Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!!
ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರೀತವಾಗಿ ಕುಡಿದು ಮೈಮೇಲೆ ಪರಿಜ್ಞಾನವೇ ಇರುವುದಿಲ್ಲ. ತಮ್ಮ ದೇಹ ಅಥವಾ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದೇ ತಿಳಿದಿರುವುದಿಲ್ಲ. ಕುಡಿಯುವುದರಿಂದ ಆಗುವಂತಹ ಅನಾಹುತಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದರೂ ಕುಡಿಯುದನ್ನು ಮಾತ್ರ ಜನರು ಕಡಿಮೆ ಮಾಡುವುದಿಲ್ಲ. ಅದರಲ್ಲೂ ಕೆಲವರು ಮಿತಿಮೀರಿ ಕುಡಿಯುತ್ತಾರೆ. ಇದು ದೇಹಕ್ಕೆ ಮಾತ್ರವಲ್ಲದೆ, ಸುತ್ತಲಿನವರಿಗೂ ತುಂಬಾ ಅಪಾಯಕಾರಿ.
ಕುಡಿತದಲ್ಲಿ ಮತ್ತಿನಲ್ಲಿ ತಮಗೆ ಏನಾಗುತ್ತಿದೆ ಎನ್ನುವುದೇ ಕೆಲವು ಜನರಿಗೆ ತಿಳಿದಿರುವುದಿಲ್ಲ. ಅಂತಹ ಒಂದು ಘಟನೆ ಬಗ್ಗೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು. ಇಲ್ಲೊಬ್ಬ ವ್ಯಕ್ತಿ ವಿಪರೀತವಾಗಿ ಕುಡಿದು ಮಾಡಿಕೊಂಡಿರುವ ಅವಾಂತರವು ಇದಕ್ಕೆ ಸಾಕ್ಷಿಯಾಗಿದೆ. ವಿಪರೀತವಾಗಿ ಕುಡಿದಿದ್ದ ವ್ಯಕ್ತಿಯು ಅಪಘಾತಕ್ಕೆ ಸಿಲುಕಿ ಆತನ ಕಣ್ಣಗುಡ್ಡೆಗಳು ಹೊರಗೆ ಬಂದು ಗಂಟೆಗಳ ಕಾಲ ನೆಲದ ಮೇಲೆ ಬಿದ್ದಿದ್ದರೂ ಕುಡಿದ ಮತ್ತಿನಲ್ಲಿದ್ದ ಆತನಿಗೆ ಏನೂ ತಿಳಿದಿರಲಿಲ್ಲ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದಕ್ಕೆ ಓದಿಕೊಂಡು ಹೋಗಿ...

ಈ ಘಟನೆ ನಡೆದಿರುವು ಚೀನಾದಲ್ಲಿ
26ರ ಹರೆಯದ ವ್ಯಕ್ತಿ(ಹೆಸರನ್ನು ಬಹಿರಂಗಪಡಿಸಲಾಗಿಲ್ಲ) ವಿಪರೀತವಾಗಿ ಕುಡಿದ ಮತ್ತಿನಲ್ಲಿ ಇದ್ದಾಗ ಆತ ಅಪಘಾತಕ್ಕೆ ಸಿಲುಕಿದ. ಚಿನಾದ ಶಾನ್ ಡಾಂಗ್ ಪ್ರಾಂತ್ಯದ ಜಿನಾಣ್ ನ ಲಿಕ್ಸಿಯಾ ಜಿಲ್ಲೆಯಲ್ಲಿ ವಾಸವಿದ್ದ ಈ ವ್ಯಕ್ತಿ ವಿಪರೀತ ಕುಡಿದ ಮತ್ತಿನಲ್ಲಿ ಜಾರಿ ಬಿದ್ದಿದ್ದ.

ಆತನ ಕುಟುಂಬವು ಆಸ್ಪತ್ರೆಗೆ ದಾಖಲಿಸಿತು
ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಆತನ ಕುಟುಂಬ ಸದಸ್ಯರು ಇದನ್ನೆಉ ನೋಡಿ ಆಸ್ಪತ್ರೆಗೆ ದಾಖಲು ಮಾಡಿದರು. ಅಪಘಾತವಾದ ಆರು ಗಂಟೆಗಳ ಬಳಿಕ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವ್ಯಕ್ತಿಯ ಕಣ್ಣಗುಡ್ಡೆಯೇ ಇಲ್ಲವೆಂದು ವೈದ್ಯರು ತಿಳಿಸಿದರು!
ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಆತನ ಕಣ್ಣ ಗುಡ್ಡೆಗಳೇ ಮಾಯವಾಗಿದ್ದವು. ಕೆಲವೇ ಸಮಯದ ಬಳಿಕ ವೈದ್ಯರಿಗೆ ಫೋನ್ ಕರೆಯೊಂದು ಬಂದಿದ್ದು, ಮನೆಯಲ್ಲಿ ಕಣ್ಣಗುಡ್ಡೆಯು ಪತ್ತೆಯಾಗಿದೆ ಎಂದು ಕುಟುಂಬದವರು ತಿಳಿಸಿದರು.

ದೀರ್ಘಕಾಲ ತನಕ ಕಣ್ಣಗುಡ್ಡೆಯು ಬಿದ್ದುಕೊಂಡಿತ್ತು!
ಕಣ್ಣಗುಡ್ಡೆಯು ದೀರ್ಘಕಾಲದ ತನಕ ನೆಲದ ಮೇಲೆ ಬಿದ್ದುಕೊಂಡಿದ್ದ ಕಾರಣದಿಂದಾಗಿ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಣ್ಣಗುಡ್ಡೆಯು ನೆಲದ ಮೇಲಿದ್ದ ಕಾರಣದಿಂದಾಗಿ ಅದು ಕಲುಷಿತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆ ವ್ಯಕ್ತಿ ಕಣ್ಣು ಕಳಕೊಂಡ
ಆ ವ್ಯಕ್ತಿಯ ಸೂಕ್ಷ್ಮ ಸ್ನಾಯುಗಳು ಮತ್ತು ಆಪ್ಟಿಕ್ ನರಗಳು ಹೊರಗೆ ಬಂದಿದ್ದ ಕಾರಣದಿಂದಾಗಿ ಏನೂ ಮಾಡುವಂತೆ ಇರಲಿಲ್ಲ ಮತ್ತು ಇದರಿಂದ ಸೋಂಕು ಬರುವುದನ್ನು ತಪ್ಪಿಸಲು ಕೂಡ ಸಾಧ್ಯ ವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಆಘಾತದಿಂದ ಆ ವ್ಯಕ್ತಿಯು ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications