Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಹೆಜ್ಜೆಗೆ ಜೊತೆಯಾದವನಿಗೆ ಹೆಚ್ಚೇನು ಹೇಳಲಿ..!?
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಅದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಆಯ್ದ ಪ್ರೇಮ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಇಲ್ಲಿ ಕ್ಷಮಾ ಭಾರದ್ವಾಜ್ ಬರೆದ ಪ್ರೇಮ ಲೇಖನ ನೀಡಲಾಗಿದೆ.
ನೀ ನನ್ನನ್ನ ಇಷ್ಟೊಂದು ಆವರಿಸಿಕೊಳ್ಳುತ್ತಿ ಎಂದು ನನಗೆ ಗೊತ್ತಿರಲಿಲ್ಲ ಗೆಳೆಯಾ. ಜೀವನ ಪೂರ್ತಿ ಜೊತೆಯಲೇ ಇರುತ್ತೀನಿ ಅಂತಾ ಅಂದು ಪಿಸು ಮಾತಲಿ ನುಡಿದ ಆ ದಿನವನ್ನು ಮರೆಯೋದುಂಟಾ..!!??
ಜೊತೆಯಾಗಿ ಬಾಳೋ ಕನಸು ಕಂಡ ದಿನಕ್ಕೆ ಎರಡು ವರುಷ ಅಂದ್ರೆ ನಂಬೋಕೇ ಆಗ್ತಿಲ್ಲ. ಬದುಕು ಬಲು ಭಾರ ಅನಿಸಿದಾಗ ದೇವರು ಕೊಟ್ಟ ದುಬಾರಿ ಉಡುಗೊರೆ ನೀನು. ಕೂಡಿಟ್ಟ ಹಣ ಖಾಲಿಯಾಗಬಹುದು. ಆದ್ರೆ, ಹೃದಯ ತುಂಬಿ ನೀ ಕೊಟ್ಟ ಪ್ರೀತಿ ಅಕ್ಷಯ ಪಾತ್ರೆಯಂತೆ ವೃದ್ಧಿಸ್ತಾ ಇದೆ. ಬರಡು ಇಳೆಗೆ ಮಳೆಯ ಸ್ಪರ್ಷವಾದಾಗ ಆಗೋ ರೋಮಾಂಚನದಂತೆ ಆ ಮೊದಲ ನೋಟ, ಸ್ನಿಗ್ಧ ನಗು ಈ ಕ್ಷಣಕ್ಕೂ ಅಚ್ಚೊತ್ತಿದೆ.

ಪ್ರೇಮ ಬರಹ
ಮಂದ ಬೆಳಕಲ್ಲಿ ನಿನ್ನ ಕಣ್ತುಂಬಿಕೊಂಡ ಮೊದಲ ಭೇಟಿ, ಗಂಟೆಗಟ್ಟಲೆ ಆಡಿದ ಮಾತು, ಮಳೆಯಲಿ ಕೈ ಕೈ ಹಿಡಿದು ಓಡಿದ ಆ ರಾತ್ರಿ, ಮತ್ತೆ ಹೋಗಬೇಕನ್ನೋ ನೆನಪೇ ಇಲ್ಲದೆ ಹರಟಿದ ಹಿತವಾದ ಘಳಿಗೆಗಳು, ಕುಗ್ಗಿ ಹೋದಾಗ ಬೆಚ್ಚಗೆಯ ಅಪ್ಪುಗೆಯಲ್ಲಿ ನೀ ಹೇಳಿದ ಸಾಂತ್ವನ, ಆಗೊಮ್ಮೆ ಈಗೊಮ್ಮೆ ಮುನಿಸು, ಮತ್ತೆ ವಿರಹ, ಮಗದೊಮ್ಮೆ ಪ್ರೇಮ ಬರಹ, ದೂರಾಗೋ ಮಾತಾಡಿ ಮತ್ತೆ ಪ್ರೇಮಖೈದಿ ಆಗಿಬಿಡುತ್ತಿದ್ದೆ.

