Latest Updates
-
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ! -
ಭಾರತ-ಐರ್ಲೆಂಡ್ ಮೊದಲ ಟಿ20: ಬೆಲ್ಫಾಸ್ಟ್ನಲ್ಲಿ ಮಳೆ ಕಾಟ, ಪಂದ್ಯ ನಡೆಯುತ್ತಾ? ಇಲ್ಲಿದೆ ಪಿಚ್ ಮತ್ತು ಹವಾಮಾನ ವರದಿ -
ವಿಶ್ವ ವಿಟಲಿಗೋ ದಿನ 2026: ಚರ್ಮದ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ 'ಯುವಿ-ಸೇಫ್' ದಿನಚರಿ ಇಲ್ಲಿದೆ! -
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್!
ಸೆ.1ಕ್ಕೆ ಸ್ಕಂದ ಷಷ್ಠಿ: ಸಂತಾನ ಭಾಗ್ಯ, ದಾರಿದ್ರ್ಯ ನಿವಾರಣೆಗೆ ಪಾಲಿಸಬೇಕಾದ ಪೂಜಾ ವಿಧಿಗಳೇನು?
ಸ್ಕಂದ ಷಷ್ಠಿ ಉಪವಾಸವನ್ನು ಕಾರ್ತಿಕೇಯ ದೇವರಿಗೆ ಅಂದರೆ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಲಾಗಿದೆ. ಭಾದ್ರಪದ ಶುಕ್ಲ ಪಕ್ಷದ ಷಷ್ಠಿ ದಿನಾಂಕದಂದು ಸ್ಕಂದ ಷಷ್ಠಿ ಆಚರಿಸಲಾಗುತ್ತದೆ ಅಂದರೆ ಈ ದಿನ ಆಚರಿಸಲಾಗುತ್ತಿದೆ. ಸ್ಕಂದ ಷಷ್ಠಿಯನ್ನು ಕಂದ ಷಷ್ಠಿ ಎಂದೂ ಕರೆಯುತ್ತಾರೆ.

ಈ ದಿನ ಕಾರ್ತಿಕೇಯ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ಸುಖ, ಸಮೃದ್ಧಿ, ಸಂತಾನ ಭಾಗ್ಯ ದೊರೆಯುತ್ತದ.

ಸ್ಕಂದ ಷಷ್ಠಿಯ ಪೂಜೆಯ ಶುಭ ಸಮಯ ಯಾವಾಗ?
ಸ್ಕಂದ ಷಷ್ಠಿ ದಿನಾಂಕ - ಸೆಪ್ಟೆಂಬರ್ 1, 2022, ಗುರುವಾರ
ಭಾದ್ರಪದ, ಶುಕ್ಲ ಷಷ್ಠಿ ಆರಂಭ - ಮಧ್ಯಾಹ್ನ 02:49 ಸೆಪ್ಟೆಂಬರ್ 01
ಭಾದ್ರಪದ, ಶುಕ್ಲ ಷಷ್ಠಿ ಮುಕ್ತಾಯ -ಮಧ್ಯಾಹ್ನ 01:51ಕ್ಕೆ ಸೆಪ್ಟೆಂಬರ್ 02
ಸೆಪ್ಟೆಂಬರ್ 1 ರಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ.

ಸ್ಕಂದ ಷಷ್ಠಿಯ ಮಹತ್ವ
ಮುರುಗನು ಷಷ್ಠಿಯ ದಿನದಂದು ಸೊರಪದ್ಮ ಮತ್ತು ಅವನ ಸಹೋದರರಾದ ತಾರಕಾಸುರ ಮತ್ತು ಸಿಂಹಮುಖನನ್ನು ಕೊಂದನು. ಸ್ಕಂದ ಷಷ್ಠಿಯ ಈ ದಿನ ವಿಜಯದ ಸಂಕೇತವಾಗಿದೆ. ಮುರುಗನ್ ವೇಲ್ ಎಂಬ ಆಯುಧವನ್ನು ಬಳಸಿ ಸೂರಪದ್ಮನ ಶಿರಚ್ಛೇದ ಮಾಡಿದನೆಂದು ನಂಬಲಾಗಿದೆ. ಕತ್ತರಿಸಿದ ತಲೆಯಿಂದ ನವಿಲು ಹಾಗೂ ಹುಂಜ ಹೊರಹೊಮ್ಮಿದವು ಎಂಬ ಪೌರಾಣಿಕ ಕತೆಯಿದೆ. ನವಿಲನ್ನು ಕಾರ್ತಿಕೇಯ ತನ್ನ ವಾಹನವನ್ನಾಗಿ ಮಾಡಿದರೆ ಧ್ವಜದ ಸಂಕೇತವಾಗಿ ಹುಂಜವನ್ನು ಬಳಸಿದರು.
ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಪೂಜಾ ವಿಧಿಗಳು:
* ಸ್ಕಂದ ಷಷ್ಠಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
* ಹಲಗೆಯ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕಾರ್ತಿಕೇಯನ ವಿಗ್ರಹವನ್ನು ಸ್ಥಾಪಿಸಿ.
* ಮುರುಗನ ಜೊತೆಗೆ ಶಿವ-ಪಾರ್ವತಿ ಹಾಗೂ ಗಣೇಶ ಮೂರ್ತಿಗಳನ್ನೂ ಪ್ರತಿಷ್ಠಾಪಿಸಬೇಕು.
* ಕಾರ್ತಿಕೇಯನ ಮುಂದೆ ಕಲಶವನ್ನು ಇರಿಸಿ.
* ಮೊದಲು ಗಣೇಶನ ಪೂಜೆ ಮಾಡಿ.
* ಸಾಧ್ಯವಾದರೆ ಅಖಂಡ ಜ್ಯೋತಿ ಬೆಳಗಿಸಿ. ಹಾಗೆಯೇ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿ.
* ಕಾರ್ತಿಕೇಯನಿಗೆ ನೀರನ್ನು ಅರ್ಪಿಸಿ ಮತ್ತು ಹೊಸ ಬಟ್ಟೆಗಳನ್ನು ಅರ್ಪಿಸಿ.
* ಹೂವುಗಳು ಅಥವಾ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
* ಪೂಜೆಯ ಕೊನೆಯಲ್ಲಿ ಆರತಿ ಮಾಡಿ.



Click it and Unblock the Notifications