Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂಗು ಮುರಿಯದೆ ತಿನ್ನಿ ಬಹುಪಯೋಗಿ ಈರುಳ್ಳಿ

ಇದರಲ್ಲಿ ಯಾವ ಪೋಷಕಾಂಶವಿಲ್ಲ ಹೇಳಿ? ವಿಟಮಿನ್ ಸಿ, ಫೋಲೇಟ್ (ವಿಟಮಿನ್ ಬಿ), ವಿಟಮಿನ್ ಬಿ6, ಫೈಬರ್, ಕ್ರೋಮಿಯಂ, ಮ್ಯಾಂಗನೀಸ್, ಪೊಟ್ಯಾಷಿಯಂ ಎಲ್ಲವೂ ಇದರಲ್ಲಿ ಅಡಕವಾಗಿದೆ. ರೋಗಗಳನ್ನು ಅಥವಾ ಗಾಯಗಳನ್ನು ಗುಣಪಡಿಸುವಲ್ಲಿ ಈರುಳ್ಳಿಯದು ಎತ್ತಿದ ಕೈ. ಹೊಟ್ಟೆ ಉರಿ ಶಮನವಾಡುವಲ್ಲಿ, ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಈರುಳ್ಳಿ (ಉಳ್ಳಾಗಡ್ಡಿ) ಪ್ರಮುಖ ಪಾತ್ರ ವಹಿಸುತ್ತದೆ.
ಸರ್ವರೋಗಗಳಿಗೂ ಈರುಳ್ಳಿ ರಾಮಬಾಣ ತಿಳಿದಿರಲಿ. ಹೃದ್ರೋಗ, ಕ್ಯಾನ್ಸರ್, ಮೊಣಕಾಲು ನೋವು, ಸೋಂಕುಗಳು, ಆಸ್ತಮಾ... ಅಷ್ಟೇ ಏಕೆ ಸಾಮಾನ್ಯವಾಗಿ ತಲೆದೋರುವ ನೆಗಡಿ, ಕೆಮ್ಮು, ಜ್ವರಗಳಿಗೂ ಈರುಳ್ಳಿ ಉಪಶಮನಕಾರಿ. ರಕ್ತವನ್ನು ತಿಳಿಯಾಗಿಸಿ ಹರಿವನ್ನು ಹೆಚ್ಚಿಸುವುದರಿಂದ ಹೃದಯ ದಿವಿನಾಗಿರುತ್ತದೆ. ಹಾಗೆಯೆ, ರಕ್ತದೊತ್ತಡವನ್ನು ತಗ್ಗಿಸುವಲ್ಲಿ, ಮಲಬದ್ಧತೆ ತಡೆಯುವಲ್ಲಿ ಇದು ಉಪಕಾರಿ.
ಮೊಣಕಾಲಿನ ಎಲುಬುಗಳು ಸವೆಯುವುದು ಮಹಿಳೆಯರಲ್ಲಿ ಪುರುಷರಿಗಿಂತ ಅಧಿಕ. ವೃದ್ಧಾಪ್ಯದಲ್ಲಿ ಕಾಡುವ ಈ ರೋಗ ಹೆಚ್ಚು ಬಾಧಿಸಬಾರದೆಂದರೆ ಈರುಳ್ಳಿಯನ್ನು ಮುಖ ಕಿವುಚಿಕೊಳ್ಳದೆ, ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆಂದು ಸೇವಿಸಬೇಕು. ಅಡ್ಡ ಪರಿಣಾಮ ಬೀರದ ಈರುಳ್ಳಿಯನ್ನು ಅಧಿಕವಾಗಿ ಸೇವಿಸುತ್ತಿದ್ದರೆ ಸ್ತನ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.25ರಷ್ಟು ಮತ್ತು ಗರ್ಭಕೋಶದ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.73ರಷ್ಟು ತಗ್ಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ನಂಬುವ ಜವಾಬ್ದಾರಿ ನಿಮ್ಮದು.
ಸೈಡ್ ಎಫೆಕ್ಟ್ : ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. Next ಹಸಿರು ಸೊಪ್ಪು »
;



Click it and Unblock the Notifications