Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನವರಾತ್ರಿ: ಮನೆಯಲ್ಲಿ ಅಖಂಡ ಜ್ಯೋತಿ ಬೆಳಗಲು ಪಾಲಿಸಬೇಕಾದ ನಿಯಮಗಳಿವು
ಮನೆಯಲ್ಲಿ ದೇವರ ದೀಪ ಇಡಬೇಕು, ಅದುವೇ ಮನೆಗೆ ಐಶ್ವರ್ಯ ಎಂದು ಹೇಳಲಾಗುವುದು, ಆದ್ದರಿಂದ ಬೆಳಗ್ಗೆ-ಸಂಜೆ ಮನೆಗಳಲ್ಲಿ ದೇವರಿಗೆ ದೀಪ ಹಚ್ಚಿಡಲಾಗುವುದು. ದೇವಾಲಯಗಳಲ್ಲಿ ದೀಪವನ್ನು ಪ್ರತಿದಿನ ದೀಪವನ್ನು ಹಚ್ಚಲಾಗುವುದು. ಆ ದೀಪದ ಪ್ರಭೆ ಮನೆಯೊಳಗೆ, ದೇವಾಲಯದಲ್ಲಿ ಒಂದು ಧನಾತ್ಮಕ ಶಕ್ತಿ ಪಸರಿಸುವುದು. ಆದ್ದರಿಂದ ದೇವರಿಗೆ ದೀಪ ಬೆಳಗಲಾಗುವುದು.
ದೀಪ ಕತ್ತಲನ್ನು ಹೋಗಲಾಡಿಸುತ್ತೆ. ಇದು ಬದುಕಿನಲ್ಲಿರುವ ಕತ್ತಲು ಹೋಗಲಾಡಿಸುತ್ತೆ, ದೀಪ ಶುದ್ಧತೆ, ಅದೃಷ್ಟದ ಪ್ರತೀಕವಾಗಿದೆ. ಇದೇ ದೀಪವನ್ನು ಕೆಡದಂತೆ ಕೆಲವು ದಿನಗಳವರೆ ಬೆಳಗಿದರೆ ಅದನ್ನು ಅಖಂಡ ಜ್ಯೋತಿ ಎಂದು ಹೇಳಲಾಗುವುದು. ನವರಾತ್ರಿಯಲ್ಲಿ ಈ ರೀತಿಯ ಅಖಂಡ ಜ್ಯೋತಿ ಬೆಳಗಲಾಗುವುದು. ಅಖಂಡ ಜ್ಯೋತಿ ಹಚ್ಚಿ ದುರ್ಗೆಯನ್ನು ಪೂಜಿಸಲಾಗುವುದು.
ನವರಾತ್ರಿ ಪ್ರಾರಂಭದ ದಿನದಂದು ಬೆಳಗುವ ಈ ಜ್ಯೋತಿ 9 ದಿನಗಳವರೆಗೆ ನಂದಬಾರದು. ನಿರಂತರವಾಗಿ ಉರಿಯುತ್ತಲೇ ಇರಬೇಕು. ಗಾಳಿ ಬೀಸಿದಾಗ ಕೂಡ ಆ ದೀಪಾ ಕೆಡದಂತೆ ನೋಡಿಕೊಳ್ಳಬೇಕು. ಅಖಂಡ ಜ್ಯೋತಿಯನ್ನು ಬೆಳಗುವಾಗ ಪಾಲಿಸಬೇಕಾದ ನಿಯಮಗಳು ಹಾಗೂ ದೀಪ ಆರಿ ಹೋಗದಂತೆ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ:

