Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಸೆ.1ಕ್ಕೆ ಸ್ಕಂದ ಷಷ್ಠಿ: ಸಂತಾನ ಭಾಗ್ಯ, ದಾರಿದ್ರ್ಯ ನಿವಾರಣೆಗೆ ಪಾಲಿಸಬೇಕಾದ ಪೂಜಾ ವಿಧಿಗಳೇನು?
ಸ್ಕಂದ ಷಷ್ಠಿ ಉಪವಾಸವನ್ನು ಕಾರ್ತಿಕೇಯ ದೇವರಿಗೆ ಅಂದರೆ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಲಾಗಿದೆ. ಭಾದ್ರಪದ ಶುಕ್ಲ ಪಕ್ಷದ ಷಷ್ಠಿ ದಿನಾಂಕದಂದು ಸ್ಕಂದ ಷಷ್ಠಿ ಆಚರಿಸಲಾಗುತ್ತದೆ ಅಂದರೆ ಈ ದಿನ ಆಚರಿಸಲಾಗುತ್ತಿದೆ. ಸ್ಕಂದ ಷಷ್ಠಿಯನ್ನು ಕಂದ ಷಷ್ಠಿ ಎಂದೂ ಕರೆಯುತ್ತಾರೆ.

ಈ ದಿನ ಕಾರ್ತಿಕೇಯ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ಸುಖ, ಸಮೃದ್ಧಿ, ಸಂತಾನ ಭಾಗ್ಯ ದೊರೆಯುತ್ತದ.

ಸ್ಕಂದ ಷಷ್ಠಿಯ ಪೂಜೆಯ ಶುಭ ಸಮಯ ಯಾವಾಗ?
ಸ್ಕಂದ ಷಷ್ಠಿ ದಿನಾಂಕ - ಸೆಪ್ಟೆಂಬರ್ 1, 2022, ಗುರುವಾರ
ಭಾದ್ರಪದ, ಶುಕ್ಲ ಷಷ್ಠಿ ಆರಂಭ - ಮಧ್ಯಾಹ್ನ 02:49 ಸೆಪ್ಟೆಂಬರ್ 01
ಭಾದ್ರಪದ, ಶುಕ್ಲ ಷಷ್ಠಿ ಮುಕ್ತಾಯ -ಮಧ್ಯಾಹ್ನ 01:51ಕ್ಕೆ ಸೆಪ್ಟೆಂಬರ್ 02
ಸೆಪ್ಟೆಂಬರ್ 1 ರಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ.

ಸ್ಕಂದ ಷಷ್ಠಿಯ ಮಹತ್ವ
ಮುರುಗನು ಷಷ್ಠಿಯ ದಿನದಂದು ಸೊರಪದ್ಮ ಮತ್ತು ಅವನ ಸಹೋದರರಾದ ತಾರಕಾಸುರ ಮತ್ತು ಸಿಂಹಮುಖನನ್ನು ಕೊಂದನು. ಸ್ಕಂದ ಷಷ್ಠಿಯ ಈ ದಿನ ವಿಜಯದ ಸಂಕೇತವಾಗಿದೆ. ಮುರುಗನ್ ವೇಲ್ ಎಂಬ ಆಯುಧವನ್ನು ಬಳಸಿ ಸೂರಪದ್ಮನ ಶಿರಚ್ಛೇದ ಮಾಡಿದನೆಂದು ನಂಬಲಾಗಿದೆ. ಕತ್ತರಿಸಿದ ತಲೆಯಿಂದ ನವಿಲು ಹಾಗೂ ಹುಂಜ ಹೊರಹೊಮ್ಮಿದವು ಎಂಬ ಪೌರಾಣಿಕ ಕತೆಯಿದೆ. ನವಿಲನ್ನು ಕಾರ್ತಿಕೇಯ ತನ್ನ ವಾಹನವನ್ನಾಗಿ ಮಾಡಿದರೆ ಧ್ವಜದ ಸಂಕೇತವಾಗಿ ಹುಂಜವನ್ನು ಬಳಸಿದರು.
ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಪೂಜಾ ವಿಧಿಗಳು:
* ಸ್ಕಂದ ಷಷ್ಠಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
* ಹಲಗೆಯ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕಾರ್ತಿಕೇಯನ ವಿಗ್ರಹವನ್ನು ಸ್ಥಾಪಿಸಿ.
* ಮುರುಗನ ಜೊತೆಗೆ ಶಿವ-ಪಾರ್ವತಿ ಹಾಗೂ ಗಣೇಶ ಮೂರ್ತಿಗಳನ್ನೂ ಪ್ರತಿಷ್ಠಾಪಿಸಬೇಕು.
* ಕಾರ್ತಿಕೇಯನ ಮುಂದೆ ಕಲಶವನ್ನು ಇರಿಸಿ.
* ಮೊದಲು ಗಣೇಶನ ಪೂಜೆ ಮಾಡಿ.
* ಸಾಧ್ಯವಾದರೆ ಅಖಂಡ ಜ್ಯೋತಿ ಬೆಳಗಿಸಿ. ಹಾಗೆಯೇ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿ.
* ಕಾರ್ತಿಕೇಯನಿಗೆ ನೀರನ್ನು ಅರ್ಪಿಸಿ ಮತ್ತು ಹೊಸ ಬಟ್ಟೆಗಳನ್ನು ಅರ್ಪಿಸಿ.
* ಹೂವುಗಳು ಅಥವಾ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
* ಪೂಜೆಯ ಕೊನೆಯಲ್ಲಿ ಆರತಿ ಮಾಡಿ.



Click it and Unblock the Notifications