Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಸೃಷ್ಟಿಕರ್ತ ಬ್ರಹ್ಮನ ಐದನೇ ತಲೆಯ ಹಿಂದಿನ ರೋಚಕ ಕಥೆ
ಹಿಂದೂ ಧರ್ಮದಲ್ಲಿ ಬಹಳ ಶಕ್ತಿ ಶಾಲಿ ದೇವರು ಹಾಗೂ ಪ್ರಪಂಚದ ಸೃಷ್ಟಿ, ಪಾಲನೆ ಹಾಗೂ ಲಯ ಎಂದು ಪರಿಗಣಿಸಲಾದ ದೇವರುಗಳು ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ. ಬ್ರಹ್ಮ ಪ್ರಪಂಚದ ಸೃಷ್ಟಿಕರ್ತನಾದರೆ, ವಿಷ್ಣು ಸೃಷ್ಟಿಯ ಪಾಲಕ, ಅದೇ ರೀತಿ ಶಿವನು ಸೃಷ್ಟಿಯ ಲಯಕಾರಕ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಬ್ರಹ್ಮನು ಸೃಷ್ಟಿಯ ದೇವರು, ಸಾಂಪ್ರದಾಯಿಕವಾಗಿ ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಪರಿಗಣಿಸಲಾಗುತ್ತದೆ.
ಒಬ್ಬ ವ್ಯಕ್ತಿಯ ಸೂಕ್ಷ್ಮವಾದ ದೇಹವು ಅವನ ಆಲೋಚನೆಗಳು ಮತ್ತು ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿದೆ, ಅದು ಅವನ ಸಂಪೂರ್ಣ ಚಿಂತನೆಯಾಗಿದೆ. ಮನುಷ್ಯನ ಸೂಕ್ಷ್ಮವಾದ ದೇಹವು ಅವನ ದೇಹವನ್ನು ಮತ್ತು ಪ್ರಪಂಚವನ್ನು ಸೃಷ್ಟಿಸಲು ಕಾರಣವಾಗಿದೆ. ವ್ಯಕ್ತಿಯ ಆಲೋಚನೆಗಳು ಅವರು ಹೊಂದಿರುವ ದೇಹದ ಪ್ರಕಾರವನ್ನು ನಿರ್ಧರಿಸುತ್ತವೆ. ವ್ಯಕ್ತಿಗಳು ಅವನ ಸುತ್ತಲೂ ಅನುಭವಿಸುವ ಪ್ರಪಂಚದ ಬಗೆಗೆ ಇದೇ ಕಲ್ಪನೆ ಕೂಡಾ ಕಾರಣ.

ಒಬ್ಬ ವ್ಯಕ್ತಿಯು ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದರೆ, ಅವರು ಸುಂದರ ಪ್ರಪಂಚವನ್ನು ನೋಡುತ್ತಾರೆ. ಅವರ ಆಲೋಚನೆಗಳು ಒಳ್ಳೆಯದಾಗಿದ್ದರೆ, ಅವರು ಕೆಟ್ಟ ಪ್ರಪಂಚವನ್ನು ನೋಡುತ್ತಾರೆ. ಎಲ್ಲೆಡೆಯೂ ಸದ್ಗುಣಗಳನ್ನು ಕಂಡ ಒಬ್ಬ ಯುದ್ದೀಶ್ತ್ರ, ಮತ್ತು ದುರ್ಯೋಧನನು ಎಲ್ಲ ಕಡೆಗಳಲ್ಲಿ ಕೆಟ್ಟ ಪದ್ಧತಿಗಳನ್ನು ಕಂಡನು. ಕಲ್ಪನೆಯಿಲ್ಲದಿರುವಾಗ, ಯಾವುದೇ ಪ್ರಪಂಚವೂ ಇಲ್ಲ. ಆಳವಾದ ನಿದ್ರೆಯಲ್ಲಿ ಯಾವುದೇ ಚಿಂತನೆಯಿಲ್ಲ, ಜಗತ್ತು ಇಲ್ಲ. ಈ ವಿದ್ಯಮಾನವು ಸೂಕ್ಷ್ಮರೂಪಕ್ಕೆ ಮಾತ್ರವಲ್ಲದೇ ಸ್ಥೂಲ ಪ್ರಪಂಚಕ್ಕೆ ಅನ್ವಯಿಸುತ್ತದೆ. ಬ್ರಹ್ಮಾಂಡದ ಸೂಕ್ಷ್ಮ ದೇಹವು ಎಲ್ಲಾ ಜೀವಿಗಳ ಎಲ್ಲಾ ಸೂಕ್ಷ್ಮ ದೇಹಗಳ ಸಂಗ್ರಹವಾಗಿದೆ. ಬ್ರಹ್ಮಾಂಡದ ಸೂಕ್ಷ್ಮವಾದ ದೇಹವನ್ನು ಹಿರಣ್ಯಯಾಭಭ ಎಂದು ಕರೆಯಲಾಗುತ್ತದೆ ಮತ್ತು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಈ ಸೃಷ್ಟಿಕರ್ತ ಬ್ರಹ್ಮ.

ದಂತಕಥೆಯ ಪ್ರಕಾರ
ದಂತಕಥೆಯ ಪ್ರಕಾರ, ಬ್ರಹ್ಮನು ದೇವತೆ ಸರಸ್ವತಿಯನ್ನು ತನ್ನದೇ ಆದ ಅಂಗಗಳಲ್ಲೊಂದರಿಂದ ಸೃಷ್ಟಿಸಿದ, ಅಲ್ಲದೆ ಆಕೆಯ ಅಂದಕ್ಕೆ ಮರುಳಾಗಿ ಅವಳನ್ನೇ ಪ್ರೀತಿಸುತ್ತಾರೆ. ಇದನ್ನು ತಿಳಿದ ಸರಸ್ವತಿ ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ದಿಕ್ಕಿನಲ್ಲಿ ಕೂಡ ಸರಸ್ವತಿಯ ಮೇಲೆ ಕಣ್ಣಿಡಲು ಬ್ರಹ್ಮ ಐದು ತಲೆಗಳನ್ನು ಸೃಷ್ಟಿಸಿದನು. ಕೊನೆಗೆ ಬ್ರಹ್ಮನಿಂದ ತಪ್ಪಿಸಲು ಸರಸ್ವತಿಯು ಪ್ರಯಾಗದಲ್ಲಿ ನದಿಯಾಗಿ ಹರಿಯುತ್ತಾಳೆ. ತನ್ನ ಸೃಷ್ಟಿ ಮತ್ತು ಪರಾಕ್ರಮದ ಬಗ್ಗೆ ಅಹಂಕಾರವನ್ನು ಹೊಂದಿದ್ದ ಬ್ರಹ್ಮನು ದೇವತೆಗಳನ್ನು ಕೆಟ್ಟದಾಗಿ ಬೈಯ್ಯಲು ತೊಡಗುತ್ತಾರೆ. ಅವನ ವರ್ತನೆಯಿಂದ ದೇವತೆಗಳು ಬೇಸರಕ್ಕೆ ಈಡಾಗುತ್ತಾರೆ. ಕೊನೆಗೆ ಶಿವನ ಬಳಿ ಬಂದು ಬ್ರಹ್ಮನ ಅಹಂಕಾರವನ್ನು ಹುಟ್ಟಡಗಿಸಿ ಎಂದು ಕೇಳಿಕೊಳ್ಳುತ್ತಾರೆ.

ದೇವತೆಗಳು ಶಿವನ ಸಹಾಯವನ್ನು ಯಾಚಿಸುತ್ತಾರೆ
"ಮಹೇಶ್ವರ" ಎಂದು ಅವರೆಲ್ಲರೂ ಒಕ್ಕೊರಲಿನಿಂದ ಯಾಚಿಸುತ್ತಾರೆ. ನಿತ್ಯವೂ ಬ್ರಹ್ಮನ ಕೆಲಸದಿಂದ ನಾವು ಆತಂಕಕ್ಕೆ ಒಳಗಾಉತ್ತಿದ್ದೇವೆ. ಅವರ ವರ್ತನೆ ನಮಗೆ ಸಹಿಸಲು ಕಷ್ಟವಾಗುತ್ತಿದೆ ಎಂಬುದಾಗಿ ದೇವತೆಗಳು ಶಿವನನ್ನು ಬೇಡಿಕೊಳ್ಳುತ್ತಾರೆ. ಇದಕ್ಕೆ ಅಂತ್ಯ ಹಾಡಿ ಎಂದು ಅಂಗಲಾಚುತ್ತಾರೆ.

ದೇವತೆಗಳ ದುಃಖಕ್ಕೆ ಸಾಂತ್ವನ ನೀಡಿದ ಶಿವ
ಶಿವನು ಪ್ರತಿಯೊಂದನ್ನು ಬಲ್ಲವನಾಗಿದ್ದಾರೆ ಆದ್ದರಿಂದ ಅವರಿಗೆ ದೇವತೆಗಳಿಂದ ಹೆಚ್ಚಿನ ವಿವರಣೆಯ ಅಗತ್ಯ ಬೇಕಾಗಿರುವುದಿಲ್ಲ. ಪ್ರತಿಯೊಂದು ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಶಿವನು ದೇವತೆಗಳಿಗೆ ಆಶ್ವಾಸನೆಯನ್ನು ನೀಡುತ್ತಾರೆ. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ದೇವತೆಗಳು ಬ್ರಹ್ಮನನ್ನು ಕೈಲಾಸಕ್ಕೆ ಕಳುಹಿಸುವ ತೀರ್ಮಾನಕ್ಕೆ ಬರುತ್ತಾರೆ. ಬ್ರಹ್ಮನ ಅಹಂಕಾರಯುತವಾದ ಮಾತುಗಳಿಂದ ಮಹಾದೇವನು ಶೀಘ್ರ ಕೋಪಗೊಂಡು ಬ್ರಹ್ಮನ ಸೊಕ್ಕನ್ನು ಅಡಗಿಸುತ್ತಾರೆ ಎಂಬುದು ದೇವತೆಗಳ ಲೆಕ್ಕಾಚಾರವಾಗಿರುತ್ತದೆ. ಹೀಗೆ ತಮ್ಮ ತಮ್ಮಲ್ಲೆ ಮಾತಾಡಿಕೊಂಡು ದೇವತೆಗಳು ಬ್ರಹ್ಮನನ್ನು ಕೈಲಾಸಕ್ಕೆ ಕಳುಹಿಸುವ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಕೈಲಾಸಕ್ಕೆ ಹೋಗಿ ಶಿವನನ್ನು ಕಂಡುಬರಲು ಅವರು ಬ್ರಹ್ಮನಲ್ಲಿ ಹೇಳುತ್ತಾರೆ ಮತ್ತು ಇದಕ್ಕೆ ಬ್ರಹ್ಮನು ಒಪ್ಪಿಕೊಳ್ಳುತ್ತಾರೆ.
ಬ್ರಹ್ಮನು ಕೈಲಾಸಕ್ಕೆ ಹೋಗಿ ಶಿವನಲ್ಲಿ ಮಾತನಾಡುವ ತವಕದಲ್ಲಿರುತ್ತಾರೆ. ಆದರೆ ಆ ಸಮಯದಲ್ಲಿ ಶಿವನು ತಮ್ಮ ನಿತ್ಯಕಾರ್ಯವಾದ ಲೋಕಕಲ್ಯಾಣವನ್ನು ಮಾಡಲು ಹೊರಗಡೆ ಹೋಗಿರುತ್ತಾರೆ,ಈ ಸಮಯದಲ್ಲಿ ಪಾರ್ವತಿ ಮಾತೆ ಮಾತ್ರ ಅಲ್ಲಿರುತ್ತಾರೆ. ದೂರದಿಂದ ಬ್ರಹ್ಮನು ನಿಂತಿರುವುದನ್ನು ನೋಡಿ ಅದು ಶಿವ ಎಂದು ಪಾರ್ವತಿ ಅಂದುಕೊಳ್ಳುತ್ತಾರೆ. ಅವರ ಮುಖವನ್ನು ಕೂಡ ನೋಡದೆಯೇ ಲಗುಬಗೆಯಿಂದ ಬ್ರಹ್ಮನ ಪಾದ ಪೂಜೆಯನ್ನು ಪಾರ್ವತಿ ಮಾಡಲು ತೊಡಗುತ್ತಾರೆ. ಆದರೆ ಬ್ರಹ್ಮ ತಾನು ಶಿವನಲ್ಲ ಎಂಬುದನ್ನು ಹೇಳುವುದಿಲ್ಲ. ಅಚಾನಕ್ಕಾಗಿ ಬಂದ ಗೌರವನ್ನು ಆನಂದದಿಂದ ಅನುಭವಿಸುತ್ತಿರುತ್ತಾರೆ. ಆದರೆ ಈ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಶಿವನು ಬ್ರಹ್ಮನ ವರ್ತನೆಯಿಂದ ಕ್ರೋಧಕ್ಕೆ ಒಳಗಾಗುತ್ತಾರೆ.

ಬ್ರಹ್ಮನ ಮೇಲೆ ಶಿವನ ಕೋಪ
ಶಕ್ತಿಯು ಶಿವನ ಕೋಪವನ್ನು ನೋಡಿ ಆಜಾಗದಿಂದ ಹೊರಟು ಹೋಗುತ್ತಾರೆ. ಶಿವನು ಬ್ರಹ್ಮನಲ್ಲಿ ಕೇಳುತ್ತಾರೆ. ಪಾರ್ವತಿಯು ನಿಮ್ಮ ಮುಖವನ್ನು ನೋಡದೆಯೇ ನಿಮ್ಮ ಪಾದಪೂಜೆಯನ್ನು ಮಾಡುತ್ತಿದ್ದಾಗ ಅದನ್ನು ನಿಮಗೆ ತಡೆಯಬಹುದಿತ್ತಲ್ಲವೇ ಎಂದು". ಆದರೆ ಬ್ರಹ್ಮನು ಅಹಂಕಾರದಿಂದ ಬೀಗುತ್ತಿರುತ್ತಾರೆ ಮತ್ತು ಶಿವನಿಗೆ ಏನೂ ಉತ್ತರ ನೀಡುವುದಿಲ್ಲ. ಇದರಿಂದ ಕುಪಿತಗೊಂಡ ಶಿವನು ಈ ಐದು ತಲೆಗಳ ಕಾರಣದಿಂದ ನೀನು ಇಷ್ಟೊಂದು ಅಹಂಕಾರದಿಂದ ಮೆರೆಯುತ್ತಿದ್ದೀಯಾ, ಕೂಡಲೇ ಶಿವನು ಐದರಲ್ಲಿ ಒಂದು ತಲೆಯನ್ನು ಕೀಳುತ್ತಾರೆ. ಹೀಗೆ ಬ್ರಹ್ಮನಿಗೆ ನಾಲ್ಕು ತಲೆ ಮಾತ್ರ ಇರುತ್ತದೆ.

