Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮದುವೆಯ ಈ ಬಂಧ - ಅನುರಾಗದ ಸಂಬಂಧ
ಮದುವೆಯೆಂಬುದು ತಾಳ್ಮೆ, ವಿಶ್ವಾಸ ಮತ್ತು ನೆಮ್ಮದಿ ಎಂಬ ಕೇವಲ ಮೂರು ಗಂಟಿನಲ್ಲಿದ್ದು, ಇದನ್ನು ನಿಮ್ಮ ತಪ್ಪು ನಿರ್ಧಾರಗಳಿಂದ ಕಗ್ಗಂಟಾಗಿಸಿ ಮುಂದೊಮ್ಮೆ ಸಂಪೂರ್ಣವಾಗಿ ಬಿರುಕು ಮೂಡುವಂತೆ ಹೆಚ್ಚಿನವರು ಮಾಡಿಕೊಳ್ಳಿತ್ತಿದ್ದಾರೆ. ಮದುವೆಯ ಒಳ ಅರ್ಥ ತಿಳಿದವರು ನಿಜಕ್ಕೂ ಸಂತೋಷಶಾಲಿಗಳು. 'ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನ್ಮಗಳೂ ತೀರದ ಸಂಬಂಧ' - ಈ ಜನಪ್ರಿಯ ಅರ್ಥಗರ್ಭಿತ ಗೀತೆಯನ್ನು ಒಮ್ಮೆ ಮೆಲುಕು ಹಾಕಿ. ನಿಮಗೆ ಮದುವೆಯ ನಿಜವಾದ ಅರ್ಥ ತಿಳಿಯುತ್ತದೆ.
ದಂಪತಿಗಳು ಮದುವೆಯಾಗಿ ಕೆಲವು ವರ್ಷಗಳು ಕಳೆದಂತೆ ತಮ್ಮ ದಾಂಪತ್ಯದಲ್ಲಿ ಕೆಲವು ಬಿರುಕು ಮೂಡಿ ಅನರ್ಥಕ್ಕೆ ಕಾರಣವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಬ್ಬರನ್ನೊಬ್ಬರು ಹೆಚ್ಚು ಸಲಿಗೆ ಹೊಂದಿ, ತಾವು ದಿನನಿತ್ಯ ನಿರ್ವಹಿಸುತ್ತಿದ್ದ ಜಾವಾಬ್ಡಾರಿಗಳಿಂದ ದೂರವಾಗಿ ಬಾಂಧವ್ಯದಿಂದ ನುಣುಚಿಕೊಳ್ಳುತ್ತಿರುವ ಗುಣವನ್ನು ಅಭ್ಯಾಸ ಮಾಡಿಕೊಂಡಿರುವುದಕ್ಕೆ.

ಹೌದು, ಒಟ್ಟಾಗಿದ್ದರೆ ದಾಂಪತ್ಯದಲ್ಲಿ ನಿಜವಾದ ಶಾಂತಿ, ನೆಮ್ಮದಿ ಮತ್ತು ಶಕ್ತಿಯನ್ನು ಹೊಂದಬಹುದು. ಒಬ್ಬರಿಗೊಬ್ಬರು ಅನ್ಯೂನ್ಯವಾಗಿ ಒಳ್ಳೆಯ ಸಮಯವನ್ನು ಒಟ್ಟಾಗಿ ಕಳೆಯುವುದು ದಾಂಪತ್ಯವು ಗಟ್ಟಿಯಾಗಿರಲು ನೇರ ಕಾರಣವಾಗುತ್ತದೆ.
ದಂಪತಿಗಳಿಗೆ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದೇ ಒಂದು ದೊಡ್ಡ ಸವಾಲಾಗಿದೆ. ಈಗಿನ ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ವಿಶ್ವಾಸಗಳಿಗೆ ಜಾಗವೇ ಇಲ್ಲದಂತಾಗಿದೆ. ಒಬ್ಬರಿಗೊಬ್ಬರು ಚೆನ್ನಾಗಿ ಅರಿತು ಸಮಯ ಕಳೆಯುವುದು ಈಗೀಗ ತುಂಬಾ ಅಪರೂಪವಾಗಿದೆ. ಸಂತೋಷ ಮತ್ತು ಬಾಂಧವ್ಯ ಕೇವಲ ಒಂದು ರಾತ್ರಿಯ ಸುಖದಿಂದ ಸಾಧಿಸುವಂತದ್ದಲ್ಲ.
