Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ:ಇಷ್ಟಾರ್ಥ ಸಿದ್ಧಿಗಾಗಿ ವಿಘ್ನವಿನಾಶಕನಿಗೆ ಈ ಫಲ-ಪುಷ್ಪಗಳನ್ನು ಅರ್ಪಿಸಿ
ವಿಘ್ನವಿನಾಶಕ ಗಣೇಶ, ಜ್ಞಾನದ ಅಧಿಪತಿ. ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಒಳ್ಳೆ ಕಾರ್ಯ ಮಾಡುವ ಮೊದಲು ಗಣೇಶನನ್ನೇ ಮೊದಲು ನೆನೆಯುವುದು, ಅವನನ್ನೇ ಮೊದಲ ಪೂಜಿಸುವುದು. ಏಕೆಂದರೆ ಯಾವುದೇ ವಿಘ್ನಗಳು ಬರದೇ ಇರುವಂತೆ ಕಾಪಾಡುತ್ತಾನೆಂಬ ನಂಬಿಕೆ.
ಈ ವರ್ಷ ಸೆಪ್ಟಂಬರ್ 10ರಂದು ಗಣೇಶ ಚತುರ್ಥಿ ಆರಂಭ. ಈ ದಿನ ಗಣನಾಯಕನನ್ನು ಆತನ ನೆಚ್ಚಿನ ಹೂವು-ಹಣ್ಣುಗಳಿಂದ ಪೂಜಿಸಿದರೆ, ಇಷ್ಟಾರ್ಥ ಸಿದ್ಧಿಯಾಗುವುದು. ಹಾಗಾದರೆ ಡೊಳ್ಳು ಹೊಟ್ಟೆ ಗಣಪನಿಗೆ ಯಾವ್ಯಾವ ಹೂವು-ಹಣ್ಣುಗಳು ಇಷ್ಟ ಎಂದು ಯೋಚನೆ ಮಾಡುತ್ತಿರುವವರಿಗಾಗಿ ನಾವಿಂದು ಮಾಹಿತಿ ನೀಡಲಿದ್ದೇವೆ.
ಗಣೇಶನಿಗೆ ಪ್ರಿಯವಾದ ಹೂವುಗಳು ಹಾಗೂ ಹಣ್ಣುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಗಣಪನಿಗೆ ಪ್ರಿಯವಾದ ಹೂವುಗಳು:
ಗಜಾನನಿಗೆ ಎಲ್ಲ ಹೂವುಗಳಿಗಿಂತಲೂ ಪ್ರಿಯವಾದುದ್ದು ಎಂದರೆ, ಗರಿಕೆ ಹುಲ್ಲು. ತನ್ನೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಈ ಹುಲ್ಲನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಇದನ್ನು ಹೊರತುಪಡಿಸಿ, ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ.
ಕೆಂಪು ದಾಸವಾಳ:
ಇದು ಗಣೇಶನ ನೆಚ್ಚಿನ ಹೂವಾಗಿದ್ದು, ಇದನ್ನು ಸಂಸ್ಕೃತದಲ್ಲಿ ಜಪಕುಸುಮ ಎಂದು ಕರೆಯಲಾಗುತ್ತದೆ. ಚೌತಿಯಂದು, ಗಣೇಶ ವಿಗ್ರಹಗಳಿಗೆ ಈ ಕೆಂಪು ದಾಸವಾಳ ಇಡುವುದನ್ನು ಎಲ್ಲಿಯೂ ತಪ್ಪಿಸುವುದಿಲ್ಲ. ಶತ್ರುಗಳ ಸಮೃದ್ಧಿ ಮತ್ತು ವಿನಾಶಕ್ಕಾಗಿ ಇದನ್ನು ಅರ್ಪಿಸಲಾಗುತ್ತದೆ.
ನಿತ್ಯ ಮಲ್ಲಿಗೆ:
ಈ ಹೂವುಗಳು ವರ್ಷಪೂರ್ತಿ ಲಭ್ಯವಿದ್ದು, ಗಣೇಶನಿಗೆ ಪ್ರಿಯವಾದ ಪುಷ್ಪಗಳಲ್ಲಿ ಒಂದಾಗಿದೆ. ಕುಟುಂಬದ ಐಕ್ಯತೆಗಾಗಿ ಇದನ್ನು ಗಣಪನಿಗೆ ಸಮರ್ಪಿಸಲಾಗುತ್ತದೆ.
ಗಿರಿಕರ್ಣಿಕೆ:
ಈ ಹೂವನ್ನು ಶಂಖಪುಷ್ಪ, ಅಪರಾಜಿತ ಪುಷ್ಪ ಅಂತಲೂ ಕರೆಯುತ್ತಾರೆ. ವಿವಿಧ ಬಣ್ಣಗಳಲ್ಲಿ ಬರುವ ಈ ಹೂವಿನಲ್ಲಿ ಗಣೇಶನಿಗೆ ನೀಲಿ ಬಣ್ಣದ ಗಿರಿಕರ್ಣಿಕೆ ತುಂಬಾ ಇಷ್ಟ. ಬೇಗ ಮದುವೆ ಆಗಬೇಕು ಎನ್ನುವವರು ಗಣೇಶನಿಗೆ ಈ ಹೂವನ್ನು ನೀಡಬಹುದು.