ಬ್ರಹ್ಮ ಕಪಾಲ
ಅದಾಗ್ಯೂ, ಬ್ರಹ್ಮನ ತಲೆಯು ಶಿವನ ಕೈಯಲ್ಲಿ ಬರುತ್ತಿದ್ದಂತೆಯೇ ಶಿವನಿಗೆ ಕಷ್ಟಗಳು ಆರಂಭವಾಗುತ್ತವೆ. ಬ್ರಹ್ಮನು ಶಿವನಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸುತ್ತಾರೆ. ಬ್ರಹ್ಮಾತಿ ದೋಷದಿಂದ ಶಿವನು ಬಳಲುವಂತೆ ಮಾಡುತ್ತಾರೆ. ಶಿವನ ಕೈಯಲ್ಲಿರುವ ಬ್ರಹ್ಮನ ತಲೆಯು ಕಪಾಲದಂತೆ ಶಿವನ ಕೈಯಲ್ಲಿ ಅಂಟಿಕೊಳ್ಳುತ್ತದೆ. ತನ್ನ ಕೈಯಲ್ಲಿ ಅಂಟಿಕೊಂಡ ತಲೆಬುರುಡೆಯಿಂದ ಶಿವನು ಹಿಂಸೆಗೆ ಒಳಗಾಗುತ್ತಾರೆ. ಅಗ್ನಿಗೆ ಕೂಡ ದೋಷವನ್ನು ನಿವಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಹಸ್ತದಲ್ಲಿ ಅಂಟಿಕೊಂಡಿರುವ ಕಪಾಲವನ್ನು ಕಿತ್ತಸೆಯಲು ಶಿವನು ಎಲ್ಲಾ ಲೋಕವನ್ನು ಸುತ್ತುತ್ತಾರೆ ಕೊನೆಗೆ ಪಾರ್ವತಿಯು ವಿಷ್ಣುವಿನ ಸಹಾಯವನ್ನು ಕೋರುವಂತೆ ಶಿವನಿಗೆ ಸಲಹೆಯನ್ನು ನೀಡುತ್ತಾರೆ. ಬೇರೆ ಬೇರೆ ಸ್ಥಳಕ್ಕೆ ಹೋಗಿ ಭಿಕ್ಷೆಯನ್ನು ಎತ್ತಿ. ಕಪಾಲವು ಯಾವಾಗ ಭಿಕ್ಷೆಯಿಂದ ತುಂಬುತ್ತದೆಯೋ ಆಗ ಮಾತ್ರವೇ ನಿಮಗೆ ಈ ಶಾಪದಿಂದ ಮುಕ್ತಿ ದೊರೆಯುತ್ತದೆ ಎಂಬುದಾಗಿ ವಿಷ್ಣುವು ಸಲಹೆಯನ್ನು ನೀಡುತ್ತಾರೆ. ತನ್ನ ಕೈಯಲ್ಲಿ ಕಪಾಲವನ್ನು ಹಿಡಿದುಕೊಂಡು ಬೇರೆ ಬೇರೆ ಸ್ಥಳಕ್ಕೆ ಭಿಕ್ಷೆ ಎತ್ತಲು ಹೋಗುತ್ತಾರೆ. ಕಪಾಲವನ್ನು ಭಿಕ್ಷೆಯು ಮುಟ್ಟುತ್ತಿದ್ದಂತೆ ಅದು ಮರೆಯಾಗುತ್ತಿತ್ತು ಮತ್ತು ಕಪಾಲ ಖಾಲಿಯಾಗುತ್ತಿತ್ತು.

