Just In
- 26 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 2 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Lakshmibaramma: ಗೊಂದಲದಲ್ಲಿರುವ ಲಕ್ಷ್ಮೀಗೆ ಕಲರ್ಸ್ ಕನ್ನಡದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡಲು ಹೇಳಿದ ಟ್ರೋಲರ್ಸ್
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Strength Of Stories:ಕೊರೊನಾದ ಬಗ್ಗೆ ಡಾ. ರಾಜು ನೀಡಿರುವ ಉಪಯುಕ್ತ ಮಾಹಿತಿಗಳು
ಕೊರೊನಾ 2ನೇ ಅಲೆಯಲ್ಲಿ ಅನೇಕ ವೈದ್ಯರು ಸಾಮಾಜಿಕ ತಾಣಗಳಲ್ಲಿ ಉಪಯುಕ್ತ ಮಾಹಿತಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಅಂಥ ಜನಪ್ರಿಯ ವೈದ್ಯರಗಳಲ್ಲೊಬ್ಬರು ರಾಜೂಸ್ ಹೆಲ್ತೀ ಇಂಡಿಯಾ ಕ್ಲೀನಿಕ್ ನಡೆಸುತ್ತಿರುವ ಡಾ. ರಾಜು.
ಕೊರೊನಾ ಬಂದ ಇವರ ಹೆಸರು ಬೆಂಗಳೂರಿಗರಿಗೆ ಮಾತ್ರವಲ್ಲ, ಬೆಂಗಳೂರಿನ ಹೊರಗಡೆ ಕೂಡ ತುಂಬಾ ಚಿರಪರಿಚಿತ. ಅದಕ್ಕೆ ಕಾರಣ ಇವರು ಸಾಮಾಜಿಕ ತಾಣಗಳಲ್ಲಿ ಲೈವ್ ಬಂದು ಜನರಲ್ಲಿ ತುಂಬುತ್ತಿದ್ದ ಧೈರ್ಯ ಹಾಗೂ ಕೊರೊನಾ ಸಮಯದಲ್ಲಿ ಏನು ಮಾಡಬೇಕು, ಮಾಡಬಾರದು ಎಂಬುವುದರ ಬಗ್ಗೆ ನೀಡುವ ಸಲಹೆಗಳು.
ನಮ್ಮ ಒನ್ ಇಂಡಿಯಾ ಕನ್ನಡ ತಂಡ ಡಾ. ರಾಜು ಅವರನ್ನು ಸಂಪರ್ಕಿಸಿದಾಗ ಕೊರೊನಾಗೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ನೋಡಿ:
ರೆಮಿಡಿಸಿವಿರ್ ಇಂಜೆಕ್ಷನ್ ಕೊರೊನಾ ರೋಗಿಗಳಿಗೆ ಕೊಡಬಾರದು ಏಕೆ?
ರೆಮಿಡಿಸಿವಿರ್ ಇಂಜೆಕ್ಷನ್ ನ್ನು ಎಂಬೋಲಾ ಬಂದಾಗ ಬಳಸುತ್ತಿದ್ದರು. ಈ ಔಷಧಿ ವೈರಸ್ ಕೊಲ್ಲಲ್ಲ ಹಾಗೂ ಸಾವಿನ ಸಂಖ್ಯೆ ಕೂಡ ತಗ್ಗಿಸುವುದಿಲ್ಲ, ಆಸ್ಪತ್ರೆಯಲ್ಲಿ 10 ದಿನ ಇರಬೇಕಾಗಿದ್ದರೆ 8 ದಿನಕ್ಕೇ ಡಿಸ್ಚಾರ್ಜ್ ಆಗಬಹುದು. ಅಲ್ಲದೆ ಈ ಇಂಜೆಕ್ಷನ್ ಬಳಸುವುದರಿಂದ ಲಿವರ್ಗೂ ಕೂಡ ಹಾನಿಯುಂಟಾಗುವುದು. ಆದ್ದರಿಂದ ಕೊರೊನಾ ಸೋಂಕಿತರಿಗೆ ಈ ಲಸಿಕೆ ನೀಡಬೇಕಾಗಿಲ್ಲ.
ಇದೀಗ WHO ಕೂಡ ಕೊರೊನಾಗೆ ರೆಮಿಡಿಸಿವಿರ್ ನೀಡುವುದರಿಂದ ಪ್ರಯೋಜನವಿಲ್ಲ ಎಂದಿದೆ.
ಹಳ್ಳಿಗಳಲ್ಲಿ ಕೊರೊನಾ, ಭಯ ಪಡಬೇಡಿ ಎಂದ ವೈದ್ಯರು
ಇದೀಗ ಹಳ್ಳಿಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗಿ ಕಂಡು ಬರುತ್ತಿದೆ, ಆದರೆ ಇದರ ಬಗ್ಗೆ ಏನೂ ಆತಂಕ ಪಡಬೇಕಾಗಿಲ್ಲ, ಹಳ್ಳಿಗಳಲ್ಲಿ ವಾತಾವರಣ ಚೆನ್ನಾಗಿರುತ್ತದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಚಿಕಿತ್ಸೆ ದೊರೆಯುವುದು, ಬೇಗನೆ ಚೇತರಿಸಿಕೊಳ್ಳಬಹುದು, ಏನೂ ಭಯ ಪಡಬೇಕಾಗಿಲ್ಲ ಎಂಬುವ ಮೂಲಕ ವೈದ್ಯರು ಧೈರ್ಯವನ್ನು ತುಂಬುತ್ತಿದ್ದಾರೆ.
3ನೇ ಅಲೆ ಬರಬಹುದೇ?
