Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಳೆಗಾಲಕ್ಕೆ ವಿಶೇಷ ತಿಂಡಿ-ಪತ್ರೊಡೆ

ಅಲ್ಲದೆ ಮಳೆಗಾಲದ ಸಮಯದಲ್ಲಿ ದೇಹವನ್ನು ಬೆಚ್ಚಗಿಡುವ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಹೀಗೆ ದೇಹವನ್ನು ಬೆಚ್ಚಗಿಡುವ ಪದಾರ್ಥಗಳಲ್ಲಿ ಪತ್ರೊಡೆ ಕೂಡ ಒಂದು ಆಹಾರ ಪದಾರ್ಥವಾಗಿದೆ. ಈ ಪತ್ರೊಡೆಯನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು :
* 7 ರಿಂದ 8 ಕೆಸುವಿನ ಎಲೆ
* 2 ಕಪ್ ಅಕ್ಕಿ
* 1/4 ಕಪ್ ತೊಗರಿಬೇಳೆ
* 1/4 ಕಪ್ ಹೆಸರು ಬೇಳೆ
* 1/4 ಕಪ್ ಕಡಲೆ ಬೇಳೆ
* 1/4 ಕಪ್ ಉದ್ದಿನ ಬೇಳೆ
* 6-8 ಒಣಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* 2-3ಚಮಚ ಕೊತ್ತಂಬರಿ ಬೀಜ
* 2 ಚಮಚ ಜೀರಿಗೆ
* 1/4 ಚಮಚ ಇಂಗು
* ರುಚಿಗೆ ತಕ್ಕ ಉಪ್ಪು
* ಹುಣಸೆ ಹಣ್ಣಿನ ರಸ
(ನಿಂಬೆ ಹಣ್ಣಿಗಿಂತ ಸ್ವಲ್ಪ ದೊಡ್ಡ ಹುಣಸೆ ಹಣ್ಣಿನ ಉಂಡೆ ತಗೊಂಡು ಅದನ್ನು ನೀರಿನಲ್ಲಿ ಹಾಕಿ ಅದರಿಂದ ರಸ ಹಿಂಡಿ ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕು).
ತಯಾರಿಸುವ ವಿಧಾನ:
1. ಅಕ್ಕಿ, ತೊಗರಿಬೇಳೆ, ಹೆಸರು ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆಯನ್ನು 3 ತಾಸುಗಳ ಕಾಲ ನೆನೆಹಾಕಬೇಕು.
2. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಬೇಕು.
3. ತವಾದಲ್ಲಿ ಒಣ ಮೆಣಸು, ಜೀರಿಗೆ, ಇಂಗು, ಕೊತ್ತಂಬರಿ ಬೀಜ ಹಾಕಿ ಸಣ್ಣ ಉರಿಯಲ್ಲಿ ಹುರಿದು ಮಿಕ್ಸಿಯಲ್ಲಿ ಹಾಕಿ ಪುಡಿಪುಡಿಯಾಗಿ ರುಬ್ಬಿಕೊಳ್ಳಬೇಕು.
4. ಕೆಸುವಿನ ಎಲೆಯನ್ನು ತೊಳೆದು, ಅದರ ನಾರು ತೆಗೆದು, ಚಿಕ್ಕದಾಗಿ ಕತ್ತರಿಸಿ ಹಿಟ್ಟಿನ ಜೊತೆ ಹಾಕಿ, ಅದಕ್ಕೆ ಪುಡಿ-ಪುಡಿಯಾಗಿ ರುಬ್ಬಿದ ಮಸಾಲೆ ಪುಡಿ ಮತ್ತು ಹುಣಸೆ ಹಣ್ಣಿನ ರಸ ರುಚಿಗೆ ತಕ್ಕ ಉಪ್ಪು ಹಾಕಿ 3 ವಿಶಲ್ ಬರುವರೆಗೆ ಕುಕ್ಕರ್ ನಲ್ಲಿ ಬೇಯಿಸಿ, ನಂತರ ಕುಕ್ಕರ್ ನಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಅದನ್ನು ಪುಡಿಪುಡಿ ಮಾಡಿದರೆ ರುಚಿಕರವಾದ ಪತ್ರೊಡೆ ರೆಡಿ.
ಇದನ್ನು ಈ ಕೆಳಗಿನ ವಿಧಾನದಿಂದ ಕೂಡ ತಯಾರಿಸಬಹುದು.
1. ಪತ್ರೊಡೆಗೆ ಹಿಟ್ಟು ರುಬ್ಬಿಕೊಂಡು ಅದಕ್ಕೆ ರುಬ್ಬಿದ ಮಸಾಲೆ ಪುಡಿ ಮತ್ತು ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ನಂತರ ಕೆಸುವಿನೆಲೆಗಳನ್ನು ನೀಟಾಗಿ ಒದ್ದೆ ಬಟ್ಟೆಯೊಂದರಲ್ಲಿ ಒರಸಿ. ಎಲೆಯ ಹಿಂಭಾಗದಲ್ಲಿರುವ ದಪ್ಪನೆಯ ನಾರುಗಳನ್ನು ನಯವಾಗಿ ಕಿತ್ತು ತೆಗೆಯಬೇಕು. ಪತ್ರೊಡೆ ನೀಟಾಗಿರಬೇಕಾಗರೆ, ಎಲೆ ಎಲ್ಲಿಯೂ ತೂತಾಗಿರಬಾರದು.
2. ಈಗ ಕೆಸುವಿನೆಲೆಗಳನ್ನು ಹರಡಿಕೊಂಡು ಎಲೆಯ ಹಿಂಬದಿ ಮೇಲೆ ಹಿಟ್ಟನ್ನು ತೆಳ್ಳಗೆ ಹಚ್ಚಿ. ಅದರ ಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಅದರ ಮೇಲೆ ಹಿಟ್ಟು ಹಚ್ಚಿ. ಎರಡೂ ಎಲೆಯ ಬದಿಗಳನ್ನು ತುಸುವೇ ಒಳಕ್ಕೆ ಮಡಚಿಕೊಂಡು ಎಲೆಯನ್ನು ನಿಮ್ಮ ಹಾಸಿಗೆ ಸುರುಳಿ ಸುತ್ತಿದ ಹಾಗೆ ಸುತ್ತಿ. ಕುಕ್ಕರಿನಲ್ಲಿ 3 ವಿಶಲ್ ಬರುವವರೆಗೆ ಬೇಯಿಸಿದರೆ ಪತ್ರೊಡೆ ರೆಡಿ.
ಈ ತಿಂಡಿಯನ್ನು ತುಪ್ಪ ಅಥವಾ ಬೆಣ್ಣೆ ಹಚ್ಚಿಕೊಂಡು ತಿನ್ನಬಹುದು. ಇದನ್ನು ಕಾಯಿ ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications