Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ: ಮನೆಯಲ್ಲಿ ಅಖಂಡ ಜ್ಯೋತಿ ಬೆಳಗಲು ಪಾಲಿಸಬೇಕಾದ ನಿಯಮಗಳಿವು
ಮನೆಯಲ್ಲಿ ದೇವರ ದೀಪ ಇಡಬೇಕು, ಅದುವೇ ಮನೆಗೆ ಐಶ್ವರ್ಯ ಎಂದು ಹೇಳಲಾಗುವುದು, ಆದ್ದರಿಂದ ಬೆಳಗ್ಗೆ-ಸಂಜೆ ಮನೆಗಳಲ್ಲಿ ದೇವರಿಗೆ ದೀಪ ಹಚ್ಚಿಡಲಾಗುವುದು. ದೇವಾಲಯಗಳಲ್ಲಿ ದೀಪವನ್ನು ಪ್ರತಿದಿನ ದೀಪವನ್ನು ಹಚ್ಚಲಾಗುವುದು. ಆ ದೀಪದ ಪ್ರಭೆ ಮನೆಯೊಳಗೆ, ದೇವಾಲಯದಲ್ಲಿ ಒಂದು ಧನಾತ್ಮಕ ಶಕ್ತಿ ಪಸರಿಸುವುದು. ಆದ್ದರಿಂದ ದೇವರಿಗೆ ದೀಪ ಬೆಳಗಲಾಗುವುದು.
ದೀಪ ಕತ್ತಲನ್ನು ಹೋಗಲಾಡಿಸುತ್ತೆ. ಇದು ಬದುಕಿನಲ್ಲಿರುವ ಕತ್ತಲು ಹೋಗಲಾಡಿಸುತ್ತೆ, ದೀಪ ಶುದ್ಧತೆ, ಅದೃಷ್ಟದ ಪ್ರತೀಕವಾಗಿದೆ. ಇದೇ ದೀಪವನ್ನು ಕೆಡದಂತೆ ಕೆಲವು ದಿನಗಳವರೆ ಬೆಳಗಿದರೆ ಅದನ್ನು ಅಖಂಡ ಜ್ಯೋತಿ ಎಂದು ಹೇಳಲಾಗುವುದು. ನವರಾತ್ರಿಯಲ್ಲಿ ಈ ರೀತಿಯ ಅಖಂಡ ಜ್ಯೋತಿ ಬೆಳಗಲಾಗುವುದು. ಅಖಂಡ ಜ್ಯೋತಿ ಹಚ್ಚಿ ದುರ್ಗೆಯನ್ನು ಪೂಜಿಸಲಾಗುವುದು.
ನವರಾತ್ರಿ ಪ್ರಾರಂಭದ ದಿನದಂದು ಬೆಳಗುವ ಈ ಜ್ಯೋತಿ 9 ದಿನಗಳವರೆಗೆ ನಂದಬಾರದು. ನಿರಂತರವಾಗಿ ಉರಿಯುತ್ತಲೇ ಇರಬೇಕು. ಗಾಳಿ ಬೀಸಿದಾಗ ಕೂಡ ಆ ದೀಪಾ ಕೆಡದಂತೆ ನೋಡಿಕೊಳ್ಳಬೇಕು. ಅಖಂಡ ಜ್ಯೋತಿಯನ್ನು ಬೆಳಗುವಾಗ ಪಾಲಿಸಬೇಕಾದ ನಿಯಮಗಳು ಹಾಗೂ ದೀಪ ಆರಿ ಹೋಗದಂತೆ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ:
ನವರಾತ್ರಿ ಅಖಂಡ ಜ್ಯೋತಿ ನಿಯಮ
* ದೀಪ ಬೆಳಗಲು ಕಂಚು, ಬೆಳ್ಳಿ ಅಥವಾ ಮಣ್ಣಿನ ದೀಪ ಬಳಸಿ.
