೆಚ್ಚು ಚಿಂತೆ ಮಾಡದೇ ಇದ್ದಾಗ ಪಟ್ಲೂ ಜನರ ರಕ್ಷಣೆಗೋಸ್ಕರ ಮುಂದೆ ಬಂದಿದ್ದಾರೆ. ಆ ಮೂಲಕ ಮಾನವೀಯ ಕೆಲಸದಲ್ಲಿ ತೊಡಗಿದ್ದಾರೆ.

ಬೋಟ್ ಆ್ಯಂಬುಲೆನ್ಸ್ ಆದ ಹಿಂದಿರುವ ಕತೆ
ಆಗಸ್ಟ್ನಲ್ಲಿ ಪಟ್ಲುಗೂ ಸೋಂಕು ತಗುಲಿತ್ತು, ಆ ಸಂದರ್ಭದಲ್ಲಿ ಅವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಗ ತಾವು ಅನುಭವಿಸಿದ ಕಷ್ಟ ಬೇರೆಯವರಿಗೆ ಬರಬಾರದು ಎಂದು ಭಾವಿಸಿರುವ ಪಟ್ಲೂ ಇದೀಗ ತಮ್ಮ ಬೋಟ್ ಅನ್ನುಆ್ಯಂಬುಲೆನ್ಸ್ ಆಗಿ ಮಾರ್ಪಡಿಸಿದ್ದರೆ, ಇವರ ಕಾರ್ಯಕ್ಕೆ ನಮ್ಮದೊಂದು ಹ್ಯಾಟ್ಸಾಪ್...



Click it and Unblock the Notifications