Latest Updates
-
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ
ರಂಜಾನ್ ಮಾಸದ 'ಉಪವಾಸದ' ಹಿಂದಿರುವ ಮಹತ್ವ
ರಂಜಾನ್ ಮಾಸದಲ್ಲಿ ಉಪವಾಸ ಕೈಗೊಳ್ಳುವುದು ಎಂದರೆ ಅದೊಂದು ಪವಿತ್ರ ಕ್ರಿಯೆ ಎಂದೆನಿಸಿದೆ. ಅದರಲ್ಲೂ ರಂಜಾನ್ ಮಾಸದಲ್ಲಿ ಮಾಡುವ ಉಪವಾಸ ಒಂದು ತಿಂಗಳಕಾಲ ಇರುತ್ತದೆ. ರಂಜಾನಿನ ಅರ್ಥ ಮನುಷ್ಯನ ಆಹಾರಗಳು ಮತ್ತು ಪಾನೀಯಗಳ ಮೇಲೆ ಸಂಯಮ ಗಮನಿಸುವುದು. ಇದರಲ್ಲಿ ಬಹಳ ಮುಖ್ಯವಾದದ್ದೆಂದರೆ ಈ ಇಂದ್ರಿಯನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಗಮನಿಸುವುದು.
ಈ ಸಮಯದಲ್ಲಿ ಮನುಷ್ಯನು ಎಲ್ಲಾ ರೀತಿಗಳ ದುರಭ್ಯಾಸಗಳು, ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು ತನ್ನ ಜೀವನದಲ್ಲಿ ಶೋಚನೀಯ ಪರಿಸ್ಥಿತಿಯು ಉಂಟಾಗಬಹುದನ್ನು ತಡೆಯುವುದು. ರಂಜಾನ್ ಸಮಯದಲ್ಲಿ ದೇವರಮೇಲೆ ತೀವ್ರ ಪ್ರೀತಿಯಿಟ್ಟು ಉಪವಾಸವನ್ನು ಆಚರಣೆಮಾಡುವುದು.

ರಂಜಾನ್ ಉಪವಾಸದಾಚರಣೆ 30 ದಿನಗಳಕಾಲ ಇರುತ್ತದೆ. ಇದು ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನದಿಂದ ಆರಂಭವಾಗಿ ಮತ್ತೆ ಬರುವ ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನವಾದ ನಂತರ ಕೊನೆಗೊಳ್ಳುತ್ತದೆ. ರಂಜಾನ್ ಮಾಸದ ಸಮಯದಲ್ಲಿ ಮುಂಜಾನೆ ಸೂರ್ಯೋದಯದ ನಂತರದಿಂದ ಸೂರ್ಯಾಸ್ತಮವಾಗುವವರೆಗೆ ಉಪವಾಸ ಮಾಡಬೇಕು. ತದನಂತರ ದೇವರಲ್ಲಿ ಪ್ರಾರ್ಥನೆ ಮಾಡಿದ ಮೇಲೆಯೇ ಅಂದಿನ ದಿನದ ಆಹಾರದ ಮೊದಲ ತುತ್ತನ್ನು ತಿನ್ನಬೇಕು. ರಂಜಾನ್ ಉಪವಾಸದ ಪ್ರಾಮುಖ್ಯತೆಗೆ ಹಲವಾರು ಕಾರಣಗಳಿವೆ. ಆ ಪ್ರಾಮುಖ್ಯತೆಗೆ ಕಾರಣಗಳೇನೆಂದು ನೋಡೋಣ ಬನ್ನಿ...
