Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬಾಲಕನ ಕಣ್ಣಿನಲ್ಲಿ ಸಿಲುಕಿದ ಪೆನ್ಸಿಲ್! ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೇ ಪಾರಾದ
ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಯಾಕೆಂದರೆ ಪ್ರತಿಯೊಂದು ಕ್ಷಣವೂ ಅವರ ಚಟುವಟಿಕೆ ಮೇಲೆ ನಿಗಾ ಇಡಬೇಕು. ಅವರನ್ನು ಏಕಾಂಗಿಯಾಗಿ ಬಿಟ್ಟರೆ ಆಗ ಏನಾದರೊಂದು ಎಡವಟ್ಟು ಮಾಡಿಕೊಳ್ಳುವರು. ಹೀಗಾಗಿ ಎಚ್ಚರಿಕೆ ಅತೀ ಅಗತ್ಯ. ಮಕ್ಕಳನ್ನು ಯಾವಾಗಲೂ ಚೂಪಾಗಿರುವಂತಹ ವಸ್ತುಗಳು, ಬೆಂಕಿ ಮತ್ತು ನೀರಿನಿಂದ ದೂರವಿಡಬೇಕು. ಈ ಘಟನೆಯಲ್ಲಿ ಮಗುವಿನ ಕೈಯಲ್ಲಿ ಇದ್ದ ಪೆನ್ಸಿಲ್ ಒಂದು ಮಗುವಿನ ಕಣ್ಣಿನ ಒಳಗಡೆ ಹೋಗಿ ಆತ ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೆ ಇರುವಂತಹ ಘಟನೆಯು ನಡೆದಿದೆ. ಈ ಬಗ್ಗೆ ನೀವು ತುಂಬಾ ವಿವರವಾಗಿ ತಿಳಿಯಿರಿ.

ಚೀನಾದಲ್ಲಿ ಈ ಘಟನೆ ನಡೆದಿದೆ
ವರದಿಗಳ ಪ್ರಕಾರ ಈ ಘಟನೆಯು ದಕ್ಷಿಣ ಚೀನಾದದಲ್ಲಿ ನಡೆದಿರುವುದು. ಆರು ವರ್ಷದ ಬಾಲಕನ ಕಣ್ಣಿನಲ್ಲಿ ಪೆನ್ಸಿಲ್ ಸಿಲುಕಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಇದನ್ನು ತೆಗೆಯಬೇಕಾಯಿತು.

ಕೈಯಲ್ಲಿ ಪೆನ್ಸಿಲ್ ಹಿಡಿದುಕೊಂಡು ಓಡಾಡುತ್ತಿದ್ದ
12 ಸೆ.ಮೀ. ಉದ್ದದ ಪೆನ್ಸಿಲ್ ನ್ನು ಹಿಡಿದುಕೊಂಡು ಬಾಲಕನು ಓಡಾಡುತ್ತಿದ್ದ ಎಂದು ವರದಿಗಳು ಹೇಳಿವೆ. ಈ ಘಟನೆಯು ಚೀನಾದ ಜಿಯಾಂಕ್ಸಿ ಪ್ರಾಂತ್ಯದ ಗಾಂಝೌನಲ್ಲಿ ನಡೆದಿರುವುದು.

ಆದರೆ ಬಾಲಕ ತುಂಬಾ ಅದೃಷ್ಟವಂತ
ಎಡಕಣ್ಣಿನ ಬುಡದಲ್ಲಿ ಈ ಪೆನ್ಸಿಲ್ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕನ ದೃಷ್ಟಿಗೆ ಯಾವುದೇ ಹಾನಿ ಆಗದೆ ಇರುವುದು ದೊಡ್ಡ ಅದೃಷ್ಟ ಎಂದು ಅವರು ತಿಳಿಸಿದ್ದಾರೆ. ಕೇವಲ ಒಂದು ಮಿ.ಮೀ.ನಿಂದ ಕಣ್ಣಿನ ಗುಡ್ಡೆಯಿಂದ ಈ ಪೆನ್ಸಿಲ್ ಕೆಳಗೆ ಇತ್ತು.

ಪೆನ್ಸಿಲ್ ನ್ನು ಸರ್ಜನ್ ಗಳು ಹೊರತೆಗೆದರು
ಬಾಲಕನ ಕಣ್ಣಿನ ಗುಡ್ಡೆಗೆ ಹಾನಿಯಾಗುತ್ತಲಿದ್ದರೆ ಆಗ ಇದು ಎಂಡೋಫಾಥಾಮಿಟಿಸ್ ಗೆ ಕಾರಣವಾಗುತ್ತಲಿತ್ತು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು ಆಗಿದೆ. ಇದರ ಪರಿಣಾಮವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳಬಹುದು ಮತ್ತು ಸಂಪೂರ್ಣ ಕಣ್ಣಿಗೆ ಹಾನಿಯಾಗಬಹುದು. ಆದರೆ ಬಾಲಕ ಅದೃಷ್ಟವಂತ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಳ್ಳಲಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಮಗೆ ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.



Click it and Unblock the Notifications