ಬ್ರಹ್ಮ ಹತ್ಯೆ ದೋಷದಿಂದ ಶಿವನಿಗೆ ಮುಕ್ತಿ
ಕೊನೆಗೆ ಶಿವನು ತಿರುಕ್ಕಂಡಿಯೂರ್ ಎಂಬ ಸ್ಥಳಕ್ಕೆ ಬರುತ್ತಾರೆ. ಅಲ್ಲಿನ ಸ್ಥಳ ಪೆರುಮಾಳ್ ಶಿವನಿಗೆ ಭಿಕ್ಷೆಯನ್ನು ನೀಡಲು ಮಹಾಲಕ್ಷ್ಮೀಯನ್ನು ಕಳುಹಿಸಿಕೊಡುತ್ತಾರೆ. ಮಹಾಲಕ್ಷ್ಮೀಯು ಶಿವನ ಕಪಾಲವನ್ನು ತುಂಬಲು ಆರಂಭಿಸುತ್ತಾರೆ. ಕಪಾಲವು ತುಂಬಿ ಹರಿಯಲು ಆರಂಭವಾಯಿತು. (ಕೆಲವು ದಂತಕಥೆಗಳ ಪ್ರಕಾರ ಮಹಾವಿಷ್ಣುವು ತನ್ನ ಎದೆಯನ್ನು ಬಗೆದು ಕಪಾಲದಲ್ಲಿ ಆ ರಕ್ತವನ್ನು ತುಂಬಿದರು ಎಂದು ಹೇಳಲಾಗುತ್ತದೆ) ಶಿವನು ವಿಷ್ಣುವಿನ ಸಕಾಲ ನೆರವನ್ನು ನೆನೆಪಿಸಿಕೊಂಡು ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ವಿಷ್ಣುವು ಶಿವನ ಶಾಪವನ್ನು ತೊಡೆದ ಕಾರಣ ಅವರಿಗೆ ಹರಸಬವಿಮೋಚನಾರ್ ಎಂದು ಕರೆಯುತ್ತಾರೆ. ಶಿವನು ಈ ಸ್ಥಳದಲ್ಲಿ ಬ್ರಹ್ಮ ಶಿರ ಕಂಡೀಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ದೇವಸ್ಥಾನಕ್ಕೆ ಹರ ಸಬ ವಿಮೋಚನಾರ್ ದೇವಸ್ಥಾನ ಎಂಬ ಹೆಸರೂ ಇದೆ.

ಸರಸ್ವತಿಯ ಮೇಲೆ ಬ್ರಹ್ಮನ ಆಕರ್ಷಣೆ
ಕಥೆಯ ದೇವತೆಗಳ ಸರಸ್ವತಿಯ ಇತರ ಆವೃತ್ತಿಗಳಲ್ಲಿ ಬದಲಾಗಿ ಬ್ರಹ್ಮನ 'ಸಾತರೂಪ'ದ ಸ್ತ್ರೀ ರೂಪವನ್ನು ಬದಲಾಯಿಸಲಾಗಿದೆ, ಇವರು ಮನ್ಮಥ ಬಾಣದಿಂದ ಪ್ರಭಾವಿತರಾಗಿದ್ದಾರೆ. ಮನ್ಮಥ ಬ್ರಹ್ಮನ ಭಕ್ತನಾಗಿದ್ದನು ಮತ್ತು ಬ್ರಹ್ಮನು ಮನ್ಮಥನಿಗೆ ಮೂರು ಬಾಣವನ್ನು ನೀಡುತ್ತಾರೆ, ಯಾರನ್ನಾದರೂ ಬಳಸಿದಾಗ ಅದು ಆ ವ್ಯಕ್ತಿಯಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ. ಬಾಣವನ್ನು ಪರೀಕ್ಷಿಸುವ ಸಲುವಾಗಿ ಮನ್ಮಥ ಅವರು ಬ್ರಹ್ಮನ ಮೇಲೆ ಮೊದಲ ಬಾಣವನ್ನು ಬಳಸಿದರು. ಸರಸ್ವತಿಯ ಮೇಲೆ ಬ್ರಹ್ಮನ ಆಕರ್ಷಣೆಯನ್ನು ನೋಡಿ ಶಿವನು ಕೋಪಕ್ಕೆ ಒಳಗಾಗುತ್ತಾರೆ ಮತ್ತು ಬ್ರಹ್ಮನು ಮಾಡುತ್ತಿರುವುದು ತಪ್ಪು ಎಂದು ಬ್ರಹ್ಮನಿಗೆ ತಿಳಿಹೇಳುತ್ತಾರೆ. ಹೀಗೆ ದೇವಾದಿ ದೇವತೆಗಳು ಕೂಡ ತಮ್ಮ ಕರ್ಮಗಳನ್ನು ಅನುಭವಿಸಬೇಕಾಗುತ್ತದೆ.



Click it and Unblock the Notifications











