Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!

ಒಂದು ದಿನ, ಪಾದ್ರಿಯು ವಿಶೇಷ ಅತಿಥಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಉದ್ಯಾನವನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಕಳೆ ತೆಗೆದು, ಪೊದೆಗಳನ್ನು ಕತ್ತರಿಸಿ, ಪಾಚಿಯನ್ನೆಲ್ಲಾ ಬಾಚಿ ಸ್ವಚ್ಛಗೊಳಿಸಿದ್ದರು ಹಾಗೂ ಅತ್ಯಂತ ಜಾಗರೂಕತೆಯಿಂದ ಒಣಗಿದ ಎಲೆಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸುವಲ್ಲಿ ಹೆಚ್ಚು ಸಮಯವನ್ನು ವ್ಯಯಿಸಿದ್ದರು.
ಪಾದ್ರಿಯು ಈ ಎಲ್ಲ ಕೆಲಸ ಮಾಡುತ್ತಿದ್ದಾಗ ವೃದ್ಧ ಗುರುಗಳು ದೇವಸ್ಥಾನಗಳನ್ನು ಬೇರ್ಪಡಿಸಿದ್ದ ಗೋಡೆಯ ಆಚೆಯಿಂದ ಪಾದ್ರಿ ಮಾಡುತ್ತಿದ್ದ ಸ್ವಚ್ಛಗೊಳಿಸುವ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದರು. ವೃದ್ಧ ಝೆನ್ ಗುರುಗಳು ತಾವಾಗಿಯೇ ಏನನ್ನೂ ಹೇಳಲು ಹೋಗಲಿಲ್ಲ. ಪಾದ್ರಿಯೇ ಮಾತಿಗೆ ಬರಲಿ ಎಂದು ಸುಮ್ಮನಿದ್ದರು.
ತನ್ನ ಕೆಲಸಗಳನ್ನು ಮುಗಿಸಿದ ನಂತರ ಪಾದ್ರಿಯು, ಕೈ ಜಾಡಿಸುತ್ತ, ಹಿಂತಿರುಗಿ ನಿಂತು ತನ್ನ ಕೆಲಸಕ್ಕೆ ತಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗ ಇದು ಚೆನ್ನಾಗಿದೆಯಲ್ಲವೇ?" ಎಂದು ವೃದ್ಧ ಗುರುಗಳನ್ನು ಮಾತಿಗೆಳೆದರು. "ಹೌದು" ಎಂದು ಪ್ರತಿಕ್ರಿಯಿಸಿದ ಝೆನ್ ಗುರುಗಳು "ಆದರೆ ಅಲ್ಲಿ ಏನೋ ಕೊರತೆಯಿದ್ದಂತಿದೆ. ಗೋಡೆಯ ಆಚೆ ಬರಲು ನನಗೆ ಸಹಾಯ ಮಾಡು, ಆಗ ನಾನು ಸರಿಯಾಗಿ ಗುರುತಿಸಿ ಹೇಳಬಲ್ಲೆ" ಎಂದರು.
ಹಿಂಜರಿಕೆಯಾದರೂ ಪಾದ್ರಿ ವೃದ್ಧರನ್ನು ಎತ್ತಿ ಗೋಡೆದಾಟಿಸಿ ಕೆಳಗಿಳಿಸಿದರು. ನಿಧಾನವಾಗಿ, ಉದ್ಯಾನದ ಮಧ್ಯದಲ್ಲಿರುವ ಮರದ ಹತ್ತಿರಕ್ಕೆ ನಡೆಯುತ್ತಾ ಬಂದ ಗುರುಗಳು ಮರದ ಕಾಂಡವನ್ನು ಎಳೆದು ಅಲ್ಲಾಡಿಸಿದರು. ಉದ್ಯಾನದ ತುಂಬೆಲ್ಲ ಎಲೆಗಳ ವೃಷ್ಟಿಯಾಯಿತು. "ಅಲ್ಲಿ" ಎಂದ ವೃದ್ದರು "ನನ್ನನ್ನೂ ಅದರೊಂದಿಗೆ ಸೇರಿಸು!" ಸ್ತಂಭೀಭೂತರಾದಂತೆ ನಿಂತಿದ್ದ ಪಾದ್ರಿಗೆ ತಾವು ತಪ್ಪಿದ್ದು ಎಲ್ಲಿ ಆಗ ಅರಿವಾಯಿತು.



Click it and Unblock the Notifications