Just In
- 52 min ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 3 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 11 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 11 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Automobiles ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- News ಡಿ ಕೆ ಶಿವಕುಮಾರ್ 9 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಆಸ್ತಿ ಬರೆಸಿಕೊಂಡವ್ರೆ ; ಹಿಂದಿನ ಸತ್ಯ ಬಿಚ್ಚಿಟ್ಟ ದೇವೇಗೌಡ್ರು
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Movies "ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಾ ಬಂಧನ 2019: ಹಬ್ಬದ ದಿನಾಂಕ, ಸಮಯ ಮತ್ತು ಮಹತ್ವ
ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ ಈ ಬಾರಿ ಆಗಸ್ಟ್ 15 ಸ್ವಾತಂತ್ರ ದಿನದಂದೇ ಬಂದಿರುವುದು ವಿಶೇಷ. ಶ್ರಾವಣ ಮಾಸದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾಬಂಧನವನ್ನು ಪೂರ್ಣ ಚಂದ್ರ ಮೂಡುವ ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ.
ಈ ಹಿನ್ನೆಲೆ ರಕ್ಷಾಬಂಧನದ ಮಹತ್ವ, ಇದರ ಹಿಂದಿನ ಪೌರಾಣಿಕ ಕಥನಗಳು, ರಕ್ಷಾಬಂಧನ ಕಟ್ಟಲು ಒಳ್ಳೆಯ ಮುಹೂರ್ತ, ರಾಖಿ ಕಟ್ಟುವ ವೇಳೆ ಶ್ಲೋಕ ಕುರಿತ ಮಾಹಿತಿ ಈ ಲೇಖನದಲ್ಲಿದೆ.
ರಕ್ಷಾಬಂಧನದ ಮಹತ್ವ
ಪರಸ್ಪರ ಭ್ರಾತೃತ್ವ ಭಾವನೆಯಿಂದ ಆಚರಿಸುವ ಈ ಹಬ್ಬದಲ್ಲಿ ತಂಗಿ ಅಣ್ಣನ ಹಣೆಗೆ ಕುಂಕುಮವಿಟ್ಟು ರಕ್ಷಾಬಂಧನವನ್ನು ಮಣಿಕಟ್ಟಿಗೆ ಕಟ್ಟಿ, ಸಿಹಿ ತಿನಿಸಿ ಆರತಿ ಬೆಳಗಿ ಆಶೀರ್ವಾದ ಪಡೆಯುತ್ತಾಳೆ. ಸಮಾಜದ ಯಾವುದೇ ದುಷ್ಟ ಶಕ್ತಿಯ ಕಣ್ಣು ಸಹೋದರಿಯ ಮೇಲೆ ಬೀಳದಂತೆ ರಕ್ಷಣೆ ಮಾಡುವ ಹೊಣೆ ಸಹೋದರನ ಮೇಲಿದೆ ಎನ್ನುವ ಸಾಂಕೇತಿಕ ರೂಪ ಇದಾಗಿದ್ದು, ನಂತರ ಅಣ್ಣ ತಂಗಿಗೆ ಮೆಚ್ಚಿನ ಉಡುಗೊರೆಯನ್ನು ನೀಡುವ ಪರಿಪಾಠವಿದೆ.
2019 ರಕ್ಷಾಬಂಧನ ಕಟ್ಟಲು ಮುಹೂರ್ತ
ಈ ಸಾಲಿನ ರಕ್ಷಾಬಂಧನ ದೇಶಭಕ್ತಿ ಸಾರುವ ಸ್ವಾತಂತ್ರ ದಿನ ಆಗಸ್ಟ್ 15ರಂದು ಆಚರಿಸಲಾಗುತ್ತಿದೆ. ಪೂರ್ಣಿಮಾ ತಿಥಿ ಆಗಸ್ಟ್ 14ರ ತಡರಾತ್ರಿ 3.45ಕ್ಕೆ ಆರಂಭವಾಗಿ 5.59ಕ್ಕೆ ಅಂತ್ಯವಾಗಲಿದೆ. ರಕ್ಷಾಬಂಧನ ಕಟ್ಟಲು ಪವಿತ್ರ ಸಮಯ ಬೆಳಗ್ಗೆ 6.07ರಿಂದ ಸಂಜೆ 5.59ರವರೆಗೆ, ಮಧ್ಯಾಹ್ನದ ಮುಹೂರ್ತ 1.48ರಿಂದ 4.44ರವರೆಗೆ, ಪ್ರದೋಷ ಸಮಯ 6.55ರಿಂದ 9.10ರವರೆಗೆ ಒಳ್ಳೆಯ ಮೂಹೂರ್ತವಿದೆ.