ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ ಎಂದರೆ ವಿವಿಧ ಬಗೆಯ ಅಲರ್ಜಿ ಹಾಗೂ ರೋಗಗಳು ನಮ್ಮನ್ನು ಕಾಡುತ್ತವೆ. ದೇಶೀಯ ಜಿರಳೆಗಳು ಮನೆಯ ಸ್ವಚ್ಛತೆಗೆ ಅಡ್ಡಿ ಮಾಡುವುದಲ್ಲದೆ ಅನೇಕ ಬಗೆಯ ವಸ್ತುಗಳನ್ನು ಹಾಳು ಮಾಡುತ್ತವೆ. ಒಮ್ಮೆ ಈ ಜಿರಳೆಗಳಿಗೆ ಮನೆಯು ಆವಾಸ ಸ್ಥಾನವಾಯಿತೆಂದರೆ ಅದನ್ನು ಸಂಪೂರ್ಣವಾಗಿ ಓಡಿಸುವುದು ಕಷ್ಟವಾಗುತ್ತದೆ. ಜಿರಳೆಗಳ ನಾಶಕ್ಕೆ ಕೆಲವು ಔಷಧಿಗಳು ಇವೆಯಾದರೂ ಸಂಪೂರ್ಣವಾಗಿ ಅವುಗಳನ್ನು ನಿವಾರಿಸಲು ಕಷ್ಟವಾಗುತ್ತದೆ.
ವಿದೇಶಗಳಲ್ಲಿ ಮನೆ ಒಳಗೆ ಒಂದು ಜಿರಳೆಯ ಪ್ರವೇಶವಾದರೂ ಅದರ ನಿರ್ಮೂಲನೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಜಿರಳೆಗಳೇ ಇರದ ಮನೆಗಳು ಬೆರಳೆಣಿಕೆಯ ಪ್ರಮಾಣದಲ್ಲಿ ಸಿಗಬಹುದಷ್ಟೆ. ಬಹುತೇಕ ಮನೆಗಳಲ್ಲಿ ಜಿರಳೆಗಳ ಆವಾಸ ಇದ್ದೇ ಇರುತ್ತದೆ.
ಜಿರಳೆ ಹಲ್ಲಿಗಳನ್ನು ಮನೆಯಿಂದ ಓಡಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್
ಇವು ನಾವು ಸೇವಿಸುವ ಆಹಾರವನ್ನು ಮುಟದ್ಟುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳ ನಿವಾರಣೆಗೆ ಒಂದಿಷ್ಟು ಹಣವನ್ನು ವ್ಯಯಿಸಬೇಕೆಂದೇನೂ ಇಲ್ಲ. ಬದಲಿಗೆ ಕೆಲವು ಸಲಹೆಗಳನ್ನು ಅಥವಾ ವಿಧಾನಗಳನ್ನು ಅನುಸರಿಸಬೇಕು ಅಷ್ಟೆ. ಹಾಗಾದರೆ ಜಿರಳೆಗಳನ್ನು ಓಡಿಸಲು ಸಹಾಯ ಮಾಡುವ ಪರಿಗಳು ಯಾವವು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಮುಂದಿನ ವಿವರಣೆಯನ್ನು ಓದಿ... ನಿಮ್ಮ ಮನೆಯಲ್ಲಿರುವ ಜಿರಳೆಗಳನ್ನು ಬಹುಬೇಗ ಓಡಿಸಿ...
ಸ್ವಚ್ಛತೆ ಮುಖ್ಯ
ಮನೆಯ ಒಳಗೆ ಆದಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಧೂಳು ಹಾಗೂ ಗಲೀಜುಗಳಿರುವ ಪ್ರದೇಶದಲ್ಲಿ ಜಿರಳೆ ಬಹುಬೇಗ ಹುಟ್ಟನ್ನು ಅಥವಾ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಮೇಜಿನ ಮೇಲೆ ತಿಂಡಿ ಅಥವಾ ಊಟ ಮಾಡಿರುವ ಬಟ್ಟಲನ್ನು ಹಾಗೆಯೇ ಬಿಟ್ಟು ಹೋಗಿದ್ದರೆ, ಅದನ್ನು ಒಮ್ಮೆ ಜಿರಳೆಗಳು ಆಗಮಿಸಿ ಸವಿದರೆ ಅವು ಅಲ್ಲಿಯೇ ವಾಸವನ್ನು ಮಾಡುತ್ತವೆ. ಅವುಗಳಿಗೆ ಆಹಾರದ ಕೊರತೆ ಇದೆ ಎಂದಾದರೆ ಅವು ಬಹುಬೇಗ ಮನೆಯಿಂದ ಹೊರಗೆ ನಡೆಯುತ್ತವೆ.
