Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಂಗಳ ಗೌರಿ ವ್ರತಕ್ಕೆ ದೇವರ ಕೋಣೆಯ ಅಲಂಕಾರ
ಮಂಗಳ ಗೌರಿ ವ್ರತದಲ್ಲಿ ಮುತ್ತೈದೆಯರು ಗೌರಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ತುಂಬಾ ಜೋರಾಗಿ ಮಾಡಲಾಗುವುದು ಮನೆ ಮತ್ತು ದೇವರ ಕೋಣೆಯನ್ನು ಶುದ್ಧ ಮಾಡಿ, ದೇವರ ಕೋಣೆಯನ್ನು ಅಲಂಕರಿಸಲಾಗುವುದು. ಮಂಗಳ ಗೌರಿವ್ರತಕ್ಕೆ ಈ ಕೆಳಗಿನಂತೆ ದೇವರ ಕೋಣೆಯನ್ನು ಅಲಂಕರಿಸಲಾಗುವುದು.

ಈ ವ್ರತ ಮಾಡುವವರು ಮನೆಯನ್ನು ಶುದ್ಧ ಮಾಡಿ ದೇವರ ಕೋಣೆಯನ್ನುರಂಗೋಲಿ ಮತ್ತು ದೀಪ, ಹೂಗಳಿಂದ ಅಲಂಕರಿಸುತ್ತಾರೆ. ಗೌರಿ ಮೂರ್ತಿಗೆ ತುಂಬಾ ಅಲಂಕಾರ ಮಾಡಲಾಗುವುದು.
ದೇವರ ಕೋಣೆಯ ಮುಂದುಗಡೆ ರಂಗೋಲಿ ಹಾಕಿ ಅದರಲ್ಲಿ ಒಂದು ಮರದ ಹಲಗೆ ಇಟ್ಟು ಅದರ ಮೇಲೆ ಬ್ಲೌಸ್ ಪೀಸ್ ಇಟ್ಟು ಅದರಲ್ಲಿ ಅಕ್ಕಿ ಹಾಕಿ ಅದರ ಮೇಲೆ ಕಲಶ ಇಡಲಾಗುವುದು. ಕಲಶದಲ್ಲಿ ಅರ್ಧ ಭಾಗದಷ್ಟು ಶುದ್ಧ ನೀರು ತುಂಬಬೇಕು. ಅದರ ಸುತ್ತ ವೀಳ್ಯದೆಲೆಯಿಂದ ಅಲಂಕಾರ ಮಾಡಿರುತ್ತಾರೆ.
ಸಾಮಾನ್ಯವಾಗಿ 5 ವೀಳ್ಯದೆಲೆ ಇಡಲಾಗುವುದು. ನಂತರ ಒಂದು ತಟ್ಟೆಯಲ್ಲಿ ಅರಿಶಿಣ, ಕುಂಕುಮ, ತೇಯ್ದ ಗಂಧ ಇತರ ಪೂಜಾ ಸಾಮಾಗ್ರಿಗಳನ್ನು ಇಡಲಾಗುವುದು. ನಂತರ ಕಲಶದ ಬಾಯಿಯನ್ನು ತೆಂಗಿನ ಕಾಯಿಯನ್ನು ಕೆಂಪು ಬಟ್ಟೆಯಿಂದ ಸುತ್ತಿ ಅದನ್ನು ಕಲಶದ ಮೇಲೆ ಇಡಲಾಗುವುದು. ಹೂ, ಹಣ್ಣುಗಳು, ತೆಂಗಿನಕಾಯಿ ಮತ್ತು ಪಾಯಸವನ್ನು ತಯಾರಿಸಿ ಗೌರಿ ಮೂರ್ತಿ ಮುಂದೆ ಇಡಬೇಕು.
ಪೂಜೆ ಮಾಡುವಾಗ ತೇಯ್ದ ಗಂಧ, ಕೆಂಪು ಹೂ, ಅಗರಬತ್ತಿ ಮತ್ತು ದೀಪಗಳಿಂದ ಅಲಂಕರಿಸಲಾಗುವುದು. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಹಾಗೂ ಮದುವೆಯಾಗಿ ಐದು ವರ್ಷ ಆಗಿರದ ಮುತ್ತೈದೆಯರು ಸೇರಿ ಪೂಜೆ ಮಾಡಿ ಪೂಜೆಗೆ ಬಂದಂತಹ ಮುತ್ತೈದೆಯರಿಗೆ ಉಡುಗೊರೆ ಮತ್ತು ಅರಿಶಿಣ, ಕುಂಕುಮ ನೀಡಿ ಆರ್ಶೀವಾದ ಪಡೆಯುವುದು ಈ ವ್ರತದ ವಿಶೇಷ.



Click it and Unblock the Notifications
