Just In
- 18 min ago 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- 1 hr ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 2 hrs ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 4 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
Don't Miss
- News EPFO: ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ, 1 ಲಕ್ಷದವರೆಗೂ ಹಣ ಬಿಡಿಸಿಕೊಳ್ಳಬಹುದು!
- Movies ತಾರಕ್ ಪೊನ್ನಪ್ಪ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಿಂದ ಹೊರಬಂದಿದ್ದೇಕೆ?
- Automobiles ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿತೃ ಪಕ್ಷ 2022: ಶ್ರದ್ಧಾ ಪೂಜೆ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ
ಬಾಧ್ರಪದ ಮಾಸದಲ್ಲಿ ಬರುವ ಪಿತೃಪಕ್ಷ ನಮ್ಮ ಪೂರ್ವಜನರಿಗೆ, ದೈವಾದೀನರಾದವರಿಗೆ ವಿಶೇಷ ಪೂಜೆ ಸಲ್ಲಿಸುವ ಸಮಯ. ಈ ಅವಧಿಯಲ್ಲಿ ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿಯನ್ನು ನೀಡಲು ಶ್ರಾದ್ಧವನ್ನು ಮತ್ತು ತರ್ಪಣವನ್ನು ಅರ್ಪಿಸಲಾಗುತ್ತದೆ. ಈ ಸಮಯದಲ್ಲಿ ವಿಧಿ-ವಿಧಾನದ ಪ್ರಕಾರ ಪೂಜೆ ಸಲ್ಲಿಸಿದರೆ ಮೃತರ ಆತ್ಮ ತೃಪ್ತವಾಗುತ್ತದೆ ಎಂಬ ನಂಬಿಕೆ ಇದೆ.
ಭಾದ್ರಪದ
ಪೂರ್ಣಿಮೆಯಿಂದ
ಅಶ್ವಿನಿ
ಮಾಸದ
ಕೃಷ್ಣ
ಪಕ್ಷ
ಅವಾಮಾಸ್ಯೆವರೆಗಿನ
ಹದಿನಾರು
ದಿನಗಳನ್ನು
ಪಿತೃ
ಪಕ್ಷ
ಎಂದು
ಕರೆಯಲಾಗುತ್ತದೆ.
ಅಂದರೆ
10
ಸೆಪ್ಟೆಂಬರ್
2022ರಿಂದ
ಸೆಪ್ಟೆಂಬರ್
25ರವರೆಗೆ
ಪಿತೃಪಕ್ಷ
ಇರುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿಂಡದಾನ ಪೂಜೆಯಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಪೂರ್ವಜರ ಕೋಪ ಕಾರಣವಾಗುತ್ತದೆ, ಇದು ನಮ್ಮ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತದೆ ಅಥವಾ ಪಿತೃ ದೋಷ ಸಮಸ್ಯೆಗಳಂಥ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಪಿತೃ ಪಕ್ಷ ಪೂಜೆ ಮಾಡುವ ವೇಳೆ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು, ಯಾವುದನ್ನು ಮಾಡಲೇಬೇಕು ಎಂಬುದರ ಬಗ್ಗೆ ನಾವಿಂದು ಮಾಹಿತಿ ನೀಡುತ್ತೇವೆ:
ಪಿತೃ ಪಕ್ಷದಲ್ಲಿ ಮಾಡಬೇಕಾದ ಕೆಲಸಗಳು
* ಶ್ರಾದ್ಧವನ್ನು ನಿರ್ವಹಿಸುವ ವ್ಯಕ್ತಿಯು ಊಟದ ಸಮಯದಲ್ಲಿ ಕೇವಲ ಒಂದು ಬಾರಿ ಆಹಾರವನ್ನು ನೀಡಬೇಕಾಗುತ್ತದೆ.
* ಹಸುಗಳು, ನಾಯಿಗಳು, ಇರುವೆಗಳು ಅಥವಾ ಯಾವುದೇ ಇತರ ಜೀವಿಗಳಿಗೆ ಆಹಾರವನ್ನು ನೀಡಬಹುದು.
* ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಪ್ರತಿಯೊಂದು ಜೀವಿಯನ್ನೂ ಗೌರವಿಸಬೇಕು.
* ಶ್ರಾದ್ಧವನ್ನು ಮಾಡುವ ವ್ಯಕ್ತಿಯು ಧೋತಿಯನ್ನು ಧರಿಸಬೇಕು ಮತ್ತು ಆಚರಣೆಗಳನ್ನು ಮಾಡುವಾಗ ಬರಿ ಎದೆಯಲ್ಲೇ ಇರಬೇಕು.
* ಶ್ರಾದ್ಧವನ್ನು ಸಾಮಾನ್ಯವಾಗಿ ಗಯಾ ಮತ್ತು ಪ್ರಯಾಗ್ನಂತಹ ಪವಿತ್ರ ಸ್ಥಳಗಳಲ್ಲಿ ನಡೆಸಲಾಗುತ್ತದೆ, ಆದರೆ ಸಾಂಕ್ರಾಮಿಕ ಕೋವಿಡ್ ಇರುವ ಹಿನ್ನೆಲೆ ಪ್ರಯಾಣಿಸಲು ಸಾಧ್ಯವಿಲ್ಲದ ಕಾರಣ, ಮನೆಯಲ್ಲಿಯೇ ಆಚರಣೆಗಳನ್ನು ಮಾಡಬೇಕು.
