Just In
Don't Miss
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳೆಯರು ಗಾಯತ್ರಿ ಮಂತ್ರ ಪಠಿಸಬಹುದೇ? ಇದನ್ನು 108 ಸಲ ಯಾಕೆ ಪಠಿಸಬೇಕು?
ಜನರ ಸಮಸ್ತ ಸಮಸ್ಯೆಗಳ ನಿವಾರಣೆಯಲ್ಲಿ ಸಹಕಾರಿಯಾಗಬಲ್ಲ ಮ೦ತ್ರವೊ೦ದಿದ್ದರೆ ಅ೦ತಹ ಮಹಾಮ೦ತ್ರವು 'ಗಾಯತ್ರಿ ಮ೦ತ್ರ' ಎಂದು ಈಗಲೂ ನಮ್ಮ ಹಿಂದೂ ಧರ್ಮದಲ್ಲಿ ಜನಜನಿತವಾಗಿದೆ. ಈ ಸ೦ಗತಿಯು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ತಿಳಿದಿರುವ೦ತಹದ್ದೇ ಎಂಬುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಕೋರಿಕೆಗಳನ್ನು ಈಡೇರಿಸಲು ಇದಕ್ಕಿ೦ತ ಉತ್ತಮವಾದ ಮ೦ತ್ರವು ಬೇರೊ೦ದಿಲ್ಲ. ಮಾತೆ ದೇವಿ ಗಾಯತ್ರಿಯನ್ನು ಮಹಾಲಕ್ಷ್ಮೀ, ಸರಸ್ವತಿ ಮತ್ತು ಮಹಾಕಾಳಿ ದೇವತೆಗಳಂತೆಯೇ ವಿಶೇಷವಾಗಿ ಪೂಜಿಸಲಾಗುತ್ತದೆ. ಗಾಯತ್ರಿ ಪದವನ್ನು ನಾವು ವಿಭಜಿಸಿದಾಗ 'ಗಾಯ' ಎಂಬುದು ಜ್ಞಾನದ ಬುದ್ಧಿವಂತಿಕೆಯ ಸಂಕೇತವಾದರೆ ತ್ರಿ ಎಂಬುದು ಮೂರು ಶಕ್ತಿಗಳ ಸಮ್ಮಿಲನವನ್ನು ಸೂಚಿಸುತ್ತದೆ.
ಗಾಯ-ಯ-ತ್ರಿ
ಸಾಂದರ್ಭಿಕ ದೇಹ. ಎಲ್ಲಾ ಮೂರು ಹಂತದಲ್ಲೂ ವಿಪತ್ತುಗಳು ಇರುವುದು. ಈ ಮೂರನ್ನು ದಾಟಿ ಹೋಗುವುದೇ ಮನುಷ್ಯನ ಜೀವನ ಮತ್ತು ಇದರ ಅರ್ಥವೇ ಗಾಯತ್ರಿ ಮಂತ್ರ. ಇದನ್ನು ಯಾರು ಪಠಿಸುತ್ತಾರೋ ಅವರು ವಿಪತ್ತಿನ ಸಮುದ್ರವನ್ನು ದಾಟಿಕೊಂಡು ಹೋಗಿ ಪರಮಸುಖ ಪಡೆಯುವರು. ಗಾಯತ್ರಿ ಮಂತ್ರವು ಮನುಷ್ಯರಿಗೆ ಇರುವಂತಹ ಶ್ರೇಷ್ಠವಾದ ಮಂತ್ರವಾಗಿದೆ. ಇದು ಏನು ಹೇಳುತ್ತದೆ? ನನಗೆ ಆಧ್ಯಾತ್ಮದಲ್ಲಿ ಮುಳುಗಲು ಬಿಡಿ ಮತ್ತು ನನ್ನ ಎಲ್ಲಾ ಪಾಪಗಳನ್ನು ಆ ದೇವರು ನಾಶ ಮಾಡಲಿ. ದೇವರ ಪ್ರಕರ ಬೆಳಕು ಎಲ್ಲಾ ಪಾಪಗಳನ್ನು ನಾಸ ಮಾಡಲಿ, ಆ ದೈವಿ ಬೆಳಕಿನಲ್ಲಿ ಮುಳುಗುವ ಮತ್ತು ಆರಾಧಿಸುವ. ದೈವತ್ವವು ನನ್ನ ಬುದ್ಧಿವಂತಿಕೆಗೆ ಪ್ರೇರಣೆ ನೀಡಲಿ.
ಗಾಯ-ಯ-ತ್ರಿ
ನಮ್ಮ ಎಲ್ಲಾ ಕಾರ್ಯಗಳು ಬುದ್ಧಿವಂತೆ ಮೂಲಕ ನಡೆಯುವುದು ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆಲೋಚನೆಗಳು ಬರುವುದು ಮತ್ತು ಅದರಂತೆ ನೀವು ಪ್ರತಿಕ್ರಿಯಿಸುವಿರಿ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರಲಿ ಎಂದು ದೇವರಲ್ಲಿ ಬೇಡಿ ಕೊಳ್ಳುವಿರಿ. ನೀವು ದೇವರಲ್ಲಿ ಬೇಡಿಕೊಳ್ಳಿ, ನನ್ನ ಜಾಣ್ಮೆಯನ್ನು ತೆಗೆದುಕೊಳ್ಳಿ, ನನ್ನ ಜಾಣ್ಮೆಗೆ ಪ್ರೇರಣೆ ನೀಡಿ: ಧಿಯೋ ಯೋ ನಃ ಪ್ರಚೋದಯಾತ್ ಧಿ ಅಂದರೆ ಜಾಣ್ಮೆ. ನನ್ನ ಜಾಣ್ಮೆಯು ದೈವತ್ವದಿಂದ ಮಾರ್ಗದರ್ಶನ, ಪ್ರೇರಣೆ ಮತ್ತು ಕಿಡಿ ಹೊತ್ತುವಂತೆ ಮಾಡಿ. ಒಳ್ಳೆಯ ಆಲೋಚನೆಗಳು ಬಂದ ವೇಳೆ ನಮ್ಮ ಕಾರ್ಯವು ಸರಿಯಾದ ದಾರಿಯಲ್ಲಿ ಇರುವುದು. ಒಳ್ಳೆಯ ಯೋಚನೆಗಳು ಬಂದ ವೇಳೆ ಆಗ ನಮ್ಮ ಕ್ರಮವು ಕೂಡ ಫಲಪ್ರದವಾಗಿರುವುದು. ಇದರಿಂದಾಗಿ ಅತ್ಯುತ್ತಮವಾಗಿರುವುದಕ್ಕೆ ಪ್ರಾರ್ಥಿಸಿ. ನನ್ನ ಮನಸ್ಸು, ಸಂಪೂರ್ಣ ಜೀವನದ ಶಕ್ತಿಯು ದೈವತ್ವದಲ್ಲಿ ಮುಳುಗಲಿ. ಇದು ಗಾಯತ್ರಿ ಮಂತ್ರದ ಮಹತ್ವವಾಗಿದೆ.
108 ಸಲ ಯಾಕೆ?
ಯಾಕೆಂದರೆ 9 ಗ್ರಹಗಳು ಮತ್ತು 12 ನಕ್ಷತ್ರಪುಂಜಗಳು ಇವೆ. 9 ಗ್ರಹಗಳು 12 ನಕ್ಷತ್ರ ಪುಂಜಗಳ ಸುತ್ತಲು ತಿರುಗುತ್ತಾ ಇರುವ ವೇಳೆ ಅದು 108 ರೀತಿಯ ಬದಲಾವಣೆಗಳನ್ನು ಉಂಟು ಮಾಡುವುದು. ಈ ಬದಲಾವಣೆಯಲ್ಲಿ ಯಾವುದೇ ರೀತಿಯ ತಪ್ಪು ಇದ್ದರೆ ಆಗ ಅದನ್ನು ಮಂತ್ರದ ಮೂಲಕವಾಗಿ ಸರಿಪಡಿಸಿಕೊಳ್ಳಬಹುದಾಗಿದೆ.
ಮಹಿಳೆಯರು ಗಾಯತ್ರಿ ಮಂತ್ರ ಪಠಿಸಬಹುದೇ?
ಮಧ್ಯಕಾಲೀನ ಯುಗದಲ್ಲಿ ಗಾಯತ್ರಿ ಮಂತ್ರವನ್ನು ಮಹಿಳೆಯರು ಪಠಿಸಬಾರದು ಎಂದು ಹೇಳಲಾಗುತ್ತಿತ್ತು. ಆದರೆ ಆಶ್ರಮದಲ್ಲಿ ಇದಕ್ಕೆ ಅನುಮತಿ ಇದೆ ಮತ್ತು ಹಲವಾರು ಮಹಿಳೆಯರು ಇದನ್ನು ಕಲಿಯುತ್ತಿದ್ದಾರೆ. ಇದು ಪುರುಷ ಪ್ರಧಾನವಾಗಿರುವ ಸಮಾಜ. ಮಹಿಳೆಯರು ಗಾಯತ್ರಿ ಮಂತ್ರ ಪಠಿಸಿದರೆ ಆಗ ಅವರಿಗೆ ಹೆಚ್ಚಿನ ಶಕ್ತಿ, ಚಿಕಿತ್ಸಕ ಗುಣ ಮತ್ತು ಸಂಕಲ್ಪ ಶಕ್ತಿ ಬರುವುದು ಎಂದು ನಂಬಿದ್ದರು.
ಮಹಿಳೆಯರು ಗಾಯತ್ರಿ ಮಂತ್ರ ಪಠಿಸಬಹುದೇ?
ಅವರು ಏನು ಇಚ್ಛಿಸುತ್ತಾರೆಯಾ ಅದನ್ನು ಅವರು ಪಡೆಯಲು ಆರಂಭಿಸುವರು. ಇದರಿಂದಾಗಿ ಪುರುಷರು ನಮ್ಮ ಪತ್ನಿ ಈಗಾಗಲೇ ಶಕ್ತಿಶಾಲಿ ಆಗಿರುವಳು, ಅವಳನ್ನು ಇನ್ನಷ್ಟು ಶಕ್ತಿಶಾಲಿ ಮಾಡಲು ನಮಗೆ ಇಷ್ಟವಿಲ್ಲ. ಈ ಕಾರಣದಿಂದಾಗಿ ನಾವು ಅವರಿಗೆ ಈ ಮಂತ್ರವನ್ನು ಪಠಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.