Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಈ ಮಗು ಗರ್ಭದಲ್ಲಿರುವಾಗಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯಿತಂತೆ!
ಮಹಿಳೆಗೆ ತಾನು ಗರ್ಭವತಿ, ಮಗುವಿನ ತಾಯಿ ಆಗುವ ಸಂದರ್ಭ ಬಂದಿದೆ ಎನ್ನುವುದಕ್ಕಿಂತ ದೊಡ್ಡ ಸಂಭ್ರಮ ಹಾಗೂ ಸಂತೋಷ ಮತ್ತೊಂದಿಲ್ಲ. ಪ್ರತಿಯೊಬ್ಬ ಮಹಿಳೆ ಕೂಡ ತಾಯ್ತನದ ಆನಂದ ಪಡೆಯಲು ಬಯಸುವಳು. ಆಕೆ ತಾನು ಗರ್ಭಿಣಿಯಾದ ದಿನದಿಂದಲೇ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳಲು ಆರಂಭಿಸುವಳು. ತನ್ನ ಮಗು ಹೇಗೆ ಇದ್ದರೂ ಅದನ್ನು ಆಕೆ ಸ್ವೀಕಾರ ಮಾಡುವಳು. ಕೆಲವೊಂದು ಸಂದರ್ಭದಲ್ಲಿ ಗರ್ಭದಲ್ಲಿರುವಂತಹ ಮಗುವಿನಲ್ಲಿ ನ್ಯೂನ್ಯತೆಗಳು ಕಾಣಿಸಿಕೊಳ್ಳುವುದು. ಈ ವೇಳೆ ವೈದ್ಯರು ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ ನೀಡುವರು. ಆದರೆ ಹೆಚ್ಚಿನ ಮಹಿಳೆಯರಿಗೆ ಇದು ದೊಡ್ಡ ಆಘಾತ ಆಗಿರುವುದು.

ತಾನು ಕಟ್ಟಿಕೊಂಡಿರುವಂತಹ ಕನಸುಗಳು ಒಂದೇ ಕ್ಷಣದಲ್ಲಿ ನುಚ್ಚುನೂರು ಆಗುವುದು. ಕೆಲವು ಮಹಿಳೆಯರು ಧೈರ್ಯ ಮಾಡಿಕೊಂಡು ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಬಯಸುವರು. ಹೇಗೆ ಇದ್ದರೂ ಅದು ತನ್ನ ಮಗು ಎನ್ನುವ ಭಾವನೆಯು ಆಕೆಯಲ್ಲಿ ಅದಾಗಲೇ ಮೂಡಿರುತ್ತದೆ. ಇದರಿಂದ ಮಗು ಹೇಗಿದ್ದರೂ ಚಿಂತಿಲ್ಲ, ಅದನ್ನು ನಾನು ಸಾಕಿ ಸಲಹಿ ದೊಡ್ಡದು ಮಾಡುತ್ತೇನೆ ಎನ್ನುವ ಭಾವನೆಯು ಮಹಿಳೆ ಯಲ್ಲಿರುತ್ತದೆ. ಈ ಲೇಖನದಲ್ಲಿ ಗರ್ಭದಲ್ಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯುತ್ತಿದ್ದ ಮಗುವಿನ ತಾಯಿ ಕೈಗೊಂಡ ನಿರ್ಧಾರ ಏನು ಎಂದು ವಿವರವಾಗಿ ಹೇಳಲಿದ್ದೇವೆ. ಮಗು ಹೆಚ್ಚು ಕಾಲ ಬದುಕುವ ಸಾಧ್ಯತೆಯು ಕಡಿಮೆ ಇರುವುದರಿಂದ ಗರ್ಭಪಾತ ಮಾಡಬೇಕೆಂದು ವೈದ್ಯರು ಸೂಚಿಸಿದರು. ಮುಂದೆ ಏನಾಯಿತು ನೀವೇ ಓದಿ...

ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಈ ಸ್ಥಿತಿ ಬಗ್ಗೆ ತಿಳಿಯಿತು
ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿಕೊಂಡ ವೇಳೆ ಗರ್ಭದಲ್ಲಿರುವ ಪುಟ್ಟ ಡಾಮಿನಿಕ್ ಪಿಯೊ ಗುಂಡ್ರಮ್ ಗೆ ಈ ಪರಿಸ್ಥಿತಿ ಇರುವುದು ಕಂಡುಬಂತು. ಸ್ಕ್ಯಾನಿಂಗ್ ವೇಳೆ ತಿಳಿದು ಬಂದ ವಿಚಾರವೆಂದರೆ ಮಗುವಿನ ಮುಖದ ಸೀಳಿನಿಂದಾಗಿ ಆತನ ಮೆದುಳಿನ ಅಂಗಾಂಶಗಳು ಹೊರಗಡೆ ಬೆಳೆಯುತ್ತಿದೆ ಮತ್ತು ಆತನ ಮುಖದ ಮೇಲೆ ಗಾಲ್ಫ್ ಚೆಂಡಿನಂತಹ ರಚನೆಯು ನಿರ್ಮಾಣ ಆಗಿದೆ.

ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು
ಧರ್ಮನಿಷ್ಠ ಕ್ರೈಸ್ತ ಸಮುದಾಯದ ಈ ದಂಪತಿಗೆ ಈಗಾಗಲೇ ಏಳು ಮಂದಿ ಮಕ್ಕಳಿದ್ದಾರೆ. ಆದರೂ ವೈದ್ಯರು ಸಲಹೆ ಮಾಡಿದ ವೇಳೆ ಈ ದಂಪತಿ ಮಾತ್ರ ಗರ್ಭ ಪಾತ ಮಾಡಿಸಿಕೊಳ್ಳಲು ನಿರಾಕರಿಸಿತು. ತಮ್ಮ ಮಗುವಿನ ಜೀವವನ್ನು ಅವರು ದೇವರ ಕೈಗೆ ನೀಡಲು ಬಯಸಿದ್ದರು.

ಈ ಪರಿಸ್ಥಿತಿಯ ಬಗ್ಗೆ ರೋಗನಿರ್ಣಯ ಮಾಡಿರುವುದು
ಈ ಪುಟ್ಟ ಮಗುವು ಅಪರೂಪದಲ್ಲಿ ಅಪರೂಪದ ಪರಿಸ್ಥಿತಿಯಾಗಿರುವ ಎನ್ಸೆಫಾಲೋಸಿಲ್ ನಿಂದ ಬಳಲುತ್ತಿದ್ದಾನೆ. ಇದು ತಲೆಬುರುಡೆಯಿಂದ ಹೊರಗಡೆ ಮೆದುಳಿನ ಅಂಗಾಂಶಗಳು ಬೆಳೆಯುವಂತಹ ಪರಿಸ್ಥಿತಿ ಆಗಿದೆ. ಈ ಮಗುವಿನ ತುಟಿಗಳಿಂದ ಹಣೆಯ ತನಕ ತ್ರಿಕೋನಾಕಾರದ ಅಂತರವು ಇದೆ. ಇದನ್ನು `ಟೆಸ್ಸಿಯರ್ ಮಿಡ್ಲೈನ್'ಮುಖದ ಸೀಳು ಎಂದು ಕರೆಯಲಾಗುತ್ತದೆ. ಮೆದುಳಿನ ಅಂಗಾಂಶಗಳು ಹೊರಗಡೆ ಬಂದು, ಅದು ಒಂದು ಗಾಲ್ಫ್ ಆಕಾರದಲ್ಲಿ ರಚನೆ ಆಗುವುದು. ಇದು ಆತನ ಹಣೆಯ ಭಾಗದಲ್ಲಿ ಇರುವುದು.

ಆತ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು
ಗರ್ಭಧಾರಣೆ ವೇಳೆ ಪೋಷಕರು ತುಂಬಾ ಗಟ್ಟಿ ಮನಸ್ಸು ಮಾಡಿಕೊಳ್ಳುವಂತೆ ವೈದ್ಯರು ಆ ದಂಪತಿಗೆ ಎಲ್ಲಾ ಸಲಹೆಗಳನ್ನು ನೀಡಿದ್ದರು. ಯಾಕೆಂದರೆ ವೈದ್ಯರ ಪ್ರಕಾರ ಆ ಮಗು ಹುಟ್ಟಿದ ಕೆಲವು ತಿಂಗಳು ಮಾತ್ರ ಬದುಕುಳಿಯುತ್ತದೆ ಎಂದು ನಂಬಿದ್ದರು. ಆ ಮಹಿಳೆ ತುಂಬಾ ದಿಟ್ಟೆಯಾಗಿದ್ದ ಕಾರಣದಿಂದಾಗಿ ಗರ್ಭಪಾತ ಮಾಡಿಸಿಕೊಳ್ಳದೆ ಮಗುವಿಗೆ ಜನ್ಮ ನೀಡಿದಳು. ಮಗು ನಿರೀಕ್ಷೆಯನ್ನು ಮೀರಿ ಬದುಕುಳಿದಿದೆ. ಇದರ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಈಗ ಮಗು ಸಾಮಾನ್ಯ ಜೀವನ ಸಾಗಿಸುವಂತೆ ಮಾಡಲಾಗಿದೆ. ಆ ಮಗುವಿಗೆ ಈಗ ಆರು ವರ್ಷವಾಗಿದೆ. ಆದರೆ ತುಂಬಾ ಆರೋಗ್ಯವಾಗಿದ್ದಾನೆ ಮತ್ತು ತನ್ನ ವಯಸ್ಸಿನ ಮಕ್ಕಳಂತೆ ಆಟವಾಡುತ್ತಾನೆ.ಇದರಿಂದ ಆ ಕುಟುಂಬದ ಆತ್ಮವಿಶ್ವಾಸ ಹಾಗೂ ದೇವರ ಮೇಲಿನ ನಂಬಿಕೆಯು ಹೆಚ್ಚಾಗಿದೆ.
ನಿಮಗೆ ಇಂತಹ ಪವಾಡಗಳ ಮೇಲೆ ನಂಬಿಕೆ ಇದೆಯಾ? ಇಂತಹ ಅನುಭವ ನಿಮಗೆ ಆಗಿದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ.



Click it and Unblock the Notifications