Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ನವರಾತ್ರಿ ವಿಶೇಷ: ಒಂಬತ್ತು ದಿನ ಬರೋಬ್ಬರಿ ಒಂಬತ್ತು ಅವತಾರವೆತ್ತುವ ದುರ್ಗೆ
ನವರಾತ್ರಿ ಸಡಗರದಲ್ಲಿ ಹೊಸ ಹೊಸ ಬಟ್ಟೆಬರೆ ಧರಿಸಿಕೊಂಡು ಓಡಾಡುವಂತಹ ಸೊಬಗೇ ಬೇರೆ. ಅದರಲ್ಲೂ ಮಹಿಳೆಯರು ನವರಾತ್ರಿ ಸಂದರ್ಭದಲ್ಲಿ ಒಂದೊಂದು ದಿನ ಒಂದೊಂದು ಬಣ್ಣ ಸೀರೆ ಉಡುವರು. ಅದರಲ್ಲೂ ಗುಜರಾತ್ನಲ್ಲಿ ಗರ್ಭಾ ನೃತ್ಯದ ಸಂದರ್ಭದಲ್ಲಿ ವಿವಿಧ ರೀತಿಯ ಉಡುಗೆ ಧರಿಸುವರು. ಇದರಿಂದ ಅಲ್ಲಿನ ಆಕರ್ಷಣೇಯೇ ಬೇರೆ.
ಮಹಿಳೆಯರು ಪ್ರತೀ ದಿನ ಹೊಸ ಬಣ್ಣದ ಬಟ್ಟೆ ಧರಿಸುವರು. ನವರಾತ್ರಿ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ದುರ್ಗೆಯ ಪೂಜೆಯ ವೇಳೆ ದುರ್ಗೆಗೆ ಪ್ರತೀದಿನವೂ ಒಂದೊಂದು ಬಣ್ಣದ ಸೀರೆಯಿರುವುದು. 9 ದಿನಗಳಲ್ಲಿ ಬರುವ ಒಂಬತ್ತು ಬಣ್ಣಗಳಿಗೆ ಯಾವುದಾದರೂ ಕಾರಣಗಳು ಇದೆಯಾ ಎಂದು ತಿಳಿದುಕೊಳ್ಳಿ. ಈ ಲೇಖನದಲ್ಲಿ ಒಂಬತ್ತು ದಿನಗಳ 9 ಬಣ್ಣಗಳ ಬಗ್ಗೆ ತಿಳಿಸಲಿದೆ...

ಮೊದಲ ದಿನ (ಕೆಂಪು)
ನವರಾತ್ರಿಯ ಮೊದಲ ದಿನವನ್ನು ಪ್ರತಿಪಾದ ಎಂದು ಕರೆಯುವರು. ಈ ದಿನ ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುವುದು. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು. ಈ ರೂಪವು ದುರ್ಗೆ ದೇವಿಯ ಪರಿಗಣಿಸುವ ರೂಪವಾಗಿದೆ. ಈಶ್ವರನ ಪತ್ನಿಯಾಗಿಯೂ ಪೂಜಿಸಲಾಗುತ್ತದೆ. ಪ್ರತಿಪಾದದ ಕೆಂಪು ಬಣ್ಣವು ಸತ್ವ ಮತ್ತು ಕ್ರಿಯೆಯ ಸಂಕೇತವಾಗಿದೆ. ಈ ಶಕ್ತಿಯುತ ಬಣ್ಣವು ದೇಹಕ್ಕೆ ಉಷ್ಣತೆ ನೀಡುವುದು. ಇದು ನವರಾತ್ರಿಗೆ ತಯಾರಾಗುವ ಸರಿಯಾದ ವಿಧಾನ.

ಎರಡನೇ ದಿನ (ನವಿಲು ನೀಲಿ)
ಎರಡನೇ ದಿನ ಅಥವಾ ದ್ವಿತೀಯದಂದು ದುರ್ಗೆಯು ಬ್ರಹ್ಮಚಾರಿಣಿ ಅವತಾರ ಪಡೆಯುವಳು. ಬ್ರಹ್ಮಚಾರಿಣಿ ಅವತಾರದಲ್ಲಿ ದುರ್ಗೆಯು ಸಮೃದ್ಧಿ ಹಾಗೂ ಸಂತೋಷ ನೀಡುವಳು. ನವಿಲಿನ ನೀಲಿ ಬಣ್ಣವು ಈ ದಿನದ ಬಣ್ಣವಾಗಿದೆ. ನೀಲಿ ಬಣ್ಣವು ಶಾಂತಿಯ ಸಂಕೇತವಾದರೂ ಶಕ್ತಿಶಾಲಿ.

ಮೂರನೇ ದಿನ (ಹಳದಿ)
ಮೂರನೇ ಅಥವಾ ತೃತೀಯ ದಿನವು ದುರ್ಗೆಯನ್ನು ಚಂದ್ರಘಾತ ರೂಪದಲ್ಲಿ ಪೂಜಿಸಲಾಗುವುದು. ದುರ್ಗೆಯ ಹಣೆಯಲ್ಲಿ ಅರ್ಧ ಚಂದ್ರನ ಆಕೃತಿಯಿರುವುದು. ಇದು ಧೈರ್ಯ ಹಾಗೂ ಸೌಂದರ್ಯದ ಸಂಕೇತ. ಚಂದ್ರಘಾತ ದುಷ್ಟಶಕ್ತಿಗಳ ವಿರುದ್ಧ ಹಲವಾರು ಯುದ್ಧಗಳನ್ನು ಮಾಡಿರುವಾಕೆ. ಮೂರನೇ ದಿನದ ಬಣ್ಣ ಹಳದಿ. ಇದು ಉತ್ಸಾಹಭರಿತ ಬಣ್ಣ ಮತ್ತು ಪ್ರತಿಯೊಬ್ಬರ ಮನೋಸ್ಥಿತಿಯನ್ನು ಉತ್ತಮಪಡಿಸುವುದು.

ನಾಲ್ಕನೇ ದಿನ (ಹಸಿರು)
ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿ ದುರ್ಗೆಯು ಕುಸುಮಾಂದ ಅವತಾರವೆತ್ತುವಳು. ಈ ದಿನದ ಬಣ್ಣವು ಹಸಿರು. ಕುಸುಮಾಂದ ದೇವಿಯು ಈ ಭೂಮಿಯ ಸೃಷ್ಟಿಕೃರ್ತೆ ಎಂದು ಹೇಳಲಾಗುತ್ತದೆ. ಆಕೆ ನಗುವಿನಿಂದ ಈ ಭೂಮಿ ತುಂಬಾ ಹಚ್ಚಹಸಿರು ತುಂಬಿದಾಕೆ ಎಂದು ಹೇಳಲಾಗುತ್ತದೆ.

ಐದನೇ ದಿನ (ಕಂದು)
ಐದನೇ ದಿನ ಅಥವಾ ಪಂಚಮಿಯಂದು ದೇವಿಯು ಸ್ಕಂದ ಮಾತೆಯ ಅವತಾರವೆತ್ತುವಳು. ಈ ದಿನದಂದು ದೇವಿಯು ಕಾರ್ತಿಕ(ದೇವರು) ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬರುವಳು. ದುರ್ಬಲ ತಾಯಿಯು ತನ್ನ ಮಗನನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವ ಸಲುವಾಗಿ ಚಂಡಮಮಾರುತವಾಗಬಲ್ಲಲು ಎನ್ನುವುದು ಈ ಕಂದು ಬಣ್ಣದ ಪ್ರತೀಕ.

