Just In
- 58 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 5 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ಯಾರಾ ಆಟಗಾರನ ಮೇಲೆ ಮೂಡಿತು ಅನುರಾಗ
ನನ್ನದು ಪಕ್ಕಾ ಅರೇಂಜ್ ಮ್ಯಾರೇಜ್. ನನ್ನ ಚಿಕ್ಕಪ್ಪ ನೋಡಿ ಮಾಡಿದ ಮದುವೆ ನಮ್ಮದು, ಆದರೆ ನಮ್ಮ ಮದುವೆಗೆ ಒಂದು ಚಿಕ್ಕ ಫ್ಲ್ಯಾಶ್ ಬ್ಯಾಕ್ ಇದೆ.
ನನ್ನ ಚಿಕ್ಕಪ್ಪ ಅಂತಾರಾಷ್ಟ್ರೀಯ ಪ್ಯಾರಾ ಆಟಗಾರ. ಇವರು ಪಂದ್ಯಾವಳಿಗೆ ಅಂತ ದೇಶ-ವಿದೇಶ ಹೋಗ್ತಾ ಇದ್ದರು, ಅಲ್ಲಿ ಪರಿಚಯವಾದವರು ಮಿ. ಗೋಪಿನಾಥ್. ಇವರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ಯಾರಾ ಆಟಗಾರ. ಇವರ ಮೇಲೆ ಚಿಕ್ಕಪ್ಪನಿಗೆ ಬಹಳ ಗೌರವವಿತ್ತು.
ಎರಡು ಮನಸ್ಸುಗಳ ಮಿಲನ
ನಾನು ಟೆನ್ನಿಸ್ ಸ್ಟೇಡಿಯಂಗೆ ಪ್ರತಿ ಶನಿವಾರ ಆಟಗಾರರಿಗೆ ಸಹಾಯ ಮಾಡಲು ಹೋಗ್ತಾ ಇದ್ದೆ. ಅಲ್ಲಿಗೆ ಗೋಪಿಯವರ ಕೋಚ್ ರಮೇಶ್ ಟೀಕಾರಂರವರು ಬರ್ತಾ ಇದ್ದರು.
ಇವರು ನನ್ನ ಸೇವಾ ಮನೋಭಾವ, ಗುಣ ನೋಡಿ ಗೋಪಿಯವರಿಗೆ ಈ ಹುಡ್ಗಿಯೇ ಸರಿ ಎಂದು ಭಾವಿಸಿ ಮದುವೆ ಪ್ರಪೋಸಲ್ ಮುಂದಿಟ್ಟರು. ಎರಡು ಮನಸ್ಸುಗಳು ಹೇಗೆ ಸೇರುತ್ತದೆ ಎನ್ನುವುದೇ ಜೀವನದ ಕೌತುಕ ಅಲ್ಲವೇ? ಎಲ್ಲೋ ಇದ್ದವರು, ಒಬ್ಬರಿಗೊಬ್ಬರು ಗೊತ್ತೇ ಇಲ್ಲದವರು ಜೊತೆ ಬಾಳಿನ ನೌಕೆ ನಡೆಸಲು ಮುಂದಾಗುತ್ತೇವೆ.
ಮದುವೆ ಮಾತುಕತೆ
ನನ್ನ ಚಿಕ್ಕಪ್ಪನಿಗೆ ಗೋಪಿಯವರ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ. ಈ ಹುಡುಗ ನಮ್ಮ ಹುಡುಗಿಗೆ ಸರಿಯಾದ ಜೋಡಿ ಎಂದು ಹೇಳಿ ಗೋಪಿಯವರನ್ನು ಭೇಟಿಯಾಗಿ ನನ್ನ ಬಗ್ಗೆ ಕೆಲವು ಮಾತುಗಳನ್ನು ಹೇಳಿದರು.
