Just In
- 3 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 4 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 5 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 6 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚತುರ್ಥಿ ವಿಶೇಷ: ಗಣಪತಿ ದೇವನಿಗೆ ಇವುಗಳೆಂದರೆ ಬಹಳ ಇಷ್ಟವಂತೆ..
ಡೊಳ್ಳು ಹೊಟ್ಟೆ, ಗಜಮುಖನೆಂದು ಪೂಜಿಸಲ್ಪಡುವ ಗಣೇಶ ದೇವರು ಕೆಡುಕು ಹಾಗೂ ಪಾಪ ವಿಮೋಚನೆ ಮಾಡುವ ಸ್ನೇಹಪರ ದೇವರೆಂದೇ ಪರಿಗಣಿಸಲಾಗಿದೆ. ಗಣಪತಿ ದೇವರನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ ಬೇರೆ ಧರ್ಮದವರು ಕೂಡ ಪೂಜಿಸುವುದು ಅವರ ಸುಂದರ ದೇಹ ಹಾಗೂ ಭಕ್ತರಿಗೆ ಒಲಿಯುವ ಕಾರಣಕ್ಕಾಗಿ. ಗಣೇಶ ದೇವರನ್ನು ಜನರ ಅಧಿಪತಿ ಗಣಪತಿ ಎಂದು ಕರೆಯಲಾಗುತ್ತದೆ. ಗಣೇಶ ಚತುದರ್ಶಿಯಂದು ಗಣಪತಿ ದೇವರನ್ನು ಸಂಭ್ರಮದಿಂದ ಪೂಜಿಸಲಾಗುವುದು.
ಶಕ್ತಿಶಾಲಿ ಗಣನಾಯಕ ಹಾಗೂ ಪುಕ್ಕಲ ಇಲಿಯ ಕಥೆಯಿದು!
ಹಿಂದೂ ಧರ್ಮೀಯರ ಮನೆ, ಮಠಗಳಲ್ಲಿ ಗಣೇಶ ಚತುದರ್ಶಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವ ಭಕ್ತರು ದೇವರಿಗೆ ಏನು ಇಷ್ಟ ಎಂದು ತಿಳಿದುಕೊಂಡು ಪೂಜಿಸಿದರೆ ತುಂಬಾ ಒಳ್ಳೆಯದು. ಇದರಿಂದ ಗಣೇಶ ದೇವರು ಬೇಗನೆ ಪ್ರಸನ್ನರಾಗುವರು. ಗಣಪತಿ ದೇವರಿಗೆ ಏನೆಲ್ಲಾ ಇಷ್ಟ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದುಕೊಂಡು ಗಣಪತಿ ದೇವರನ್ನು ಆರಾಧಿಸಿ...
ಮೋದಕ
ಗಣೇಶ ದೇವರು ತಿಂಡಿ ಪ್ರಿಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಣಪತಿ ದೇವರ ವಿಗ್ರಹದ ಕೈಗಳಲ್ಲಿ ಹಾಗೂ ಅವರ ಎದುರಿಗೆ ಇರುವಂತಹ ತಿಂಡಿಗಳನ್ನು ನೋಡಿದಾಗ ಗಣಪತಿ ದೇವರಿಗೆ ಆಹಾರ ತುಂಬಾ ಇಷ್ಟ ಎಂದು ತಿಳಿದುಬರುವುದು. ಗಣಪತಿ ದೇವರನ್ನು ಬೇಗನೆ ಪ್ರಸನ್ನರಾಗಿಸಲು ಅವರಿಗೆ ಪ್ರಿಯವಾದ ತಿಂಡಿ ಮಾಡಬೇಕು. ಮೋದಕವು ಗಣಪತಿಗೆ ತುಂಬಾ ಇಷ್ಟವಾದ ತಿಂಡಿ. ಗಣೇಶ ಚತುದರ್ಶಿಯಂದು ಮೋದಕವನ್ನು ಮಾಡಿ ಬಡಿಸಬೇಕು.
ಈ ಬಾರಿಯ ಗಣೇಶ ಹಬ್ಬವನ್ನು ಮೋದಕ ತಿನಿಸಿನೊಂದಿಗೆ ಸಿಹಿಯಾಗಿಸಿ!
