Just In
- 9 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 9 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 10 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 11 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜುಲೈನಲ್ಲಿ ನಾಗರ ಪಂಚಮಿ ಜೊತೆಗೆ ಇವೆ ಸಾಲು ಸಾಲು ಹಬ್ಬಗಳ ಸಡಗರ
ಈ ಜುಲೈನಲ್ಲಿ ಹಬ್ಬಗಳು ಸಾಲುಗಟ್ಟಿ ನಿಂತಿವೆ. ಒಂದು ಲೆಕ್ಕದಲ್ಲಿ ನೋಡುವುದಾದರೆ ಜುಲೈ ತಿಂಗಳಿನ ಬಹುತೇಕ ದಿನಗಳಲ್ಲಿ ಒಂದೆಲ್ಲಾ ಒಂದು ವಿಶೇಷಗಳಿವೆ. ಜುಲೈ 1ರಂದು ದೇವಶಯನಿ ಏಕಾದಶಿ/ಆಷಾಢ ಏಕಾದಶಿ ಆಚರಿಸಲಾಯಿತು. ಈ ಅಲ್ಲದೆ ಈ ಏಕಾದಶಿಯೊಂದಿಗೆ ಚಾತುರ್ಮಾಸ ಕೂಡ ಆರಂಭವಾಗಿದೆ.
ಜುಲೈ 2ರಂದು ಪ್ರದೋಷ ವ್ರತ ಕೂಡ ಇತ್ತು, ಪ್ರದೋಷ ವ್ರತವನ್ನು ಕೃಷ್ಣ ಅಥವಾ ಶುಕ್ಲ ಪಕ್ಷದ 13ನೇ ದಿನದಂದು ಆಚರಿಸಲಾಗುತ್ತದೆ, ಈಗ ಗುರು ಪೂರ್ಣಿಮಾ, ಕರ್ಕ ಸಂಕ್ರಾಂತಿ ಅಷ್ಟೇ ಸಡಗರದ ಹಬ್ಬವಾದ ನಾಗರಪಂಚಮಿ ಕೂಡ ಇದೇ ತಿಂಗಳಿದ್ದು, ಇಲ್ಲಿ ನಾವು ಈ ತಿಂಗಳಿನಲ್ಲಿ ಧಾರ್ಮಿಕವಾಗಿ ಯಾವೆಲ್ಲಾ ವಿಶೇಷ ದಿನಗಳಿವೆ, ಆ ದಿನಗಳ ಮಹತ್ವವೇನು ಎಂಬೆಲ್ಲಾ ಮಾಹಿತಿಯನ್ನು ನೀಡಿದ್ದೇವೆ ನೋಡಿ:
ಜುಲೈ 5ಕ್ಕೆ ಗುರು ಪೂರ್ಣಿಮಾ
ಗುರು ಪೂರ್ಣಿಮಾ ಅದ್ಭುತ ಅರ್ಥ ಹಾಗೂ ಹಿನ್ನೆಲೆಯನ್ನು ಹೊಂದಿದೆ. ಈ ಆಚರನೆಯನ್ನು ಹಿಂದೂಗಳು, ಜೈನರು ಹಾಗೂ ಬೌದ್ಧರು ಮಾಡುತ್ತಾರೆ. ಗುರುವಿಗೆ ಯಾರು ಗೌರವ ಸಲ್ಲಿಸುತ್ತಾರೋ ಅವರು ಬದುಕಿನಲ್ಲಿ ಬೆಳೆಯುತ್ತಾರೆ, ಉತ್ತಮ ವ್ಯಕ್ತಿಗಳಾಗುತ್ತಾರೆ, ಯಾರು ಗುರುವನ್ನು ಅವಮಾನಿಸಿತ್ತಾನೋ ಅವನಿಗೆ ಸರಿಯಾದ ಸಂಸ್ಕಾರವಾಗಲಿ, ಜ್ಞಾನವಾಗಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.ಆತ ಜೀವನದಲ್ಲಿ ತೊಂದರೆಗಳಿಗೆ ಸಿಲುಕುತ್ತಾನೆ.
