Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 4 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 17 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಸಿಲಿನ ದಾಹವನ್ನು ತಣಿಸುವ ಕಲ್ಲಂಗಡಿ ಯೋಗರ್ಟ್ ರೆಸಿಪಿ!
ಸ್ಮೂತಿಯನ್ನು ಜನಪ್ರಿಯ ಬೇಸಿಗೆ ಪೇಯವೆಂದು ಹೆಸರುವಾಸಿಯಾಗಿದ್ದು ಆರೋಗ್ಯಯುತ ಮತ್ತು ಹೊಟ್ಟೆ ಭರ್ತಿ ಮಾಡುವ ಗುಣವನ್ನು ಇದು ಹೊಂದಿದೆ. ವಿಭಿನ್ನ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಸ್ಮೂತಿಯನ್ನು ತಯಾರಿಸುತ್ತಾರೆ.
ಸ್ಮೂತಿಯನ್ನು ಬೇಸಿಗೆಯಲ್ಲಿ ತಂಪನ್ನು ಒದಗಿಸಲು ಬಳಸುತ್ತೇವೆ. ಇದನ್ನು ಬ್ರೇಕ್ಫಾಸ್ಟ್ ರೆಸಿಪಿಯಾಗಿ ಕೂಡ ಸೇವಿಸುತ್ತಾರೆ. ಹೆಚ್ಚಾಗಿ ಸೀಸನ್ನಲ್ಲಿ ದೊರೆಯುವ ಹಣ್ಣುಗಳಿಂದ ಸಿದ್ಧಪಡಿಸುವ ಸ್ಮೂತಿ ಬೇಸಿಗೆಯ ಬೇಗೆಯನ್ನು ನೀಗಲು ಸಹಕಾರಿ.
ಈ ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳೆಂದರೆ ಮಾವು ಮತ್ತು ಕಲ್ಲಂಗಡಿಯಾಗಿದೆ. ಇಲ್ಲಿ ನಾವು ನೀಡಿರುವ ಸ್ಮೂತಿ ರೆಸಿಪಿ ರಸದಿಂದ ಯಥೇಚ್ಛವಾಗಿರುವ ಕಲ್ಲಂಗಡಿಯನ್ನು ಬಳಸಿ ಮಾಡಿರುವಂಥದ್ದು. ಈ ರಸವುಳ್ಳ ಕಲ್ಲಂಗಡಿಯನ್ನು ತಂಪಾದ ಯೋಗರ್ಟ್ನೊಂದಿಗೆ ಬ್ಲೆಂಡ್ ಮಾಡಿ ಈ ಹೆಲ್ದೀ ಪೇಯವನ್ನು ಸಿದ್ಧಪಡಿಸಬಹುದು.
ಈ ಬೇಸಿಗೆಯಲ್ಲಿ ಈ ಎರಡೂ ಸಾಮಾಗ್ರಿಗಳು ತಂಪನ್ನು ನೀಡುವಂಥದ್ದೇ. ಕಲ್ಲಂಗಡಿ ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಯೋಗರ್ಟ್ ಕ್ಯಾಲ್ಶಿಯಂ ಭರಿತವಾಗಿದ್ದು ಆರೋಗ್ಯವಂತ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಸಹಕಾರಿ. ಹೆಚ್ಚಾಗಿ ಈ ಸ್ಮೂತಿ ಬೇಸಿಗೆಯಲ್ಲಿ ತೂಕ ಇಳಿಸಲು ಸಹಕಾರಿಯಾಗಿದೆ.
ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!
ಪ್ರಮಾಣ
:
2
ಗ್ಲಾಸ್ಗಳು
ಸಿದ್ಧತಾ
ಸಮಯ
10
ನಿಮಿಷಗಳು
ಸಾಮಾಗ್ರಿಗಳು;
1.
ಕಲ್ಲಂಗಡಿ
-
1
ಕಪ್
2.ಬಾಳೆಹಣ್ಣು
-
1(ಆಯ್ಕೆಯ)
3.ಗ್ರೀಕ್
ವೆನಿಲ್ಲಾ
ಯೋಗರ್ಟ್
-
1/2
ಕಪ್
4.ಐಸ್
ತುಂಡುಗಳು
-
ಸ್ವಲ್ಪ
5.ಸಕ್ಕರೆ
-
1/2
ಕಪ್
ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!
ಮಾಡುವ
ವಿಧಾನ:
1.
ಬಾಳೆಹಣ್ಣನ್ನು
ಸಣ್ಣ
ತುಂಡುಗಳನ್ನಾಗಿ
ಮಾಡಿಕೊಳ್ಳಿ.
2.ಬ್ಲೆಂಡರ್ನಲ್ಲಿ, ಬೀಜಗಳಿಲ್ಲದೆ ಕಲ್ಲಂಗಡಿಯನ್ನು ಬ್ಲೆಂಡ್ ಮಾಡಿಕೊಳ್ಳಿ. ಬಾಳೆಹಣ್ಣು, ವೆನಿಲ್ಲಾ ಯೋಗರ್ಟ್, ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ.
3. ಪುನಃ ಬ್ಲೆಂಡ್ ಮಾಡಿ ಮತ್ತು ಸಕ್ಕರೆ ಸೇರಿಸಿ. ಸಕ್ಕರೆ ಕರಗುವವರೆಗೆ ಬ್ಲೆಂಡ್ ಮಾಡಿಕೊಳ್ಳಿ.
4.ಗ್ಲಾಸ್ಗೆ ಐಸ್ ಕ್ಯೂಬ್ ಹಾಕಿ ಮತ್ತು ಕಲ್ಲಂಗಡಿ ಸ್ಮೂತಿಯನ್ನು ಅದಕ್ಕೆ ಸುರಿಯಿರಿ.
ಯೋಗರ್ಟ್ನೊಂದಿಗೆ ಕಲ್ಲಂಗಡಿ ಸ್ಮೂತಿ ಸವಿಯಲು ಸಿದ್ಧವಾಗಿದೆ. ತಂಪಾಗಿ ಅದನ್ನು ಕುಡಿಯಲು ನೀಡಿ.