Latest Updates
-
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ!
ತೆಂಗಿನಕಾಯಿತುರಿ ಶುಂಠಿ ಗೊಜ್ಜು

ಬೇಕಾಗುವ ಸಾಮಾನುಗಳು
ಕಾಯಿ ತುರಿ 1 ದೊಡ್ಡ ಬಟ್ಟಲು,
ಹಸಿ ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು (ಆಪ್ಶನಲ್)
ಹಸಿಮೆಣಸಿನಕಾಯಿ 6
ಅರಿಶಿನಪುಡಿ 1/2 ಚಮಚ
ಎಣ್ಣೆ 1/2 ಬಟ್ಟಲು
ಸಾಸಿವೆ 1/2 ಚಮಚ
ಕಡಲೇಕಾಯಿಬೀಜ 2 ಚಮಚ
ಹೆಚ್ಚಿದ ಈರುಳ್ಳಿ 1/2 ಬಟ್ಟಲು
ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಕಾಯಿತುರಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಅರಿಶಿನಪುಡಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ನೀರು ಜಾಸ್ತಿ ಹಾಕಬೇಡಿ. ಕಡಲೇಕಾಯಿ ಬೀಜವನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ, ಹಾಕಿ ಚೆನ್ನಾಗಿ ಬಾಡಿಸಿ ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ತಳ ಹತ್ತದಂತೆ ನೋಡಿಕೊಳ್ಳುವುದು ಸ್ಟೌ ಮುಂದೆ ನಿಂತವರ ಡ್ಯೂಟಿ.
ಕುದ್ದು ಗಟ್ಟಿ ಆದ ಮೇಲೆ ಕರಿದ ಕಡಲೇಕಾಯಿ ಬೀಜ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಂದಿಷ್ಟು ಕೈಯಾಡಿಸಿ ಕೆಳಗಿಳಿಸಿ. ಬಿಸಿಬಿಸಿ ಅನ್ನ ಉಣ್ಣಲು ಇಷ್ಟವಿಲ್ಲದವರಿಗೆ ಆರಿದನ್ನದ ಜೊತೆ ತಿನ್ನಲು ನೀಡಿ. ಆರಿದನ್ನ ಮೆಲ್ಲಲು ಇಷ್ಟವಿಲ್ಲದವರು ಕುಕ್ಕರು ಇಳಿಸುತ್ತಿದ್ದ ಹಾಗೆ ತುಪ್ಪದ ಜೊತೆ ಅನ್ನ ಗೊಜ್ಜು ಜಮಾಯಿಸಿ.



Click it and Unblock the Notifications