Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಫೆ.27ಕ್ಕೆ ಮಾಘ ಪೂರ್ಣಿಮೆ: ತುಂಬಾ ಶ್ರೇಷ್ಠ ಎಂದು ಹೇಳುವ ಈ ದಿನ ಮಾಘ ಸ್ನಾನದ ಮಹತ್ವವೇನು?
ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡಿದರೆ ಪಾಪಕರ್ಮಗಳು ನಿವಾರಣೆಯಾಗುವುದು ಎಂಬ ನಂಬಿಕೆ ಇದೆ. ಮಾಘ ಮಾಸದಲ್ಲಿ ಪ್ರತಿಯೊಂದು ಜಲಮೂಲವೂ ಗಂಗೆಯಷ್ಟೇ ಪವಿತ್ರವಾಗಿರುತ್ತದೆ.
ಮಾಘ ಸ್ನಾನಕ್ಕೆ ಉತ್ತರ ಭಾರತದಲ್ಲಿರುವ ಪ್ರಯಾಗ, ವಾರಾಣಸಿ, ಹರಿದ್ವಾರ, ನಾಸಿಕ್ , ಪುಷ್ಕರ ಸರೋವರ ಪ್ರಸಿದ್ಧವಾಗಿದ್ದರೆ ದಕ್ಷಿಣ ಭಾರತದಲ್ಲಿ ಕನ್ಯಾಕುಮಾರಿ, ರಾಮೇಶ್ವರಂ, ಕಾವೇರಿ, ತುಂಭದ್ರಾ, ಕೃಷ್ಣ, ನೇತ್ರವಾತಿ ಹೀಗೆ ಪುಣ್ಯ ನದಿಗಳಲ್ಲಿ ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡಿದರೆ ತುಂಬಾ ಪುಣ್ಯ ಸಿಗುವುದು.

ಮಾಘ ಮಾಸದ ಪೂರ್ಣಿಮೆ
ಅದರಲ್ಲೂ ಮಾಘ ಮಾಸದ ಪೂರ್ಣಿಮೆ ತುಂಬಾ ವಿಶೇಷವಾದ ದಿನವಾಗಿದೆ, ಇದನ್ನು ಮಾಘಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಇದು ಮಾಘ ಮಾಸದ ಕೊನೆಯ ದಿನವೂ ಹೌದು. ಈ ದಿನ ಪುಣ್ಯ ಸ್ನಾನ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳನ್ನು ಮಾಡಲಾಗುವುದು.
ಮಾಘ ಪೂರ್ಣಿಮೆ ಬೌದ್ಧ ಧರ್ಮದವರಿಗೂ ವಿಶೇಷವಾದ ದಿನವಾಗಿದ್ದು, ಈ ದಿನ ಗೌತಮ ಬುದ್ಧ ತಮ್ಮ ಸಾವಿನ ಬಗ್ಗೆ ಹೇಳಿದರು. ಮಾಘ ಪೂರ್ಣಿಮೆಯನ್ನು ಫೆಬ್ರವರಿ ತಿಂಗಳ 27ನೇ ತಾರೀಕಿನಲ್ಲಿ ಆಚರಿಸಲಾಗುವುದು.