ಜಿರಳೆ ಔಷಧಗಳು
ಜಿರಳೆಗಳು ಒಮ್ಮೆ ಮನೆಯ ಒಳಗೆ ಪ್ರವೇಶಿಸಿ, ಅವುಗಳಿಗೆ ಹಿತವಾದಂತಹ ಪರಿಸರ ಅಥವಾ ಸ್ಥಳಗಳು ದೊರೆಯಿತು ಎಂದಾದರೆ ಬಹುಬೇಗ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಅವು ರಾತ್ರಿಯ ವೇಳೆ ನಾವು ತಿನ್ನುವ ಆಹಾರ ಪಾರ್ಥಗಳ ಮೇಲೆ ದಾಳಿ ಮಾಡುವುದರ ಮೂಲಕ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇವುಗಳನ್ನು ಓಡಿಸುವ ಇನ್ನೊಂದು ಪರಿ ಎಂದರೆ ಜಿರಳೆ ಔಷಧಿಗಳ ಬಳಕೆ. ಜಿರಳೆ ನಿವಾರಣೆಗೆ ಇರುವ ಸ್ಪ್ರೇ, ಮಾತ್ರೆ, ಅಗರಬತ್ತಿ ಗಳಂತಹ ಔಷಧಗಳನ್ನು ಬಳಸಬಹುದು. ಇವುಗಳ ನಿಯಮಿತ ಬಳಕೆಯಿಂದ ಬಹುಬೇಗ ನಿವಾರಣೆ ಕಾಣುವುದು.
ನೀರಿನಂಶವನ್ನು ಕಡಿಮೆ ಮಾಡಿ
ಜಿರಳೆಗಳು 7 ದಿನಗಳಿಗಿಂತ ಹೆಚ್ಚಿನ ಕಾಲ ನೀರಿಲ್ಲದೆ ಬದುಕಲಾರವು. ಹೀಗಾಗಿ ಮನೆಯಲ್ಲಿ ತೇವದ ಪ್ರಮಾಣವನ್ನು ತಗ್ಗಿಸುವುದು ಮತ್ತು ಪ್ರಚಲಿತದಲ್ಲಿರುವ ನೀರಿನ ಸೋರಿಕೆಯನ್ನು ಸರಿಪಡಿಸುವುದು ಅವರ ಸಾವಿಗೆ ಕಾರಣವಾಗುತ್ತದೆ. ಮನೆಯಲ್ಲಿ ಚೆನ್ನಾಗಿ ಗಾಳಿ ಆಡಬೇಕು, ಸೂರ್ಯನ ಬೆಳಕು ಮನೆಯೊಳಗೆ ಬರಬೇಕು. ಮನೆ ಸ್ವಚ್ಛ ಮತ್ತು ಶುಷ್ಕವಾದ ವಾತಾವರಣದಿಂದ ಕೂಡಿರಬೇಕು.
ಬಲವಾದ ಸುಗಂಧವನ್ನು ಬಳಸಿ
ನೆಲದ ಬಲವಾದ ಪರಿಮಳಯುಕ್ತ ದ್ರವದಂತಹ ಸಿಟ್ರೋನೆಲ್ಲಾ ಎಣ್ಣೆ ಅಥವಾ ಯಾವುದೇ ಔಷಧೀಯ ಫಿನೈಲ್ ಗಳೊಂದಿಗೆ ನಿಯಮಿತವಾಗಿ ಸ್ವಚ್ಛಗೊಳಿಸಿ. ಬಲವಾದ ಸುಗಂಧವು ಆಹಾರಕ್ಕಾಗಿ ಹುಡುಕುತ್ತಾ ಬರುವ ಜಿರಳೆಗಳನ್ನು ಹೊರಹಾಕುತ್ತದೆ. ನೆಲ ಶುಚಿಗೊಳಿಸಿದ ನಂತರ ಹೆಚ್ಚಿನ ನೀರಿನಂಶ ಹಾಗೆಯೇ ಉಳಿದುಕೊಳ್ಳಲು ಬಿಡದಿರಿ. ಆದಷ್ಟು ಶುಷ್ಕವಾಗಿಡಲು ಪ್ರಯತ್ನಿಸಿ.
ಬೋರಿಕ್ ಆಮ್ಲ
ಬೋರಿಕ್ ಆಮ್ಲ ಜಿರಳೆಗಳ ನಿವಾರಣೆಗೆ ಉತ್ತಮ ಬಹು ಸಹಕಾರಿ. ನೆಲವನ್ನು ಬೋರಿಕ್ ಆಮ್ಲಗಳಿಂದ ಸ್ವಚ್ಛಗೊಳಿಸಿದರೆ ಜಿರಳೆಗಳು ಆಕಡೆ ತಲೆ ಹಾಕದು. ಇದನ್ನು ಸಿಂಪಡಿಸುವ ವಿಧಾನ ಅಥವಾ ಬಳಕೆಯು ಬಹು ಸರಳವಾಗಿರುತ್ತದೆ.
