Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಅಡುಗೆಮನೆಯಲ್ಲಿ ಗಮನಿಸಬೇಕಾದ ಎಚ್ಚರಿಕೆಗಳು

ಚೊಕ್ಕ ಅಡುಗೆಮನೆಗೆ ಸಿಗುವ ಮೆಚ್ಚುಗೆ ಗೃಹಿಣಿಗೆ ಸಿಗುವ ಅತ್ಯುತ್ತಮ ಸರ್ಟಿಫಿಕೇಟುಗಳಲ್ಲೊಂದು. ಅಡುಗೆಮನೆಯನ್ನು ಒಪ್ಪಓರಣವಾಗಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಕೂಡ ಗೃಹಿಣಿಯ ಅಥವಾ ಗಂಡನ ಪ್ರಾಥಮಿಕ ಕರ್ತವ್ಯಗಳಲ್ಲೊಂದು. ನಮಗೇ ಗೊತ್ತಿಲ್ಲದಂತೆ ಸಂಭವಿಸುವ ಅನೇಕ ಸಣ್ಣಪುಟ್ಟ ಅವಘಡಗಳನ್ನು ತಪ್ಪಿಸುವುದು ಈ ಎಚ್ಚರಿಕೆಯಿಂದ ಸಾಧ್ಯ.
ಆ ಎಚ್ಚರಿಕೆಗಳು ಯಾವುವು?
* ಹಸಿ ಕೈಯಿಂದಲೇ ಅನೇಕ ವಸ್ತುಗಳನ್ನು ಮುಟ್ಟುವ ಅಭ್ಯಾಸ ಕೆಲವರಿಗಿರುತ್ತದೆ. ಕೈ ನೀಟಾಗಿ ಒರೆಸಿಕೊಂಡು ಮುಂದಿನ ಕೆಲಸಕ್ಕೆ ಅಣಿಯಾದರೆ, ಉಪ್ಪಿನಕಾಯಿಯಂಥ ವಸ್ತು ಕೆಡುವುದು, ವಿದ್ಯುತ್ ಶಾಕ್ ಹೊಡೆಯದಿರುವುದನ್ನು ತಪ್ಪಿಸಬಹುದು. ಅದಕ್ಕೊಂದು ಒಣ ಬಟ್ಟೆ ಇಟ್ಟುಕೊಳ್ಳಿ. ಸೀರಿಗೆ ಕೈಯೊರೆಸುವುದು ಕೆಟ್ಟಚಾಳಿ.
* ಅಡುಗೆ ಮಾಡಿದ ನಂತರ ಪಾತ್ರೆ ಬಿಸಿಯಾಗಿರುವಾಗ ಮಕ್ಕಳ ಕೈಗೆ ಸಿಗದಂತೆ ಎತ್ತಿಡಿ. ತಿಳಿಯದೇ ಮುಟ್ಟಿದಾಗ ಪುಟ್ಟ ಕೈಗಳು ಸುಟ್ಟುಹೋದಾವು ಎಚ್ಚರ.
* ಹಾಗೆಯೇ, ಚಾಕು, ಫೋರ್ಕ್, ಕತ್ತರಿ ಮುಂತಾದ ಚೂಪಾದ ಸಾಮಗ್ರಿಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ. ಅದರಲ್ಲೂ ಪುಟಾಣಿಗಳ ಲಕ್ಷ್ಯ ಇಂಥ ವಸ್ತುಗಳೆಗೇ ಇರುತ್ತದೆ.
* ತರಕಾರಿ ಸಿಪ್ಪೆ ತೆಗೆಯುವ ಸಾಧನವನ್ನು ಆಗಾಗ ಬದಲಿಸುತ್ತಿರಿ. ಅತ್ಯುತ್ತಮ ಸ್ಟೀಲಿನದು ಆಗಿರದಿದ್ದರೆ ಜಂಗು ಹಿಡಿದಿರುತ್ತದೆ. ಇಂಥವುಗಳನ್ನು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
* ದೋಸೆ ಮಾಡುವ ನಾನ್ ಸ್ಟಿಕ್ ತವಾ, ಚಪಾತಿ ಮಾಡುವ ಹೆಂಚು ಬಹಳ ದಿನಗಳಿಂದ ಉಪಯೋಗಿಸುತ್ತಿದ್ದರೆ ಬದಲಿಸುವುದು ಒಳಿತು. ಅದರಲ್ಲೂ ಕಾದಾಗ ಅಂಚಿನಲ್ಲಿ ಗುಳ್ಳೆಗಳು ಬರುತ್ತಿದ್ದರೆ ಅದನ್ನು ಬದಲಿಸಿ ಹೊಸದನ್ನು ಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ.
* ನೆಲದ ಮೇಲೆ ಹಾಲು, ಎಣ್ಣೆಯಂಥ ಪದಾರ್ಥಗಳು ಚೆಲ್ಲಿದಾಗ ಎಲ್ಲ ಕೆಲಸ ಬಿಟ್ಟು ಜಿಡ್ಡು ಹೋಗುವ ಹಾಗೆ ನೆಲ ಒರೆಸಿರಿ. ಹಿರಿಜೀವಗಳು ಅಥವಾ ಪುಟ್ಟ ಮಕ್ಕಳು ಓಡಾಡುವಾಗ ಜಾರಿ ಬಿದ್ದಾರು. ಇಂಥ ಪದಾರ್ಥಗಳು ಚೆಲ್ಲಿದಾಗ ಮೊದಲೇ ಎಚ್ಚರಿಸುವುದು ಜಾಣತನ.
* ಅಡುಗೆ ಮಾಡುವಾಗ ಫೋನ್ ಕಾಲ್ ತೆಗೆದುಕೊಳ್ಳುವುದು ಅಥವಾ ಟಿವಿಯನ್ನು ನೋಡುವುದು ಜಾಣ ಗೃಹಿಣಿಯ ಲಕ್ಷಣವಲ್ಲ. ಮೈಮರೆತಾಗ ಏನಾದರೂ ಸಂಭವಿಸಿದರೆ ಅದಕ್ಕೆ ಕಾರಣ ನೀವೇ ಆಗುತ್ತೀರಿ.
* ಎಲ್ಲಕ್ಕಿಂತ ಮಹತ್ವದ್ದೆಂದರೆ, ರಾತ್ರಿ ಮಲಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಗ್ಯಾಸ್ ನಾಬ್ ಅನ್ನು ಆಫ್ ಮಾಡಿ ಹೋಗಿರಿ.



Click it and Unblock the Notifications