* ಹಿರಿಯರಿಗೆ ಅರ್ಪಣೆಗಾಗಿ ಮಣ್ಣಿನ ಪಾತ್ರೆಗಳು ಅಥವಾ ಎಲೆಗಳನ್ನು ಬಳಸಿ.
* ಅಕ್ಕಿ ಮತ್ತು ಎಳ್ಳು ಇರುವ ಪಿಂಡ ದಾನ ಅತ್ಯಗತ್ಯ. ಇವುಗಳನ್ನು ಕಾಗೆಗಳಿಗೆ ಅರ್ಪಿಸಬೇಕು, ಏಕೆಂದರೆ ಅವುಗಳು ಯಮ, ಸಾವಿನ ದೇವರು ಅಥವಾ ಸತ್ತ ಪೂರ್ವಜರ ಸಂದೇಶವಾಹಕರನ್ನು ಪ್ರತಿನಿಧಿಸುತ್ತವೆ.
ಪಿತೃ ಪಕ್ಷದಲ್ಲಿ ಮಾಡಬಾರದ ಕೆಲಸಗಳು
* ಪಿತೃಪಕ್ಷದಲ್ಲಿ ಭೋಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಮಾಂಸಾಹಾರಿ ಆಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
* ಪೂರ್ವಜರಿಗೆ ಮಾಂಸವನ್ನು ಆಹಾರವಾಗಿ ಅರ್ಪಿಸಬೇಡಿ.
* ಈರುಳ್ಳಿ, ಬೆಳ್ಳುಳ್ಳಿ, ಚಾನಾ, ಜೀರಾ, ಕಪ್ಪು ಉಪ್ಪು, ಕಪ್ಪು ಸಾಸಿವೆ, ಸೌತೆಕಾಯಿಗಳು, ಬದನೆಕಾಯಿಗಳು ಮತ್ತು ಮಸೂರ್ ದಾಲ್, ಕಪ್ಪು ಉರ್ದದಂತಹ ಮಸೂರಗಳನ್ನು 16 ದಿನಗಳಲ್ಲಿ ಸೇವಿಸಬಾರದು.
* ಪಾನ್, ಸುಪಾರಿ, ತಂಬಾಕು ಅಥವಾ ಮದ್ಯ ಸೇವಿಸಬಾರದು.
* ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.
* ಪೂಜೆಯ ವೇಳೆ ಗಂಟೆ ಬಾರಿಸಬೇಡಿ.
* ಈ ಹಂತದಲ್ಲಿ ಯಾವುದೇ ಹೊಸ ವಾಹನ/ಮನೆ ಅಥವಾ ಆರಾಮ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸಬಾರದು.
* ಶ್ರಾದ್ಧ ಮಾಡುವ ವ್ಯಕ್ತಿಯು ತನ್ನ ಕೂದಲನ್ನು ಕತ್ತರಿಸಬಾರದು, ಗಡ್ಡವನ್ನು ಬೋಳಿಸಿಕೊಳ್ಳಬಾರದು ಮತ್ತು ಉಗುರುಗಳನ್ನು ಕತ್ತರಿಸಬಾರದು. ಇವುಗಳಲ್ಲಿ ಯಾವುದನ್ನಾದರೂ ಮಾಡಬೇಕಾದರೆ, ಪಿತೃ ಪಕ್ಷ ಪ್ರಾರಂಭವಾಗುವ ಒಂದು ದಿನ ಮೊದಲು ಇದನ್ನು ಮಾಡಬಹುದು.
* ಪೂರ್ವಜರು ಯಾವುದೇ ರೂಪದಲ್ಲಿ ಭೇಟಿ ನೀಡಬಹುದು. ಆದ್ದರಿಂದ ಯಾವುದೇ ಜೀವಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು.
* ಈ ಅವಧಿಯಲ್ಲಿ ಕಬ್ಬಿಣದ ಪಾತ್ರೆಗಳನ್ನು ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ಬಳಸಬಾರದು. ಬದಲಾಗಿ, ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಬಳಸಬಹುದು.
* ವಾದಗಳು ಅಥವಾ ಜಗಳಗಳನ್ನು ಮಾಡುವುದನ್ನು ತಪ್ಪಿಸಬೇಕು ಮತ್ತು ಸುಳ್ಳನ್ನು ಹೇಳಬಾರದು. ಇದು ಪಶ್ಚಾತ್ತಾಪದ ಅವಧಿ ಆದ್ದರಿಂದ, ಜನರು ತಮ್ಮ ಮಾತುಗಳು ಅಥವಾ ಕ್ರಿಯೆಗಳಿಂದ ಯಾರನ್ನೂ ನೋಯಿಸುವುದನ್ನು ತಡೆಯಬೇಕು.