Just In
- 4 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 4 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 5 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 6 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!
ಸಂಪ್ರದಾಯ, ಆಚಾರ-ವಿಚಾರಗಳು ಸುಳ್ಳೆಂದು ಕೆಲವರು ಹೇಳಬಹುದು. ಆದರೆ ಅದ್ಭುತ ಮತ್ತು ಆಶ್ಚರ್ಯವನ್ನುಂಟು ಮಾಡುವ ಹಲವು ಸಂಗತಿಗಳನ್ನು ಕಂಡಾಗ ನಿಜ ಎನಿಸುವುದು. ಪುಣ್ಯ ಕ್ಷೇತ್ರದಲ್ಲಿರುವ ಕೆಲವು ಪವಾಡಗಳು ಮತ್ತು ಅಚ್ಚರಿ ಮೂಡಿಸುವ ವಿಚಾರಗಳು ಇರುತ್ತವೆ. ಅವುಗಳನ್ನು ಕೇಳಿದಾಗ ಅಥವಾ ನೋಡಿದಾಗ ಇದು ನಿಜವೇ? ಎನ್ನುವ ಭಾವ ಉಂಟಾಗುವುದು.
ಅಂತಹ ಒಂದು ಅಪರೋಪದ ಸಂಗತಿಯನ್ನು ತೆರೆದಿಡುವುದು "ಅನಂತಪುರ ಸರೋವರ ದೇಗುಲದ ಬಾಬಿಯಾ ಎನ್ನುವ ಸಸ್ಯಹಾರಿ ಮೊಸಳೆ.'' ಸರೋವರದಲ್ಲಿ ನಿರ್ಮಿಸಿರುವ ಕೇರಳದ ಏಕೈಕ ದೇಗುಲ ಇದು. ಭಾರತದ ಅತಿ ಶ್ರೀಮಂತ ದೇವಸ್ಥಾನ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ. ಸುತ್ತಲೂ ಹಚ್ಚ ಹಸಿರಿನ ಸಿರಿ, ಮಧ್ಯೆ ಶಾಂತವಾಗಿ ನಿಂತಿರುವ ಸರೋವರ, ಸರೋವರದ ಮಧ್ಯಭಾಗದಲ್ಲಿ ತೇಲುವಂತೆ ಕಾಣುವ ಅನಂತ ಪದ್ಮನಾಭಸ್ವಾಮಿಯ ದೇಗುಲ ಕಂಗೊಳಿಸುತ್ತದೆ. ನಿಜ, ಈ ಕ್ಷೇತ್ರದ ವೈಭವ ಹಾಗೂ ವಿಶಿಷ್ಟತೆಯನ್ನು ಹೇಳಿದರೆ ಸಾಲದು.
ಅದೇನಿದ್ದರೂ ಅನುಭವಿಸಿಯೇ ಸವಿಯಬೇಕು. ಸಾಮಾನ್ಯವಾಗಿ ಮೊಸಳೆ ಎಂದರೆ ತಕ್ಷಣ ಮನಸ್ಸಿಗೆ ಬರುವುದು ಭಯ. ಎಲ್ಲಿ ನಮ್ಮನ್ನು ತಿನ್ನುವುದೋ ಎನ್ನುವ ಆತಂಕ. ಆದರೆ ಈ ದೇವಾಲಯದ ಬಳಿ ಇರುವ ಮೊಸಳೆ ಮಾತ್ರ ಹಾಗಲ್ಲ. ಎಲ್ಲಾ ಮೊಸಳೆಗಳಿಗಿಂತಲೂ ವಿಭಿನ್ನವಾದದ್ದು. ಹೌದಾ? ಎನ್ನುವ ಕುತೂಹಲವಿದ್ದರೆ ಮುಂದೆ ಓದಿ...
ಸಸ್ಯಹಾರಿ ಮೊಸಳೆ
ಈ ಮೊಸಳೆಯನ್ನು ಬಾಬಿಯಾ ಎಂದು ಕರೆಯುತ್ತಾರೆ. ಅರ್ಚಕರು ಸಿದ್ಧಪಡಿಸಿದ ಬೆಲ್ಲದ ಪ್ರಸಾದವೇ ಇದರ ಆಹಾರ. 60 ವರ್ಷದಿಂದ ಇಲ್ಲಿಯೇ ವಾಸವಾಗಿರುವ ವಿಶೇಷ ಮೊಸಳೆ ಇದು.
