Just In
- 48 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ!
ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ಈ ಹೂವಿಗೆ ಮುಳ್ಳಿನ ಒಂದು ಗೀರು ಕೂಡ ಅಪಾಯಕಾರಿಯೇ. ಮಕ್ಕಳು ಸಮಾಧಾನವಾಗಿರದೇ ಹಠಮಾರಿಯಾಗಿರುವುದು, ಕೋಪಗೊಳ್ಳುವುದು, ಜಗಳಗಂಟರಾಗಿರುವುದು ಇದಕ್ಕೆಲ್ಲಾ ಕಾರಣ ಅವರುಗಳ ಹೆತ್ತವರ ಖಿನ್ನತೆ ಮತ್ತು ಮಾನಸಿಕ ಸ್ಥಿತಿಯಾಗಿದೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಮಕ್ಕಳು ಅತಿರೇಕವಾಗಿ ವರ್ತಿಸುತ್ತಿದ್ದಾರೆ ಎಂದಾದಲ್ಲಿ ನ್ಯೂನತೆ ನಿಮ್ಮಲ್ಲಿಯೇ ಇದೆ ಎಂಬುದನ್ನು ನೀವು ಕಂಡುಕೊಳ್ಳಬೇಕಾಗುತ್ತದೆ.
ಈ ಸಮಯದಲ್ಲಿ ನೀವು ಅವರನ್ನು ದಂಡಿಸಿದಲ್ಲಿ ಈ ವರ್ತನೆ ಅತಿರೇಕಕ್ಕೆ ಹೋಗಬಹುದೇ ವಿನಃ ಅವರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಂಡಲ್ಲಿ ನಿಮ್ಮ ಮಕ್ಕಳು ಶಾಂತರಾಗುತ್ತಾರೆ ಎಂಬುದು ವಿಜ್ಞಾನಗಳ ಪ್ರಯೋಗದಿಂದ ಇದೀಗ ಸಾಬೀತಾಗಿದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...
ಮಾನಸಿಕ ಖಿನ್ನತೆಯುಳ್ಳ ಪೋಷಕರು ತಮ್ಮ ಮಕ್ಕಳ ಹಠಿಮಾರಿ ಪ್ರವೃತ್ತಿಗೆ ಕಾರಣರಾಗಿರುತ್ತಾರೆ ಎಂಬುದು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ. ತಮ್ಮ ಮಕ್ಕಳು ಸಿಟ್ಟಾಗುವುದು ಜಗಳವಾಡುವುದಕ್ಕೆ ಕಾರಣ ಮಕ್ಕಳ ಹೆತ್ತವರೂ ಕೂಡ ಇದೇ ರೀತಿಯ ಮನಸ್ಥಿತಿಯನ್ನುಹೊಂದಿರುವುದಾಗಿದೆ. ಹದಿಹರೆಯವರಲ್ಲಿ ಮತ್ತು ಮಕ್ಕಳಲ್ಲಿ ಸಿಟ್ಟಾಗುವ ಮನಸ್ಥಿತಿಗೆ ಕಾರಣವೇ ಹೆತ್ತವರ ಸ್ವಭಾವವಾಗಿದೆ ಎಂಬುದಾಗಿ ಅಧ್ಯಯನ ದೃಢಪಡಿಸಿದೆ.
ಹೆತ್ತವರ ಖಿನ್ನತೆ ಮತ್ತು ಮಕ್ಕಳ ಮೆದುಳಿನ ಚಟುವಟಿಕೆಗಳಿಗೆ ಸಂಪರ್ಕವಿದ್ದು ಖಿನ್ನತೆಯಿರುವ ಪೋಷಕರ ಮಕ್ಕಳಲ್ಲಿ ಮೆದುಳಿನ ಪ್ರದೇಶಗಳು ಅಪಾಯವನ್ನು ತೆಗೆದುಕೊಳ್ಳುವ ವರ್ತನೆಗೆ ಅವರನ್ನು ತಯಾರು ಮಾಡುತ್ತದೆ. ಪ್ರಸ್ತುತ ಈ ಅಧ್ಯಯನಗಳು ಮಕ್ಕಳ ಮೆದುಳು ಮತ್ತು ಹೆತ್ತವರ ಖಿನ್ನತಾ ಮನಸ್ಥಿತಿಗೆ ಸಂಪರ್ಕವಿದೆ ಎಂಬುದನ್ನು ಖಾತ್ರಿಪಡಿಸಿದೆ. ಅಧ್ಯಯನದ ಸಲುವಾಗಿ 15-17 ರ ಹರೆಯದ ಮಕ್ಕಳನ್ನು ಮೂರು ವರ್ಷಗಳಿಗಿಂತ ಹೆಚ್ಚುಕಾಲ ಅಧ್ಯಯನ ನಡೆಸಲಾಯಿತು.
ಕೆಲವೊಂದು ಜ್ಞಾನಗ್ರಹಣ ಪರೀಕ್ಷೆಗಳು ಮತ್ತು ಮೆದುಳಿನ ಚಿತ್ರ ಪರೀಕ್ಷೆಗಳನ್ನು ಈ ಸಮಯದಲ್ಲಿ ಕೈಗೊಳ್ಳಲಾಗಿದ್ದು ಅವರ ವರ್ತನೆಯ ಮೂಲವನ್ನು ಈ ಸಮಯದಲ್ಲಿ ಅನ್ವೇಷಿಸಲಾಯಿತು. ಈ ಪರೀಕ್ಷೆಗೆ ಒಳಗಾಗಿದ್ದ ಮಕ್ಕಳ ಹೆತ್ತವರಲ್ಲಿ ಹೆಚ್ಚಿನವರು ಖಿನ್ನತೆಯಿಂದ ಬಳಲುತ್ತಿರುವ ಅಂಶ ದೃಢಪಟ್ಟಿದೆ.
ಇದೇ ರೀತಿ ಮಕ್ಕಳು ಕೂಡ ಜಗಳಗಂಟರಾಗಿರುವುದು, ಉದ್ರೇಕಗೊಳ್ಳುವುದು, ಕೋಪಗೊಳ್ಳುವ ವರ್ತನೆಯನ್ನು ತೋರಿಸಿದ್ದಾರೆ. ಆದ್ದರಿಂದ ಹೆತ್ತವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಲ್ಲಿ ಮಕ್ಕಳ ಅಸಮಾಧಾನವನ್ನು ಹತೋಟಿಗೆ ತರಬಹುದಾಗಿದೆ.