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯಂದು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮಾ ಆಚರಿಸುತ್ತಾರೆ. ಈ ದಿನ ಗುರುವಿಗೆ ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತಮಗೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ನಮಸ್ಕರಿಸಿ ಧನ್ಯವಾದಗಳನ್ನು ಹೇಳುತ್ತಾರೆ.
ಆಷಾಢ ಹುಣ್ಣಿಮೆಯಂದು ಕೋಕಿಲ ವ್ರತ
ಜುಲೈ ತಿಂಗಳಿನಲ್ಲಿ ಆಷಾಢ ಹುಣ್ಣಿಮೆ ಜುಲೈ 5ರಂದು ಆಚರಿಸಲಾಗುವುದು. ಈ ದಿನ ಮುತ್ತೈದೆಯರು ಕೋಲಿಲ ವ್ರತವನ್ನು ಗೌರಿಯ ರೂಪವೆಂದು ಆಚರಿಸುತ್ತಾರೆ. ಈ ದಿನ ಉಪವಾಸವಿದ್ದು ಗೌರಿಯನ್ನು ಪೂಜಿಸಿ ಮತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡುವುದರಿಂದ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.
ಜುಲೈ 8ಕ್ಕೆ ಸಂಕಷ್ಟ ಚತುರ್ಥಿ
ಈ ದಿನ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನ, ಸಂಕಷ್ಟ ಚತುರ್ಥಿಗೆ ಉಪವಾಸವಿದ್ದು ವಿಘ್ನ ನಿವಾರಕ ಗಣೇಶನ ಆರಾಧನೆ ಮಾಡಿದರೆ ಸಕಲ ವಿಘ್ನಗಳು ದೂರವಾಗುವುದು. ಸಂಕಷ್ಟಿಯಂದು ಉಪವಾಸ ಮಾಡಬೇಕು. ಸಂಜೆ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಅಂತ್ಯವಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನವನ್ನು ಮಾಡಬೇಕು.
ಜುಲೈ 16ಕ್ಕೆ ಕಾಮಿಕ ಏಕಾದಶಿ, ಕರ್ಕ ಸಂಕ್ರಾಂತಿ
ಕಾಮಿಕ ಏಕಾದಶಿಯಂದು ವಿಷ್ಣು ದೇವನನ್ನು ಆರಾಧಿಸುತ್ತಾರೆ. ಅಲ್ಲದೆ ಈ ದಿನ ಗಂಧರ್ವರನ್ನು, ಸೂರ್ಯನನ್ನೂ ಕೂಡ ಪೂಜಿಸಲಾಗುವುದು. ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ದೊರೆಯುತ್ತದೆ ಎಂದು ಹೇಳಲಾಗುವುದು.
ಕರ್ಕ ಸಂಕ್ರಾಂತಿ
ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಆಭೂಷಣಗಳು, ಶಸ್ತ್ರಗಳು, ಚಲಿಸುವ ದಿಕ್ಕು ಇತ್ಯಾದಿಗಳ ಬಗ್ಗೆ ವರ್ಣನೆಯಿದೆ. ಸಂಕ್ರಾಂತಿಗೆ ಧರಿಸಿದ ಬಣ್ಣದ ಉಡುಪು ಧರಿಸಬಾರದು ಎನ್ನುತ್ತಾರೆ. ಸಂಕ್ರಾಂತಿಯು ಚಲಿಸುವ ಹಾಗೂ ನೋಡುವ ದಿಕ್ಕುಗಳಲ್ಲಿರುವ ರಾಜ್ಯ ದೇಶಾದಿಗಳಿಗೂ ಅಲ್ಲಿನ ಪ್ರಜೆಗಳಿಗೂ ವಿಶೇಷ ಕಷ್ಟನಷ್ಟಗಳು ಪ್ರಾಪ್ತವಾಗುತ್ತವೆಯೆಂದೂ ಎಂದು ಕೂಡ ಹೇಳಲಾಗುತ್ತದೆ.
