Latest Updates
-
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಖಾರ ಪೊಂಗಲ್ ಅಥವಾ ಹುಗ್ಗಿ
ಖಾರ ಪೊಂಗಲ್ ಅಥವಾ ಹುಗ್ಗಿಯನ್ನು ಸಂಕ್ರಾಂತಿ ಸುಗ್ಗಿಯ ವೇಳೆಯಲ್ಲಿಯೇ ಮಾಡಬೇಕೆಂದೇನಿಲ್ಲ. ಅಕ್ಕಿ, ಬೇಳೆ ಮಿಶ್ರಣದ ಸತ್ವಯುತ ಆಹಾರವನ್ನು ಯಾವಾಗ ಬೇಕಾದರೂ ತಯಾರಿಸಿ ಮೆಲ್ಲಬಹುದು. ಬೆಂಗಳೂರಿನ ಭಾರತಿ ಚಂದ್ರಶೇಖರ್ ಅವರು ಸರಳ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂದೇ ತಯಾರಿಸಿ, ತಿಂದು ತೇಗಿ, ಮಸ್ತ್ ಮಜಾ ಮಾಡಿ.
ಬೇಕಾಗುವ ಸಾಮಗ್ರಿಗಳು
ಅಕ್ಕಿ 1 ಕಪ್
ಹೆಸರು ಬೇಳೆ 3/4 ಕಪ್
ಎಣ್ಣೆ 6 ಚಮಚ
ಜೀರಿಗೆ 1 ಚಮಚ
ಮೆಣಸು 1 ಚಮಚ
ಕರಿಬೇವು ಸ್ವಲ್ಪ
ಹಸಿ ಮೆಣಸಿನಕಾಯಿ 1
ಅರಿಶಿನ ಪುಡಿ ಸ್ವಲ್ಪ
ನಿಂಬೆ ರಸ 2 ಚಮಚ
ತುಪ್ಪ 4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಕುಕ್ಕರ್ ಗೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಜೀರಿಗೆ, ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಹೆಸರುಬೇಳೆ, ತೊಳೆದುಕೊಂಡ ಅಕ್ಕಿ ಹಾಕಿ ಹುರಿಯಿರಿ. 4 ಲೋಟ ನೀರನ್ನು ಹಾಕಿ. ರುಚಿಗೆ ಉಪ್ಪು, ಅರಿಶಿನ, ನಿಂಬೆ ರಸ ಹಾಕಿ ಮುಚ್ಚಿ. ಒಂದು ವಿಷಲ್ ಬಂದ ಮೇಲೆ ಉರಿ ಸಣ್ಣ ಮಾಡಿ 5 ನಿಮಿಷದ ನಂತರ ಆಫ್ ಮಾಡಿ.
ಕುಕ್ಕರ್ ತಣ್ಣಗಾದ ಮೇಲೆ ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸರಳವಾದ ಮತ್ತು ಬೇಗ ಆಗುವ ಅಡುಗೆ. ಇದರ ಜೊತೆ ಕಾಯಿ ಚಟ್ನಿ ಅಥವಾ ಮೊಸರು ಬಜ್ಜಿಯಿದ್ದರೆ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications