Just In
Don't Miss
- News Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ ವಿಶೇಷ: ಒಂಬತ್ತು ದಿನ ಬರೋಬ್ಬರಿ ಒಂಬತ್ತು ಅವತಾರವೆತ್ತುವ ದುರ್ಗೆ
ನವರಾತ್ರಿ ಸಡಗರದಲ್ಲಿ ಹೊಸ ಹೊಸ ಬಟ್ಟೆಬರೆ ಧರಿಸಿಕೊಂಡು ಓಡಾಡುವಂತಹ ಸೊಬಗೇ ಬೇರೆ. ಅದರಲ್ಲೂ ಮಹಿಳೆಯರು ನವರಾತ್ರಿ ಸಂದರ್ಭದಲ್ಲಿ ಒಂದೊಂದು ದಿನ ಒಂದೊಂದು ಬಣ್ಣ ಸೀರೆ ಉಡುವರು. ಅದರಲ್ಲೂ ಗುಜರಾತ್ನಲ್ಲಿ ಗರ್ಭಾ ನೃತ್ಯದ ಸಂದರ್ಭದಲ್ಲಿ ವಿವಿಧ ರೀತಿಯ ಉಡುಗೆ ಧರಿಸುವರು. ಇದರಿಂದ ಅಲ್ಲಿನ ಆಕರ್ಷಣೇಯೇ ಬೇರೆ.
ನವರಾತ್ರಿ ವಿಶೇಷ: ಒಂಬತ್ತು ದಿನ ತಪ್ಪದೇ ಪಠಿಸಿ ಈ ಪೂಜಾ ಮಂತ್ರಗಳು
ಮಹಿಳೆಯರು ಪ್ರತೀ ದಿನ ಹೊಸ ಬಣ್ಣದ ಬಟ್ಟೆ ಧರಿಸುವರು. ನವರಾತ್ರಿ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ದುರ್ಗೆಯ ಪೂಜೆಯ ವೇಳೆ ದುರ್ಗೆಗೆ ಪ್ರತೀದಿನವೂ ಒಂದೊಂದು ಬಣ್ಣದ ಸೀರೆಯಿರುವುದು. 9 ದಿನಗಳಲ್ಲಿ ಬರುವ ಒಂಬತ್ತು ಬಣ್ಣಗಳಿಗೆ ಯಾವುದಾದರೂ ಕಾರಣಗಳು ಇದೆಯಾ ಎಂದು ತಿಳಿದುಕೊಳ್ಳಿ. ಈ ಲೇಖನದಲ್ಲಿ ಒಂಬತ್ತು ದಿನಗಳ 9 ಬಣ್ಣಗಳ ಬಗ್ಗೆ ತಿಳಿಸಲಿದೆ...
ಮೊದಲ ದಿನ (ಕೆಂಪು)
ನವರಾತ್ರಿಯ ಮೊದಲ ದಿನವನ್ನು ಪ್ರತಿಪಾದ ಎಂದು ಕರೆಯುವರು. ಈ ದಿನ ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುವುದು. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು. ಈ ರೂಪವು ದುರ್ಗೆ ದೇವಿಯ ಪರಿಗಣಿಸುವ ರೂಪವಾಗಿದೆ. ಈಶ್ವರನ ಪತ್ನಿಯಾಗಿಯೂ ಪೂಜಿಸಲಾಗುತ್ತದೆ. ಪ್ರತಿಪಾದದ ಕೆಂಪು ಬಣ್ಣವು ಸತ್ವ ಮತ್ತು ಕ್ರಿಯೆಯ ಸಂಕೇತವಾಗಿದೆ. ಈ ಶಕ್ತಿಯುತ ಬಣ್ಣವು ದೇಹಕ್ಕೆ ಉಷ್ಣತೆ ನೀಡುವುದು. ಇದು ನವರಾತ್ರಿಗೆ ತಯಾರಾಗುವ ಸರಿಯಾದ ವಿಧಾನ.
