Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಗಣೇಶ ಚತುರ್ಥಿ:ಇಷ್ಟಾರ್ಥ ಸಿದ್ಧಿಗಾಗಿ ವಿಘ್ನವಿನಾಶಕನಿಗೆ ಈ ಫಲ-ಪುಷ್ಪಗಳನ್ನು ಅರ್ಪಿಸಿ
ವಿಘ್ನವಿನಾಶಕ ಗಣೇಶ, ಜ್ಞಾನದ ಅಧಿಪತಿ. ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಒಳ್ಳೆ ಕಾರ್ಯ ಮಾಡುವ ಮೊದಲು ಗಣೇಶನನ್ನೇ ಮೊದಲು ನೆನೆಯುವುದು, ಅವನನ್ನೇ ಮೊದಲ ಪೂಜಿಸುವುದು. ಏಕೆಂದರೆ ಯಾವುದೇ ವಿಘ್ನಗಳು ಬರದೇ ಇರುವಂತೆ ಕಾಪಾಡುತ್ತಾನೆಂಬ ನಂಬಿಕೆ.
ಈ ವರ್ಷ ಸೆಪ್ಟಂಬರ್ 10ರಂದು ಗಣೇಶ ಚತುರ್ಥಿ ಆರಂಭ. ಈ ದಿನ ಗಣನಾಯಕನನ್ನು ಆತನ ನೆಚ್ಚಿನ ಹೂವು-ಹಣ್ಣುಗಳಿಂದ ಪೂಜಿಸಿದರೆ, ಇಷ್ಟಾರ್ಥ ಸಿದ್ಧಿಯಾಗುವುದು. ಹಾಗಾದರೆ ಡೊಳ್ಳು ಹೊಟ್ಟೆ ಗಣಪನಿಗೆ ಯಾವ್ಯಾವ ಹೂವು-ಹಣ್ಣುಗಳು ಇಷ್ಟ ಎಂದು ಯೋಚನೆ ಮಾಡುತ್ತಿರುವವರಿಗಾಗಿ ನಾವಿಂದು ಮಾಹಿತಿ ನೀಡಲಿದ್ದೇವೆ.
ಗಣೇಶನಿಗೆ ಪ್ರಿಯವಾದ ಹೂವುಗಳು ಹಾಗೂ ಹಣ್ಣುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಣಪನಿಗೆ ಪ್ರಿಯವಾದ ಹೂವುಗಳು:
ಗಜಾನನಿಗೆ ಎಲ್ಲ ಹೂವುಗಳಿಗಿಂತಲೂ ಪ್ರಿಯವಾದುದ್ದು ಎಂದರೆ, ಗರಿಕೆ ಹುಲ್ಲು. ತನ್ನೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಈ ಹುಲ್ಲನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಇದನ್ನು ಹೊರತುಪಡಿಸಿ, ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ.

ಕೆಂಪು ದಾಸವಾಳ:
ಇದು ಗಣೇಶನ ನೆಚ್ಚಿನ ಹೂವಾಗಿದ್ದು, ಇದನ್ನು ಸಂಸ್ಕೃತದಲ್ಲಿ ಜಪಕುಸುಮ ಎಂದು ಕರೆಯಲಾಗುತ್ತದೆ. ಚೌತಿಯಂದು, ಗಣೇಶ ವಿಗ್ರಹಗಳಿಗೆ ಈ ಕೆಂಪು ದಾಸವಾಳ ಇಡುವುದನ್ನು ಎಲ್ಲಿಯೂ ತಪ್ಪಿಸುವುದಿಲ್ಲ. ಶತ್ರುಗಳ ಸಮೃದ್ಧಿ ಮತ್ತು ವಿನಾಶಕ್ಕಾಗಿ ಇದನ್ನು ಅರ್ಪಿಸಲಾಗುತ್ತದೆ.

ನಿತ್ಯ ಮಲ್ಲಿಗೆ:
ಈ ಹೂವುಗಳು ವರ್ಷಪೂರ್ತಿ ಲಭ್ಯವಿದ್ದು, ಗಣೇಶನಿಗೆ ಪ್ರಿಯವಾದ ಪುಷ್ಪಗಳಲ್ಲಿ ಒಂದಾಗಿದೆ. ಕುಟುಂಬದ ಐಕ್ಯತೆಗಾಗಿ ಇದನ್ನು ಗಣಪನಿಗೆ ಸಮರ್ಪಿಸಲಾಗುತ್ತದೆ.

ಗಿರಿಕರ್ಣಿಕೆ:
ಈ ಹೂವನ್ನು ಶಂಖಪುಷ್ಪ, ಅಪರಾಜಿತ ಪುಷ್ಪ ಅಂತಲೂ ಕರೆಯುತ್ತಾರೆ. ವಿವಿಧ ಬಣ್ಣಗಳಲ್ಲಿ ಬರುವ ಈ ಹೂವಿನಲ್ಲಿ ಗಣೇಶನಿಗೆ ನೀಲಿ ಬಣ್ಣದ ಗಿರಿಕರ್ಣಿಕೆ ತುಂಬಾ ಇಷ್ಟ. ಬೇಗ ಮದುವೆ ಆಗಬೇಕು ಎನ್ನುವವರು ಗಣೇಶನಿಗೆ ಈ ಹೂವನ್ನು ನೀಡಬಹುದು.

