Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಿಹಿ ತಿನಿಸಿನ ರಾಜ ನಮ್ಮ ಗಣಪನಿಗೆ 'ಓಟ್ಸ್ ಲಡ್ಡು'
ಭಾರತದಲ್ಲಿ ಹಬ್ಬಗಳನ್ನು ಆಚರಿಸುವುದನ್ನು ತುಸು ವಿಜೃಂಭಣೆಯಿಂದಲೇ ನಡೆಸುತ್ತಾರೆ. ಗಣಪನ ಹಬ್ಬ ವಿನಾಯಕ ಚತುರ್ಥಿ ಸನಿಹದಲ್ಲಿಯೇ ಇದೆ. ಎಲ್ಲಾ ಹಬ್ಬಗಳಂತೆಯೇ ವಿಘ್ನ ವಿನಾಶಕನ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುತ್ತಾರೆ.
ಉತ್ತರ ಭಾರತದ ಕಡೆಗಳಲ್ಲಿ ಒಂದು ತಿಂಗಳವರೆಗೆ ಗಣಪತಿಯ ಮೂರ್ತಿಯನ್ನು ಇರಿಸಿ ನಂತರವಷ್ಟೇ ವಿಸರ್ಜನೆ ಮಾಡುತ್ತಾರೆ. ಪ್ರಥಮ ಪೂಜೆ ಮಾಡಿಸಿಕೊಳ್ಳುವ ಭಗವಂತ ವಿನಾಯಕ ಬೇಡಿದ್ದನ್ನು ಪ್ರಸಾದಿಸುವ ಕರುಣಾಮಯಿ. ಅಂತೆಯೇ ಭಕ್ಷ್ಯಗಳೆಂದರೆ ಈ ದೇವರಿಗೆ ಅಚ್ಚುಮೆಚ್ಚು. ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!
ದೇವರಿಗೆ ಪ್ರಸಾದವನ್ನು ಮಾಡಿ ಅರ್ಪಿಸಲು ಮತ್ತು ಸಿಹಿಯಿಂದ ಹಬ್ಬವನ್ನು ಆಚರಿಸಲು ನೀವು ವಿಶೇಷವಾದ ತಿಂಡಿಯನ್ನು ಸಿದ್ಧಪಡಿಸಲೇಬೇಕು ಅಲ್ಲವೇ? ಹಾಗಿದ್ದರೆ ಗಣಪನಿಗೆ ಇಷ್ಟವಾಗಿರುವ ಲಾಡನ್ನೇ ಅತಿ ವಿಶೇಷವಾಗಿ ಹಬ್ಬಕ್ಕಾಗಿ ತಯಾರಿಸೋಣ.

ಅದೂ ಓಟ್ಸ್ನಿಂದ ತಯಾರಿಸಲಾಗುವ ಈ ಲಾಡು ನಿಮ್ಮ ಡಯೆಟ್ಗೂ ಸಹಕಾರಿ ಎಂದೆನಿಸಿದ್ದು ಅಧಿಕ ಕೊಲೆಸ್ಟ್ರಾಲ್ ಭಯವಿಲ್ಲದೆ ಹಬ್ಬದ ಸಿಹಿಯನ್ನು ಸೇವಿಸಲು ಅನುಕೂಲವನ್ನು ಮಾಡಿಕೊಡುತ್ತದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಓಟ್ಸ್ ಲಾಡನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದನ್ನು ಅರಿತುಕೊಳ್ಳೋಣ.