ಪ್ರೇಮ ಬರಹ
ನೆನಪು ಮಾಡಿಕೊಂಡಷ್ಟೂ ಮತ್ತೂ ಬೇಕೆನಿಸುವ ನಿನ್ನ ಸನಿಹ, ತಪ್ಪು-ಸರಿಗಳ ಪರಾಮರ್ಶೆ, ಜೊತೆಗೊಂದಿಷ್ಟು ಹುಚ್ಚು ಸಾಹಸ..ಕಳೆದೇ ಹೋಗಿ ಬಿಡೋಣ ಅಂತಾ ಜೊತೆಗೇ ಸುತ್ತಿದ ಸ್ಥಳಗಳು..ವಾಹ್..Life is beautiful. ಎರಡು ವರ್ಷ ಕ್ಷಣಗಳ ರೀತಿ ಕಳೆದು ಹೋಯ್ತಲ್ಲಾ. ನಿನ್ನ ಜೊತೆ ಇಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಕಣ್ ಮುಚ್ಚಿ ಇಟ್ಟಿದ್ದೀನಿ.

ಪ್ರೇಮ ಬರಹ
ಇಷ್ಟ-ಕಷ್ಟ, ನೋವು-ನಲಿವು, ಸಂಕಟ-ಸಂತಸಗಳನ್ನ ಸಾಧ್ಯವಾದಷ್ಟು ಅರಿಯೋ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯಾವತ್ತೂ ನಿನ್ನ ಜೊತೆಯಾಗಿರ್ತೀನಿ ಅನ್ನೋ ಪ್ರಮಾಣ ಮಾಡ್ತಿದ್ದೀನಿ ಗೆಳೆಯಾ. ನಿನ್ನ ತ್ಯಾಗ, ತಾಳ್ಮೆ, ಮಗುವಿನಂತೆ ನನ್ನ ನೋಡಿಕೊಂಡ ರೀತಿ, ಭರಪೂರ ಬೆಂಬಲ,ಯಾವುದರ ಋಣವನ್ನೂ ತೀರಿಸೋಕೆ ಸಾಧ್ಯಾನೇ ಇಲ್ಲ ಬಿಡು. ನಿನ್ನ ನಿಷ್ಕಲ್ಮಶ ಪ್ರೀತಿಯಲ್ಲಿ ಜೀವನಪೂರ್ತಿ ಬಂಧಿಯಾಗಿರ್ಬೇಕು ಅನ್ನೋದು ನನ್ನಾಸೆ.

ಶಾಶ್ವತ ಪ್ರೇಮ ಖೈದಿ..!!
ನಮ್ಮ ಪ್ರೀತಿಗೆ ಸಾಕ್ಷಿಯಾಗಿ ದೇವತೆ ಮಡಿಲಲ್ಲಿ ಬಂದು ಕೂತಿದ್ದಾಳೆ. ನಮ್ಮಿಬ್ಬರ ಪಿಸುಮಾತಿಗೆ ದನಿಯಾಗಿದ್ದ ಕನಸಿನ ಗೂಡಿನ ತುಂಬಾ ಈಗ ಅವಳದ್ದೇ ಕಲರವ. ನಮ್ಮಿಬ್ಬರ ಹೆಜ್ಜೆಯ ನಡುವೆ ಅವಳಿಡೋ ಪುಟಾಣಿ ಪಾದ ಪದಗಳಲ್ಲಿ ವರ್ಣಿಸಲಾಗದ ಖುಶಿ ಕೊಟ್ಟಿದೆ. ಜೀವನಪೂರ್ತಿ ಈ ಸಂಭ್ರಮವನ್ನು ಜತನದಿಂದ ಕಟ್ಟಿಕೊಟ್ಟ ನೀನು ನನ್ನ ಪಾಲಿಗೆ ನಿಜವಾದ ದೇವತಾ ಮನುಷ್ಯ..
ಇಂತಿ
ಶಾಶ್ವತ ಪ್ರೇಮ ಖೈದಿ..!!




Click it and Unblock the Notifications