Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಕ್ಷಯ ತೃತೀಯ 2021: ನಿಮ್ಮ ರಾಶಿ ಪ್ರಕಾರ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳಿತಾಗುವುದು
ಅಕ್ಷಯ ತೃತೀಯ ಹಿಂದೂಗಳಿಗೆ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಐಶ್ವರ್ಯ ಪ್ರಾಪ್ತಿಗಾಗಿ ವಿಷ್ಣು, ಲಕ್ಷ್ಮೀ, ಕುಬೇರನನ್ನು ಪೂಜಿಸಲಾಗುವುದು. ಅಲ್ಲದೆ ಈ ದಿನ ಚಿನ್ನ, ಆಸ್ತಿ, ವಾಹನ ಖರೀದಿಗೆ ಹೀಗೆ ಏನಾದರೂ ಸಂಪತ್ತು ಖರೀದಿಗೆ ಶ್ರೇಷ್ಠವಾದ ದಿನವಾಗಿದೆ, ಈ ದಿನ ದಾನಕ್ಕೂ ಕೂಡ ತುಂಬಾ ಮಹತ್ವವನ್ನು ಪಡೆದಿದೆ.

ಈ ದಿನ ದಾನ ಮಾಡುವುದರಿಂದ ಬದುಕಿನಲ್ಲಿ ಒಳಿತಾಗುವುದು ಎಂಬ ನಂಬಿಕೆ ಇದೆ. ನಾವಿಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಈ ದಿನ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ನೀವು ಈ ದಿನ ಧಾನ್ಯಗಳು, ಕೆಂಒಉ ಹೂಗಳು, ಕೆಂಪು ಬಟ್ಟೆ, ತಾಮ್ರ ಇವುಗಳನ್ನು ದಾನ ಮಾಡುವುದರಿಂದ ಯಾವುದೇ ದೋಷವಿದ್ದರೆ ಪರಿಹಾರವಾಗುತ್ತದೆ ಹಾಗೂ ಶುಭ ಉಂಟಾಗುವುದು.

ವೃಷಭ ರಾಶಿ
ದನಗಳಿಗೆ ಮೇವು, ವಜ್ರ, ಅಕ್ಕಿ, ಸುಗಂಧ ದ್ರವ್ಯ, ಬಟ್ಟೆ ಇವುಗಳನ್ನು ದಾನ ಮಾಡಿ. ಇದರಿಂದ ಅವಾಹಿತರಿಗೆ ವಿವಾಹಕ್ಕೆ ಏನಾದರೂ ದೋಷವಿದ್ದರೆ ಅದು ನಿವಾರಣೆಯಾಗುವುದು.

ಮಿಥುನ ರಾಶಿ
ಧಾನ್ಯಗಳು, ಚಿನ್ನ-ಹರಳು, ಹಸಿರು ಬಟ್ಟೆ, ತರಕಾರಿ, ಮನಿ ಪ್ಲ್ಯಾಂಟ್ ಇವುಗಳನ್ನು ದಾನ ಮಾಡಿ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಒಳ್ಳೆಯದಾಗುತ್ತದೆ, ಏಕಾಗ್ರತೆ ಹೆಚ್ಚುವುದು.

ಕರ್ಕ ರಾಶಿ
ಕರ್ಕ ರಾಶಿಯವರು ಸಕ್ಕರೆ,ಅಕ್ಕಿ, ತುಪ್ಪ, ಹಾಲು, ಮೊಸರು, ನೀರು, ಬೆಳ್ಳಿ, ಮುತ್ತು ಹಾಗೂ ಬಿಳಿ ಬಟ್ಟೆ ಇವುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗುವುದು.

ಸಿಂಹ ರಾಶಿ
ಕೆಂಪು ಬಟ್ಟೆ, ಸಿಂಧೂರ, ಮೇಣದ ಬತ್ತಿ, ಕರ್ಪೂರ, ತಾಮ್ರ ಹಾಗೂ ಪಾತ್ರೆಗಳು ಇವುಗಳನ್ನು ದಾನ ಮಾಡಬಹುದು. ಇದರಿಂದ ಖ್ಯಾತಿ ಹೆಚ್ಚುವುದು.

ಕನ್ಯಾ ರಾಶಿ
ಕನ್ಯಾ ರಾಶಿಯವರು ತರಕಾರಿಗಳು, ಗಿಡ, ಹಸಿರು ಬಟ್ಟೆ, ಹಸರು ಬಳೆ, ಪುಸ್ತಕ ಹಾಗೂ ಕಲಿಕೆಗೆ ಸಂಬಂಧಿಸಿದ ವಸ್ತುಗಳು, ಬೀಜ, ಆಹಾರ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನೀವು ವಿದೇಶಕ್ಕೆ ಹೋಗಲು ಬಯಸಿದ್ದರೆ ಆ ಇಚ್ಛೆ ನೆರವೇರುವುದು. ಇನ್ನು ಬರವಣಿಗೆ, ನಿರ್ದೇಶನ, ಸಂಗೀತ ಈ ಕ್ಷೇತ್ರದಲ್ಲಿರುವವರಿಗೆ ತುಂಬಾ ಒಳಿತಾಗುತ್ತದೆ.