ಜುಲೈ 18ಕ್ಕೆ ಮಾಸಿಕ ಶಿವರಾತ್ರಿ
ಪ್ರತಿ ತಿಂಗಳೂ ಮಾಸಿಕ ಶಿವರಾತ್ರಿ ಆಚರಿಸಲಾಗುವುದು. ಅದರಲ್ಲೂ ಶ್ರಾವಣ ಮಾಸದಲ್ಲಿ ಬರುವ ಮಾಸಿಕ ಶಿವರಾತ್ರಿ ತುಂಬಾ ವಿಶೇಷಾದದ್ದು. ಕನ್ಯೆಯರು ಬಯಸಿದ ಗಂಡನನ್ನು ಪಡೆಯಲು ಹುಡುಗಿಯರ ಉಪವಾಸ ಮಾಡುವಾಗ ಮಹಿಳೆಯರು ತಮ್ಮ ಗಂಡಂದಿರ ದೀರ್ಘಾವಧಿಯ ಜೀವನಕ್ಕಾಗಿ ವೃತ ಮಾಡುತ್ತಾರೆ. ಕುಟುಂಬದ ಯೋಗಕ್ಷೇಮಕ್ಕಾಗಿ ಪುರುಷರು ಕೂಡ ಉಪವಾಸವನ್ನು ಮಾಡುತ್ತಾರೆ. ಇದಲ್ಲದೆ, ವೃತ್ತಿಜೀವನದಲ್ಲಿ ಅವರು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನಮ್ಮ ಗ್ರಂಥಗಳು ಶ್ರಾವಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಮತ್ತು ಈ ತಿಂಗಳಿನಲ್ಲಿ ಬೀಳುವ ಶಿವರಾತ್ರಿಗೆ ಹೆಚ್ಚು ಮಹತ್ವವಿದೆ. ಶಿವಲಿಂಗಕ್ಕೆ ಗಂಗಾ ನದಿಯ ನೀರನ್ನು ನೀಡುವುದರಿಂದ ಭಕ್ತರಿಗೆ ಭಾರಿ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.
ಜುಲೈ 20ಕ್ಕೆ ಶ್ರಾವಣ ಅಮಾವಾಸ್ಯೆ
ಶ್ರಾವಣ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಶ್ರಾವಣ ಅಮವಾಸ್ಯೆಯೆಂದು ಆಚರಿಸಲಾಗುವುದು. ಇದು ಶ್ರಾವಣ ಮಾಸದ ಆರಂಭವನ್ನುಸುಚಿಸುವ ಅಮವಾಸ್ಯೆಯಾಗಿದ್ದು ಈ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಯುತ್ತವೆ.
ಜುಲೈ 25ಕ್ಕೆ ನಾಗರ ಪಂಚಮಿ
ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯನ್ನು ದೇಶದ ಎಲ್ಲೆಡೆ ಆಚರಿಸಲಾಗುವುದು. ಮಹಿಳೆಯರಿಗಂತೂ ವಿಶೇಷವಾದ ಹಬ್ಬ ಇದಾಗಿದೆ. ಈ ದಿನ ನಾಗರ ಹಾವಿಗೆ, ನಾಗರ ಕಲ್ಲಿಗೆ ನೀರೆಯುತ್ತಾರೆ. ಈ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳು ಶುರು ಎಂದೇ ಲೆಕ್ಕ.
ಜುಲೈ 30ಕ್ಕೆ ಶ್ರಾವಣ ಪುತ್ರದ ಏಕಾದಶಿ
ಈ ಆಚರಣೆ ದೇಶದ ಕೆಲವು ಭಾಗದಲ್ಲಿ ಮಾತ್ರ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಸಂತಾನ ಭಾಗ್ಯ ಅಪೇಕ್ಷಿಸುವವರು ಈ ವ್ರತ ಮಾಡುತ್ತಾರೆ. ಈದಿನ ಉಪವಾಸವಿದ್ದು ಪೂಜೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದು, ಸಂತಾನವಿಲ್ಲದವರಿಗೆ ಮಕ್ಕಳಾಗುವುದು ಎಂಬ ನಂಬಿಕೆಯಿದೆ.