ಚೆಂಡುಹೂ:
ಮಾರಿಗೋಲ್ಡ್ ಎಂದು ಕರೆಯಲ್ಪಡುವ ಈ ಹೂವನ್ನು ಸಾಮಾನ್ಯ ಭಾಷೆಯಲ್ಲಿ ಚೆಂಡು ಹೂ ಎಂದು ಕರೆಯಲಾಗುತ್ತದೆ. ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಗಣೇಶನಿಗೆ ಈ ಹೂವನ್ನು ನೀಡಬಹುದು.
ಹಳದಿ ಸೇವಂತಿಗೆ:
ಗಣಪನಿಗೆ ಸೇವಂತಿಯಂದರೂ ಬಹಳ ಇಷ್ಟವಾಗಿದ್ದು, ಕೆಟ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಹಳದಿ ಸೇವಂತಿಗೆಗಳನ್ನು ಗಣೇಶನಿಗೆ ಅರ್ಪಿಸಿ.
ಪಾರಿಜಾತ:
ಇದನ್ನು ಹವಳ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದು ರಾತ್ರಿ ಅರಳಿ, ಹಗಲಿನಲ್ಲಿ ತನ್ನ ದಳಗಳನ್ನು ಉದುರಿಸುತ್ತದೆ. ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ಈ ಪಾರಿಜಾತ ಹೂವನ್ನು ಮಕ್ಕಳ ಜೀವನ ಉತ್ತಮವಾಗಿರಲೆಂದು ಗಣೇಶನಿಗೆ ಅರ್ಪಿಸಬಹುದು.
ಗಣಪನಿಗೆ ಪ್ರಿಯವಾದ ಹಣ್ಣುಗಳು:
ಬಾಳೆಹಣ್ಣು:
ಎಲ್ಲಾ ದೇವತೆಗಳಿಗೂ ಇಷ್ಟವಾಗುವ ಈ ಹಣ್ಣು ಗಣೇಶನಿಗೂ ತುಂಬಾ ಪ್ರಿಯವಾದುದ್ದು. ಪೂಜೆಯ ಸಂದರ್ಭದಲ್ಲಿ ಬಾಳೆಹಣ್ಣನ್ನು ಗಣೇಶನಿಗ ಅರ್ಪಿಸುವುದರಿಂದ ಆತ ಸಂತೋಷಗೊಳ್ಳುತ್ತಾನೆ.
ಹಲಸಿನ ಹಣ್ಣು:
ಗಣೇಶನ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದ್ದು, ಸಂಪೂರ್ಣವಾಗಿ ಮಾಗಿದ ಹಣ್ಣನ್ನು ಅರ್ಪಿಸಲಾಗುತ್ತದೆ. ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯವನ್ನು ಕರುಣಿಸಲೆಂದು ನೀಡುವ ಹಣ್ಣು ಇದು.
ಮಾವಿನಹಣ್ಣು:
ಇದು ಕೇವಲ ಗಣೇಶನಿಗೆ ಇಷ್ಟವಾದ ಹಣ್ಣು ಮಾತ್ರವಲ್ಲ, ಹೆಚ್ಚಿನ ಪೂಜಾ ಕಾರ್ಯಗಳಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ಗಣೇಶನ ಪೂಜೆ ಮಾಡುವಾಗ ತಾಂಬೂಲದಲ್ಲಿ ಮಾವನ್ನು ಸಹ ಇಡಲಾಗುತ್ತದೆ.
ದಾಳಿಂಬೆ:
ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣು ಗಣೇಶನ ಪ್ರಿಯವಾದ ಹಣ್ಣುಗಳಲ್ಲಿ ಒಂದು. ಆಕಾರ, ಗಾತ್ರ, ಬಣ್ಣ ಮತ್ತು ಬೀಜಗಳು ಜೀವನದ ವಿವಿಧ ಅಂಶಗಳನ್ನು ಬಿಂಬಿಸುತ್ತವೆ. ಆದ್ದರಿಂದ ಇದನ್ನು ದೀರ್ಘಾಯುಷ್ಯ, ವಿವಾಹ, ಸಂತಾನಭಾಗ್ಯದ ಸಂಕೇತವಾಗಿ ಗಣೇಶನಿಗೆ ಅರ್ಪಿಸಲಾಗುವುದು.
ತೆಂಗಿನ ಕಾಯಿ:
ತೆಂಗಿನಕಾಯಿ ಒಡೆಯದೆ ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವುದಿಲ್ಲ. ಇದರಿಂದ ದುಷ್ಟಶಕ್ತಿಗಳನ್ನು ದೂರಮಾಡಲಾಗುವುದು ಎಂದು ನಂಬಲಾಗಿದೆ. ಆದ್ದರಿಂದ ಈ ಮಂಗಳಕರವಾದ ಹಣ್ಣು ಗಣೇಶನಿಗೂ ಬಹಳ ಇಷ್ಟ.