Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡ್ರೆ ನೀವೇನು ಮಾಡಬೇಕು?
ಒಂದು ಕೆಲಸಕ್ಕೆ ಸೇರಿ ಸಂಬಳ ಬರಲು ಆರಂಭಿಸಿದ ಮೇಲೆ ನಿಧಾನಕ್ಕೆ ಬದುಕಿನಲ್ಲಿ ಅದು ಬೇಕು, ಇದು ಬೇಕು ಎಂದು ಅನಿಸಲಾರಂಭಿಸುತ್ತದೆ. ಒಂದು ಗಾಡಿ, ನಂತರ ಮನೆ ಹೀಗೆ ನಮ್ಮ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.

ಪ್ರತಿ ತಿಂಗಳು ಸಂಬಳ ಬರುತ್ತದೆ ಎಂಬ ಧೈರ್ಯದಲ್ಲಿ ಲೋನ್ ತಗೊಂಡು EMI ಪಾವತಿಸುತ್ತಾ ಜೀವನ ಸಾಗುತ್ತಾ ಇರುತ್ತದೆ. ಹೀಗಿರುವಾಗ ಯಾವುದೇ ಮುನ್ಸೂಚನೆ ಇಲ್ಲದೆ ಒಂದು ಕಂಪನಿ ಕೆಲಸದಿಂದ ತೆಗೆದು ಹಾಕಿದಾಗ ಆಕಶವೇ ಕಳಚಿ ತಲೆ ಮೇಲೆ ಬಿದ್ದಂತಾಗುವುದು.
ಅದು ತಂದ ಆಘಾತ, ಮುಂದೇನು ಎಂದು ದಿಕ್ಕು ತೋಚದ ಸ್ಥಿತಿ ಆ ಪಾಡು ಶತ್ರುಗೂ ಬೇಡ, ಆ ಮಾನಸಿಕ ಒತ್ತಡ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಎಲ್ಲವೂ ನಾವಂದುಕೊಂಡಂತೆ ಆದರೆ ಅದು ಬದುಕಾಗಲ್ಲ, ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತದೆ. ಹಾಗಂತ ಕಷ್ಟ ನಿರಂತರವಲ್ಲ, ಒಂದಲ್ಲ ಒಂದು ದಾರಿ ನಮ್ಮ ಮುಂದೆ ತೆರೆದುಕೊಳ್ಳುವುದು...
ಇಲ್ಲಿ ಕೆಲಸ ಕಳೆದುಕೊಂಡಾಗ ಅಥವಾ ಕ ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಆ ಖಿನ್ನತೆ ಏನೆಲ್ಲಾ ಆಗುವುದು, ಅದರಿಂದ ಹೊರಬರಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:

ಕೆಲಸ ಕಳೆದುಕೊಂಡಾಗ ಆ ನಷ್ಟ ನಮ್ಮಲ್ಲಿ ಮೂಡಿಸುವ ಚಿಂತೆಗಳು
* ಬದುಕಿನಲ್ಲಿ ಮುಂದೇನು ಎಂಬ ಚಿಂತೆ
* ವೃತ್ತಿ ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ಏನು ಹೇಳುವುದು
* ಆತ್ಮ ವಿಶ್ವಾಸ, ಪ್ರತಿಷ್ಠೆ ಕುಂದುವುದು
* ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
* ಕುಟುಂಬದ ಬಗ್ಗೆ ಚಿಂತೆ ಕಾಡುವುದು

ಇದರಿಂದ ಹೊರಬರಲು ಏನು ಮಾಡಬೇಕು?
ಪರಿಸ್ಥಿತಿಗೆ ಹೊಂದುಕೊಳ್ಳಲು ಪ್ರಯತ್ನಿಸಿ: ನೀವು ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು, ಆದರೆ ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು, ದುಃಖವನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟುಕೊಳ್ಳಬೇಡಿ, ಆಪ್ತರೊಂದಿಗೆ ಹಂಚಿಕೊಳ್ಳಿ, ಇದು ಮನಸ್ಸನ್ನು ಹಗುರ ಮಾಡುತ್ತದೆ, ಇದರಿಂದ ಬೇಸರ, ಕೆಟ್ಟ ಆಲೋಚನೆ ದೂರವಾಗುವುದು.

