Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!

ಒಂದು ದಿನ, ಪಾದ್ರಿಯು ವಿಶೇಷ ಅತಿಥಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಉದ್ಯಾನವನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಕಳೆ ತೆಗೆದು, ಪೊದೆಗಳನ್ನು ಕತ್ತರಿಸಿ, ಪಾಚಿಯನ್ನೆಲ್ಲಾ ಬಾಚಿ ಸ್ವಚ್ಛಗೊಳಿಸಿದ್ದರು ಹಾಗೂ ಅತ್ಯಂತ ಜಾಗರೂಕತೆಯಿಂದ ಒಣಗಿದ ಎಲೆಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸುವಲ್ಲಿ ಹೆಚ್ಚು ಸಮಯವನ್ನು ವ್ಯಯಿಸಿದ್ದರು.
ಪಾದ್ರಿಯು ಈ ಎಲ್ಲ ಕೆಲಸ ಮಾಡುತ್ತಿದ್ದಾಗ ವೃದ್ಧ ಗುರುಗಳು ದೇವಸ್ಥಾನಗಳನ್ನು ಬೇರ್ಪಡಿಸಿದ್ದ ಗೋಡೆಯ ಆಚೆಯಿಂದ ಪಾದ್ರಿ ಮಾಡುತ್ತಿದ್ದ ಸ್ವಚ್ಛಗೊಳಿಸುವ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದರು. ವೃದ್ಧ ಝೆನ್ ಗುರುಗಳು ತಾವಾಗಿಯೇ ಏನನ್ನೂ ಹೇಳಲು ಹೋಗಲಿಲ್ಲ. ಪಾದ್ರಿಯೇ ಮಾತಿಗೆ ಬರಲಿ ಎಂದು ಸುಮ್ಮನಿದ್ದರು.
ತನ್ನ ಕೆಲಸಗಳನ್ನು ಮುಗಿಸಿದ ನಂತರ ಪಾದ್ರಿಯು, ಕೈ ಜಾಡಿಸುತ್ತ, ಹಿಂತಿರುಗಿ ನಿಂತು ತನ್ನ ಕೆಲಸಕ್ಕೆ ತಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗ ಇದು ಚೆನ್ನಾಗಿದೆಯಲ್ಲವೇ?" ಎಂದು ವೃದ್ಧ ಗುರುಗಳನ್ನು ಮಾತಿಗೆಳೆದರು. "ಹೌದು" ಎಂದು ಪ್ರತಿಕ್ರಿಯಿಸಿದ ಝೆನ್ ಗುರುಗಳು "ಆದರೆ ಅಲ್ಲಿ ಏನೋ ಕೊರತೆಯಿದ್ದಂತಿದೆ. ಗೋಡೆಯ ಆಚೆ ಬರಲು ನನಗೆ ಸಹಾಯ ಮಾಡು, ಆಗ ನಾನು ಸರಿಯಾಗಿ ಗುರುತಿಸಿ ಹೇಳಬಲ್ಲೆ" ಎಂದರು.
ಹಿಂಜರಿಕೆಯಾದರೂ ಪಾದ್ರಿ ವೃದ್ಧರನ್ನು ಎತ್ತಿ ಗೋಡೆದಾಟಿಸಿ ಕೆಳಗಿಳಿಸಿದರು. ನಿಧಾನವಾಗಿ, ಉದ್ಯಾನದ ಮಧ್ಯದಲ್ಲಿರುವ ಮರದ ಹತ್ತಿರಕ್ಕೆ ನಡೆಯುತ್ತಾ ಬಂದ ಗುರುಗಳು ಮರದ ಕಾಂಡವನ್ನು ಎಳೆದು ಅಲ್ಲಾಡಿಸಿದರು. ಉದ್ಯಾನದ ತುಂಬೆಲ್ಲ ಎಲೆಗಳ ವೃಷ್ಟಿಯಾಯಿತು. "ಅಲ್ಲಿ" ಎಂದ ವೃದ್ದರು "ನನ್ನನ್ನೂ ಅದರೊಂದಿಗೆ ಸೇರಿಸು!" ಸ್ತಂಭೀಭೂತರಾದಂತೆ ನಿಂತಿದ್ದ ಪಾದ್ರಿಗೆ ತಾವು ತಪ್ಪಿದ್ದು ಎಲ್ಲಿ ಆಗ ಅರಿವಾಯಿತು.



Click it and Unblock the Notifications