Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಈ ಮಗು ಗರ್ಭದಲ್ಲಿರುವಾಗಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯಿತಂತೆ!
ಮಹಿಳೆಗೆ ತಾನು ಗರ್ಭವತಿ, ಮಗುವಿನ ತಾಯಿ ಆಗುವ ಸಂದರ್ಭ ಬಂದಿದೆ ಎನ್ನುವುದಕ್ಕಿಂತ ದೊಡ್ಡ ಸಂಭ್ರಮ ಹಾಗೂ ಸಂತೋಷ ಮತ್ತೊಂದಿಲ್ಲ. ಪ್ರತಿಯೊಬ್ಬ ಮಹಿಳೆ ಕೂಡ ತಾಯ್ತನದ ಆನಂದ ಪಡೆಯಲು ಬಯಸುವಳು. ಆಕೆ ತಾನು ಗರ್ಭಿಣಿಯಾದ ದಿನದಿಂದಲೇ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳಲು ಆರಂಭಿಸುವಳು. ತನ್ನ ಮಗು ಹೇಗೆ ಇದ್ದರೂ ಅದನ್ನು ಆಕೆ ಸ್ವೀಕಾರ ಮಾಡುವಳು. ಕೆಲವೊಂದು ಸಂದರ್ಭದಲ್ಲಿ ಗರ್ಭದಲ್ಲಿರುವಂತಹ ಮಗುವಿನಲ್ಲಿ ನ್ಯೂನ್ಯತೆಗಳು ಕಾಣಿಸಿಕೊಳ್ಳುವುದು. ಈ ವೇಳೆ ವೈದ್ಯರು ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ ನೀಡುವರು. ಆದರೆ ಹೆಚ್ಚಿನ ಮಹಿಳೆಯರಿಗೆ ಇದು ದೊಡ್ಡ ಆಘಾತ ಆಗಿರುವುದು.

ತಾನು ಕಟ್ಟಿಕೊಂಡಿರುವಂತಹ ಕನಸುಗಳು ಒಂದೇ ಕ್ಷಣದಲ್ಲಿ ನುಚ್ಚುನೂರು ಆಗುವುದು. ಕೆಲವು ಮಹಿಳೆಯರು ಧೈರ್ಯ ಮಾಡಿಕೊಂಡು ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಬಯಸುವರು. ಹೇಗೆ ಇದ್ದರೂ ಅದು ತನ್ನ ಮಗು ಎನ್ನುವ ಭಾವನೆಯು ಆಕೆಯಲ್ಲಿ ಅದಾಗಲೇ ಮೂಡಿರುತ್ತದೆ. ಇದರಿಂದ ಮಗು ಹೇಗಿದ್ದರೂ ಚಿಂತಿಲ್ಲ, ಅದನ್ನು ನಾನು ಸಾಕಿ ಸಲಹಿ ದೊಡ್ಡದು ಮಾಡುತ್ತೇನೆ ಎನ್ನುವ ಭಾವನೆಯು ಮಹಿಳೆ ಯಲ್ಲಿರುತ್ತದೆ. ಈ ಲೇಖನದಲ್ಲಿ ಗರ್ಭದಲ್ಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯುತ್ತಿದ್ದ ಮಗುವಿನ ತಾಯಿ ಕೈಗೊಂಡ ನಿರ್ಧಾರ ಏನು ಎಂದು ವಿವರವಾಗಿ ಹೇಳಲಿದ್ದೇವೆ. ಮಗು ಹೆಚ್ಚು ಕಾಲ ಬದುಕುವ ಸಾಧ್ಯತೆಯು ಕಡಿಮೆ ಇರುವುದರಿಂದ ಗರ್ಭಪಾತ ಮಾಡಬೇಕೆಂದು ವೈದ್ಯರು ಸೂಚಿಸಿದರು. ಮುಂದೆ ಏನಾಯಿತು ನೀವೇ ಓದಿ...

ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಈ ಸ್ಥಿತಿ ಬಗ್ಗೆ ತಿಳಿಯಿತು
ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿಕೊಂಡ ವೇಳೆ ಗರ್ಭದಲ್ಲಿರುವ ಪುಟ್ಟ ಡಾಮಿನಿಕ್ ಪಿಯೊ ಗುಂಡ್ರಮ್ ಗೆ ಈ ಪರಿಸ್ಥಿತಿ ಇರುವುದು ಕಂಡುಬಂತು. ಸ್ಕ್ಯಾನಿಂಗ್ ವೇಳೆ ತಿಳಿದು ಬಂದ ವಿಚಾರವೆಂದರೆ ಮಗುವಿನ ಮುಖದ ಸೀಳಿನಿಂದಾಗಿ ಆತನ ಮೆದುಳಿನ ಅಂಗಾಂಶಗಳು ಹೊರಗಡೆ ಬೆಳೆಯುತ್ತಿದೆ ಮತ್ತು ಆತನ ಮುಖದ ಮೇಲೆ ಗಾಲ್ಫ್ ಚೆಂಡಿನಂತಹ ರಚನೆಯು ನಿರ್ಮಾಣ ಆಗಿದೆ.

ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು
ಧರ್ಮನಿಷ್ಠ ಕ್ರೈಸ್ತ ಸಮುದಾಯದ ಈ ದಂಪತಿಗೆ ಈಗಾಗಲೇ ಏಳು ಮಂದಿ ಮಕ್ಕಳಿದ್ದಾರೆ. ಆದರೂ ವೈದ್ಯರು ಸಲಹೆ ಮಾಡಿದ ವೇಳೆ ಈ ದಂಪತಿ ಮಾತ್ರ ಗರ್ಭ ಪಾತ ಮಾಡಿಸಿಕೊಳ್ಳಲು ನಿರಾಕರಿಸಿತು. ತಮ್ಮ ಮಗುವಿನ ಜೀವವನ್ನು ಅವರು ದೇವರ ಕೈಗೆ ನೀಡಲು ಬಯಸಿದ್ದರು.

ಈ ಪರಿಸ್ಥಿತಿಯ ಬಗ್ಗೆ ರೋಗನಿರ್ಣಯ ಮಾಡಿರುವುದು
ಈ ಪುಟ್ಟ ಮಗುವು ಅಪರೂಪದಲ್ಲಿ ಅಪರೂಪದ ಪರಿಸ್ಥಿತಿಯಾಗಿರುವ ಎನ್ಸೆಫಾಲೋಸಿಲ್ ನಿಂದ ಬಳಲುತ್ತಿದ್ದಾನೆ. ಇದು ತಲೆಬುರುಡೆಯಿಂದ ಹೊರಗಡೆ ಮೆದುಳಿನ ಅಂಗಾಂಶಗಳು ಬೆಳೆಯುವಂತಹ ಪರಿಸ್ಥಿತಿ ಆಗಿದೆ. ಈ ಮಗುವಿನ ತುಟಿಗಳಿಂದ ಹಣೆಯ ತನಕ ತ್ರಿಕೋನಾಕಾರದ ಅಂತರವು ಇದೆ. ಇದನ್ನು `ಟೆಸ್ಸಿಯರ್ ಮಿಡ್ಲೈನ್'ಮುಖದ ಸೀಳು ಎಂದು ಕರೆಯಲಾಗುತ್ತದೆ. ಮೆದುಳಿನ ಅಂಗಾಂಶಗಳು ಹೊರಗಡೆ ಬಂದು, ಅದು ಒಂದು ಗಾಲ್ಫ್ ಆಕಾರದಲ್ಲಿ ರಚನೆ ಆಗುವುದು. ಇದು ಆತನ ಹಣೆಯ ಭಾಗದಲ್ಲಿ ಇರುವುದು.

ಆತ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು
ಗರ್ಭಧಾರಣೆ ವೇಳೆ ಪೋಷಕರು ತುಂಬಾ ಗಟ್ಟಿ ಮನಸ್ಸು ಮಾಡಿಕೊಳ್ಳುವಂತೆ ವೈದ್ಯರು ಆ ದಂಪತಿಗೆ ಎಲ್ಲಾ ಸಲಹೆಗಳನ್ನು ನೀಡಿದ್ದರು. ಯಾಕೆಂದರೆ ವೈದ್ಯರ ಪ್ರಕಾರ ಆ ಮಗು ಹುಟ್ಟಿದ ಕೆಲವು ತಿಂಗಳು ಮಾತ್ರ ಬದುಕುಳಿಯುತ್ತದೆ ಎಂದು ನಂಬಿದ್ದರು. ಆ ಮಹಿಳೆ ತುಂಬಾ ದಿಟ್ಟೆಯಾಗಿದ್ದ ಕಾರಣದಿಂದಾಗಿ ಗರ್ಭಪಾತ ಮಾಡಿಸಿಕೊಳ್ಳದೆ ಮಗುವಿಗೆ ಜನ್ಮ ನೀಡಿದಳು. ಮಗು ನಿರೀಕ್ಷೆಯನ್ನು ಮೀರಿ ಬದುಕುಳಿದಿದೆ. ಇದರ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಈಗ ಮಗು ಸಾಮಾನ್ಯ ಜೀವನ ಸಾಗಿಸುವಂತೆ ಮಾಡಲಾಗಿದೆ. ಆ ಮಗುವಿಗೆ ಈಗ ಆರು ವರ್ಷವಾಗಿದೆ. ಆದರೆ ತುಂಬಾ ಆರೋಗ್ಯವಾಗಿದ್ದಾನೆ ಮತ್ತು ತನ್ನ ವಯಸ್ಸಿನ ಮಕ್ಕಳಂತೆ ಆಟವಾಡುತ್ತಾನೆ.ಇದರಿಂದ ಆ ಕುಟುಂಬದ ಆತ್ಮವಿಶ್ವಾಸ ಹಾಗೂ ದೇವರ ಮೇಲಿನ ನಂಬಿಕೆಯು ಹೆಚ್ಚಾಗಿದೆ.
ನಿಮಗೆ ಇಂತಹ ಪವಾಡಗಳ ಮೇಲೆ ನಂಬಿಕೆ ಇದೆಯಾ? ಇಂತಹ ಅನುಭವ ನಿಮಗೆ ಆಗಿದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ.



Click it and Unblock the Notifications
