Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ವರುಥಿನಿ ಏಕಾದಶಿ 2020: ಶುಭ ಮುಹೂರ್ತ, ಉಪವಾಸ ಮತ್ತು ಪೂಜಾ ವಿಧಾನ
ವರುಥಿನಿ ಏಕಾದಶಿಯು ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿರುವ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ವರುಥಿನಿ ಏಕಾದಶಿಯು ವೈಶಾಖ ಮಾಸದಲ್ಲಿ ಬರುತ್ತದೆ. ಇದೀಗ ವೈಶಾಖ ಮಾಸವು ಚಾಲ್ತಿಯಲ್ಲಿದೆ.

ವೈಶಾಖ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ವರುಥಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ವ್ರತ ಅಥವಾ ಪುಣ್ಯದ ಕೆಲಸ ಮಾಡುವುದರಿಂದಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅಚಲವಾಗಿದೆ.
ವಿಶೇಷ ರೂಪದಲ್ಲಿ ಏಕಾದಶಿ ತಿಥಿಯಂದು ವಿಷ್ಣು ಪರಮಾತ್ಮನನ್ನು ಆರಾಧನೆ ಮಾಡಲಾಗುತ್ತದೆ. ವರುಥಿನಿ ಶಬ್ದವು ಸಂಸ್ಕೃತದ ವರುಥಿನ್ ಶಬ್ದದಿಂದ ಬಂದಿದೆ. ಇದರರ್ಥ ಕವಚ ಎಂದಾಗಿದೆ. ಇಲ್ಲಿ ಕವಚವು ಕಷ್ಟಕಾರ್ಪಣ್ಯಕ್ಕಾಗಿರುತ್ತದೆ. ನಂಬಿಕೆಯ ಪ್ರಕಾರ ಈ ವ್ರತವನ್ನು ಆಚರಿಸುವುದರಿಂದಾಗಿ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತರಾಗುವುದಕ್ಕೆ ಸಾಧ್ಯವಿದೆ ಎನ್ನಲಾಗುತ್ತದೆ.

ಯಾವಾಗ ವರುಥಿನಿ ಏಕಾದಶಿ ?
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ ಅಂದರೆ ಏಪ್ರಿಲ್ 18ನೇ ತಾರೀಕಿನಿಂದು ಈ ವರ್ಷ ಬರುತ್ತದೆ. ಹಾಗಾಗಿ ವರುಥಿನಿ ಏಕಾದಶಿ ವ್ರತವನ್ನು ಏಪ್ರಿಲ್ 18 ನೇ ತಾರೀಕಿನಂದು ಆಚರಿಸಬೇಕು.

ವರುಥಿನಿ ಏಕಾದಶಿಯ ವ್ರತದ ಮುಹೂರ್ತ
ಏಕಾದಶಿ ತಿಥಿ ಪ್ರಾರಂಭ: ಏಪ್ರಿಲ್ 17 ನೇ ತಾರೀಕು ರಾತ್ರಿ 08:07 ಘಂಟೆಯಿಂದ ಪ್ರಾರಂಭವಾಗುತ್ತದೆ.
ಏಕಾದಶಿ ತಿಥಿ ಮುಕ್ತಾಯವಾಗುವ ಸಮಯ: ಏಪ್ರಿಲ್ 18 ರಂದು ರಾತ್ರಿ 10:19 ಘಂಟೆಗೆ ಮುಕ್ತಾಯ
ವರುಥಿನಿ ಏಕಾದಶಿ ಪರಾನ ಮುಹೂರ್ತ: ಏಪ್ರಿಲ್ 19 ರಂದು ಬೆಳಿಗ್ಗೆ 05:51 ಯಿಂದ 08:26 ರ ತನಕ
ಅವಧಿ: 2 ಘಂಟೆ 35 ನಿಮಿಷ

