Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ರಕ್ಷಾ ಬಂಧನ 2019: ಹಬ್ಬದ ದಿನಾಂಕ, ಸಮಯ ಮತ್ತು ಮಹತ್ವ
ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ ಈ ಬಾರಿ ಆಗಸ್ಟ್ 15 ಸ್ವಾತಂತ್ರ ದಿನದಂದೇ ಬಂದಿರುವುದು ವಿಶೇಷ. ಶ್ರಾವಣ ಮಾಸದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾಬಂಧನವನ್ನು ಪೂರ್ಣ ಚಂದ್ರ ಮೂಡುವ ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ.

ಈ ಹಿನ್ನೆಲೆ ರಕ್ಷಾಬಂಧನದ ಮಹತ್ವ, ಇದರ ಹಿಂದಿನ ಪೌರಾಣಿಕ ಕಥನಗಳು, ರಕ್ಷಾಬಂಧನ ಕಟ್ಟಲು ಒಳ್ಳೆಯ ಮುಹೂರ್ತ, ರಾಖಿ ಕಟ್ಟುವ ವೇಳೆ ಶ್ಲೋಕ ಕುರಿತ ಮಾಹಿತಿ ಈ ಲೇಖನದಲ್ಲಿದೆ.
ರಕ್ಷಾಬಂಧನದ ಮಹತ್ವ
ಪರಸ್ಪರ ಭ್ರಾತೃತ್ವ ಭಾವನೆಯಿಂದ ಆಚರಿಸುವ ಈ ಹಬ್ಬದಲ್ಲಿ ತಂಗಿ ಅಣ್ಣನ ಹಣೆಗೆ ಕುಂಕುಮವಿಟ್ಟು ರಕ್ಷಾಬಂಧನವನ್ನು ಮಣಿಕಟ್ಟಿಗೆ ಕಟ್ಟಿ, ಸಿಹಿ ತಿನಿಸಿ ಆರತಿ ಬೆಳಗಿ ಆಶೀರ್ವಾದ ಪಡೆಯುತ್ತಾಳೆ. ಸಮಾಜದ ಯಾವುದೇ ದುಷ್ಟ ಶಕ್ತಿಯ ಕಣ್ಣು ಸಹೋದರಿಯ ಮೇಲೆ ಬೀಳದಂತೆ ರಕ್ಷಣೆ ಮಾಡುವ ಹೊಣೆ ಸಹೋದರನ ಮೇಲಿದೆ ಎನ್ನುವ ಸಾಂಕೇತಿಕ ರೂಪ ಇದಾಗಿದ್ದು, ನಂತರ ಅಣ್ಣ ತಂಗಿಗೆ ಮೆಚ್ಚಿನ ಉಡುಗೊರೆಯನ್ನು ನೀಡುವ ಪರಿಪಾಠವಿದೆ.
2019 ರಕ್ಷಾಬಂಧನ ಕಟ್ಟಲು ಮುಹೂರ್ತ
ಈ ಸಾಲಿನ ರಕ್ಷಾಬಂಧನ ದೇಶಭಕ್ತಿ ಸಾರುವ ಸ್ವಾತಂತ್ರ ದಿನ ಆಗಸ್ಟ್ 15ರಂದು ಆಚರಿಸಲಾಗುತ್ತಿದೆ. ಪೂರ್ಣಿಮಾ ತಿಥಿ ಆಗಸ್ಟ್ 14ರ ತಡರಾತ್ರಿ 3.45ಕ್ಕೆ ಆರಂಭವಾಗಿ 5.59ಕ್ಕೆ ಅಂತ್ಯವಾಗಲಿದೆ. ರಕ್ಷಾಬಂಧನ ಕಟ್ಟಲು ಪವಿತ್ರ ಸಮಯ ಬೆಳಗ್ಗೆ 6.07ರಿಂದ ಸಂಜೆ 5.59ರವರೆಗೆ, ಮಧ್ಯಾಹ್ನದ ಮುಹೂರ್ತ 1.48ರಿಂದ 4.44ರವರೆಗೆ, ಪ್ರದೋಷ ಸಮಯ 6.55ರಿಂದ 9.10ರವರೆಗೆ ಒಳ್ಳೆಯ ಮೂಹೂರ್ತವಿದೆ.



Click it and Unblock the Notifications
