Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಬಾಲಕನ ಕಣ್ಣಿನಲ್ಲಿ ಸಿಲುಕಿದ ಪೆನ್ಸಿಲ್! ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೇ ಪಾರಾದ
ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಯಾಕೆಂದರೆ ಪ್ರತಿಯೊಂದು ಕ್ಷಣವೂ ಅವರ ಚಟುವಟಿಕೆ ಮೇಲೆ ನಿಗಾ ಇಡಬೇಕು. ಅವರನ್ನು ಏಕಾಂಗಿಯಾಗಿ ಬಿಟ್ಟರೆ ಆಗ ಏನಾದರೊಂದು ಎಡವಟ್ಟು ಮಾಡಿಕೊಳ್ಳುವರು. ಹೀಗಾಗಿ ಎಚ್ಚರಿಕೆ ಅತೀ ಅಗತ್ಯ. ಮಕ್ಕಳನ್ನು ಯಾವಾಗಲೂ ಚೂಪಾಗಿರುವಂತಹ ವಸ್ತುಗಳು, ಬೆಂಕಿ ಮತ್ತು ನೀರಿನಿಂದ ದೂರವಿಡಬೇಕು. ಈ ಘಟನೆಯಲ್ಲಿ ಮಗುವಿನ ಕೈಯಲ್ಲಿ ಇದ್ದ ಪೆನ್ಸಿಲ್ ಒಂದು ಮಗುವಿನ ಕಣ್ಣಿನ ಒಳಗಡೆ ಹೋಗಿ ಆತ ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೆ ಇರುವಂತಹ ಘಟನೆಯು ನಡೆದಿದೆ. ಈ ಬಗ್ಗೆ ನೀವು ತುಂಬಾ ವಿವರವಾಗಿ ತಿಳಿಯಿರಿ.

ಚೀನಾದಲ್ಲಿ ಈ ಘಟನೆ ನಡೆದಿದೆ
ವರದಿಗಳ ಪ್ರಕಾರ ಈ ಘಟನೆಯು ದಕ್ಷಿಣ ಚೀನಾದದಲ್ಲಿ ನಡೆದಿರುವುದು. ಆರು ವರ್ಷದ ಬಾಲಕನ ಕಣ್ಣಿನಲ್ಲಿ ಪೆನ್ಸಿಲ್ ಸಿಲುಕಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಇದನ್ನು ತೆಗೆಯಬೇಕಾಯಿತು.

ಕೈಯಲ್ಲಿ ಪೆನ್ಸಿಲ್ ಹಿಡಿದುಕೊಂಡು ಓಡಾಡುತ್ತಿದ್ದ
12 ಸೆ.ಮೀ. ಉದ್ದದ ಪೆನ್ಸಿಲ್ ನ್ನು ಹಿಡಿದುಕೊಂಡು ಬಾಲಕನು ಓಡಾಡುತ್ತಿದ್ದ ಎಂದು ವರದಿಗಳು ಹೇಳಿವೆ. ಈ ಘಟನೆಯು ಚೀನಾದ ಜಿಯಾಂಕ್ಸಿ ಪ್ರಾಂತ್ಯದ ಗಾಂಝೌನಲ್ಲಿ ನಡೆದಿರುವುದು.

ಆದರೆ ಬಾಲಕ ತುಂಬಾ ಅದೃಷ್ಟವಂತ
ಎಡಕಣ್ಣಿನ ಬುಡದಲ್ಲಿ ಈ ಪೆನ್ಸಿಲ್ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕನ ದೃಷ್ಟಿಗೆ ಯಾವುದೇ ಹಾನಿ ಆಗದೆ ಇರುವುದು ದೊಡ್ಡ ಅದೃಷ್ಟ ಎಂದು ಅವರು ತಿಳಿಸಿದ್ದಾರೆ. ಕೇವಲ ಒಂದು ಮಿ.ಮೀ.ನಿಂದ ಕಣ್ಣಿನ ಗುಡ್ಡೆಯಿಂದ ಈ ಪೆನ್ಸಿಲ್ ಕೆಳಗೆ ಇತ್ತು.

ಪೆನ್ಸಿಲ್ ನ್ನು ಸರ್ಜನ್ ಗಳು ಹೊರತೆಗೆದರು
ಬಾಲಕನ ಕಣ್ಣಿನ ಗುಡ್ಡೆಗೆ ಹಾನಿಯಾಗುತ್ತಲಿದ್ದರೆ ಆಗ ಇದು ಎಂಡೋಫಾಥಾಮಿಟಿಸ್ ಗೆ ಕಾರಣವಾಗುತ್ತಲಿತ್ತು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು ಆಗಿದೆ. ಇದರ ಪರಿಣಾಮವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳಬಹುದು ಮತ್ತು ಸಂಪೂರ್ಣ ಕಣ್ಣಿಗೆ ಹಾನಿಯಾಗಬಹುದು. ಆದರೆ ಬಾಲಕ ಅದೃಷ್ಟವಂತ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಳ್ಳಲಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಮಗೆ ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.



Click it and Unblock the Notifications