Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಮೂಗು ಮುರಿಯದೆ ತಿನ್ನಿ ಬಹುಪಯೋಗಿ ಈರುಳ್ಳಿ

ಇದರಲ್ಲಿ ಯಾವ ಪೋಷಕಾಂಶವಿಲ್ಲ ಹೇಳಿ? ವಿಟಮಿನ್ ಸಿ, ಫೋಲೇಟ್ (ವಿಟಮಿನ್ ಬಿ), ವಿಟಮಿನ್ ಬಿ6, ಫೈಬರ್, ಕ್ರೋಮಿಯಂ, ಮ್ಯಾಂಗನೀಸ್, ಪೊಟ್ಯಾಷಿಯಂ ಎಲ್ಲವೂ ಇದರಲ್ಲಿ ಅಡಕವಾಗಿದೆ. ರೋಗಗಳನ್ನು ಅಥವಾ ಗಾಯಗಳನ್ನು ಗುಣಪಡಿಸುವಲ್ಲಿ ಈರುಳ್ಳಿಯದು ಎತ್ತಿದ ಕೈ. ಹೊಟ್ಟೆ ಉರಿ ಶಮನವಾಡುವಲ್ಲಿ, ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಈರುಳ್ಳಿ (ಉಳ್ಳಾಗಡ್ಡಿ) ಪ್ರಮುಖ ಪಾತ್ರ ವಹಿಸುತ್ತದೆ.
ಸರ್ವರೋಗಗಳಿಗೂ ಈರುಳ್ಳಿ ರಾಮಬಾಣ ತಿಳಿದಿರಲಿ. ಹೃದ್ರೋಗ, ಕ್ಯಾನ್ಸರ್, ಮೊಣಕಾಲು ನೋವು, ಸೋಂಕುಗಳು, ಆಸ್ತಮಾ... ಅಷ್ಟೇ ಏಕೆ ಸಾಮಾನ್ಯವಾಗಿ ತಲೆದೋರುವ ನೆಗಡಿ, ಕೆಮ್ಮು, ಜ್ವರಗಳಿಗೂ ಈರುಳ್ಳಿ ಉಪಶಮನಕಾರಿ. ರಕ್ತವನ್ನು ತಿಳಿಯಾಗಿಸಿ ಹರಿವನ್ನು ಹೆಚ್ಚಿಸುವುದರಿಂದ ಹೃದಯ ದಿವಿನಾಗಿರುತ್ತದೆ. ಹಾಗೆಯೆ, ರಕ್ತದೊತ್ತಡವನ್ನು ತಗ್ಗಿಸುವಲ್ಲಿ, ಮಲಬದ್ಧತೆ ತಡೆಯುವಲ್ಲಿ ಇದು ಉಪಕಾರಿ.
ಮೊಣಕಾಲಿನ ಎಲುಬುಗಳು ಸವೆಯುವುದು ಮಹಿಳೆಯರಲ್ಲಿ ಪುರುಷರಿಗಿಂತ ಅಧಿಕ. ವೃದ್ಧಾಪ್ಯದಲ್ಲಿ ಕಾಡುವ ಈ ರೋಗ ಹೆಚ್ಚು ಬಾಧಿಸಬಾರದೆಂದರೆ ಈರುಳ್ಳಿಯನ್ನು ಮುಖ ಕಿವುಚಿಕೊಳ್ಳದೆ, ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆಂದು ಸೇವಿಸಬೇಕು. ಅಡ್ಡ ಪರಿಣಾಮ ಬೀರದ ಈರುಳ್ಳಿಯನ್ನು ಅಧಿಕವಾಗಿ ಸೇವಿಸುತ್ತಿದ್ದರೆ ಸ್ತನ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.25ರಷ್ಟು ಮತ್ತು ಗರ್ಭಕೋಶದ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.73ರಷ್ಟು ತಗ್ಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ನಂಬುವ ಜವಾಬ್ದಾರಿ ನಿಮ್ಮದು.
ಸೈಡ್ ಎಫೆಕ್ಟ್ : ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. Next ಹಸಿರು ಸೊಪ್ಪು »
;



Click it and Unblock the Notifications