ಎರಡನೇ ದಿನ (ನವಿಲು ನೀಲಿ)
ಎರಡನೇ ದಿನ ಅಥವಾ ದ್ವಿತೀಯದಂದು ದುರ್ಗೆಯು ಬ್ರಹ್ಮಚಾರಿಣಿ ಅವತಾರ ಪಡೆಯುವಳು. ಬ್ರಹ್ಮಚಾರಿಣಿ ಅವತಾರದಲ್ಲಿ ದುರ್ಗೆಯು ಸಮೃದ್ಧಿ ಹಾಗೂ ಸಂತೋಷ ನೀಡುವಳು. ನವಿಲಿನ ನೀಲಿ ಬಣ್ಣವು ಈ ದಿನದ ಬಣ್ಣವಾಗಿದೆ. ನೀಲಿ ಬಣ್ಣವು ಶಾಂತಿಯ ಸಂಕೇತವಾದರೂ ಶಕ್ತಿಶಾಲಿ.
ಮೂರನೇ ದಿನ (ಹಳದಿ)
ಮೂರನೇ ಅಥವಾ ತೃತೀಯ ದಿನವು ದುರ್ಗೆಯನ್ನು ಚಂದ್ರಘಾತ ರೂಪದಲ್ಲಿ ಪೂಜಿಸಲಾಗುವುದು. ದುರ್ಗೆಯ ಹಣೆಯಲ್ಲಿ ಅರ್ಧ ಚಂದ್ರನ ಆಕೃತಿಯಿರುವುದು. ಇದು ಧೈರ್ಯ ಹಾಗೂ ಸೌಂದರ್ಯದ ಸಂಕೇತ. ಚಂದ್ರಘಾತ ದುಷ್ಟಶಕ್ತಿಗಳ ವಿರುದ್ಧ ಹಲವಾರು ಯುದ್ಧಗಳನ್ನು ಮಾಡಿರುವಾಕೆ. ಮೂರನೇ ದಿನದ ಬಣ್ಣ ಹಳದಿ. ಇದು ಉತ್ಸಾಹಭರಿತ ಬಣ್ಣ ಮತ್ತು ಪ್ರತಿಯೊಬ್ಬರ ಮನೋಸ್ಥಿತಿಯನ್ನು ಉತ್ತಮಪಡಿಸುವುದು.
ನಾಲ್ಕನೇ ದಿನ (ಹಸಿರು)
ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿ ದುರ್ಗೆಯು ಕುಸುಮಾಂದ ಅವತಾರವೆತ್ತುವಳು. ಈ ದಿನದ ಬಣ್ಣವು ಹಸಿರು. ಕುಸುಮಾಂದ ದೇವಿಯು ಈ ಭೂಮಿಯ ಸೃಷ್ಟಿಕೃರ್ತೆ ಎಂದು ಹೇಳಲಾಗುತ್ತದೆ. ಆಕೆ ನಗುವಿನಿಂದ ಈ ಭೂಮಿ ತುಂಬಾ ಹಚ್ಚಹಸಿರು ತುಂಬಿದಾಕೆ ಎಂದು ಹೇಳಲಾಗುತ್ತದೆ.
ಐದನೇ ದಿನ (ಕಂದು)
ಐದನೇ ದಿನ ಅಥವಾ ಪಂಚಮಿಯಂದು ದೇವಿಯು ಸ್ಕಂದ ಮಾತೆಯ ಅವತಾರವೆತ್ತುವಳು. ಈ ದಿನದಂದು ದೇವಿಯು ಕಾರ್ತಿಕ(ದೇವರು) ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬರುವಳು. ದುರ್ಬಲ ತಾಯಿಯು ತನ್ನ ಮಗನನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವ ಸಲುವಾಗಿ ಚಂಡಮಮಾರುತವಾಗಬಲ್ಲಲು ಎನ್ನುವುದು ಈ ಕಂದು ಬಣ್ಣದ ಪ್ರತೀಕ.