ವರುಥಿನಿ ಏಕಾದಶಿಯ ವ್ರತದ ವಿಧಿವಿಧಾನ
ದಶಿಮಿ ತಿಥಿಯ ರಾತ್ರಿ ಸಾತ್ವಿಕ ಆಹಾರವನ್ನು ಸೇವಿಸಿ.
ಏಕಾದಶಿ ತಿಥಿಯ ಬೆಳಿಗ್ಗೆ ಸೂರ್ಯೋದಯವಾಗುವುದಕ್ಕೂ ಮುನ್ನವೇ ಎದ್ದೇಳಿ.
ಶೌಚ ಮತ್ತು ನಿತ್ಯಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ.
ಇದಾದ ನಂತರ ಏಕಾದಶಿ ವ್ರತದ ಸಂಕಲ್ಪ ಮಾಡಿಕೊಳ್ಳಿ. ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪೂಜೆ ಮತ್ತು ಅರ್ಚನೆಗಳನ್ನು ಕೈಗೊಳ್ಳಿ.
ಇಡೀ ದಿನ ಸಮಯವಾದಾಗಲೆಲ್ಲಾ ವಿಷ್ಣು ದೇವನ ಸ್ಮರಣೆಯನ್ನು ಮಾಡುತ್ತಿರಬೇಕು.
ರಾತ್ರಿಯ ವೇಳೆ ಪೂಜಾ ಸ್ಥಳದ ಬಳಿ ಕುಳಿತು ಜಾಗರಣೆ ಕೈಗೊಳ್ಳಿ.
ಏಕಾದಶಿಯ ಮರುದಿನ ದ್ವಾದಶಿ ಉಪವಾಸವನ್ನು ಪ್ರಾರಂಭಿಸಿ. ಪರಾನ ಮುಹೂರ್ತದಲ್ಲಿ ಈ ಉಪವಾಸವನ್ನು ತೆರೆಯಿರಿ.
ಬ್ರಾಹ್ಮಣರಿಗೆ ಆಹಾರವನ್ನು ಅರ್ಪಿಸಿ ಮತ್ತು ಅವರಿಗೆ ದಾನ-ದಕ್ಷಿಣೆಯನ್ನು ನೀಡಿ.

ವರುಥಿನಿ ಏಕಾದಶಿಯ ಮಹತ್ವ
ಶಾಸ್ತ್ರದಲ್ಲಿ ವರುಥಿನಿ ಏಕಾದಶಿಯನ್ನು ಸೌಭಾಗ್ಯ ಮತ್ತು ಪುಣ್ಯ ಪ್ರಾಪ್ತಿ ಮಾಡುವ ಏಕಾದಶಿ ದಿನ ಎಂದು ಕರೆಯಲಾಗಿದೆ. । ಈ ದಿನ ವ್ರತ ಆಚರಣೆ ಮಾಡುವವರ ಸಾವಿರ ಪಾಪವು ನಾಶವಾಗುತ್ತದೆ ಮತ್ತು ಕಷ್ಟದಿಂದ ಅವರು ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ವರುಥಿನಿ ಏಕಾದಶಿ ವ್ರತ ಮಾಡುವುದರಿಂದಾಗಿ ಪುಣ್ಯ ಸಿಗುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ಒಬ್ಬ ವ್ಯಕ್ತಿಯು ವರುಥಿನಿ ಏಕಾದಶಿಯನ್ನು ಆಚರಣೆ ಮಾಡಿದರೆ ಮತ್ತು ಅವನು ಬ್ರಾಹ್ಮಣರಿಗೆ ದೇಣಿಗೆ ನೀಡಿದರೆ ಅವನು ಲಕ್ಷಾಂತರ ವರ್ಷದಿಂದ ಧ್ಯಾನ ಮಾಡಿದ ಫಲವನ್ನು ಮತ್ತು ಕನ್ಯಾ ದಾನದಿಂದ ಬರುವ ಸದ್ಗುಣವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ವರುಥಿನಿ ಏಕಾದಶಿ ದಿನದ ಮುನ್ನೆಚ್ಚರಿಕೆಗಳು
ವರುಥಿನಿ ಏಕಾದಶಿ ದಿನದಂದು ಉಪವಾಸ ಆಚರಿಸುವ ವ್ಯಕ್ತಿಯು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ದಿನ ವ್ರತಾಚರಣೆ ಮಾಡುವವರು ಸತ್ಯವನ್ನೇ ನುಡಿಯಬೇಕು. ಈ ದಿನದಂದು ಕೋಪಗೊಳ್ಳಬಾರದು ಮತ್ತು ದೈಹಿಕ ಸಂಬಂಧವನ್ನು ಹೊಂದಬಾರದು. ಈ ಸಮಯದಲ್ಲಿ ಉಪವಾಸ ಕೈಗೊಳ್ಳದೇ ಇರುವವರು ಅಕ್ಕಿ ಅಥವಾ ಅನ್ನದ ಸೇವನೆ ಮಾಡಬಾರದು ಎಂಬ ಪ್ರತೀತಿ ಇದೆ.



Click it and Unblock the Notifications