ನಾವಿಲ್ಲಿ ಮಾಘ ಪೂರ್ಣಿಮೆಯ ಮಹತ್ವದ ಬಗ್ಗೆ ಹೇಳಿದ್ದೇವೆ ನೋಡಿ:
* ಈ ದಿನ ಭಕ್ತರು ಬೆಳಗ್ಗೆ ಬೇಗನೆ ಎದ್ದು ನದಿಯಲ್ಲಿ, ಸಂಗಮದಲ್ಲಿ ಮುಳುಗಿ ಏಳುತ್ತಾರೆ. ಯಾರಿಗೆ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲವೂ ಅವರು ಮನೆಯಲ್ಲಿ ತಾವು ಸ್ನಾನ ಮಾಡುವ ನೀರಿಗೆ ಗಂಗಾ ಜಲ ಹಾಕಿ ಸ್ನಾನ ಮಾಡುತ್ತಾರೆ.
* ಪುಣ್ಯ ಸ್ನಾನದ ಬಳಿಕ ಭಕ್ತರು ಪೂಜೆಗೆ ಅಣಿಯಾಗುತ್ತಾರೆ. ಈ ದಿನ ವಿಷ್ಣು ಹಾಗೂ ಹನುಮಾನ್ಗೆ ಪೂಜೆ ಸಲ್ಲಿಸಲಾಗುವುದು ಜೊತೆಗೆ ಇಷ್ಟ ದೇವರುಗಳಿಗೆ ಪೂಜೆ ಸಲ್ಲಿಸಲಾಗುವುದು. ಈ ದಿನ ಪಾರ್ವತಿ, ಬೃಹಸ್ಪತಿಯನ್ನು ಪೂಜಿಸಬೇಕು.
* ಈ ದಿನ ಸತ್ಯನಾರಾಯಣ ಪೂಜೆ ಮಾಡಲಾಗುವುದು. ವಿಷ್ಣು ದೇವಾಲಯಗಳಲ್ಲಿ ಬಾಳೆ ಎಲೆಯಲ್ಲಿ ಗಂಧ, ಎಳ್ಳು, ವೀಳ್ಯೆ, ಹಣ್ಣುಗಳನ್ನು ಇಟ್ಟು ಪೂಜಿಸಲಾಗುವುದು. ಭಾರತದಲ್ಲಿ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಿಸಲಾಗುವುದು.
* ಈ ದಿನ ಉಪವಾಸ ವ್ರತ ಮಾಡುವುದರಿಂದ ಒಳಿತಾಗುತ್ತದೆ. ಚಂದ್ರನ ನೋಡಿದ ಬಳಿಕ ಒಂದು ಹೊತ್ತು ಊಟ ಸಲ್ಲಿಸಲಾಗುವುದು.
* ಈ ದಿನ ಬಟ್ಟೆ, ಆಹಾರ, ಧಾನ್ಯಗಳು, ತುಪ್ಪ, ಬೆಲ್ಲ, ಹಣ್ಣುಗಳು ಇವುಗಳನ್ನು ದಾನ ಮಾಡುವುದರಿಂದ ಒಳಿತಾಗುತ್ತದೆ. ಅಗ್ಯತವಿರುವ ಬ್ರಾಹ್ಮಣರಿಗೆ ದಾನ ಮಾಡಿ. ಈ ಮಾಘ ಮಾಸದಲ್ಲಿ ಪ್ರತಿದಿನ ಎಳ್ಳು ದಾನ ಮಾಡುವುದು ತುಂಬಾ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
* ಕೆಲವು ಕಡೆ ಈ ದಿನ ಹಿರಿಯರಿಗೆ ತರ್ಪಣ ನೀಡಲಾಗುವುದು.

2021ರ ಮಾಘ ಪೂರ್ಣಿಮೆಯ ಮಹತ್ವದ ಸಮಯ
ಸೂರ್ಯೋದಯ: ಫೆಬ್ರವರಿ 27, 6:53ಕ್ಕೆ
ಸೂರ್ಯಾಸ್ತ:ಫ್ರಬ್ರವರಿ 27, 6:25ಕ್ಕೆ
ಪೂರ್ಣಿಮೆ ತಿಥಿ ಪ್ರಾರಂಭ: ಫೆಬ್ರವರಿ 26, ಸಂಜೆ 3:50ಕ್ಕೆ
ಪೂರ್ಣಿಮೆ ತಿಥಿ ಮುಕ್ತಾಯ: ಫೆಬ್ರವರಿ 27, ಮಧ್ಯಾಹ್ನ 1:47ಕ್ಕೆ

ಮಾಘ ಪೂರ್ಣಿಮೆಯಂದು ಪುಣ್ಯಸ್ನಾನದ ಮಹತ್ವ
ಈ ದಿನ ಜ್ಯೋತಿಷ್ಯ ಪ್ರಕರವೂ ತುಂಬಾ ಮಹತ್ವವಾದ ದಿನವಾಗಿದೆ. ಈ ದಿನ ಸೂರ್ಯ ಮಕರಕ್ಕೆ ಸಂಚಾರ ಮಾಡುತ್ತಾನೆ, ಚಂದ್ರ ಕರ್ಕ ರಾಶಿಗೆ ಚಲಿಸುತ್ತಾನೆ. ಆದ್ದರಿಂದ ಈ ದಿನ ಪುಣ್ಯ ಸ್ನಾನ ಮಾಡಿದರೆ ಎಲ್ಲಾ ಪಾಪಕರ್ಮಗಳು ದೂರವಾಗುವುದು, ಪುಣ್ಯ ಲಭಿಸುವುದು.
ಅಲ್ಲದೆ ಈ ಪುಣ್ಯ ಸ್ನಾನ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದೇ ಆಗಿದೆ. ಮಾಘ ಪೂರ್ಣಿಮೆಯಂದು ಸ್ನಾನ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.



Click it and Unblock the Notifications
