Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಶ್ವತ್ಥ ಮರದಲ್ಲಿ ಹಲವು ದೇವತೆಗಳ ವಾಸ... ತಪ್ಪದೇ ಪೂಜಿಸಿ
ನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ ಇರುವುದನ್ನು ಸಹ ನಾವು ಕಾಣಬಹುದು. ಅಂತಹವುಗಳಲ್ಲಿ ಅಶ್ವತ್ಥ ಮರವೂ ಒಂದು. ಈ ಮರದಲ್ಲಿ ದೇವತೆಗಳು ವಾಸಿಸುತ್ತಾರೆ. ಹಾಗಾಗಿ ಎಲ್ಲಾ ಸಮಯದಲ್ಲೂ ಈ ಮರದ ಬಳಿ ಇರಬಾರದು ಎನ್ನುವ ಪ್ರತೀತಿ ಇದೆ. ಈ ನಂಬಿಕೆಗೆ ಸಾಕ್ಷಿಯಾಗಿ ಒಂದು ಕಥೆ ಇರುವುದನ್ನು ನಾವು ನೋಡಬಹುದು.
ಬ್ರಹ್ಮ ಪುರಾಣದ ಪ್ರಕಾರ, ದುಷ್ಟ ಶಕ್ತಿಗಳು ಆಗಾಗ ದೇವತೆಗಳ ವಿರುದ್ಧ ದಂಗೆ ಏಳುತ್ತಿದ್ದವು. ದುಷ್ಟ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ, ಭಗವಂತನಾದ ವಿಷ್ಣುವು ಎಲ್ಲಾ ದೇವತೆಗಳಿಗೆ ಅಶ್ವತ್ಥ ಮರದ ಹಿಂದೆ ಅಡಗಿ ಕೊಳ್ಳಲು ಹೇಳಿದನು. ವಿಷ್ಣುವಿನ ಮಾತಿನಂತೆ ಎಲ್ಲಾ ದೇವತೆಗಳು ಮರದ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತೆ ಅವಿತು ಕುಳಿತರು.
ಆದರೆ ಲಕ್ಷ್ಮಿ ಮಾತ್ರ ಮರದ ಬುಡದಲ್ಲಿ ಕುಳಿತಳು. ಹಾಗಾಗಿಯೇ ಈ ಮರದ ಆರಾಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತದೆ. ಶಾಸ್ತ್ರವು ಅಶ್ವತ್ಥ ಮರದ ಬಳಿ ಹೋಗುವುದು ಮತ್ತು ಅದರ ಪೂಜೆ ಮಾಡುವುದಕ್ಕೆ ನಿಗದಿತ ಸಮಯವನ್ನು ಹೇಳುತ್ತದೆ. ಹಾಗಾದರೆ ಅದು ಯಾವ ಸಮಯ ಎನ್ನುವ ವಿಚಾರ ಇಲ್ಲಿದೆ....

ಪದ್ಮ ಪುರಾಣ
ಪದ್ಮ ಪುರಾಣದ ಪ್ರಕಾರ ಸೂರ್ಯೋದಯಕ್ಕಿಂತ ಮುಂಚೆ ಅಶ್ವತ್ಥ ಮರದ ಬಳಿ ಹೋಗಬಾರದು. ಹಾಗೊಮ್ಮೆ ಹೋದರೆ ಜೀವನದಲ್ಲಿ ಬಡತನ ಎದುರಾಗುವುದು. ಈ ಮರದ ಪೂಜೆಗೆ ಸೂಕ್ತ ಕಾಲವೆಂದರೆ ಸೂರ್ಯೋದಯದ ನಂತರದ ಕಾಲ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಇಲ್ಲಿಯೇ ನೆಲೆಸುತ್ತಾಳೆ. ಆ ವೇಳೆ ಪೂಜಿಸಿದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

ಶ್ರೀಕೃಷ್ಣನ ಸ್ಥಾನ
ಋಷಿ ಮುನಿಗಳ ನಡುವೆ ನಾರದ ಮಹರ್ಷಿಗಳು ಇರುವಂತೆ, ಶ್ರೀಕೃಷ್ಣನು ಅಶ್ವತ್ಥಮರದಲ್ಲಿ ನೆಲೆಸಿದ್ದಾನೆ. ಹಾಗಾಗಿ ಈ ಮರವನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.

ಸ್ಕಂದ ಪುರಾಣ
ಶನಿ ದೇವರಿಗೆ ಸಂಬಂಧಿಸಿದಂತೆ ವ್ಯಕ್ತಿಗೆ ಸಾಡೇ ಸಾತಿ ಸಂಧಿ ನಡೆಯುತ್ತಿದ್ದರೆ, ಪ್ರತಿ ಶನಿವಾರ ಸಂಜೆ ಮರವನ್ನು ಪ್ರದಕ್ಷಿಣೆ ಹಾಕಿ ಪೂಜಿಸಬೇಕು. ಆಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ...
'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

ಪುಣ್ಯ ಪ್ರಾಪ್ತಿ
ಈ ಮರದ ಆರಾಧನೆ ಕೇವಲ ಕಲ್ಪನೆ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಇದರ ಆರಾಧನೆಯಿಂದ ಆರೋಗ್ಯ ಮತ್ತು ಇತರ ಒಳ್ಳೆಯ ಪ್ರಯೋಜನಗಳು ಉಂಟಾಗುವುದು ಎನ್ನಲಾಗುತ್ತದೆ.



Click it and Unblock the Notifications











