Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ತೆಂಗಿನಕಾಯಿತುರಿ ಶುಂಠಿ ಗೊಜ್ಜು

ಬೇಕಾಗುವ ಸಾಮಾನುಗಳು
ಕಾಯಿ ತುರಿ 1 ದೊಡ್ಡ ಬಟ್ಟಲು,
ಹಸಿ ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು (ಆಪ್ಶನಲ್)
ಹಸಿಮೆಣಸಿನಕಾಯಿ 6
ಅರಿಶಿನಪುಡಿ 1/2 ಚಮಚ
ಎಣ್ಣೆ 1/2 ಬಟ್ಟಲು
ಸಾಸಿವೆ 1/2 ಚಮಚ
ಕಡಲೇಕಾಯಿಬೀಜ 2 ಚಮಚ
ಹೆಚ್ಚಿದ ಈರುಳ್ಳಿ 1/2 ಬಟ್ಟಲು
ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಕಾಯಿತುರಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಅರಿಶಿನಪುಡಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ನೀರು ಜಾಸ್ತಿ ಹಾಕಬೇಡಿ. ಕಡಲೇಕಾಯಿ ಬೀಜವನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ, ಹಾಕಿ ಚೆನ್ನಾಗಿ ಬಾಡಿಸಿ ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ತಳ ಹತ್ತದಂತೆ ನೋಡಿಕೊಳ್ಳುವುದು ಸ್ಟೌ ಮುಂದೆ ನಿಂತವರ ಡ್ಯೂಟಿ.
ಕುದ್ದು ಗಟ್ಟಿ ಆದ ಮೇಲೆ ಕರಿದ ಕಡಲೇಕಾಯಿ ಬೀಜ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಂದಿಷ್ಟು ಕೈಯಾಡಿಸಿ ಕೆಳಗಿಳಿಸಿ. ಬಿಸಿಬಿಸಿ ಅನ್ನ ಉಣ್ಣಲು ಇಷ್ಟವಿಲ್ಲದವರಿಗೆ ಆರಿದನ್ನದ ಜೊತೆ ತಿನ್ನಲು ನೀಡಿ. ಆರಿದನ್ನ ಮೆಲ್ಲಲು ಇಷ್ಟವಿಲ್ಲದವರು ಕುಕ್ಕರು ಇಳಿಸುತ್ತಿದ್ದ ಹಾಗೆ ತುಪ್ಪದ ಜೊತೆ ಅನ್ನ ಗೊಜ್ಜು ಜಮಾಯಿಸಿ.



Click it and Unblock the Notifications











