Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಬಿಸಿಲಿನ ದಾಹವನ್ನು ತಣಿಸುವ ಕಲ್ಲಂಗಡಿ ಯೋಗರ್ಟ್ ರೆಸಿಪಿ!
ಸ್ಮೂತಿಯನ್ನು ಜನಪ್ರಿಯ ಬೇಸಿಗೆ ಪೇಯವೆಂದು ಹೆಸರುವಾಸಿಯಾಗಿದ್ದು ಆರೋಗ್ಯಯುತ ಮತ್ತು ಹೊಟ್ಟೆ ಭರ್ತಿ ಮಾಡುವ ಗುಣವನ್ನು ಇದು ಹೊಂದಿದೆ. ವಿಭಿನ್ನ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಸ್ಮೂತಿಯನ್ನು ತಯಾರಿಸುತ್ತಾರೆ.
ಸ್ಮೂತಿಯನ್ನು ಬೇಸಿಗೆಯಲ್ಲಿ ತಂಪನ್ನು ಒದಗಿಸಲು ಬಳಸುತ್ತೇವೆ. ಇದನ್ನು ಬ್ರೇಕ್ಫಾಸ್ಟ್ ರೆಸಿಪಿಯಾಗಿ ಕೂಡ ಸೇವಿಸುತ್ತಾರೆ. ಹೆಚ್ಚಾಗಿ ಸೀಸನ್ನಲ್ಲಿ ದೊರೆಯುವ ಹಣ್ಣುಗಳಿಂದ ಸಿದ್ಧಪಡಿಸುವ ಸ್ಮೂತಿ ಬೇಸಿಗೆಯ ಬೇಗೆಯನ್ನು ನೀಗಲು ಸಹಕಾರಿ.

ಈ ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳೆಂದರೆ ಮಾವು ಮತ್ತು ಕಲ್ಲಂಗಡಿಯಾಗಿದೆ. ಇಲ್ಲಿ ನಾವು ನೀಡಿರುವ ಸ್ಮೂತಿ ರೆಸಿಪಿ ರಸದಿಂದ ಯಥೇಚ್ಛವಾಗಿರುವ ಕಲ್ಲಂಗಡಿಯನ್ನು ಬಳಸಿ ಮಾಡಿರುವಂಥದ್ದು. ಈ ರಸವುಳ್ಳ ಕಲ್ಲಂಗಡಿಯನ್ನು ತಂಪಾದ ಯೋಗರ್ಟ್ನೊಂದಿಗೆ ಬ್ಲೆಂಡ್ ಮಾಡಿ ಈ ಹೆಲ್ದೀ ಪೇಯವನ್ನು ಸಿದ್ಧಪಡಿಸಬಹುದು.
ಈ ಬೇಸಿಗೆಯಲ್ಲಿ ಈ ಎರಡೂ ಸಾಮಾಗ್ರಿಗಳು ತಂಪನ್ನು ನೀಡುವಂಥದ್ದೇ. ಕಲ್ಲಂಗಡಿ ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಯೋಗರ್ಟ್ ಕ್ಯಾಲ್ಶಿಯಂ ಭರಿತವಾಗಿದ್ದು ಆರೋಗ್ಯವಂತ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಸಹಕಾರಿ. ಹೆಚ್ಚಾಗಿ ಈ ಸ್ಮೂತಿ ಬೇಸಿಗೆಯಲ್ಲಿ ತೂಕ ಇಳಿಸಲು ಸಹಕಾರಿಯಾಗಿದೆ.
ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!
ಪ್ರಮಾಣ : 2 ಗ್ಲಾಸ್ಗಳು
ಸಿದ್ಧತಾ ಸಮಯ 10 ನಿಮಿಷಗಳು
ಸಾಮಾಗ್ರಿಗಳು;
1. ಕಲ್ಲಂಗಡಿ - 1 ಕಪ್
2.ಬಾಳೆಹಣ್ಣು - 1(ಆಯ್ಕೆಯ)
3.ಗ್ರೀಕ್ ವೆನಿಲ್ಲಾ ಯೋಗರ್ಟ್ - 1/2 ಕಪ್
4.ಐಸ್ ತುಂಡುಗಳು - ಸ್ವಲ್ಪ
5.ಸಕ್ಕರೆ - 1/2 ಕಪ್
ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!
ಮಾಡುವ ವಿಧಾನ:
1. ಬಾಳೆಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
2.ಬ್ಲೆಂಡರ್ನಲ್ಲಿ, ಬೀಜಗಳಿಲ್ಲದೆ ಕಲ್ಲಂಗಡಿಯನ್ನು ಬ್ಲೆಂಡ್ ಮಾಡಿಕೊಳ್ಳಿ. ಬಾಳೆಹಣ್ಣು, ವೆನಿಲ್ಲಾ ಯೋಗರ್ಟ್, ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ.
3. ಪುನಃ ಬ್ಲೆಂಡ್ ಮಾಡಿ ಮತ್ತು ಸಕ್ಕರೆ ಸೇರಿಸಿ. ಸಕ್ಕರೆ ಕರಗುವವರೆಗೆ ಬ್ಲೆಂಡ್ ಮಾಡಿಕೊಳ್ಳಿ.
4.ಗ್ಲಾಸ್ಗೆ ಐಸ್ ಕ್ಯೂಬ್ ಹಾಕಿ ಮತ್ತು ಕಲ್ಲಂಗಡಿ ಸ್ಮೂತಿಯನ್ನು ಅದಕ್ಕೆ ಸುರಿಯಿರಿ.
ಯೋಗರ್ಟ್ನೊಂದಿಗೆ ಕಲ್ಲಂಗಡಿ ಸ್ಮೂತಿ ಸವಿಯಲು ಸಿದ್ಧವಾಗಿದೆ. ತಂಪಾಗಿ ಅದನ್ನು ಕುಡಿಯಲು ನೀಡಿ.



Click it and Unblock the Notifications