Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಪಾಕಶಾಲೆ: ಪಿಂಕ್ಲೇಡಿ ಕುಡಿದು ನೋಡಿ!

ಇದ್ಯಾವುದು ಪಿಂಕ್ಲೇಡಿ ಎಂದು ಗರಂ ಆಗ ಬೇಡಿ. ಪಾನೀಯದ ಹೆಸರು ಮಾತ್ರ ವಿಚಿತ್ರವಾಗಿದೆ ಅಷ್ಟೆ. ಬೇಕಿದ್ದ್ದರೆ ಇದನ್ನು ನಾವು ಕಲ್ಲಂಗಡಿ ಪಾನೀಯ ಎನ್ನಲು ಅಡ್ಡಿಯಿಲ್ಲ. ಈಗ ಕಲ್ಲಂಗಡಿ ಹಣ್ಣುಗಳ ಕಾಲ. ದಣಿವಾರಿಸಿಕೊಳ್ಳಲು ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಕೈ ಬೀಸಿ ಕರೆಯುತ್ತವೆ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ಕಲ್ಲಂಗಡಿ ಹಣ್ಣಿನ ರಸ: 2 ಲೋಟ (ಹೆಚ್ಚಿದ ಕಲ್ಲಂಗಡಿ ಹಣ್ಣಿನ ತಿರುಳಿನ ಹೋಳುಗಳಲ್ಲಿನ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ರಸ ಸಿದ್ಧವಾಗುತ್ತದೆ.)
ವೆನಿಲಾ ಐಸ್ಕ್ರೀಂ: 4 ಟೀ ಚಮಚ
ಲಿಂಬೆ ರಸ: 2 ಟೀ ಚಮಚ
ಘನಾಕೃತಿಯ ಮಂಜುಗಡ್ಡೆ: 2-3 ಹೋಳುಗಳು
ಹೀಗೆ ಮಾಡಿ:
ಕಲ್ಲಂಗಡಿ ಹಣ್ಣಿನ ರಸ, ಲಿಂಬೆ ರಸ, ವೆನಿಲಾ ಐಸ್ಕ್ರೀಂ, ಘನಾಕೃತಿಯ ಮಂಜುಗಡ್ಡೆಯನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ಪಿಂಕ್ ಲೇಡಿ ತಯಾರಾದಂತೆ. ಇದಕ್ಕೆ ಒಂಚೂರು ಸಣ್ಣಗೆ ಹೆಚ್ಚಿದ ಪುದೀನಾ ಸೊಪ್ಪು , ಚಕ್ರಾಕಾರದಲ್ಲಿ ಕತ್ತರಿಸಿಕೊಂಡ ಕಲ್ಲಂಗಡಿ ಹಣ್ಣಿನ ಹೋಳನ್ನು ಅಲಂಕರಿಸಿ ಬಂದ ಅತಿಥಿಗಳಿಗೆ ದಣಿವಾರಿಸಿಕೊಳ್ಳಲು ಕೊಡಬಹುದು.



Click it and Unblock the Notifications