ಪವಿತ್ರ ಕುರಾನ್
ಪ್ರವಾದಿ ಮೊಹಮ್ಮದ್ ಅವನಿಗೆ ರಂಜಾನ್ ಮಾಸದಲ್ಲಿ ಪವಿತ್ರ ಖುರಾನ್ ಗೋಚರವಾಯಿತು. ದೇವರು ಪ್ರವಾದಿ ಮೊಹಮ್ಮದ್ದನನ್ನು ತನ್ನ ಪ್ರತಿನಿಧಿಯೆಂದು ಆಯ್ಕೆಮಾಡಿ ಪವಿತ್ರ ಖುರಾನ್ ಗ್ರಂಥವನ್ನು ಸಂಗ್ರಹಿಸಿದನು. ರಂಜಾನ್ ಮಾಸದ ಕೊನೆಯ ಹತ್ತು ದಿನಗಳು ಲಾಯಿಲತುಲ್ ಕದಿರ್ (ಶಕ್ತಿಯ ರಾತ್ರಿ) ಎಂದು ಗಮನಾರ್ಹವಾಗಿ ವಿಶೇಷವಾದದ್ದು. ಈ ಸಮಯದಲ್ಲಿಯೇ ಪ್ರವಾದಿಗೆ ಖುರಾನಿನ ಪುಸ್ತಕ ಪೂರ್ಣವಾದದ್ದು.
ಪ್ರವಾದಿ ಮೊಹಮ್ಮದ್ ಮೋಕ್ಷವನ್ನು ಪಡೆದಿದ್ದು
ಪ್ರವಾದಿ ಮೊಹಮ್ಮದ್ ಅವನು ಒಂದು ಸಂತನಾಗಿ ಜನಿಸಿದನು. ಆದರೆ ಅವನ ಸಮಯದಲ್ಲಿ ಹಿಂಸಾಚಾರಗಳು ನಡೆಯುತ್ತಿತ್ತು. ಆ ಸಮಯದಲ್ಲಿ ಜನಗಳು ನಡೆದುಕೊಳ್ಳುತ್ತಿದ್ದ ರೀತಿಯಿಂದ ಅವನಿಗೆ ಬಹಳವಾಗಿ ಅಪಮಾನವಾಯಿತು. ತನ್ನ ಸುತ್ತಮುತ್ತ ಇದ್ದ ಪರಿಸ್ಥಿತಿಯಿಂದ ಜುಗುಪ್ಸೆಗೊಂಡ ಪ್ರವಾದಿಯು ಏಕಾಂತವಾಗಿ ನಿರ್ಜನ ಪ್ರದೇಶಗಳಲ್ಲಿ ಓಡಾಡಲು ಪ್ರಾರಂಭಿಸಿದನು. ಹೀಗೆ ಮಾಡುತ್ತಿದ್ದಾಗ ಹಿಜ್ರಾ ಬೆಟ್ಟದಲ್ಲಿ ಉಪವಾಸ ಮಾಡುತ್ತಾ ಮತ್ತು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಹಗಲು ರಾತ್ರಿಗಳನ್ನು ಕಳೆದನು.
ಅಂತಿಮವಾಗಿ ದೇವರು ಅವನಿಗೆ ಬೆಳಕಿನ ಮಾರ್ಗವನ್ನು ತೋರಿದನು. ದೇವರು ಅವನ ಮುಖಾಂತರ ಜನಗಳಿಗೆ ನೈಜ ಜ್ಞಾನದ ಬೆಳಕನ್ನು ಹರಡಿಸಿದನು. ಈ ಕಾರಣದಿಂದ ಜನರು ರಂಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸಿ, ಪ್ರವಾದಿ ಮೊಹಮ್ಮದ್ ಅವರ ಆಶಯದಂತೆ, ಜಗತ್ತಿನಲ್ಲಿ ಶಾಂತಿ, ಸಾಮರಸ್ಯ-ಸಮನ್ವತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.