ಗರಿಕೆ
ಗಣಪತಿ ದೇವರಿಗೆ ಇಷ್ಟವಾಗುವಂತಹ ಮತ್ತೊಂದು ಆಹಾರವೆಂದರೆ ಗರಿಕೆ. ಗಣಪತಿ ದೇವರಿಗೆ ಗರಿಕೆ ಯಾಕೆ ಇಷ್ಟ ಎನ್ನುವ ಬಗ್ಗೆ ಒಂದು ಕಥೆಯೇ ಇದೆ. ದೇವರುಗಳಿಗೆ ಕೆಡುಕನ್ನು ಉಂಟು ಮಾಡುತ್ತಿದ್ದ ಅನಲಾಸುರನನ್ನು ಗಣಪತಿ ದೇವರು ಒಂದು ಸಲ ತಿಂದರಂತೆ. ಅನಲಾಸುರ ಜೀರ್ಣವಾಗದೆ ಇರುವ ಕಾರಣದಿಂದ ಗಣಪತಿ ದೇವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೆಲವು ಋಷಿಗಳು ಗಣಪತಿ ದೇವರ ಹೊಟ್ಟೆಯ ಮೇಲೆ ಗರಿಕೆ ಹುಲ್ಲನ್ನು ಹಾಕುತ್ತಾರೆ. ಈ ವೇಳೆ ಗಣಪತಿ ದೇವರ ಹೊಟ್ಟೆ ನೋವು ಶಮನವಾಗುತ್ತದೆ. ಇದರ ಬಳಿಕ ಗಣಪತಿ ದೇವರಿಗೆ ಗರಿಕೆ ಹುಲ್ಲು ತುಂಬಾ ಇಷ್ಟ.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು
ಚೆಂಡು ಹೂ
ಗಣೇಶನನ್ನು ಮನೆಗೆ ತರುವಾಗ ಹೆಚ್ಚಿನ ಮನೆಗಳಲ್ಲಿ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ಗಣಪತಿಗೆ ಚೆಂಡು ಹೂ ತುಂಬಾ ಇಷ್ಟ. ಗಣಪತಿ ದೇವರು ಯಾವಾಗಲು ಚೆಂಡು ಹೂವು ಮತ್ತು ಗರಿಕೆ ಹುಲ್ಲಿನ ಮಾಲೆ ಹಾಕಿರುತ್ತಾರೆ.
ಶಂಖ
ಗಣಪತಿಗೆ ನಾಲ್ಕು ಕೈಗಳಿವೆ ಮತ್ತು ಒಂದು ಕೈಯಲ್ಲಿ ಶಂಖವನ್ನು ಹಿಡಿದುಕೊಂಡಿರುತ್ತಾರೆ. ಹೆಚ್ಚಿನ ಹಿಂದೂ ಹಬ್ಬಗಳ ವೇಳೆ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದವೆಂದರೆ ಗಣಪತಿ ದೇವರಿಗೆ ತುಂಬಾ ಇಷ್ಟವಂತೆ. ಗಣಪತಿ ಆರತಿ ಮಾಡುವಾಗ ಹೆಚ್ಚಿನವರು ಶಂಖನಾದ ಮೊಳಗಿಸುವರು. ಶಂಖನಾದವು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
ಹಣ್ಣುಗಳು
ತೆಂಗಿನಕಾಯಿ ಮತ್ತು ಬಾಳೆಹಣ್ಣು ಗಣಪತಿ ದೇವರಿಗೆ ತುಂಬಾ ಪ್ರಿಯವಾಗಿರುವ ಹಣ್ಣುಗಳು. ಗಣಪತಿ ದೇವರ ತಲೆಯು ಆನೆಯದ್ದಾಗಿರುವ ಕಾರಣದಿಂದ ಬಾಳೆಹಣ್ಣು ಗಣೇಶ ದೇವರಿಗೆ ತುಂಬಾ ಇಷ್ಟ. ಗಣೇಶನ ಮೂರ್ತಿಯ ಸುತ್ತ ಬಾಳೆಎಲೆಗಳು ಹಾಗೂ ಬಾಳೆಗಿಡಗಳಿಂದ ಶೃಂಗರಿಸಲಾಗುತ್ತದೆ.
ಹಣ್ಣುಗಳು
ಕೆಲವು ಕಡೆಗಳಲ್ಲಿ ಬಾಳೆ ಹೂವುಗಳನ್ನು ಸಮರ್ಪಿಸಲಾಗುತ್ತದೆ. ಈ ಐದು ವಸ್ತುಗಳು ಗಣಪತಿ ದೇವರಿಗೆ ತುಂಬಾ ಇಷ್ಟ. ಗಣಪತಿ ಸಸ್ಯಹಾರಿ ಮತ್ತು ಅವರನ್ನು ಬುಧವಾರದಂದು ಪೂಜಿಸಿದರೆ ಒಳ್ಳೆಯದು.