ಪ್ರಮಾಣ - 10 ಲಾಡುಗಳು
ಸಿದ್ಧತಾ ಸಮಯ - 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ - 10 ನಿಮಿಷಗಳು
ಸಾಮಾಗ್ರಿಗಳು
*ರೋಲ್ಡ್ ಓಟ್ಸ್ - 1 ಕಪ್
*ಬೆಲ್ಲ (ಕುಟ್ಟಿ ಪುಡಿ ಮಾಡಿರುವಂತಹದ್ದು) - 1/2 ಕಪ್
*ಬಿಳಿ ಎಳ್ಳು - 2 ಚಮಚ
*ತುಪ್ಪ - 2 ರಿಂದ 3 ಚಮಚ
*ಹಸಿರು ಏಲಕ್ಕಿ ಹುಡಿ - 1 ಚಮಚ
*ಒಣದ್ರಾಕ್ಷಿ - 20
*ಕೋಯಾ - 1 ಕಪ್
*ಬಾದಾಮಿ - 5 ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ
ಮಾಡುವ ವಿಧಾನ
1. ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ಎಳ್ಳನ್ನು ಹುರಿದುಕೊಳ್ಳಿ
2. ಇದಕ್ಕೆ ಬಾದಾಮಿಯನ್ನು ಹಾಕಿ ಕೊಂಚ ಸಮಯ ಹುರಿಯಿರಿ. ಇದನ್ನು ಪಕ್ಕದಲ್ಲಿಡಿ
3. ಈಗ, ಪ್ಯಾನ್ನಲ್ಲಿ ಓಟ್ಸ್ ಅನ್ನು ತೆಗೆದುಕೊಳ್ಳಿ ಮತ್ತು ಇದನ್ನು ಹುರಿಯಿರಿ, ಸಾಮಾನ್ಯ 5 ನಿಮಿಷ ಹುರಿದುಕೊಳ್ಳಿ
4. ಇದು ಸಂಪೂರ್ಣವಾಗಿ ತಣ್ಣಗಾದ ನಂತರ ಗ್ರೈಂಡರ್ನಲ್ಲಿ ಹುಡಿ ಮಾಡಿ
5.ಈಗ, ಇನ್ನೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ
6.ಇದಕ್ಕೆ ಬೆಲ್ಲ ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿಕೊಳ್ಳಿ. ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ
7.ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ, ಇದರಿಂದ ತಳ ಊರುವುದಿಲ್ಲ
8.ಇದಕ್ಕೆ ಓಟ್ಸ್, ನಟ್ಸ್ ಮತ್ತು ಎಳ್ಳನ್ನು ಬೆಲ್ಲಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
9.ಈ ಮಿಶ್ರಣ ಅಂಟಾಂಟಾಗಿದೆ ಎಂಬುದಾಗಿ ನಿಮಗೆ ಕಂಡುಬಂದಲ್ಲಿ, ಇದಕ್ಕೆ ನೀರು ಸೇರಿಸಿ ಅಂತೆಯೇ ಪ್ರಮಾಣದ ಬಗ್ಗೆ ಜಾಗ್ರತೆಯಿಂದಿರಿ.
10.ಮಿಶ್ರಣಕ್ಕೆ ಕೋಯಾವನ್ನು ಸೇರಿಸಿ ಮತ್ತು ಕರಗಲು ಬಿಡಿ. ಚೆನ್ನಾಗಿ ಮಿಶ್ರ ಮಾಡಿ. ಇದರಿಂದ ಗಂಟು ಕಟ್ಟುವುದಿಲ್ಲ
11.ಪ್ಯಾನ್ನಿಂದ ಎಲ್ಲಾ ಮಿಶ್ರಣ ಬಿಡಲು ಆರಂಭಗೊಳ್ಳುತ್ತಿದ್ದಂತೆ, ಕೊನೆಯದಾಗಿ ಇದನ್ನು ಮಿಶ್ರಮಾಡಿ ಮತ್ತು ಗ್ಯಾಸ್ ಆಫ್ ಮಾಡಿ.
12. 2-3 ನಿಮಿಷಗಳ ಕಾಲ ಕಾಯಿರಿ ಮತ್ತು ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.
13. ದ್ರಾಕ್ಷಿ ಮತ್ತು ಬಾದಾಮಿಯಿಂದ ಲಾಡನ್ನು ಸಿಂಗರಿಸಿ
14. ನಿಮ್ಮ ಓಟ್ಸ್ ಲಾಡು ಸವಿಯಲು ಸಿದ್ಧವಾಗಿದೆ.
ಈ ಅದ್ಭುತ ಸಿಹಿಯನ್ನು ಖಂಡಿತ ಪ್ರಯತ್ನಿಸಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಬರೆದು ತಿಳಿಸಿ.



Click it and Unblock the Notifications