ಉಪವಾಸ ಮಾಡುವುದಕ್ಕೆ ಮುಖ್ಯ ವಾದ(ತರ್ಕ)
ಪ್ರತಿ ಧರ್ಮದಲ್ಲಿಯೂ ಒಂದು ರೀತಿಯ ಪ್ರಾಪಂಚಿಕ ವಿನೋದಗಳನ್ನು ತ್ಯಜಿಸಿ ದೇವರ ಕೃಪೆಯನ್ನು ಪಡೆಯುವುದಕ್ಕೆ ಉಪವಾಸದ ಆಚರಣೆ ಒಂದು ವಿಧಾನವಾಗಿದೆ. ಒಬ್ಬ ಸಾಧಾರಣ ಮನುಷ್ಯನು ಸದಾ ತನ್ನ ಲೌಕಿಕ ಕರ್ತವ್ಯಗಳ ಮಧ್ಯೆ ಕಟ್ಟಿಹಾಕಿಕೊಂಡು, ದೇವರ ಬಗ್ಗೆ ಯೋಚನೆ ಮಾಡಲು ಸಮಯವೇ ಇರುವುದಿಲ್ಲ. ಉಪವಾಸವು ಒಂದು ರೀತಿಯ ತಪಸ್ಸಿನಂತೆ ಆಹಾರವನ್ನು ತ್ಯಜಿಸಿ ದೇವರಲ್ಲಿ ಸಂಪೂರ್ಣವಾಗಿ ಗಮನವನ್ನು ಕೇಂದ್ರೀಕೃತಮಾಡುವುದು.
ಹಗಲಿನಲ್ಲಿ ಉಪವಾಸ ಮಾಡುವವನು ದೇವರಲ್ಲಿ ಪ್ರಾರ್ಥನೆ ಮಾಡುತ್ತ ಸಂಪೂರ್ಣವಾಗಿ ಮುಳುಗಿಹೋಗಿದ್ದರೆ ಪ್ರಪಂಚದಲ್ಲಿ ಇತರರಿಗೆ ಒಂದು ಸತ್ತ ಮನುಷ್ಯನಂತೆ ಸಂಕೇತಿಸುತ್ತದೆ. ಹಾಗೆಯೇ, ರಾತ್ರಿ ವೇಳೆ ಆಹಾರ ತೆಗೆದುಕೊಳ್ಳುವುದು ತನ್ನ ಜೀವಕ್ಕೆ ಆಧಾರದ ಸಂಕೇತವಾಗಿರುವುದು ಮತ್ತು ಕಾಣುವ ಪ್ರಪಂಚದಿಂದ ದೂರವಿರುವುದು. ಹೀಗೆ ಮಾಡುವುದರಿಂದ ಆಂತರಿಕ ಆಧ್ಯಾತ್ಮಿಕ ಪ್ರಪಂಚದ ಪುಷ್ಟಿಯನ್ನು ಸೆಳೆಯಬಹುದಾಗಿದೆ.
ಚಂದ್ರನು ದೇವರಿಂದ ಜ್ಞಾನದ ಬೆಳಕನ್ನು ಕೊಡುವ ಒಂದು ಸಂಕೇತ
ಹೀಗಾಗಿ ಚಂದ್ರನಿಂದ ರಂಜಾನ್ ಮಾಸದ ಉಪವಾಸದ ಆಚರಣೆಗೆ ಒಂದು ನಿರ್ದಿಷ್ಟ ಪಾತ್ರವಿದೆ. ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳುವುದಕ್ಕೆ ರಂಜಾನ್ ಒಂದು ಸಮಯವಾಗಿದೆ. ರಂಜಾನ್ ಉಪವಾಸ ಮಾಡುವುದು ದೇವರಿಗೋಸ್ಕರ ಮಾತ್ರವೇ ಅಲ್ಲ, ಅದು ನಮಗಾಗಿ ಸುಧಾರಿಸಲೂ ಹೌದು. ಇದು ವಾಸ್ತವವಾಗಿ ಪ್ರತಿ ಮನುಷ್ಯನೂ ಅಜ್ಞಾನದ ಅಂಧಕಾರದಿಂದ ನಿಜವಾದ ಜ್ಞಾನದ ಬೆಳಕಿನೆಡೆಗೆ ತೆರಳಲು ಅನುಸರಿಸುವ ಒಂದು ರೀತಿಯ ಜೀವನದ ದಾರಿಯಾಗಿದೆ.



Click it and Unblock the Notifications













