Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳ ಗೌರಿ ವ್ರತ ವಿಶೇಷ- ರುಚಿಕಟ್ಟಾದ ತಂಬಿಟ್ಟು!
ಶ್ರಾವಣ ಮಾಸ ಬಂತೆಂದರೆ ಒಂದರ ಹಿಂದೊಂದು ಹಬ್ಬಗಳ ಜಾತ್ರೆಯೇ ಹರಿದುಬರುತ್ತದೆ. ಗುರು ಪೂರ್ಣಿಮೆ, ಭೀಮನ ಅಮವಾಸ್ಯೆ ಮುಗಿಯುತ್ತಿದ್ದಂತೆಯೇ ಮಂಗಳ ಗೌರಿ ಹಬ್ಬವೂ ಆಗಮಿಸಿಬಿಡುತ್ತದೆ. ಮಂಗಳ ಗೌರಿ ಪೂಜೆಯು ಸುಮಂಗಲಿಯರು ನಾಲ್ಕು ವಾರಗಳ ಕಾಲ ಪ್ರತಿ ಮಂಗಳವಾರದಂದು ಆಚರಿಸುವ ವ್ರತವಾಗಿದೆ.
ನಾಲ್ಕನೆಯ ಮಂಗಳವಾರದಂದು ಸಂಪನ್ನಗೊಳ್ಳುವ ಈ ವ್ರತ ಕೆಲವೊಮ್ಮೆ ಐದನೆಯ ವಾರಕ್ಕೂ ವಿಸ್ತರಿಸುವುದುಂಟು. ಕಾರಣಾಂತರಗಳಿಂದ ಯಾವುದೊಂದು ವಾರದ ಮಂಗಳವಾರದಂದು ವ್ರತ ಆಚರಿಸಲಾಗದ ಮಹಿಳೆಯರಿಗೆ ಅದೇ ವಾರದ ಶುಕ್ರವಾರದಂದು ಆಚರಿಸಬಹುದಾದ ಅವಕಾಶವಿದೆ.
ಮಂಗಳ ಗೌರಿ ವ್ರತಕ್ಕೆ ಪೂಜಾಸಾಮಾಗ್ರಿಗಳ ಹೊರತಾಗಿ ಅಗತ್ಯವಾಗಿ ಬೇಕಾಗಿರುವುದೆಂದರೆ ಅದೇ 'ತಂಬಿಟ್ಟು' . ದೇವರ ಪೂಜೆಯಲ್ಲಿ ನೈವೇದ್ಯರೂಪದಲ್ಲಿರುವ ತಂಬಿಟ್ಟು ಬಳಿಕ ಪ್ರಸಾದದ ರೂಪದಲ್ಲಿ ಮನೆಯ ಸದಸ್ಯರೆಲ್ಲರ ಮನ ಗೆಲ್ಲುವುದು ಖಚಿತ. ರುಚಿಕರವಾದ ತಂಬಿಟ್ಟು ಮಾಡುವುದು ಹೇಗೆ ಎಂಬುದನ್ನು ಈಗ ನೋಡೋಣ...
ಪ್ರಮಾಣ:
ನಾಲ್ವರಿಗೆ
ಒಂದು
ಹೊತ್ತಿಗಾಗುವಷ್ಟು
ಸಿದ್ಧತಾ
ಸಮಯ:
ಹತ್ತು
ನಿಮಿಷಗಳು
ತಯಾರಿಕಾ
ಸಮಯ:
ಹತ್ತು
ನಿಮಿಷಗಳು
ಮಂಗಳ
ಗೌರಿ
ವ್ರತದ
ಹಿನ್ನಲೆ
ಅಗತ್ಯವಿರುವ
ಸಾಮಾಗ್ರಿಗಳು:
*ಗೋಧಿಹಿಟ್ಟು
-
ಒಂದು
ಕಪ್
*ಬೆಲ್ಲ
-
ಒಂದು
ಕಪ್
(ಉಂಡೆಗಳನ್ನು
ಪುಡಿ
ಮಾಡಿ
ನಯವಾಗಿಸಿದ್ದು)-ಸಾಧ್ಯವಾದಷ್ಟು
ಕಂದು
ಬಣ್ಣದ
ಮತ್ತು
ಗಡುಸಾಗಿರದ
ಬೆಲ್ಲವನ್ನೇ
ಆರಿಸಿ.
ಬೆಲ್ಲ
ಎರಡು
ಬೆರಳುಗಳಲ್ಲಿ
ಮುರಿಯುವಂತಿದ್ದರೆ
ಉತ್ತಮ.
