Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಮೂಗು ಮುರಿಯದೆ ತಿನ್ನಿ ಬಹುಪಯೋಗಿ ಈರುಳ್ಳಿ

ಇದರಲ್ಲಿ ಯಾವ ಪೋಷಕಾಂಶವಿಲ್ಲ ಹೇಳಿ? ವಿಟಮಿನ್ ಸಿ, ಫೋಲೇಟ್ (ವಿಟಮಿನ್ ಬಿ), ವಿಟಮಿನ್ ಬಿ6, ಫೈಬರ್, ಕ್ರೋಮಿಯಂ, ಮ್ಯಾಂಗನೀಸ್, ಪೊಟ್ಯಾಷಿಯಂ ಎಲ್ಲವೂ ಇದರಲ್ಲಿ ಅಡಕವಾಗಿದೆ. ರೋಗಗಳನ್ನು ಅಥವಾ ಗಾಯಗಳನ್ನು ಗುಣಪಡಿಸುವಲ್ಲಿ ಈರುಳ್ಳಿಯದು ಎತ್ತಿದ ಕೈ. ಹೊಟ್ಟೆ ಉರಿ ಶಮನವಾಡುವಲ್ಲಿ, ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಈರುಳ್ಳಿ (ಉಳ್ಳಾಗಡ್ಡಿ) ಪ್ರಮುಖ ಪಾತ್ರ ವಹಿಸುತ್ತದೆ.
ಸರ್ವರೋಗಗಳಿಗೂ ಈರುಳ್ಳಿ ರಾಮಬಾಣ ತಿಳಿದಿರಲಿ. ಹೃದ್ರೋಗ, ಕ್ಯಾನ್ಸರ್, ಮೊಣಕಾಲು ನೋವು, ಸೋಂಕುಗಳು, ಆಸ್ತಮಾ... ಅಷ್ಟೇ ಏಕೆ ಸಾಮಾನ್ಯವಾಗಿ ತಲೆದೋರುವ ನೆಗಡಿ, ಕೆಮ್ಮು, ಜ್ವರಗಳಿಗೂ ಈರುಳ್ಳಿ ಉಪಶಮನಕಾರಿ. ರಕ್ತವನ್ನು ತಿಳಿಯಾಗಿಸಿ ಹರಿವನ್ನು ಹೆಚ್ಚಿಸುವುದರಿಂದ ಹೃದಯ ದಿವಿನಾಗಿರುತ್ತದೆ. ಹಾಗೆಯೆ, ರಕ್ತದೊತ್ತಡವನ್ನು ತಗ್ಗಿಸುವಲ್ಲಿ, ಮಲಬದ್ಧತೆ ತಡೆಯುವಲ್ಲಿ ಇದು ಉಪಕಾರಿ.
ಮೊಣಕಾಲಿನ ಎಲುಬುಗಳು ಸವೆಯುವುದು ಮಹಿಳೆಯರಲ್ಲಿ ಪುರುಷರಿಗಿಂತ ಅಧಿಕ. ವೃದ್ಧಾಪ್ಯದಲ್ಲಿ ಕಾಡುವ ಈ ರೋಗ ಹೆಚ್ಚು ಬಾಧಿಸಬಾರದೆಂದರೆ ಈರುಳ್ಳಿಯನ್ನು ಮುಖ ಕಿವುಚಿಕೊಳ್ಳದೆ, ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆಂದು ಸೇವಿಸಬೇಕು. ಅಡ್ಡ ಪರಿಣಾಮ ಬೀರದ ಈರುಳ್ಳಿಯನ್ನು ಅಧಿಕವಾಗಿ ಸೇವಿಸುತ್ತಿದ್ದರೆ ಸ್ತನ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.25ರಷ್ಟು ಮತ್ತು ಗರ್ಭಕೋಶದ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.73ರಷ್ಟು ತಗ್ಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ನಂಬುವ ಜವಾಬ್ದಾರಿ ನಿಮ್ಮದು.
ಸೈಡ್ ಎಫೆಕ್ಟ್ : ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. Next ಹಸಿರು ಸೊಪ್ಪು »
;



Click it and Unblock the Notifications