Just In
Don't Miss
- Movies ಬಯಸಿದ್ದು ಬಾಲಿವುಡ್ ಸಿನಿಮಾ, ಗೆದ್ದಿದ್ದು ತೆಲುಗು ಸಿನಿಮಾ; ಈ ನಟಿಯ ಭವಿಷ್ಯವೇನು?
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಾರ ಪೊಂಗಲ್ ಅಥವಾ ಹುಗ್ಗಿ
ಖಾರ ಪೊಂಗಲ್ ಅಥವಾ ಹುಗ್ಗಿಯನ್ನು ಸಂಕ್ರಾಂತಿ ಸುಗ್ಗಿಯ ವೇಳೆಯಲ್ಲಿಯೇ ಮಾಡಬೇಕೆಂದೇನಿಲ್ಲ. ಅಕ್ಕಿ, ಬೇಳೆ ಮಿಶ್ರಣದ ಸತ್ವಯುತ ಆಹಾರವನ್ನು ಯಾವಾಗ ಬೇಕಾದರೂ ತಯಾರಿಸಿ ಮೆಲ್ಲಬಹುದು. ಬೆಂಗಳೂರಿನ ಭಾರತಿ ಚಂದ್ರಶೇಖರ್ ಅವರು ಸರಳ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂದೇ ತಯಾರಿಸಿ, ತಿಂದು ತೇಗಿ, ಮಸ್ತ್ ಮಜಾ ಮಾಡಿ.
ಬೇಕಾಗುವ ಸಾಮಗ್ರಿಗಳು
ಅಕ್ಕಿ
1
ಕಪ್
ಹೆಸರು
ಬೇಳೆ
3/4
ಕಪ್
ಎಣ್ಣೆ
6
ಚಮಚ
ಜೀರಿಗೆ
1
ಚಮಚ
ಮೆಣಸು
1
ಚಮಚ
ಕರಿಬೇವು
ಸ್ವಲ್ಪ
ಹಸಿ
ಮೆಣಸಿನಕಾಯಿ
1
ಅರಿಶಿನ
ಪುಡಿ
ಸ್ವಲ್ಪ
ನಿಂಬೆ
ರಸ
2
ಚಮಚ
ತುಪ್ಪ
4
ಚಮಚ
ಉಪ್ಪು
ರುಚಿಗೆ
ತಕ್ಕಷ್ಟು
ಮಾಡುವ ವಿಧಾನ:
ಕುಕ್ಕರ್ ಗೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಜೀರಿಗೆ, ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಹೆಸರುಬೇಳೆ, ತೊಳೆದುಕೊಂಡ ಅಕ್ಕಿ ಹಾಕಿ ಹುರಿಯಿರಿ. 4 ಲೋಟ ನೀರನ್ನು ಹಾಕಿ. ರುಚಿಗೆ ಉಪ್ಪು, ಅರಿಶಿನ, ನಿಂಬೆ ರಸ ಹಾಕಿ ಮುಚ್ಚಿ. ಒಂದು ವಿಷಲ್ ಬಂದ ಮೇಲೆ ಉರಿ ಸಣ್ಣ ಮಾಡಿ 5 ನಿಮಿಷದ ನಂತರ ಆಫ್ ಮಾಡಿ.
ಕುಕ್ಕರ್ ತಣ್ಣಗಾದ ಮೇಲೆ ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸರಳವಾದ ಮತ್ತು ಬೇಗ ಆಗುವ ಅಡುಗೆ. ಇದರ ಜೊತೆ ಕಾಯಿ ಚಟ್ನಿ ಅಥವಾ ಮೊಸರು ಬಜ್ಜಿಯಿದ್ದರೆ ತುಂಬಾ ಚೆನ್ನಾಗಿರುತ್ತದೆ.