Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ!
ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ಈ ಹೂವಿಗೆ ಮುಳ್ಳಿನ ಒಂದು ಗೀರು ಕೂಡ ಅಪಾಯಕಾರಿಯೇ. ಮಕ್ಕಳು ಸಮಾಧಾನವಾಗಿರದೇ ಹಠಮಾರಿಯಾಗಿರುವುದು, ಕೋಪಗೊಳ್ಳುವುದು, ಜಗಳಗಂಟರಾಗಿರುವುದು ಇದಕ್ಕೆಲ್ಲಾ ಕಾರಣ ಅವರುಗಳ ಹೆತ್ತವರ ಖಿನ್ನತೆ ಮತ್ತು ಮಾನಸಿಕ ಸ್ಥಿತಿಯಾಗಿದೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಮಕ್ಕಳು ಅತಿರೇಕವಾಗಿ ವರ್ತಿಸುತ್ತಿದ್ದಾರೆ ಎಂದಾದಲ್ಲಿ ನ್ಯೂನತೆ ನಿಮ್ಮಲ್ಲಿಯೇ ಇದೆ ಎಂಬುದನ್ನು ನೀವು ಕಂಡುಕೊಳ್ಳಬೇಕಾಗುತ್ತದೆ.

ಈ ಸಮಯದಲ್ಲಿ ನೀವು ಅವರನ್ನು ದಂಡಿಸಿದಲ್ಲಿ ಈ ವರ್ತನೆ ಅತಿರೇಕಕ್ಕೆ ಹೋಗಬಹುದೇ ವಿನಃ ಅವರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಂಡಲ್ಲಿ ನಿಮ್ಮ ಮಕ್ಕಳು ಶಾಂತರಾಗುತ್ತಾರೆ ಎಂಬುದು ವಿಜ್ಞಾನಗಳ ಪ್ರಯೋಗದಿಂದ ಇದೀಗ ಸಾಬೀತಾಗಿದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...
ಮಾನಸಿಕ ಖಿನ್ನತೆಯುಳ್ಳ ಪೋಷಕರು ತಮ್ಮ ಮಕ್ಕಳ ಹಠಿಮಾರಿ ಪ್ರವೃತ್ತಿಗೆ ಕಾರಣರಾಗಿರುತ್ತಾರೆ ಎಂಬುದು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ. ತಮ್ಮ ಮಕ್ಕಳು ಸಿಟ್ಟಾಗುವುದು ಜಗಳವಾಡುವುದಕ್ಕೆ ಕಾರಣ ಮಕ್ಕಳ ಹೆತ್ತವರೂ ಕೂಡ ಇದೇ ರೀತಿಯ ಮನಸ್ಥಿತಿಯನ್ನುಹೊಂದಿರುವುದಾಗಿದೆ. ಹದಿಹರೆಯವರಲ್ಲಿ ಮತ್ತು ಮಕ್ಕಳಲ್ಲಿ ಸಿಟ್ಟಾಗುವ ಮನಸ್ಥಿತಿಗೆ ಕಾರಣವೇ ಹೆತ್ತವರ ಸ್ವಭಾವವಾಗಿದೆ ಎಂಬುದಾಗಿ ಅಧ್ಯಯನ ದೃಢಪಡಿಸಿದೆ.
ಹೆತ್ತವರ ಖಿನ್ನತೆ ಮತ್ತು ಮಕ್ಕಳ ಮೆದುಳಿನ ಚಟುವಟಿಕೆಗಳಿಗೆ ಸಂಪರ್ಕವಿದ್ದು ಖಿನ್ನತೆಯಿರುವ ಪೋಷಕರ ಮಕ್ಕಳಲ್ಲಿ ಮೆದುಳಿನ ಪ್ರದೇಶಗಳು ಅಪಾಯವನ್ನು ತೆಗೆದುಕೊಳ್ಳುವ ವರ್ತನೆಗೆ ಅವರನ್ನು ತಯಾರು ಮಾಡುತ್ತದೆ. ಪ್ರಸ್ತುತ ಈ ಅಧ್ಯಯನಗಳು ಮಕ್ಕಳ ಮೆದುಳು ಮತ್ತು ಹೆತ್ತವರ ಖಿನ್ನತಾ ಮನಸ್ಥಿತಿಗೆ ಸಂಪರ್ಕವಿದೆ ಎಂಬುದನ್ನು ಖಾತ್ರಿಪಡಿಸಿದೆ. ಅಧ್ಯಯನದ ಸಲುವಾಗಿ 15-17 ರ ಹರೆಯದ ಮಕ್ಕಳನ್ನು ಮೂರು ವರ್ಷಗಳಿಗಿಂತ ಹೆಚ್ಚುಕಾಲ ಅಧ್ಯಯನ ನಡೆಸಲಾಯಿತು.
ಕೆಲವೊಂದು ಜ್ಞಾನಗ್ರಹಣ ಪರೀಕ್ಷೆಗಳು ಮತ್ತು ಮೆದುಳಿನ ಚಿತ್ರ ಪರೀಕ್ಷೆಗಳನ್ನು ಈ ಸಮಯದಲ್ಲಿ ಕೈಗೊಳ್ಳಲಾಗಿದ್ದು ಅವರ ವರ್ತನೆಯ ಮೂಲವನ್ನು ಈ ಸಮಯದಲ್ಲಿ ಅನ್ವೇಷಿಸಲಾಯಿತು. ಈ ಪರೀಕ್ಷೆಗೆ ಒಳಗಾಗಿದ್ದ ಮಕ್ಕಳ ಹೆತ್ತವರಲ್ಲಿ ಹೆಚ್ಚಿನವರು ಖಿನ್ನತೆಯಿಂದ ಬಳಲುತ್ತಿರುವ ಅಂಶ ದೃಢಪಟ್ಟಿದೆ.
ಇದೇ ರೀತಿ ಮಕ್ಕಳು ಕೂಡ ಜಗಳಗಂಟರಾಗಿರುವುದು, ಉದ್ರೇಕಗೊಳ್ಳುವುದು, ಕೋಪಗೊಳ್ಳುವ ವರ್ತನೆಯನ್ನು ತೋರಿಸಿದ್ದಾರೆ. ಆದ್ದರಿಂದ ಹೆತ್ತವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಲ್ಲಿ ಮಕ್ಕಳ ಅಸಮಾಧಾನವನ್ನು ಹತೋಟಿಗೆ ತರಬಹುದಾಗಿದೆ.



Click it and Unblock the Notifications