ಆರನೇ ದಿನ(ಕಿತ್ತಳೆ)
ಆರನೇ ದಿನವಾದ ಸಷ್ಠಿಯಂದು ದೇವಿ ದುರ್ಗೆಯು ಕಾತ್ಯಾಯಿನಿ ರೂಪ ಪಡೆದುಕೊಳ್ಳುವಳು. ಶ್ರೇಷ್ಠ ಸನ್ಯಾಸಿ ಕತಾನು ದುರ್ಗೆಯು ತನ್ನ ಮಗಳಾಗಿ ಬರಬೇಕೆಂದು ಆಕಾಂಕ್ಷೆಯೊಂದಿಗೆ ಘೋರ ತಪಸ್ಸು ಮಾಡುವನು. ಕತಾನ ತಪಸ್ಸಿಗೆ ಒಲಿದ ದುರ್ಗೆಯು ಆತನ ಮಗಳಾಗಿ ಬರುವಳು. ಈ ದಿನವು ಕಿತ್ತಳೆ ಬಣ್ಣದ್ದಾಗಿದ್ದು, ಇದು ಶ್ರೇಷ್ಠ ಸಾಹಸದ್ದಾಗಿದೆ.

ಏಳನೇ ದಿನ(ಬಿಳಿ)
ದೇವಿ ದುರ್ಗೆಯ ಕಾಳರಾತ್ರಿ ಅವತಾರವನ್ನು ಆರಾಧಿಸುವ ದಿನವೇ ಸಪ್ತಮಿ ಅಥವಾ ಏಳನೇ ದಿನ. ಇದು ದುರ್ಗೆಯ ತುಂಬಾ ಹಿಂಸಾರೂಪವಾಗಿದೆ. ಸಪ್ತಮಿಯಂದು ದೇವಿಯು ಬಿಳಿ ಬಣ್ಣದಲ್ಲಿ ಅವತಾರವೆತ್ತುವಳು. ಆದರೆ ಆಕೆಯ ಕಣ್ಣುಗಳು ಉಗ್ರತ್ವದಿಂದ ಕೆಂಪಾಗಿರುವುದು. ಬಿಳಿ ಬಣ್ಣವು ಪ್ರಾರ್ಥನೆ ಹಾಗೂ ಶಾಂತಿಯ ಸಂಕೇತ. ಎಲ್ಲಾ ರೀತಿಯ ಸಂಕಷ್ಟಗಳಿಂದ ದೇವಿಯು ಭಕ್ತರನ್ನು ಪಾರು ಮಾಡುವಳು ಎನ್ನುವುದು ಇದರ ಸೂಚಕ.

ಎಂಟನೇ ದಿನ(ಗುಲಾಬಿ)
ಗುಲಾಬಿಯು ಎಂಟನೇ ಅಥವಾ ಅಷ್ಟಮಿಯ ಬಣ್ಣವಾಗಿದೆ. ಈ ದಿನ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿಗಳನ್ನು ದೂರ ಮಾಡುವಳು. ಗುಲಾಬಿ ಬಣ್ಣವು ನಿರೀಕ್ಷೆ ಮತ್ತು ಹೊಸ ಆರಂಭದ ಸಂಕೇತ.

ಒಂಬತ್ತನೇ ದಿನ(ತಿಳಿ ನೀಲಿ)
ನವಮಿ ಅಥವಾ 9ನೇ ದಿನದಂದು ದೇವಿಯು ಸಿದ್ಧಿದಾತ್ರಿ ಅವತಾರದಲ್ಲಿರುವಳು. ಈ ದಿನ ಆಕೆಯ ಬಟ್ಟೆಯ ಬಣ್ಣವು ಆಕಾಶ ನೀಲಿಯಾಗಿರುವುದು. ಸಿದ್ಧಿದಾತ್ರಿ ರೂಪವು ಅತಿಮಾನುಷ ಶಮನಕಾರಿ ಗುಣ ಹೊಂದಿದೆ ಎಂದು ನಂಬಲಾಗಿದೆ. ತಿಳಿ ನೀಲಿ ಬಣ್ಣವು ಸ್ವಾಭಾವಿಕ ಸೌಂದರ್ಯದ ಪ್ರತೀಕ.



Click it and Unblock the Notifications