Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪಾಕಶಾಲೆ: ಪಿಂಕ್ಲೇಡಿ ಕುಡಿದು ನೋಡಿ!

ಇದ್ಯಾವುದು ಪಿಂಕ್ಲೇಡಿ ಎಂದು ಗರಂ ಆಗ ಬೇಡಿ. ಪಾನೀಯದ ಹೆಸರು ಮಾತ್ರ ವಿಚಿತ್ರವಾಗಿದೆ ಅಷ್ಟೆ. ಬೇಕಿದ್ದ್ದರೆ ಇದನ್ನು ನಾವು ಕಲ್ಲಂಗಡಿ ಪಾನೀಯ ಎನ್ನಲು ಅಡ್ಡಿಯಿಲ್ಲ. ಈಗ ಕಲ್ಲಂಗಡಿ ಹಣ್ಣುಗಳ ಕಾಲ. ದಣಿವಾರಿಸಿಕೊಳ್ಳಲು ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಕೈ ಬೀಸಿ ಕರೆಯುತ್ತವೆ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ಕಲ್ಲಂಗಡಿ ಹಣ್ಣಿನ ರಸ: 2 ಲೋಟ (ಹೆಚ್ಚಿದ ಕಲ್ಲಂಗಡಿ ಹಣ್ಣಿನ ತಿರುಳಿನ ಹೋಳುಗಳಲ್ಲಿನ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ರಸ ಸಿದ್ಧವಾಗುತ್ತದೆ.)
ವೆನಿಲಾ ಐಸ್ಕ್ರೀಂ: 4 ಟೀ ಚಮಚ
ಲಿಂಬೆ ರಸ: 2 ಟೀ ಚಮಚ
ಘನಾಕೃತಿಯ ಮಂಜುಗಡ್ಡೆ: 2-3 ಹೋಳುಗಳು
ಹೀಗೆ ಮಾಡಿ:
ಕಲ್ಲಂಗಡಿ ಹಣ್ಣಿನ ರಸ, ಲಿಂಬೆ ರಸ, ವೆನಿಲಾ ಐಸ್ಕ್ರೀಂ, ಘನಾಕೃತಿಯ ಮಂಜುಗಡ್ಡೆಯನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ಪಿಂಕ್ ಲೇಡಿ ತಯಾರಾದಂತೆ. ಇದಕ್ಕೆ ಒಂಚೂರು ಸಣ್ಣಗೆ ಹೆಚ್ಚಿದ ಪುದೀನಾ ಸೊಪ್ಪು , ಚಕ್ರಾಕಾರದಲ್ಲಿ ಕತ್ತರಿಸಿಕೊಂಡ ಕಲ್ಲಂಗಡಿ ಹಣ್ಣಿನ ಹೋಳನ್ನು ಅಲಂಕರಿಸಿ ಬಂದ ಅತಿಥಿಗಳಿಗೆ ದಣಿವಾರಿಸಿಕೊಳ್ಳಲು ಕೊಡಬಹುದು.



Click it and Unblock the Notifications