ಮೊದಲಿದ್ದ ವೈರಸ್ ಮತ್ತೆ ಕಾಣಿಸಿದರೆ ಅದು 2ನೇ ಅಲೆ ಅನ್ನಬಹುದು. ಈಗ ಬಂದಿರುವುದು ರೂಪಾಂತರ ವೈರಸ್ ಆಗಿದೆ, ಆದ್ದರಿಂದ ಅದು 2ನೇ ಅಲೆ ಅಲ್ಲ, ಇನ್ನು 3ನೇ ಅಲೆ ಬರುವುದು ಅಂತಿದ್ದಾರೆ, ಆದರೆ ಬರುವ ಸಾಧ್ಯತೆ ಕಡಿಮೆ, ಬಂದರೂ ಈಗಾಗಲೇ ನಮ್ಮಲ್ಲಿ ಹರ್ಡ್ ಇಮ್ಯೂನಿಟಿ ಬೆಳೆದಿರುವುದರಿಂದ ಭಯ ಪಡಬೇಕಾಗಿಲ್ಲ ಎಂಬುವುದು ಡಾ. ರಾಜು ಅವರ ಅಭಿಪ್ರಾಯ.
ಕೊರೊನಾ ಲಸಿಕೆಗಳಲ್ಲಿ ಯಾವುದು ಪರಿಣಾಮಕಾರಿ?
ಲಸಿಕೆಯಲ್ಲಿ ಯಾವುದನ್ನಾದರೂ ಪಡೆಯಬಹುದು. ಶೇ.100ರಷ್ಟು ಅಡ್ಡಪರಿಣಾಮವಿಲ್ಲ ಎನ್ನುವ ಯಾವುದೇ ಲಸಿಕೆಯಿಲ್ಲ.
ಕಷಾಯದಿಂದ ಕೊರೊನಾವನ್ನು ಗುಣಪಡಿಸಬಹುದೇ?
ಕೊರೊನಾವನ್ನು ಕೊಲ್ಲಲು ಆಯುರ್ವೇದಿಂದಾಗಲಿ, ಹೋಮಿಯೋಪತಿಯಿಂದಾಗಲಿ, ಅಲೋಪತಿಯಿಂದಾಗಲಿ ಸಾಧ್ಯವಿಲ್ಲ. ಆದರೆ ಕಷಾಯಗಳನ್ನು ತೆಗೆದುಕೊಂಡರೆ ಗಂಟಲು ಕರೆತ, ಕೆಮ್ಮು ಇವುಗಳನ್ನು ಕಡಿಮೆ ಮಾಡಲು ಸಹಯ ಮಾಡುತ್ತೆ.
ಪ್ರತೀದಿನ ಸ್ಟೀಮ್ ತೆಗೆಯಬಹುದೇ?
ತಲೆಭಾರವಿದ್ದರೆ ಸ್ಟೀಮ್ ತೆಗೆಯಬಹುದು, ಆದರೆ ಪ್ರತೀದಿನ ಸ್ಟೀಮ್ ತೆಗೆದುಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ, ಇದರಿಂದ ವಾಸನೆ ಗ್ರಹಿಸುವ ಶಕ್ತಿ ಕೂಡ ಕುಂದುವುದು ಅಗ್ಯತವಿದ್ದಾಗ ಮಾತ್ರ ಸ್ಟೀಮ್ ತೆಗೆಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೊರೊನಾ ಲಸಿಕೆ ಪಡೆದ ಬಳಿಕ ಮದ್ಯಪಾನ ಮಾಡಬಹುದೇ?
ಎಷ್ಟೋ ಜನ ಲಸಿಕೆ ಪಡೆದ ಬಳಿಕ ಮದ್ಯಪಾನ ಮಾಡಿರುವುದನ್ನು ನಾನು ನೋಡಿದ್ದೇನೆ, ಅವರಿಗೇನು ತೊಂದರೆಯಾಗಿಲ್ಲ. ಆದ್ದರಿಂದ ಮದ್ಯಪಾನಕ್ಕೂ, ಲಸಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಗ್ರಾಮೀಣ ಪ್ರದೇಶದವರಿಗೆ ವೈದ್ಯರ ಸಲಹೆ:
* ನಮ್ಮ ಊರಲ್ಲಿ ಕೇಸ್ ಅಧಿಕವಾಗುತ್ತಿದೆ ಎಂಬ ಆತಂಕ ಬೇಡ, ಧೈರ್ಯವಾಗಿರಿ.
* ಕೊರೊನಾ ಬಂದ್ರೆ ಔಷಧಿ ತೆಗೆದುಕೊಂಡು ಕಂಪ್ಲೀಟ್ ಬೆಡ್ ರೆಸ್ಟ್ ಮಾಡಿ.
* ಸೋಂಕು ತಗುಲಿದರೆ ಒಳ್ಳೆಯದೇ, ಇದರಿಂದ ಚೇತರಿಸಿಕೊಂಡರೆ 3ನೇ, 4ನೇ ಅಲೆ ಎಂಬ ಭಯವಿಲ್ಲ.
* ಸೋಂಕು ತಗುಲಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಆದ್ದರಿಂದ ಭಯಬೇಡ ಎಂದು ಸಲಹೆ ನೀಡಿದ್ದಾರೆ.
ಡಾ. ರಾಜು ಅವರ ಪ್ರಕಾರ ಕೊರೊನಾ ಎದುರಿಸುವ ಮದ್ದು ಎಂದರೆ ಧೈರ್ಯ. ಸೋಂಕು ಬರಲಿ, ಬಾರದಿರಲಿ ಧೈರ್ಯವಾಗಿರಿ, ಇದರಿಂದ ಸೋಂಕು ಗೆಲ್ಲಲು ಸಾಧ್ಯವಾಗುವುದು.