ನವರಾತ್ರಿ ಅಖಂಡ ಜ್ಯೋತಿ ನಿಯಮ
* ದೀಪ ಬೆಳಗಲು ಕಂಚು, ಬೆಳ್ಳಿ ಅಥವಾ ಮಣ್ಣಿನ ದೀಪ ಬಳಸಿ.
* ಮಣ್ಣಿನ ದೀಪ ಬಳಸುವುದಾದರೆ ಮಣ್ಣಿನ ದೀಪವನ್ನು ನೀರಿನಲ್ಲಿ ಒಂದು ದಿನ ನೆನೆ ಹಾಕಿ ನಂತರ ಬಳಸಿ, ಇದರಿಂದ ದೀಪ ಎಣ್ಣೆ ತುಂಬಾ ಹೀರಿಕೊಳ್ಳುವುದಿಲ್ಲ. * ಅಕ್ಕಿ ಹಿಟ್ಟಿನಿಂದ ಅಷ್ಟದಳ ಮಾಡಿ.
* ಅದರೊಳಗೆ ದೀಪವನ್ನು ಇಡಿ.
* ದೊಡ್ಡ ಬತ್ತಿಯನ್ನು ತಯಾರಿಸಿ ಇಡಿ.
* ದೀಪಕ್ಕೆ ಸಾಸಿವೆಯೆಣ್ಣೆ, ಎಳ್ಳೆಣ್ಣೆ ಅಥವಾ ತುಪ್ಪ ಬಳಸಿ.
* ಗಾಳಿ ತುಂಬಾ ಬೀಸುವ ಕಡೆ ದೀಪವನ್ನು ಇಡಬೇಡಿ. ಏಕೆಂದರೆ ಇದ್ದಕ್ಕಿದ್ದಂತೆ ಗಾಳಿ ಬೀಸಿ ದೀಪ ಆರಿ ಹೋಗಬಾರದು.

ದೀಪ ಆರಿ ಹೋಗದಿರಲು ಟಿಪ್ಸ್
* ಅದರ ಗ್ಲಾಸ್ ಸಿಲಿಂಡರ್ ಇಡಿ, ಇದರಿಂದ ಗಾಳಿಯಿಂದ ದೀಪ ಆರುವುದನ್ನು ತಪ್ಪಿಸಬಹುದು.
* ದೀಪಕ್ಕೆ ಗುಣಮಟ್ಟದ ಎಣ್ಣೆ ಹಾಕಿ.
* ಇನ್ನು ದೀಪಕ್ಕೆ ಎಣ್ಣೆ ಹಾಕುವಾಗ ಬತ್ತಿಯ ತುದಿ ಮುಳುಗುವ ರೀತಿಯಲ್ಲಿ ಹಾಕಬೇಡಿ.
* ಒಂದು ವೇಳೆ ಬತ್ತಿ ಮುಗಿಯುತ್ತಾ ಬಂದರೆ ಅದೇ ಬತ್ತಿಗೆ ಬತ್ತಿ ಹಿಡಿದು ದೀಪ ಹಚ್ಚಿಡಿ. ಯಾವುದೇ ಕಾರಣಕ್ಕೆ ದೀಪ ಆರಿ ಹೋಗಬಾರದು.
* ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದು ಆರಿ ಹೋಗದಿರಲು ಗಮನಿಸುತ್ತಲೇ ಇರಬೇಕು.

ಅಖಂಡ ಜ್ಯೋತಿಯ ಪ್ರಾಮುಖ್ಯತೆ
ಭಕ್ತರು ದುರ್ಗೆಗೆ ಅಖಂಡ ಜ್ಯೋತಿ ಹಚ್ಚಿ ಪ್ರಾರ್ಥಿಸುತ್ತಾರೆ. ಈ ದೀಪ ಜ್ಞಾನ, ಶುದ್ಧತೆ, ಅದೃಷ್ಟ, ಸಂಪತ್ತು ಇವುಗಳ ಸಂಕೇತವಾಗಿದೆ. ಈ ದೀಪ ಕತ್ತಲು ನೀಗುವುದರಿಂದ ... ಈ ಜ್ಯೋತಿಯಂತೆಯೇ ಬದುಕಿನಲ್ಲಿಯೂ ಒಳ್ಳೆಯದಾಗುವುದು. ಆ ದೇವಿ ಸಂತೋಷ, ಆರೋಗ್ಯ, ಐಶ್ವರ್ಯ ಕರುಣಿಸುತ್ತಾಳೆ. ಹೀಗಾಗಿ ದೇವಿಗೆ ಅಖಂಡ ಜ್ಯೋತಿ ಬೆಳಗಿ ಪೂಜೆ ಮಾಡಲಾಗುವುದು.



Click it and Unblock the Notifications