Just In
- 3 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 4 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 4 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 5 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮನವಮಿ 2022: ಮರ್ಯಾದಾ ಪುರುಷೋತ್ತಮ ರಾಮನ ಈ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಲೇಬೇಕು!
ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮ ಹಿಂದೂ ಮಹಾಕಾವ್ಯ ರಾಮಾಯಣದ ಕೇಂದ್ರ ಪಾತ್ರ. ಶ್ರೀರಾಮಚಂದ್ರನದ್ದು ದೇವತೆಯ ಪ್ರಮುಖ ಅವತಾರವೆಂದು ಪರಿಗಣಿಸಲಾಗಿದೆ. ರಾಮನನ್ನು ಪ್ರಬುದ್ಧ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ, ರಾಮನ ನೈತಿಕತೆ ಮತ್ತು ಮೌಲ್ಯಗಳಿಗೆ ಹೆಚ್ಚಿನ ಗೌರವವಿದೆ. ಅವರಿಗೆ "ಮರ್ಯಾದಾ ಪುರುಷೋತ್ತಮ" ಎಂಬ ಬಿರುದು ಕೂಡ ನೀಡಲಾಗಿದೆ ಅಂದರೆ ಪರಿಪೂರ್ಣ ವ್ಯಕ್ತಿ ಎಂದರ್ಥ.
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾದ ರಾಮನು ಬರೊಬ್ಬರಿ, 1.2 ಮಿಲಿಯನ್ ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಇಂದಿಗೂ ಹಿಂದೂ ಧರ್ಮದಲ್ಲಿ ಭಕ್ತರು ರಾಮ ಆದರ್ಶಗಳಲ್ಲಿ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ, ಅದನ್ನು ಪೂಜ್ಯನಿಯವಾಗಿ ಕಾಣುತ್ತಾರೆ.
ಹಾಗಿದ್ದರೆ ಶ್ರೀರಾಮಚಂದ್ರನ ಆದರ್ಶಗಳಲ್ಲಿ ಅತೀ ಹೆಚ್ಚು ಪ್ರಚಲಿತದಲ್ಲಿರುವ, ಹೆಚ್ಚು ಪೂಜ್ಯನಿಯವಾಗಿ ಕಾಣುವ ಆದರ್ಶಗಳು ಯಾವುವು ಮುಂದೆ ನೋಡೋಣ:
1. ರಾಮನ ಆದರ್ಶಗಳು
* ರಾಮನು ಎಂದಿಗೂ ಸುಳ್ಳನ್ನು ಮಾತನಾಡಲಿಲ್ಲ.
* ರಾಮನು ಎಂದಿಗೂ ಅಸಭ್ಯ (ದುರುಪಯೋಗ) ಭಾಷೆಯನ್ನು ಮಾತನಾಡಲಿಲ್ಲ.
* ರಾಮನು ಎಂದಿಗೂ ಅದೃಷ್ಟವನ್ನು ಒಳಗೊಂಡ ಆಟಗಳನ್ನು ಆಡಲಿಲ್ಲ.
2. ರಾಮನ ಬದುಕು ಕನ್ನಡಿಯಂತೆ
* ರಾಮನು ಇತರರಿಗೆ ಏನು ಕೊಟ್ಟರು ಎಂಬುದನ್ನು ಅವರು ಎಂದಿಗೂ ನೆನಪಿಸಿಕೊಳ್ಳಲಿಲ್ಲ.
* ರಾಮನು ತನ್ನ ಶ್ರೇಷ್ಠತೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ.
* ರಾಮನು ಆ ಒಳ್ಳೆಯ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದ.
3. ರಾಮ ಸದಾ ಹಿತಚಿಂತಕ
* ಯಾರಾದರೂ ರಾಮನನ್ನು ಟೀಕಿಸಲು ಬಂದರೆ ಅವನ ತಪ್ಪು ತಿಳುವಳಿಕೆಯನ್ನು ಅಳಿಸಲು ಅವನಿಗೆ ಮೃದುವಾಗಿ ಶಿಕ್ಷಣ ನೀಡುತ್ತಾನೆ.
* ರಾಮನು ತನ್ನ ಜೀವಮಾನದಲ್ಲಿ ಸೀತೆಯ ನಂತರ ಬೇರೆ ಯಾವ ಸ್ತ್ರೀಯರ ಬಗ್ಗೆಯೂ ಯೋಚಿಸಿರಲಿಲ್ಲ.
* ರಾಮನು ಸಾಮಾಜಿಕ ಮಾನದಂಡಗಳನ್ನು ಮೀರದೆ ಸಂತೋಷಪಡಿಸುವಲ್ಲಿ ತೊಡಗಿದ್ದರು.
4. ರಾಮ ಪರೋಪಕಾರಿ
* ರಾಮನು ಗಳಿಸಿದ ಹಣವನ್ನು ಎಂದಿಗೂ ವ್ಯರ್ಥ ಮಾಡಲಿಲ್ಲ, ಎಲ್ಲರಿಗೂ ಉಪಯುಕ್ತವಾದ ರೀತಿಯಲ್ಲಿ ಅವುಗಳನ್ನು ಖರ್ಚು ಮಾಡಿದ.
* ರಾಮನು ರಾಜನೆಂದು ಭಾವಿಸಿ, ಅವನು ತನ್ನ ಎಲ್ಲಾ ಆಧ್ಯಾತ್ಮಿಕ ಅಭ್ಯಾಸಗಳನ್ನು ಮಾಡಿದ ಉನ್ನತ ಸತ್ಯದ ಸಂಪೂರ್ಣ ಅರಿವನ್ನು ಹೊಂದಿದ್ದನು.
* ರಾಮನು ತನ್ನ ಜನರಿಗೆ ಮಾತ್ರವಲ್ಲ, ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳಿಗೆ ಹಿತಚಿಂತಕನಾಗಿದ್ದನು.
5. ರಾಮನಿಗೆ ರಾಮನೇ ಸಾಟಿ
* ರಾಮನು ನೋಟವು ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಅವನು ಇತರರ ಮುಂದೆ ತನ್ನನ್ನು ತಾನು ಚೆನ್ನಾಗಿ ಪ್ರಸ್ತುತಪಡಿಸಿದ್ದ, ಸದಾ ಶಾಂತಚಿತ್ತವಾಗಿರುತ್ತಿದ್ದ.
* ತನ್ನ ಪಾದಕ್ಕೆ ಶರಣಾದ ಯಾರನ್ನಾದರೂ ರಕ್ಷಿಸುವುದು ರಾಮನ ಜೀವನದ ತತ್ವವಾಗಿತ್ತು. ಆ ವ್ಯಕ್ತಿ ತನಗೆ ಎಷ್ಟೇ ಹಾನಿ ಮಾಡಿದರೂ ಪರವಾಗಿಲ್ಲ.
* ರಾಮನು ತನ್ನಲ್ಲಿದ್ದದ್ದರಲ್ಲಿ ತೃಪ್ತನಾಗಿದ್ದನು, ಸ್ವಲ್ಪ ಕಡಿಮೆಯಾದರೂ ಅವನಿಗೆ ತೊಂದರೆಯಾಗುತ್ತಿರಲಿಲ್ಲ.