Latest Updates
-
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್!
ಮದುವೆಯ ಈ ಬಂಧ - ಅನುರಾಗದ ಸಂಬಂಧ
ಮದುವೆಯೆಂಬುದು ತಾಳ್ಮೆ, ವಿಶ್ವಾಸ ಮತ್ತು ನೆಮ್ಮದಿ ಎಂಬ ಕೇವಲ ಮೂರು ಗಂಟಿನಲ್ಲಿದ್ದು, ಇದನ್ನು ನಿಮ್ಮ ತಪ್ಪು ನಿರ್ಧಾರಗಳಿಂದ ಕಗ್ಗಂಟಾಗಿಸಿ ಮುಂದೊಮ್ಮೆ ಸಂಪೂರ್ಣವಾಗಿ ಬಿರುಕು ಮೂಡುವಂತೆ ಹೆಚ್ಚಿನವರು ಮಾಡಿಕೊಳ್ಳಿತ್ತಿದ್ದಾರೆ. ಮದುವೆಯ ಒಳ ಅರ್ಥ ತಿಳಿದವರು ನಿಜಕ್ಕೂ ಸಂತೋಷಶಾಲಿಗಳು. 'ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನ್ಮಗಳೂ ತೀರದ ಸಂಬಂಧ' - ಈ ಜನಪ್ರಿಯ ಅರ್ಥಗರ್ಭಿತ ಗೀತೆಯನ್ನು ಒಮ್ಮೆ ಮೆಲುಕು ಹಾಕಿ. ನಿಮಗೆ ಮದುವೆಯ ನಿಜವಾದ ಅರ್ಥ ತಿಳಿಯುತ್ತದೆ.
ದಂಪತಿಗಳು ಮದುವೆಯಾಗಿ ಕೆಲವು ವರ್ಷಗಳು ಕಳೆದಂತೆ ತಮ್ಮ ದಾಂಪತ್ಯದಲ್ಲಿ ಕೆಲವು ಬಿರುಕು ಮೂಡಿ ಅನರ್ಥಕ್ಕೆ ಕಾರಣವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಬ್ಬರನ್ನೊಬ್ಬರು ಹೆಚ್ಚು ಸಲಿಗೆ ಹೊಂದಿ, ತಾವು ದಿನನಿತ್ಯ ನಿರ್ವಹಿಸುತ್ತಿದ್ದ ಜಾವಾಬ್ಡಾರಿಗಳಿಂದ ದೂರವಾಗಿ ಬಾಂಧವ್ಯದಿಂದ ನುಣುಚಿಕೊಳ್ಳುತ್ತಿರುವ ಗುಣವನ್ನು ಅಭ್ಯಾಸ ಮಾಡಿಕೊಂಡಿರುವುದಕ್ಕೆ.

ಹೌದು, ಒಟ್ಟಾಗಿದ್ದರೆ ದಾಂಪತ್ಯದಲ್ಲಿ ನಿಜವಾದ ಶಾಂತಿ, ನೆಮ್ಮದಿ ಮತ್ತು ಶಕ್ತಿಯನ್ನು ಹೊಂದಬಹುದು. ಒಬ್ಬರಿಗೊಬ್ಬರು ಅನ್ಯೂನ್ಯವಾಗಿ ಒಳ್ಳೆಯ ಸಮಯವನ್ನು ಒಟ್ಟಾಗಿ ಕಳೆಯುವುದು ದಾಂಪತ್ಯವು ಗಟ್ಟಿಯಾಗಿರಲು ನೇರ ಕಾರಣವಾಗುತ್ತದೆ.
ದಂಪತಿಗಳಿಗೆ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದೇ ಒಂದು ದೊಡ್ಡ ಸವಾಲಾಗಿದೆ. ಈಗಿನ ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ವಿಶ್ವಾಸಗಳಿಗೆ ಜಾಗವೇ ಇಲ್ಲದಂತಾಗಿದೆ. ಒಬ್ಬರಿಗೊಬ್ಬರು ಚೆನ್ನಾಗಿ ಅರಿತು ಸಮಯ ಕಳೆಯುವುದು ಈಗೀಗ ತುಂಬಾ ಅಪರೂಪವಾಗಿದೆ. ಸಂತೋಷ ಮತ್ತು ಬಾಂಧವ್ಯ ಕೇವಲ ಒಂದು ರಾತ್ರಿಯ ಸುಖದಿಂದ ಸಾಧಿಸುವಂತದ್ದಲ್ಲ.