ತುಲಾ ರಾಶಿ
ಸುಗಂಧ ದ್ರವ್ಯ, ಹಾಲಿನ ಉತ್ಪನ್ನಗಳು, ನೀಲಿ ಬಟ್ಟೆ, ನೀಲಿ ಬಣ್ಣದ ಬಳೆ, ಸೌಂದರ್ಯವರ್ಧಕಗಳು, ಶ್ರೀಗಂಧದ ಪುಡಿ ಇವುಗಳನ್ನು ದಾನ ಮಾಡಬಹುದು. ಇದರಿಂದ ದಾಂಪತ್ಯ ಚೆನ್ನಾಗಿರುತ್ತದೆ, ಸಹಭಾಗಿತ್ವದಲ್ಲಿ ವ್ಯವಹಾರ ಮಾಡುತ್ತಿದ್ದರೆ ಅದರಿಂದ ಒಳಿತಾಗುತ್ತದೆ, ಸಿನಿಮಾ, ಗ್ಲಾಮರ್ ಕ್ಷೇತ್ರದಲ್ಲಿ ಇರುವವರ ಮೇಲೆ ಏನಾದರೂ ಆಪಾದನೆ ಇದ್ದರೆ ಅದು ದೂರವಾಗುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಸಿಂಧೂರ, ಕೆಂಪು ಬಳೆ, ಸೌಂದರ್ಯವರ್ಧಕಗಳು, ಶ್ರೀಗಂಧ, ಕೆಂಪು ಬಟ್ಟೆ, ಕೆಂಪು ಹೂಗಳು ಇವುಗಳನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ಏನಾದರೂ ದೋಷವಿದ್ದರೆ ಅದು ದೂರವಾಗುವುದು.

ಧನು ರಾಶಿ
ನೀವು ಧರ್ಮ ಗ್ರಂಥಗಳು, ಪುಸ್ತಕ, ಹಳದಿ ಬಟ್ಟೆ, ಪಾತ್ರೆಗಳು, ಅಕ್ಕಿ, ಕಡಲೆ ಬೇಳೆ ಇವುಗಳನ್ನು ದಾನ ಮಾಡಬೇಕು. ಇದರಿಂದ ವೃತ್ತಿ ಬದುಕಿನಲ್ಲಿ ಪ್ರಗತಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಶ್ರಮ ತಕ್ಕಂತೆ ಉತ್ತಮ ಫಲಿತಾಂಶ ಲಭಿಸುವುದು.

ಮಕರ ರಾಶಿ
ಎಣ್ಣೆ, ಕಬ್ಬಿಣದ ಪಾತ್ರೆಗಳು, ಕಪ್ಪು ಬಟ್ಟೆ, ಚಪ್ಪಲಿ, ಪೆನ್ನು ಇಂಥ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಧಾರ್ಮಿಕ ಹಾಗೂ ರಾಜಕೀಯ ಬದುಕಿನಲ್ಲಿ ಒಳಿತಾಗುವುದು.

ಕುಂಭ ರಾಶಿ
ಸಾಸಿವೆಯೆಣ್ಣೆ, ಎಳನೀರು, ಕೊಡೆ, ಹೊದಿಕೆ, ಶೂ, ಏಳು ಬಗೆಯ ಧಾನ್ಯಗಳು ಈ ರೀತಿಯ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಕೋರ್ಟ್ ಕೇಸ್ಗಳಿದ್ದರೆ ಅದರಲ್ಲಿ ಜಯ ಸಿಗುವುದು, ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು.

ಮೀನ ರಾಶಿ
ಕಡಲೆ ಬೇಳೆ, ಚಿನ್ನ, ಕೇಸರಿ, ಪುಸ್ತಕ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಅರಿಶಿಣ ಇವುಗಳನ್ನು ದಾನ ಮಾಡಬೇಕು. ಇದರಿಂದ ವೃತ್ತಿ ಬದುಕಿನಲ್ಲಿ ಏಳಿಗೆ ಉಂಟಾಗುವುದು, ವಿದ್ಯಾರ್ಥಿಗಳಿಗೂ ಒಳ್ಳೆಯದಾಗುವುದು.



Click it and Unblock the Notifications