Image Courtesy
ಮೊಸಳೆಯ ಇನ್ನೊಂದು ಬಗೆ
ಈ ಮೊಸಳೆಯ ಬಗ್ಗೆ ಯಾತ್ರಿಕರು ಯಾವುದೇ ಬಗೆಯ ಭಯ ಪಡುವ ಅಗತ್ಯವಿಲ್ಲ. ಇತರ ಮೊಸಳೆಗಿಂತ ಭಿನ್ನವಾಗಿದೆ. ಭಕ್ತರು ನೀಡುವ ಖಾದ್ಯಗಳನ್ನು ಇದು ಸವಿಯುತ್ತದೆ.
Photo Courtesy: Vinayaraj
ದೇಗುಲದ ಕಾವಲುಗಾರ
ಈ ಮೊಸಳೆ ಸದಾ ದೇವಾಲಯದ ಬಳಿಯೇ ಸುತ್ತಿಕೊಂಡು ಇರುತ್ತದೆ. ಹಾಗಾಗಿ ಇದನ್ನು ದೇವಾಲಯದ ಕಾವಲುಗಾರ ಎಂದು ಕರೆಯುತ್ತಾರೆ. ಇದು ನೀರಿನಲ್ಲಿರುವ ಪ್ರಾಣಿಗಳನ್ನಾಗಲೀ ಅಥವಾ ಇನ್ಯಾವುದೇ ಜೀವಿಗಳನ್ನಾಗಲೀ ಇಲ್ಲಿಯವರೆಗೂ ತಿಂದಿಲ್ಲವಂತೆ. ಅದೃಷ್ಟ ಇದ್ದವರಿಗೆ ಮಾತ್ರ ಈ ಮೊಸಳೆ ಕಾಣಿಸಿಕೊಳ್ಳುತ್ತದೆ.
Photo Courtesy - Vinayaraj
ಮೊಸಳೆಯ ವಿಚಿತ್ರ ಹುಟ್ಟು
ಹಿಂದೊಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಇಲ್ಲಿಯ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದರು. ಆನಂತರ ಅವನಿಗೆ ಹಾವು ಕಡಿಯಿತು. ಹಾಗೆಯೇ ಅವನು ಅಸು ನೀಗಿದನು. ಬಳಿಕ ಇನ್ನೊಂದು ಮೊಸಳೆ ಬಂದು ಸೇರಿಕೊಂಡಿದೆ. ಹೀಗೇ ಒಂದರ ನಂತರ ಒಂದು ಮೊಸಳೆ ಬಂದು ಸೇರಿಕೊಳ್ಳುತ್ತದೆ ಎನ್ನುವ ಮಾತಿದೆ.
Photo courtesy -Sreehulem
ದೇವಾಲಯದ ವಿವರ....
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. ಇದಕ್ಕೆ ಅನಂತಪುರ ಸರೋವರದ ದೇವಾಲಯ ಎಂದು ಕರೆಯುತ್ತಾರೆ. ಕಾಸರಗೋಡಿನಿಂದ 15 ಕಿ.ಮೀ. ದೂರದಲ್ಲಿರುವ ಈ ದೇವಾಲಯಕ್ಕೆ ಸಾರಿಗೆ ಸಂಪರ್ಕವೂ ಸಾಕಷ್ಟಿದೆ.
Image Courtesy
ವಿಶೇಷ ರಚನೆ
ಸುಮಾರು ಎರಡು ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ದೇವಾಲಯದ ಒಳ ಪ್ರವೇಶಕ್ಕೆಂದು ಸೇತುವೆ ರೀತಿಯ ಮಾರ್ಗವನ್ನು ರಚಿಸಲಾಗಿದೆ. ದೇವಾಲಯದ ಬಲ ಭಾಗದಲ್ಲಿ ಗುಹೆಯ ರಚನೆ ಇರುವುದನ್ನು ಕಾಣಬಹುದು. ದಂತ ಕಥೆಯ ಪ್ರಕಾರ ದೇವಾಲಯದ ಪ್ರಮುಖ ದೇವರಾದ ಪದ್ಮನಾಭ ದೇವರು ಇಲ್ಲಿರುವ ಗುಹೆಯ ಮಾರ್ಗವಾಗಿಯೇ ತಿರುವನಂತಪುರಕ್ಕೆ ಸಾಗಿ, ಅನಂತ ಪದ್ಮನಾಭನಾದ ಎನ್ನುವ ಪ್ರತೀತಿಯಿದೆ.