ಅದೊಂದು ನಿರಂತರ ಪ್ರಕ್ರಿಯೆ. ಇದು ನಿಮ್ಮ ತಾಳ್ಮೆ, ನಿಮ್ಮ ಕರ್ತವ್ಯ ಮತ್ತು ನೀವು ನೀಡುವ ಸಮಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯವಾದ ಅಂಶವೇನೆಂದರೆ ನೀವು ಮದುವೆಯಾಗಿರುವುದಕ್ಕೆ ಮಾತ್ರ ಸಮಯ ನೀಡಬೇಕೆಂದು ತಿಳಿದುಕೊಳ್ಳುವುದು. ಇದೊಂದು ಶುದ್ಧ ತಪ್ಪು ಗ್ರಹಿಕೆ. ಇದರ ಮಧ್ಯೆ, ನಿಮ್ಮ ಮನೆಯಲ್ಲಿನ ಜವಾಬ್ದಾರಿಗಳು, ಆರ್ಥಿಕ ಪರಿಸ್ಥಿತಿ ಮತ್ತು ನೀವು ಕೂಡಿ ಬಾಳುತ್ತಿರುವುದರ ಸ್ವಾರಸ್ಯ ನಿಮ್ಮನ್ನು ಹೆಚ್ಚು ಸಂದಿಗ್ಧ ಪರಿಸ್ತಿತಿಗೆ ಎದುರಾಗಿಸುತ್ತದೆ.
ಒಂಟಿಯಾಗಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಸ್ವರ್ಗವೇ ನಿಮ್ಮ ಬಳಿ ಇದ್ದಂತೆ. ಇದರ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕು. ಇತ್ತೀಚೆಗೆ ಸಂಗಾತಿಗಳು ಉಪಹಾರ ಕೇಂದ್ರಗಳಲ್ಲಿ ಎದುರೆದುರಾಗಿ ಕುಳಿತು ತಮ್ಮ ಮೊಬೈಲ್ ಗಳನ್ನು ನೋಡಿಕೊಂಡು ಮೌನವಾಗಿ ಕುಳಿತಿರುವುದನ್ನು ನೋಡಬಹುದು. (ಒಂದು ವೇಳೆ ಅತೀ ಮುಖ್ಯವಾಗಿರುವುದನ್ನು ಅವರಿಬ್ಬರು ನೋಡಿಕೊಳ್ಳುತ್ತಿರಬಹುದು, ನಿಮಗೆ ತಿಳಿಯಿತು ಅನ್ನಿಸುತ್ತೆ). ಆದ್ದರಿಂದ ಸಂಗಾತಿಗಳು ಅವರು ಒಟ್ಟಾಗಿ ಸೇರುವ ಸಮಯದ ಬಗ್ಗೆ ಹೆಚ್ಚು ಆಲೋಚಿಸಬೇಕು. ನಾವು ನೀಡಿರುವ ಅಂಶಗಳ ಕಡೆ ಒಮ್ಮೆ ಗಮನಹರಿಸಿ ನೀಡಿರುವ ಪ್ರಶ್ನೆಗಳನ್ನು ಮತ್ತು ಅಂಶಗಳನ್ನು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಇದು ನಿಜಕ್ಕೂ ಪರಿಣಾಮಕಾರಿ.
ಯಾವಾಗ ಒಬ್ಬರಿಗೊಬ್ಬರು ಒಟ್ಟಾಗಿ ಕಾಲ ಕಳೆಯುವುದು? ಒಟ್ಟಾಗಿ ಆನಂದದಿಂದ ಕಳೆದಿರುವ ಸಮಯವನ್ನು ಮತ್ತೆ ಹೊಂದಲು ಸಾಧ್ಯವೇ?
ಸಾಮಾನ್ಯವಾಗಿ ಸಿಗುವ ಕಡಿಮೆ ಸಮಯದಲ್ಲಿ, ಹೊರಗೆ ಒಟ್ಟಾಗಿ ತೆರಳಿ ರಜಾ ದಿನಗಳನ್ನು ಆನಂದದಿಂದ ಕಳೆಯುವ ಸಮಯವನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಈ ಪ್ರಕ್ರಿಯೆಯನ್ನು ಪುನರಾವರ್ತನೆಯಾಗುವಂತೆ ಮಾಡಲು ಸಿಗುವ ದಾರಿಗಳನ್ನು ಹುಡುಕಿ ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರೀತಿಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ. ಇದೇ ದಾಂಪತ್ಯದಲ್ಲಿನ ನಿಜವಾದ ಸ್ವಾರಸ್ಯ. ಇದನ್ನು ಅರಿತವನೇ ನಿಜವಾದ ಸುಖೀ ಪುರುಷ.



Click it and Unblock the Notifications