* ಮಣ್ಣಿನ ದೀಪ ಬಳಸುವುದಾದರೆ ಮಣ್ಣಿನ ದೀಪವನ್ನು ನೀರಿನಲ್ಲಿ ಒಂದು ದಿನ ನೆನೆ ಹಾಕಿ ನಂತರ ಬಳಸಿ, ಇದರಿಂದ ದೀಪ ಎಣ್ಣೆ ತುಂಬಾ ಹೀರಿಕೊಳ್ಳುವುದಿಲ್ಲ. * ಅಕ್ಕಿ ಹಿಟ್ಟಿನಿಂದ ಅಷ್ಟದಳ ಮಾಡಿ.
* ಅದರೊಳಗೆ ದೀಪವನ್ನು ಇಡಿ.
* ದೊಡ್ಡ ಬತ್ತಿಯನ್ನು ತಯಾರಿಸಿ ಇಡಿ.
* ದೀಪಕ್ಕೆ ಸಾಸಿವೆಯೆಣ್ಣೆ, ಎಳ್ಳೆಣ್ಣೆ ಅಥವಾ ತುಪ್ಪ ಬಳಸಿ.
* ಗಾಳಿ ತುಂಬಾ ಬೀಸುವ ಕಡೆ ದೀಪವನ್ನು ಇಡಬೇಡಿ. ಏಕೆಂದರೆ ಇದ್ದಕ್ಕಿದ್ದಂತೆ ಗಾಳಿ ಬೀಸಿ ದೀಪ ಆರಿ ಹೋಗಬಾರದು.
ದೀಪ ಆರಿ ಹೋಗದಿರಲು ಟಿಪ್ಸ್
* ಅದರ ಗ್ಲಾಸ್ ಸಿಲಿಂಡರ್ ಇಡಿ, ಇದರಿಂದ ಗಾಳಿಯಿಂದ ದೀಪ ಆರುವುದನ್ನು ತಪ್ಪಿಸಬಹುದು.
* ದೀಪಕ್ಕೆ ಗುಣಮಟ್ಟದ ಎಣ್ಣೆ ಹಾಕಿ.
* ಇನ್ನು ದೀಪಕ್ಕೆ ಎಣ್ಣೆ ಹಾಕುವಾಗ ಬತ್ತಿಯ ತುದಿ ಮುಳುಗುವ ರೀತಿಯಲ್ಲಿ ಹಾಕಬೇಡಿ.
* ಒಂದು ವೇಳೆ ಬತ್ತಿ ಮುಗಿಯುತ್ತಾ ಬಂದರೆ ಅದೇ ಬತ್ತಿಗೆ ಬತ್ತಿ ಹಿಡಿದು ದೀಪ ಹಚ್ಚಿಡಿ. ಯಾವುದೇ ಕಾರಣಕ್ಕೆ ದೀಪ ಆರಿ ಹೋಗಬಾರದು.
* ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದು ಆರಿ ಹೋಗದಿರಲು ಗಮನಿಸುತ್ತಲೇ ಇರಬೇಕು.
ಅಖಂಡ ಜ್ಯೋತಿಯ ಪ್ರಾಮುಖ್ಯತೆ
ಭಕ್ತರು ದುರ್ಗೆಗೆ ಅಖಂಡ ಜ್ಯೋತಿ ಹಚ್ಚಿ ಪ್ರಾರ್ಥಿಸುತ್ತಾರೆ. ಈ ದೀಪ ಜ್ಞಾನ, ಶುದ್ಧತೆ, ಅದೃಷ್ಟ, ಸಂಪತ್ತು ಇವುಗಳ ಸಂಕೇತವಾಗಿದೆ. ಈ ದೀಪ ಕತ್ತಲು ನೀಗುವುದರಿಂದ ... ಈ ಜ್ಯೋತಿಯಂತೆಯೇ ಬದುಕಿನಲ್ಲಿಯೂ ಒಳ್ಳೆಯದಾಗುವುದು. ಆ ದೇವಿ ಸಂತೋಷ, ಆರೋಗ್ಯ, ಐಶ್ವರ್ಯ ಕರುಣಿಸುತ್ತಾಳೆ. ಹೀಗಾಗಿ ದೇವಿಗೆ ಅಖಂಡ ಜ್ಯೋತಿ ಬೆಳಗಿ ಪೂಜೆ ಮಾಡಲಾಗುವುದು.