Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಪಾಕಶಾಲೆ: ಪಿಂಕ್ಲೇಡಿ ಕುಡಿದು ನೋಡಿ!

ಇದ್ಯಾವುದು ಪಿಂಕ್ಲೇಡಿ ಎಂದು ಗರಂ ಆಗ ಬೇಡಿ. ಪಾನೀಯದ ಹೆಸರು ಮಾತ್ರ ವಿಚಿತ್ರವಾಗಿದೆ ಅಷ್ಟೆ. ಬೇಕಿದ್ದ್ದರೆ ಇದನ್ನು ನಾವು ಕಲ್ಲಂಗಡಿ ಪಾನೀಯ ಎನ್ನಲು ಅಡ್ಡಿಯಿಲ್ಲ. ಈಗ ಕಲ್ಲಂಗಡಿ ಹಣ್ಣುಗಳ ಕಾಲ. ದಣಿವಾರಿಸಿಕೊಳ್ಳಲು ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಕೈ ಬೀಸಿ ಕರೆಯುತ್ತವೆ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ಕಲ್ಲಂಗಡಿ ಹಣ್ಣಿನ ರಸ: 2 ಲೋಟ (ಹೆಚ್ಚಿದ ಕಲ್ಲಂಗಡಿ ಹಣ್ಣಿನ ತಿರುಳಿನ ಹೋಳುಗಳಲ್ಲಿನ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ರಸ ಸಿದ್ಧವಾಗುತ್ತದೆ.)
ವೆನಿಲಾ ಐಸ್ಕ್ರೀಂ: 4 ಟೀ ಚಮಚ
ಲಿಂಬೆ ರಸ: 2 ಟೀ ಚಮಚ
ಘನಾಕೃತಿಯ ಮಂಜುಗಡ್ಡೆ: 2-3 ಹೋಳುಗಳು
ಹೀಗೆ ಮಾಡಿ:
ಕಲ್ಲಂಗಡಿ ಹಣ್ಣಿನ ರಸ, ಲಿಂಬೆ ರಸ, ವೆನಿಲಾ ಐಸ್ಕ್ರೀಂ, ಘನಾಕೃತಿಯ ಮಂಜುಗಡ್ಡೆಯನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ಪಿಂಕ್ ಲೇಡಿ ತಯಾರಾದಂತೆ. ಇದಕ್ಕೆ ಒಂಚೂರು ಸಣ್ಣಗೆ ಹೆಚ್ಚಿದ ಪುದೀನಾ ಸೊಪ್ಪು , ಚಕ್ರಾಕಾರದಲ್ಲಿ ಕತ್ತರಿಸಿಕೊಂಡ ಕಲ್ಲಂಗಡಿ ಹಣ್ಣಿನ ಹೋಳನ್ನು ಅಲಂಕರಿಸಿ ಬಂದ ಅತಿಥಿಗಳಿಗೆ ದಣಿವಾರಿಸಿಕೊಳ್ಳಲು ಕೊಡಬಹುದು.



Click it and Unblock the Notifications