Image courtesy -Vinayaraj
ಹಿನ್ನೆಲೆಯ ಕಥೆ
ವಿಲ್ವಮಂಗಲನೆಂಬ ಋಷಿ ಮುನಿಯು ನಾರಾಯಣನ ಭಕ್ತನಾಗಿ ತಪಸ್ಸು ಗೈಯುತ್ತಿದ್ದ. ಈ ಸಮಯದಲ್ಲಿ ನಾರಾಯಣನು ಬಾಲಕನ ರೂಪದಲ್ಲಿ ಋಷಿಯ ಮುಂದೆ ಹೋದನು. ಬಾಲಕನ ಮುಖವು ದಿವ್ಯ ತೇಜಸ್ಸಿನಿಂದ ಕೂಡಿತ್ತು. ಅದನ್ನು ಗಮನಿಸಿದ ಋಷಿಯು ನೀನು ಯಾರೆಂದು ಪ್ರಶ್ನಿಸಿದನು. ಉತ್ತರವಾಗಿ ಬಾಲಕ ನನಗೆ ಯಾರು ಇಲ್ಲವೆಂದು ಹೇಳಿದನು. ಆಗ ಋಷಿ ತನ್ನೊಡನೆ ವಾಸವಾಗಿರುವಂತೆ ಹೇಳಿದನು. ಒಪ್ಪಿಕೊಂಡ ಬಾಲಕ ಒಂದು ಷರತ್ತು ವಿಧಿಸಿದನು. ಇಲ್ಲಿ ನನಗೆ ಅವಮಾನವಾಗುವ ಸಂಗತಿ ನಡೆದರೆ ಆ ಕ್ಷಣವೇ ಇಲ್ಲಿಂದ ಹೊರಡುವೆನು ಎಂದನು.
ಋಷಿಯೊಂದಿಗೆ ಬಾಲಕ
ಬಾಲ ಬುದ್ಧಿಯನ್ನು ಹೊಂದಿದ್ದ ಹುಡುಗ ಋಷಿಗಳೊಂದಿಗೆ ಬಹಳ ಚೇಷ್ಟೆ ಮಾಡುತ್ತಿದ್ದ. ಒಂದು ದಿನ ಚೇಷ್ಟೆಯಿಂದ ಬೇಸತ್ತ ಋಷಿ ಬಾಲಕನಿಗೆ ಸುಮ್ಮನಿರುವಂತೆ ಬೈದರು. ಮನನೊಂದ ಬಾಲಕ "ಋಷಿಮುನಿಗಳು ನನ್ನನ್ನು ನೋಡಬೇಕೆಂದರೆ ಸರ್ಪದೇವತೆಗಳ ಕಾಡಾದ ಅನಂತನಕಟ್ಟೆಗೆ ಬರಬೇಕು" ಎಂದು ನುಡಿದು ಗುಹೆಯೊಂದರಲ್ಲಿ ಅದೃಷ್ಯನಾದನು.
ಬಾಲಕನ ಹುಡುಕಾಟ
ಋಷಿಗೆ ಆ ಬಾಲಕನು ನಾರಾಯಣನೆಂಬುದು ಅರಿವಾಯಿತು. ಮರು ಕ್ಷಣವೇ ಬಾಲಕನನ್ನು ಅರಸುತ್ತಾ ಗುಹೆಯ ಮಾರ್ಗದಿಂದಲೇ ಸಮುದ್ರದೆಡೆಗೆ ಬಂದರು. ಅಲ್ಲಿಂದ ದಕ್ಷಿಣಾಭಿಮುಖವಾಗಿ ಸಾಗಿದರು. ಅಲ್ಲಿಯೇ ಬಾಲಕನನ್ನು ಕಂಡರು. ಕೂಡಲೆ ಬಾಲಕನು ಗಿಡವೊಂದರಲ್ಲಿ ಪ್ರವೇಶಿಸಿದ. ಆ ಗಿಡವು ಮಲಗಿರುವ ಶೇಷ ನಾಗನ ಭಂಗಿಯಲ್ಲಿ ಗೋಚರಿಸಿತು. ಅದರ ಮೇಲೆ ನಾರಾಯಣನ ರೂಪ ಕಂಡರು ಎನ್ನುವ ಕಥೆಯಿದೆ. (ಚಿತ್ರದಲ್ಲಿಬೇಕಾದ ಬಾಬಿಯಾ ಎನ್ನುವ ಸಸ್ಯಹಾರಿ ಮೊಸಳೆಯೊಂದಿಗೆ ದೇಗುಲದ ಅರ್ಚಕರು)
Image Courtesy