ಚೆಂಡುಹೂ:
ಮಾರಿಗೋಲ್ಡ್ ಎಂದು ಕರೆಯಲ್ಪಡುವ ಈ ಹೂವನ್ನು ಸಾಮಾನ್ಯ ಭಾಷೆಯಲ್ಲಿ ಚೆಂಡು ಹೂ ಎಂದು ಕರೆಯಲಾಗುತ್ತದೆ. ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಗಣೇಶನಿಗೆ ಈ ಹೂವನ್ನು ನೀಡಬಹುದು.

ಹಳದಿ ಸೇವಂತಿಗೆ:
ಗಣಪನಿಗೆ ಸೇವಂತಿಯಂದರೂ ಬಹಳ ಇಷ್ಟವಾಗಿದ್ದು, ಕೆಟ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಹಳದಿ ಸೇವಂತಿಗೆಗಳನ್ನು ಗಣೇಶನಿಗೆ ಅರ್ಪಿಸಿ.

ಪಾರಿಜಾತ:
ಇದನ್ನು ಹವಳ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದು ರಾತ್ರಿ ಅರಳಿ, ಹಗಲಿನಲ್ಲಿ ತನ್ನ ದಳಗಳನ್ನು ಉದುರಿಸುತ್ತದೆ. ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ಈ ಪಾರಿಜಾತ ಹೂವನ್ನು ಮಕ್ಕಳ ಜೀವನ ಉತ್ತಮವಾಗಿರಲೆಂದು ಗಣೇಶನಿಗೆ ಅರ್ಪಿಸಬಹುದು.

ಗಣಪನಿಗೆ ಪ್ರಿಯವಾದ ಹಣ್ಣುಗಳು:
ಬಾಳೆಹಣ್ಣು:
ಎಲ್ಲಾ ದೇವತೆಗಳಿಗೂ ಇಷ್ಟವಾಗುವ ಈ ಹಣ್ಣು ಗಣೇಶನಿಗೂ ತುಂಬಾ ಪ್ರಿಯವಾದುದ್ದು. ಪೂಜೆಯ ಸಂದರ್ಭದಲ್ಲಿ ಬಾಳೆಹಣ್ಣನ್ನು ಗಣೇಶನಿಗ ಅರ್ಪಿಸುವುದರಿಂದ ಆತ ಸಂತೋಷಗೊಳ್ಳುತ್ತಾನೆ.

ಹಲಸಿನ ಹಣ್ಣು:
ಗಣೇಶನ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದ್ದು, ಸಂಪೂರ್ಣವಾಗಿ ಮಾಗಿದ ಹಣ್ಣನ್ನು ಅರ್ಪಿಸಲಾಗುತ್ತದೆ. ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯವನ್ನು ಕರುಣಿಸಲೆಂದು ನೀಡುವ ಹಣ್ಣು ಇದು.

ಮಾವಿನಹಣ್ಣು:
ಇದು ಕೇವಲ ಗಣೇಶನಿಗೆ ಇಷ್ಟವಾದ ಹಣ್ಣು ಮಾತ್ರವಲ್ಲ, ಹೆಚ್ಚಿನ ಪೂಜಾ ಕಾರ್ಯಗಳಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ಗಣೇಶನ ಪೂಜೆ ಮಾಡುವಾಗ ತಾಂಬೂಲದಲ್ಲಿ ಮಾವನ್ನು ಸಹ ಇಡಲಾಗುತ್ತದೆ.

ದಾಳಿಂಬೆ:
ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣು ಗಣೇಶನ ಪ್ರಿಯವಾದ ಹಣ್ಣುಗಳಲ್ಲಿ ಒಂದು. ಆಕಾರ, ಗಾತ್ರ, ಬಣ್ಣ ಮತ್ತು ಬೀಜಗಳು ಜೀವನದ ವಿವಿಧ ಅಂಶಗಳನ್ನು ಬಿಂಬಿಸುತ್ತವೆ. ಆದ್ದರಿಂದ ಇದನ್ನು ದೀರ್ಘಾಯುಷ್ಯ, ವಿವಾಹ, ಸಂತಾನಭಾಗ್ಯದ ಸಂಕೇತವಾಗಿ ಗಣೇಶನಿಗೆ ಅರ್ಪಿಸಲಾಗುವುದು.

ತೆಂಗಿನ ಕಾಯಿ:
ತೆಂಗಿನಕಾಯಿ ಒಡೆಯದೆ ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವುದಿಲ್ಲ. ಇದರಿಂದ ದುಷ್ಟಶಕ್ತಿಗಳನ್ನು ದೂರಮಾಡಲಾಗುವುದು ಎಂದು ನಂಬಲಾಗಿದೆ. ಆದ್ದರಿಂದ ಈ ಮಂಗಳಕರವಾದ ಹಣ್ಣು ಗಣೇಶನಿಗೂ ಬಹಳ ಇಷ್ಟ.



Click it and Unblock the Notifications