ಚಿಕ್ಕಪ್ಪ ನನ್ನ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಅವರು ನನ್ನನ್ನು ನೋಡುವ ಮುಂಚೆಯೇ ಮದುವೆಗೆ ಓಕೆ ಅಂದ್ರು. ಚಿಕ್ಕಪ್ಪ ಮನೆಯಲ್ಲಿ ಅಮ್ಮನ ಹತ್ತಿರ ಗೋಪಿ ಬಗ್ಗೆ ಹೇಳಿದಾಗ ನಾನು ಹಿಂದೂ ಮುಂದು ಯೋಚಿಸದೆ ಸಮ್ಮತಿ ಸೂಚಿಸಿದೆ. ಇದೆ ನಮ್ಮ ಬಾಂಧವ್ಯಕ್ಕೆ ನಾಂದಿ ಹಾಡಿತು.
ಮೊದಲ ಕರೆ, ಭೇಟಿ
ಅವರ ಮೊದಲ ಕರೆ, ಮೊದಲ ಭೇಟಿ ಎಲ್ಲವೂ ನನ್ನ ಮನಸ್ಸಿನಲ್ಲಿ ಭದ್ರವಾಗಿ ಅಚ್ಚೊತ್ತಿದೆ. ಅವರಿಂದ ನನಗೆ ಮೊದಲ ಕರೆ ಬಂದಿದ್ದು 2012 ಸೆಪ್ಟೆಂಬರ್ 10ರಂದು, ಅವರು ಆಡಿದ ಒಂದೊಂದು ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತಿದೆ.
ಆ ನಂತರ ಫೋನ್ ಮಾಡಿ ಮಾತನಾಡುತ್ತಿದ್ವಿ. ನಂತರ ಭೇಟಿಯಾಗಲು ನಿರ್ಧರಿಸಿದ್ವಿ. ಅವರನ್ನು ಮೊದಲು ಭೇಟಿಯಾಗಿದ್ದು ಅಕ್ಟೋಬರ್ 20, 2012ರಂದು. 2013 ಜನವರಿ 25ಕ್ಕೆ ನಾನು ಅವರ ಜೊತೆ ಮೊದಲ ಬಾರಿ ಹೊರಗಡೆ ಹೋಗಿದ್ದು, ನಾವಿಬ್ಬರು ಕುಟುಂಬದವರ ಜೊತೆ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಮಾಡಿ ಬಂದಿವಿ.2013 ಏಪ್ರಿಲ್ 24 ನಮ್ಮ ನಿಶ್ಚಿತಾರ್ಥ, 2013 ಸಪ್ಟೆಂಬರ್ 16ಕ್ಕೆ ನಮ್ಮ ವಿವಾಹವಾಯಿತು.
ನನ್ನ ಜೀವದ ಸ್ಪೂರ್ತಿ,
ನನ್ನ ಜೀವನದ ಪ್ರತಿಯೊಂದು ವಿಶೇಷ ದಿನವನ್ನು ನಾನು ಮರೆಯಲ್ಲ. ಏಕೆಂದರೆ ಗೋಪಿಯವರು ನನಗೆ ಅಷ್ಟೊಂದು ವಿಶೇಷವಾದ ವ್ಯಕ್ತಿ. ನಮ್ಮ ನಡುವೆ ಎಷ್ಟೇ ಮನಸ್ತಾಪ, ಕೋಪ ಇರಲಿ ಅದನ್ನು ಮೀರಿ ಪ್ರೀತಿ ಇರುವುದರಿಂದ ಜೀವನ ಸುಂದರವಾಗಿದೆ. ನಮ್ಮ ಪ್ರೀತಿಯ ಕುರುಹಾಗಿ ಮಗಳು ಬಂದಿದ್ದಾಳೆ. 6 ವಸಂತಗಳನ್ನು ಜೊತೆಯಾಗಿ ಕಳೆದಿದ್ದೇವೆ, ಇನ್ನು ಮುಂದೆಯೂ ಅದೇ ಪ್ರೀತಿ, ನಂಬಿಕೆಯಲ್ಲಿ ಮುನ್ನೆಡೆಯುತ್ತೇವೆ. ನಾನು ಕಂಡ ಕನಸುಗಳು ಅವರಿಂದ ನನಸ್ಸಾಗಿದೆ, ಅವರೇ ನನ್ನ ಜೀವದ ಸ್ಪೂರ್ತಿ, ಜೀವ....