Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಧನುರ್ಮಾಸದಲ್ಲಿ ಮದುವೆಯಾಗಬಾರದು, ಏಕೆ?
ಡಿಸೆಂಬರ್ 16ರಿಂದ ಜನವರಿ 14ರವರೆಗೆ ಧನುರ್ಮಾಸ. ಸೂರ್ಯನು ಜನವರಿ 16ಕ್ಕೆ ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧನುರ್ಮಾಸ ಆರಂಭ. ಸೂರ್ಯ ಧನು ರಾಶಿಗೆ ಪ್ರವೇಶಿಸಿದಾಗ ಅದು ಶುಭಕಾಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧಾರ್ಮಿಕ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಶ್ರೇಷ್ಠವಂತೆ.
ಆದರೆ ಮದುವೆ ಮುಂತಾದ ಶುಭಕಾರ್ಯಗಳಿಗೆ ಈ ಮಾಸ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಮದುವೆ ಮುಂತಾದ ಶುಭ ಕಾರ್ಯಗಳಿಗೆ ಧನುರ್ಮಾಸ ಏಕೆ ಶುಭವಲ್ಲ ಎಂದು ನೋಡೋಣ ಬನ್ನಿ:

ಗುರು ಬಲ ಕಡಿಮೆ ಇರುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ಸೂರ್ಯನ ಚಲನೆ ನಿಧಾನವಾಗುವುದು ಅಲ್ಲದೆ ಗುರು ಗ್ರಹದ ಪ್ರಭಾವ ತುಂಬಾ ಕಡಿಮೆ ಇರುತ್ತದೆ. ಧನು ರಾಶಿಯ ಅಧಿಪತಿ ಗುರು, ಅದೇ ರಾಶಿಗೆ ಸೂರ್ಯ ಸಂಚಾರವಾಗಲಿದೆ. ಇದರಿಂದ ಸೂರ್ಯ-ಗುರು ಸಂಯೋಗವಾಗಲಿದೆ. ಹೀಗಾದಾಗ ಸೂರ್ಯ ದುರ್ಬಲವಾಗುತ್ತಾನೆ.
ಧನುರ್ಮಾಸದಲ್ಲಿ ಮದುವೆಯಾದರೆ ಸಂಸಾರದಲ್ಲಿ ತೊಂದರೆ
ಆದ್ದರಿಂದ ಈ ಅವಧಿಯಲ್ಲಿ ಮದುವೆಯಾದರೆ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರಲ್ಲ, ಇಬ್ಬರ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುವುದು, ಈ ಕಾರಣಕ್ಕೆ ಧನುರ್ಮಾಸದಲ್ಲಿ ಮದುವೆಯಾಗಬಾರದು ಎಂದು ಹೇಳಲಾಗುವುದು.
ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
ಕೆಲವು ನಂಬಿಕೆಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಹುಡುಕಬಾರದು. ಈ ತಿಂಗಳಿನಲ್ಲಿ ಒಂದಾದ ಜೋಡಿ ಚೆನ್ನಾಗಿಯೂ ಬಾಳಬಹುದು. ಆದರೆ ಎಲ್ಲಾ ನಂಬಿಕೆಗಳಿಗೆ ಒಂದು ಅರ್ಥ ಇರುತ್ತದೆ. ಧನುರ್ಮಾಸದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಾರದು ಎಂಬುವುದು ನಂಬಿಕೆ.
ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ಮಹತ್ವ
ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ತುಂಬಾನೇ ಮಹತ್ವ ನೀಡಲಾಗುವುದು. ವೈವಾಹಿಕ ಜೀವನ ಎಂಬುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ವೈವಾಹಿಕ ಜೀವನಕ್ಕೆ ಕಾಲಿಡುವಾಗ ಶುಭ ಮುಹೂರ್ತದಲ್ಲಿ ಮದುವೆಯಾಗಬೇಕು, ಆಗ ಬದುಕು ಚೆನ್ನಾಗಿರುತ್ತದೆ ಎಂಬುವುದು ನಮ್ಮಲ್ಲಿರುವ ನಂಬಿಕೆ.
ಧಾರ್ಮಿಕ ವಿಷಯಗಳಲ್ಲಿ, ಹಿಂದೂ ಧರ್ಮದ ತತ್ತ್ವಗಳಲ್ಲಿ ನಂಬಿಕೆ ಇರುವವರು ಹಿಂದೂ ಧರ್ಮದಲ್ಲಿರುವ ನಂಬಿಕೆಗಳ ವಿರುದ್ಧ ಹೋಗಲ್ಲ. ಆದ್ದರಿಂದ ಎಲ್ಲಾ ಶಾಸ್ತ್ರಬದ್ಧವಾಗಿ ಮಾಡುವ ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ತುಂಬಾನೇ ಮಹತ್ವವವಿದೆ. ಧನುರ್ಮಾಸದಲ್ಲಿ ಮದುವೆಗೆ ಶುಭ ಮುಹೂರ್ತಗಳಿಲ್ಲ.
ಮದುವೆ ಮಾತ್ರವಲ್ಲ ಮಗುವಿನ ನಾಮಕರಣ, ಮನೆ ಗೃಹ ಪ್ರವೇಶ ಮುಂತಾದ ಶುಭ ಕಾರ್ಯ ಕೂಡ ಮಾಡಲ್ಲ.
ಭಕ್ತಿಗೆ, ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ
ಧನುರ್ಮಾಸ ಭಕ್ತಿಯ ತಿಂಗಳು. ಈ ತಿಂಗಳಿನಲ್ಲಿ ಅನೇಕ ದೇವತಾ ಕಾರ್ಯಗಳನ್ನು ಮಾಡಲಾಗುವುದು. ಬ್ರಾಹ್ಮಿಮುಹೂರ್ತದಲ್ಲಿ ಎದ್ದು ಪೂಜೆ ಕಾರ್ಯಗಳನ್ನು ಮಾಡಿದರೆ ಹೆಚ್ಚಿನ ಶುಭ ಫಲ ಪಡೆಯುವಿರಿ.



Click it and Unblock the Notifications
