Just In
- 1 hr ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 10 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 11 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 12 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!
ಒಂದು ದಿನ, ಪಾದ್ರಿಯು ವಿಶೇಷ ಅತಿಥಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಉದ್ಯಾನವನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಕಳೆ ತೆಗೆದು, ಪೊದೆಗಳನ್ನು ಕತ್ತರಿಸಿ, ಪಾಚಿಯನ್ನೆಲ್ಲಾ ಬಾಚಿ ಸ್ವಚ್ಛಗೊಳಿಸಿದ್ದರು ಹಾಗೂ ಅತ್ಯಂತ ಜಾಗರೂಕತೆಯಿಂದ ಒಣಗಿದ ಎಲೆಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸುವಲ್ಲಿ ಹೆಚ್ಚು ಸಮಯವನ್ನು ವ್ಯಯಿಸಿದ್ದರು.
ಪಾದ್ರಿಯು ಈ ಎಲ್ಲ ಕೆಲಸ ಮಾಡುತ್ತಿದ್ದಾಗ ವೃದ್ಧ ಗುರುಗಳು ದೇವಸ್ಥಾನಗಳನ್ನು ಬೇರ್ಪಡಿಸಿದ್ದ ಗೋಡೆಯ ಆಚೆಯಿಂದ ಪಾದ್ರಿ ಮಾಡುತ್ತಿದ್ದ ಸ್ವಚ್ಛಗೊಳಿಸುವ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದರು. ವೃದ್ಧ ಝೆನ್ ಗುರುಗಳು ತಾವಾಗಿಯೇ ಏನನ್ನೂ ಹೇಳಲು ಹೋಗಲಿಲ್ಲ. ಪಾದ್ರಿಯೇ ಮಾತಿಗೆ ಬರಲಿ ಎಂದು ಸುಮ್ಮನಿದ್ದರು.
ತನ್ನ ಕೆಲಸಗಳನ್ನು ಮುಗಿಸಿದ ನಂತರ ಪಾದ್ರಿಯು, ಕೈ ಜಾಡಿಸುತ್ತ, ಹಿಂತಿರುಗಿ ನಿಂತು ತನ್ನ ಕೆಲಸಕ್ಕೆ ತಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗ ಇದು ಚೆನ್ನಾಗಿದೆಯಲ್ಲವೇ?" ಎಂದು ವೃದ್ಧ ಗುರುಗಳನ್ನು ಮಾತಿಗೆಳೆದರು. "ಹೌದು" ಎಂದು ಪ್ರತಿಕ್ರಿಯಿಸಿದ ಝೆನ್ ಗುರುಗಳು "ಆದರೆ ಅಲ್ಲಿ ಏನೋ ಕೊರತೆಯಿದ್ದಂತಿದೆ. ಗೋಡೆಯ ಆಚೆ ಬರಲು ನನಗೆ ಸಹಾಯ ಮಾಡು, ಆಗ ನಾನು ಸರಿಯಾಗಿ ಗುರುತಿಸಿ ಹೇಳಬಲ್ಲೆ" ಎಂದರು.
ಹಿಂಜರಿಕೆಯಾದರೂ ಪಾದ್ರಿ ವೃದ್ಧರನ್ನು ಎತ್ತಿ ಗೋಡೆದಾಟಿಸಿ ಕೆಳಗಿಳಿಸಿದರು. ನಿಧಾನವಾಗಿ, ಉದ್ಯಾನದ ಮಧ್ಯದಲ್ಲಿರುವ ಮರದ ಹತ್ತಿರಕ್ಕೆ ನಡೆಯುತ್ತಾ ಬಂದ ಗುರುಗಳು ಮರದ ಕಾಂಡವನ್ನು ಎಳೆದು ಅಲ್ಲಾಡಿಸಿದರು. ಉದ್ಯಾನದ ತುಂಬೆಲ್ಲ ಎಲೆಗಳ ವೃಷ್ಟಿಯಾಯಿತು. "ಅಲ್ಲಿ" ಎಂದ ವೃದ್ದರು "ನನ್ನನ್ನೂ ಅದರೊಂದಿಗೆ ಸೇರಿಸು!" ಸ್ತಂಭೀಭೂತರಾದಂತೆ ನಿಂತಿದ್ದ ಪಾದ್ರಿಗೆ ತಾವು ತಪ್ಪಿದ್ದು ಎಲ್ಲಿ ಆಗ ಅರಿವಾಯಿತು.