ಆರನೇ ದಿನ(ಕಿತ್ತಳೆ)
ಆರನೇ ದಿನವಾದ ಸಷ್ಠಿಯಂದು ದೇವಿ ದುರ್ಗೆಯು ಕಾತ್ಯಾಯಿನಿ ರೂಪ ಪಡೆದುಕೊಳ್ಳುವಳು. ಶ್ರೇಷ್ಠ ಸನ್ಯಾಸಿ ಕತಾನು ದುರ್ಗೆಯು ತನ್ನ ಮಗಳಾಗಿ ಬರಬೇಕೆಂದು ಆಕಾಂಕ್ಷೆಯೊಂದಿಗೆ ಘೋರ ತಪಸ್ಸು ಮಾಡುವನು. ಕತಾನ ತಪಸ್ಸಿಗೆ ಒಲಿದ ದುರ್ಗೆಯು ಆತನ ಮಗಳಾಗಿ ಬರುವಳು. ಈ ದಿನವು ಕಿತ್ತಳೆ ಬಣ್ಣದ್ದಾಗಿದ್ದು, ಇದು ಶ್ರೇಷ್ಠ ಸಾಹಸದ್ದಾಗಿದೆ.
ಏಳನೇ ದಿನ(ಬಿಳಿ)
ದೇವಿ ದುರ್ಗೆಯ ಕಾಳರಾತ್ರಿ ಅವತಾರವನ್ನು ಆರಾಧಿಸುವ ದಿನವೇ ಸಪ್ತಮಿ ಅಥವಾ ಏಳನೇ ದಿನ. ಇದು ದುರ್ಗೆಯ ತುಂಬಾ ಹಿಂಸಾರೂಪವಾಗಿದೆ. ಸಪ್ತಮಿಯಂದು ದೇವಿಯು ಬಿಳಿ ಬಣ್ಣದಲ್ಲಿ ಅವತಾರವೆತ್ತುವಳು. ಆದರೆ ಆಕೆಯ ಕಣ್ಣುಗಳು ಉಗ್ರತ್ವದಿಂದ ಕೆಂಪಾಗಿರುವುದು. ಬಿಳಿ ಬಣ್ಣವು ಪ್ರಾರ್ಥನೆ ಹಾಗೂ ಶಾಂತಿಯ ಸಂಕೇತ. ಎಲ್ಲಾ ರೀತಿಯ ಸಂಕಷ್ಟಗಳಿಂದ ದೇವಿಯು ಭಕ್ತರನ್ನು ಪಾರು ಮಾಡುವಳು ಎನ್ನುವುದು ಇದರ ಸೂಚಕ.
ಎಂಟನೇ ದಿನ(ಗುಲಾಬಿ)
ಗುಲಾಬಿಯು ಎಂಟನೇ ಅಥವಾ ಅಷ್ಟಮಿಯ ಬಣ್ಣವಾಗಿದೆ. ಈ ದಿನ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿಗಳನ್ನು ದೂರ ಮಾಡುವಳು. ಗುಲಾಬಿ ಬಣ್ಣವು ನಿರೀಕ್ಷೆ ಮತ್ತು ಹೊಸ ಆರಂಭದ ಸಂಕೇತ.
ಒಂಬತ್ತನೇ ದಿನ(ತಿಳಿ ನೀಲಿ)
ನವಮಿ ಅಥವಾ 9ನೇ ದಿನದಂದು ದೇವಿಯು ಸಿದ್ಧಿದಾತ್ರಿ ಅವತಾರದಲ್ಲಿರುವಳು. ಈ ದಿನ ಆಕೆಯ ಬಟ್ಟೆಯ ಬಣ್ಣವು ಆಕಾಶ ನೀಲಿಯಾಗಿರುವುದು. ಸಿದ್ಧಿದಾತ್ರಿ ರೂಪವು ಅತಿಮಾನುಷ ಶಮನಕಾರಿ ಗುಣ ಹೊಂದಿದೆ ಎಂದು ನಂಬಲಾಗಿದೆ. ತಿಳಿ ನೀಲಿ ಬಣ್ಣವು ಸ್ವಾಭಾವಿಕ ಸೌಂದರ್ಯದ ಪ್ರತೀಕ.