ಅದೊಂದು ನಿರಂತರ ಪ್ರಕ್ರಿಯೆ. ಇದು ನಿಮ್ಮ ತಾಳ್ಮೆ, ನಿಮ್ಮ ಕರ್ತವ್ಯ ಮತ್ತು ನೀವು ನೀಡುವ ಸಮಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯವಾದ ಅಂಶವೇನೆಂದರೆ ನೀವು ಮದುವೆಯಾಗಿರುವುದಕ್ಕೆ ಮಾತ್ರ ಸಮಯ ನೀಡಬೇಕೆಂದು ತಿಳಿದುಕೊಳ್ಳುವುದು. ಇದೊಂದು ಶುದ್ಧ ತಪ್ಪು ಗ್ರಹಿಕೆ. ಇದರ ಮಧ್ಯೆ, ನಿಮ್ಮ ಮನೆಯಲ್ಲಿನ ಜವಾಬ್ದಾರಿಗಳು, ಆರ್ಥಿಕ ಪರಿಸ್ಥಿತಿ ಮತ್ತು ನೀವು ಕೂಡಿ ಬಾಳುತ್ತಿರುವುದರ ಸ್ವಾರಸ್ಯ ನಿಮ್ಮನ್ನು ಹೆಚ್ಚು ಸಂದಿಗ್ಧ ಪರಿಸ್ತಿತಿಗೆ ಎದುರಾಗಿಸುತ್ತದೆ.
ಒಂಟಿಯಾಗಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಸ್ವರ್ಗವೇ ನಿಮ್ಮ ಬಳಿ ಇದ್ದಂತೆ. ಇದರ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕು. ಇತ್ತೀಚೆಗೆ ಸಂಗಾತಿಗಳು ಉಪಹಾರ ಕೇಂದ್ರಗಳಲ್ಲಿ ಎದುರೆದುರಾಗಿ ಕುಳಿತು ತಮ್ಮ ಮೊಬೈಲ್ ಗಳನ್ನು ನೋಡಿಕೊಂಡು ಮೌನವಾಗಿ ಕುಳಿತಿರುವುದನ್ನು ನೋಡಬಹುದು. (ಒಂದು ವೇಳೆ ಅತೀ ಮುಖ್ಯವಾಗಿರುವುದನ್ನು ಅವರಿಬ್ಬರು ನೋಡಿಕೊಳ್ಳುತ್ತಿರಬಹುದು, ನಿಮಗೆ ತಿಳಿಯಿತು ಅನ್ನಿಸುತ್ತೆ). ಆದ್ದರಿಂದ ಸಂಗಾತಿಗಳು ಅವರು ಒಟ್ಟಾಗಿ ಸೇರುವ ಸಮಯದ ಬಗ್ಗೆ ಹೆಚ್ಚು ಆಲೋಚಿಸಬೇಕು. ನಾವು ನೀಡಿರುವ ಅಂಶಗಳ ಕಡೆ ಒಮ್ಮೆ ಗಮನಹರಿಸಿ ನೀಡಿರುವ ಪ್ರಶ್ನೆಗಳನ್ನು ಮತ್ತು ಅಂಶಗಳನ್ನು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಇದು ನಿಜಕ್ಕೂ ಪರಿಣಾಮಕಾರಿ.
ಯಾವಾಗ ಒಬ್ಬರಿಗೊಬ್ಬರು ಒಟ್ಟಾಗಿ ಕಾಲ ಕಳೆಯುವುದು? ಒಟ್ಟಾಗಿ ಆನಂದದಿಂದ ಕಳೆದಿರುವ ಸಮಯವನ್ನು ಮತ್ತೆ ಹೊಂದಲು ಸಾಧ್ಯವೇ?
ಸಾಮಾನ್ಯವಾಗಿ ಸಿಗುವ ಕಡಿಮೆ ಸಮಯದಲ್ಲಿ, ಹೊರಗೆ ಒಟ್ಟಾಗಿ ತೆರಳಿ ರಜಾ ದಿನಗಳನ್ನು ಆನಂದದಿಂದ ಕಳೆಯುವ ಸಮಯವನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಈ ಪ್ರಕ್ರಿಯೆಯನ್ನು ಪುನರಾವರ್ತನೆಯಾಗುವಂತೆ ಮಾಡಲು ಸಿಗುವ ದಾರಿಗಳನ್ನು ಹುಡುಕಿ ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರೀತಿಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ. ಇದೇ ದಾಂಪತ್ಯದಲ್ಲಿನ ನಿಜವಾದ ಸ್ವಾರಸ್ಯ. ಇದನ್ನು ಅರಿತವನೇ ನಿಜವಾದ ಸುಖೀ ಪುರುಷ.



Click it and Unblock the Notifications