ಬಿಳಿ
ಬೆಲ್ಲ
ಬೇಡ,
ಏಕೆಂದರೆ
ಇದು
ತಂಬಿಟ್ಟನ್ನು
ಅತೀವ
ಗಡಸಾಗಿಸುತ್ತದೆ.
*ತುಪ್ಪ
-
ಮುಕ್ಕಾಲು
ಕಪ್
*ನೀರು
-
ಒಂದೂವರೆ
ಕಪ್
ವಿಧಾನ:
1)
ಒಂದು
ದಪ್ಪತಳದ
ಪಾತ್ರೆಯಲ್ಲಿ
ತುಪ್ಪ
ಹಾಕಿ
ಚಿಕ್ಕ
ಉರಿಯಲ್ಲಿ
ಪೂರ್ಣವಾಗಿ
ಕರಗುವವರೆಗೆ
ಕಾಯಿರಿ.
2)
ಈಗ
ಗೋಧಿ
ಹಿಟ್ಟು
ಹಾಕಿ
ಒಂದು
ಕ್ಷಣವೂ
ಬಿಡದೇ
ತಿರುವುತ್ತಾ
ಇರಿ
(ಒಂದು
ಕ್ಷಣ
ಮೈಮರೆತರೂ
ತಳ
ಸುಡುವ
ಮೂಲಕ
ರುಚಿ
ಕಹಿಯಾಗುತ್ತದೆ)
3)
ಗೋಧಿ
ಹಿಟ್ಟು
ಸುಮಾರು
ಕೆಂಪು
ಬಣ್ಣ
ಬರುವವರೆಗೆ
ಹುರಿದ
ಬಳಿಕ
ಒಲೆ
ಆರಿಸಿ
ಒಂದು
ಅಗಲವಾದ
ತಟ್ಟೆಯಲ್ಲಿ
ಹರಡಿ.
4)
ಇನ್ನೊಂದು
ಪಾತ್ರೆಯಲ್ಲಿ
ಒಂದೂವರೆ
ಕಪ್
ನೀರು
ಹಾಕಿ
ಕುದಿಸಿ.
ಕುದಿ
ಬರಲು
ತೊಡಗುತ್ತಿದ್ದಂತೆಯೇ
ಬೆಲ್ಲದ
ಪುಡಿಹಾಕಿ
ಕಲಕಿ.
5)
ಬೆಲ್ಲವೆಲ್ಲಾ
ಕರಗಿದೆ
ಎಂದೆನಿಸಿದ
ಬಳಿಕ
ಈ
ನೀರನ್ನು
ಟೀ
ಸೋಸುವ
ಶೋಧಕದಲ್ಲಿ
ಸೋಸಿ.
ಇದರಲ್ಲಿ
ಕರಗದ
ಚಿಕ್ಕ
ಕಲ್ಲು,
ಮರಳು
ಮೊದಲಾದವು
ಬೇರ್ಪಟ್ಟಂತಾಗುತ್ತದೆ.
ಈ
ನೀರನ್ನು
ತಟ್ಟೆಯಲ್ಲಿ
ಹರಡಿ
ತಣಿಯಲು
ಬಿಡಿ.
6)
ಕೊಂಚ
ಕಾಲದ
ಬಳಿಕ
ತಣಿದ
ಬೆಲ್ಲದ
ನೀರನ್ನು
ಒಂದು
ಪಾತ್ರೆಗೆ
ಹಾಕಿ
ಹುರಿದ
ಗೋಧಿಹಿಟ್ಟನ್ನು
ಹಾಕಿ
ಕೈಯಿಂದ
ಗಂಟುಗಳಿಲ್ಲದಂತೆ
ನಾದಿ.
ಸುಮಾರು
ಚಪಾತಿ
ಹದಕ್ಕೆ
ಬಂದ
ಬಳಿಕ
ಐದು
ನಿಮಿಷ
ಹಾಗೇ
ಇಡಿ.
7)
ತಂಬಿಟ್ಟು
ಮಾಡಲು
ಎರಡೂ
ಕೈಗಳಿಗೆ
ಕೊಂಚ
ತುಪ್ಪ
ಸವರಿ
ಈ
ಹಿಟ್ಟಿನ
ಚಿಕ್ಕ
ಚಿಕ್ಕ
ಉಂಡೆಗಳನ್ನು
ಮಾಡಿ.
ಒಂದು
ಕಪ್ನಲ್ಲಿ
ಸುಮಾರು
ಮೂವತ್ತೆರಡು
ತಂಬಿಟ್ಟುಗಳು
ತಯಾರಾಗುತ್ತವೆ.
ಇಷ್ಟೇ
ಪ್ರಮಾಣ
ಮಂಗಳ
ಗೌರಿ
ವ್ರತಕ್ಕೂ
ಅಗತ್ಯವಿದೆ.