ಸತ್ಯವನ್ನು ಸ್ವೀಕರಿಸಿ:
ಕೈಯಲ್ಲಿ ಕೆಲಸ ಇಲ್ಲ ಅನ್ನುವುದು ಸತ್ಯ, ಅದನ್ನು ಸ್ವೀಕರಿಸಿ, ಇದರಿಂದ ಹೊಸ ಕೆಲಸ ಹುಡುಕುವಿರಿ. ಈ ಪ್ರಪಂಚ ತುಂಬಾ ವಿಶಾಲವಾಗಿದೆ. ಖಂಡಿತ ಹಿಂದೆ ಇರುವ ಕೆಲಸಕ್ಕಿಂತ ಉತ್ತಮ ಕೆಲಸ ಸಿಗಬಹುದು ಅಥವಾ ಹೊಸ ಮಾರ್ಗ ಸಿಗಬಹುದು.

ಸ್ನೇಹಿತರನ್ನು ಸಂಪರ್ಕಿಸಿ
ಈ ಸಮಯದಲ್ಲಿ ಮನಸ್ಸಿಗೆ ತುಂಬಾ ಸಮಧಾನ ನೀಡುವವರು ಸ್ನೇಹಿತರಾಗಿರುತ್ತಾರೆ, ಅಲ್ಲದೆ ನಿಮಗೆ ತಿಳಿದವರಲ್ಲಿ ಹಾಗೂ ಎಲ್ಲಾ ಕಡೆ ಕೆಲಸಕ್ಕೆ ಅರ್ಜಿ ಸಲ್ಲಿಸಿ, ಒಂದು ಮಾವಿನಕಾಯಿಗೆ 10 ಕಲ್ಲು ಹೊಡೆದರೆ ಒಂದು ಕಲ್ಲು ತಾಗಿಯಾದರೂ ಅದು ಬೀಳುತ್ತೆ, ಹಾಗೇ ನಿಮ್ಮ ಕೆಲಸ ಹುಡುಕುವ ಪ್ರಯತ್ನವನ್ನು ಮುಂದುವರೆಸಿ.

ಪ್ರಕೃತ್ತಿಯೊಂದಿಗೆ ಸಮಯ ಕಳೆಯಿರಿ
ಪ್ರಕೃತಿಯೊಂದಿಗೆ ಸಮಯ ಕಳೆಯಿರಿ ಎಂದಾಗ ಕೈಯಲ್ಲಿ ದುಡ್ಡಿಲ್ಲದೆ ಟ್ರಕ್ಕಿಂಗ್ ಎಲ್ಲಾ ಹೋಗುವುದು ಹೇಗೆ ಎಂದು ಕೇಳಬೇಡಿ, ಮನೆಯಲ್ಲಿ ಗಾರ್ಡಿನಿಂಗ್ ಮಾಡುವುದು, ತರಕಾರಿ ಬೆಳೆಸುವುದು ಹೀಗೆ ಏನಾದರೂ ಮಾಡಿ. ಅವು ಮನಸ್ಸಿನ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವುದು ಮಾತ್ರವಲ್ಲ, ತೃಪ್ತಿಯ ಭಾವನೆ ಮೂಡಿಸುವುದು.

ಪಾಸಿಟಿವ್ ಆಗಿ ಚಿಂತಿಸಿ
ನೀವು ಎಲ್ಲಾ ಸರಿ ಹೋಗುತ್ತೆ ಎಂದು ಪಾಸಿಟಿವ್ ಆಗಿ ಚಿಂತಿಸಿ ನೋಡಿ ಎಲ್ಲವೂ ಸರಿ ಹೋಗುವುದು, ಅದೇ ನೀವು ನೆಗೆಟಿವ್ ಆಗಿ ಯೋಚಿಸಿದರೆ ಅದೇ ರೀತಿ ಆಗುವುದು, ಆದ್ದರಿಂದ ಒಳ್ಳೆಯದೇ ಚಿಂತಿಸಿ, ನಿಮ್ಮ ಗುರಿಯತ್ತ ಮಾತ್ರ ಗಮನ ಇರಲಿ. ಇನ್ನು ಒಂದು ವೇಳೆ ಕೆಲಸ ಸಿಗದಿದ್ದರೆ ನೀವು ನಿಮ್ಮ ಸ್ವಂತದ್ದು ಏನಾದ್ರೂ ಪ್ರಯತ್ನಿಸಿ, ನನ್ನಿಂದ ಸಾಧ್ಯವಿಲ್ಲ ಎಂದು ಕುಳಿತರೆ ಖಂಡಿತ ಸಾಧ್ಯವಾಗುವುದಿಲ್ಲ, ಸೋ ಬಿ ಪಾಸಿಟಿವ್, ಆಲ್ ದಿ ಬೆಸ್ಟ್....



Click it and Unblock the Notifications