ಬೇ ಎಲೆಗಳು
ಬೇ ಎಲೆಗಳು ಅತ್ಯಂತ ಪ್ರಬಲವಾದ ಪರಿಮಳವನ್ನು ಹೊಂದಿರುತ್ತವೆ. ಇವುಗಳ ಪರಿಮಳಕ್ಕೆ ಜಿರಳೆಗಳು ಹತ್ತಿರ ಬರಲಾರವು. ಜಿರಳೆಗಳು ಅತ್ಯಂತ ಪರಿಮಳವನ್ನು ಸಹಿಸಲಾರವು. ಜಿರಳೆಗಳು ಬರುವಂತಹ ಪ್ರದೇಶದಲ್ಲಿ ಈ ಎಲೆಯನ್ನು ಇಟ್ಟರೆ ಅವು ಪ್ರವೇಶ ಪಡೆಯಲಾರವು. ಈ ಎಲೆಯನ್ನು ಒಣಗಿಸಿ, ಪುಡಿಮಾಡಿ. ನಂತರ ಪುಡಿಯನ್ನು ಬೇಕೆಂದ ಜಾಗದಲ್ಲಿ ಹರಡುವುದರಿಂದ ಜಿರಳೆಯನ್ನು ತಡೆಯಬಹುದು.
ಮನೆಯನ್ನು ತಂಪಾಗಿರಿಸಿ
ಕೋಣೆ ಅಥವಾ ಮನೆಗಳು ತಂಪಾಗಿದ್ದರೆ ಜಿರಳೆಗಳು ಪ್ರವೇಶ ಪಡೆಯಲಾರವು. ಜಿರಳೆಗಳು ಸಾಮಾನ್ಯವಾಗಿ ತಂಪಾದ ಪ್ರದೇಶದಲ್ಲಿ ಬದುಕುಳಿಯಲಾರವು. ಅವು ಹೆಚ್ಚು ಉಷ್ಣತೆ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಇರುತ್ತವೆ. ಬಿಸಿ ಹೆಚ್ಚಿದಂತಹ ವಾತಾವರಣದಲ್ಲಿಯೇ ರೆಕ್ಕೆಗಳನ್ನು ಪಡೆದುಕೊಳ್ಳುತ್ತವೆ. ಮನೆಯು ತಂಪಾಗಿದ್ದರೆ ಅವುಗಳಿಗೆ ಮನೆಯೊಳಗೆ ಹೆಚ್ಚುಕಾಲ ಉಳಿಯಲು ಸಾಧ್ಯವಾಗದು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಲು 10 ಸರಳ ಸಲಹೆಗಳು
ಜಿರಳೆ ಹಾಗೂ ಹಲ್ಲಿಗಳನ್ನು ಮನೆಯಿಂದ ಓಡಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್
ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಸಲಹೆಗಳು
ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗಬೇಕಾ, ವಾಸ್ತು ಪ್ರಕಾರ ಮನೆ ಹೀಗಿರಲಿ
ಮನೆಯ ಕೆಲವು ಸ್ಥಳದಲ್ಲಿ ಹಣವನ್ನು ಇಡುವುದರಿಂದ ಶ್ರೀಮಂತಿಕೆ ಹೆಚ್ಚುವುದು!
ಮನೆಯನ್ನು ಮನಕ್ಕೊಪ್ಪುವಂತೆ ಶೃಂಗರಿಸುವುದು ಹೇಗೆ?
ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲು ಒಂದಿಷ್ಟು ಸರಳ ವಾಸ್ತು ಶಾಸ್ತ್ರ
ಟೊಮೆಟೊ ಕೆಚಪ್ನಿಂದ ದಿನಬಳಕೆಯ ವಸ್ತುಗಳನ್ನು ಫಳ ಫಳ ಹೊಳೆಯಿಸಿ
ಮನೆಯಲ್ಲಿ ಕನ್ನಡಿ ತೂಗು ಹಾಕಲು ವಾಸ್ತು!
ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು
ಹೊಸ ಟ್ರಿಕ್ಸ್: ಶೌಚಾಲಯದ ಸ್ವಚ್ಛತೆಗೆ ನೈಸರ್ಗಿಕ ಟಿಪ್ಸ್
ಬಡಪಾಯಿ ಶ್ವಾನವೇ, ಇನ್ನೇಕೆ ಭೀತಿ ನಿನಗೆ ಪಟಾಕಿಯಿಂದ?
ಅಡುಗೆ ಮನೆಯ ವಾಸ್ತು ಶಾಸ್ತ್ರ: ತಿಳಿಯಲೇಬೇಕಾದ ಸಂಗತಿಗಳು
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟ ರೆಡ್ಡಿ, ಶ್ರೀರಾಮುಲು ಗೆಲ್ಲಿಸುವುದು ಒಂದೇ ಗುರಿ!
ಬಿಸಿಲನ್ನೇ ವರವಾಗಿಸಿಕೊಂಡ ನೀರಿನ ಸಮಸ್ಯೆಯ ಪಾವಗಡ ಕ್ಷೇತ್ರ
ಮೈಸೂರು: ಸ್ವ-ಪಕ್ಷದವರೊಂದಿಗೆ ಜಗಳ ಮಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು