Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!

ಒಂದು ದಿನ, ಪಾದ್ರಿಯು ವಿಶೇಷ ಅತಿಥಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಉದ್ಯಾನವನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಕಳೆ ತೆಗೆದು, ಪೊದೆಗಳನ್ನು ಕತ್ತರಿಸಿ, ಪಾಚಿಯನ್ನೆಲ್ಲಾ ಬಾಚಿ ಸ್ವಚ್ಛಗೊಳಿಸಿದ್ದರು ಹಾಗೂ ಅತ್ಯಂತ ಜಾಗರೂಕತೆಯಿಂದ ಒಣಗಿದ ಎಲೆಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸುವಲ್ಲಿ ಹೆಚ್ಚು ಸಮಯವನ್ನು ವ್ಯಯಿಸಿದ್ದರು.
ಪಾದ್ರಿಯು ಈ ಎಲ್ಲ ಕೆಲಸ ಮಾಡುತ್ತಿದ್ದಾಗ ವೃದ್ಧ ಗುರುಗಳು ದೇವಸ್ಥಾನಗಳನ್ನು ಬೇರ್ಪಡಿಸಿದ್ದ ಗೋಡೆಯ ಆಚೆಯಿಂದ ಪಾದ್ರಿ ಮಾಡುತ್ತಿದ್ದ ಸ್ವಚ್ಛಗೊಳಿಸುವ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದರು. ವೃದ್ಧ ಝೆನ್ ಗುರುಗಳು ತಾವಾಗಿಯೇ ಏನನ್ನೂ ಹೇಳಲು ಹೋಗಲಿಲ್ಲ. ಪಾದ್ರಿಯೇ ಮಾತಿಗೆ ಬರಲಿ ಎಂದು ಸುಮ್ಮನಿದ್ದರು.
ತನ್ನ ಕೆಲಸಗಳನ್ನು ಮುಗಿಸಿದ ನಂತರ ಪಾದ್ರಿಯು, ಕೈ ಜಾಡಿಸುತ್ತ, ಹಿಂತಿರುಗಿ ನಿಂತು ತನ್ನ ಕೆಲಸಕ್ಕೆ ತಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗ ಇದು ಚೆನ್ನಾಗಿದೆಯಲ್ಲವೇ?" ಎಂದು ವೃದ್ಧ ಗುರುಗಳನ್ನು ಮಾತಿಗೆಳೆದರು. "ಹೌದು" ಎಂದು ಪ್ರತಿಕ್ರಿಯಿಸಿದ ಝೆನ್ ಗುರುಗಳು "ಆದರೆ ಅಲ್ಲಿ ಏನೋ ಕೊರತೆಯಿದ್ದಂತಿದೆ. ಗೋಡೆಯ ಆಚೆ ಬರಲು ನನಗೆ ಸಹಾಯ ಮಾಡು, ಆಗ ನಾನು ಸರಿಯಾಗಿ ಗುರುತಿಸಿ ಹೇಳಬಲ್ಲೆ" ಎಂದರು.
ಹಿಂಜರಿಕೆಯಾದರೂ ಪಾದ್ರಿ ವೃದ್ಧರನ್ನು ಎತ್ತಿ ಗೋಡೆದಾಟಿಸಿ ಕೆಳಗಿಳಿಸಿದರು. ನಿಧಾನವಾಗಿ, ಉದ್ಯಾನದ ಮಧ್ಯದಲ್ಲಿರುವ ಮರದ ಹತ್ತಿರಕ್ಕೆ ನಡೆಯುತ್ತಾ ಬಂದ ಗುರುಗಳು ಮರದ ಕಾಂಡವನ್ನು ಎಳೆದು ಅಲ್ಲಾಡಿಸಿದರು. ಉದ್ಯಾನದ ತುಂಬೆಲ್ಲ ಎಲೆಗಳ ವೃಷ್ಟಿಯಾಯಿತು. "ಅಲ್ಲಿ" ಎಂದ ವೃದ್ದರು "ನನ್ನನ್ನೂ ಅದರೊಂದಿಗೆ ಸೇರಿಸು!" ಸ್ತಂಭೀಭೂತರಾದಂತೆ ನಿಂತಿದ್ದ ಪಾದ್ರಿಗೆ ತಾವು ತಪ್ಪಿದ್ದು ಎಲ್ಲಿ ಆಗ ಅರಿವಾಯಿತು.



Click it and Unblock the Notifications











