Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಈ ಆಹಾರಗಳನ್ನು ಸೇವಿಸಬೇಡಿ....
ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು, ಅಪಾನವಾಯು, ಹೊಟ್ಟೆಯುರಿ ಮೊದಲಾದವೆಲ್ಲಾ ಗ್ಯಾಸ್ಟ್ರಿಕ್ ಅಥವಾ ವಾಯುಪ್ರಕೋಪದ ಪರಿಣಾಮಗಳಾಗಿವೆ. ಈ ತೊಂದರೆಗಳಿಗೆ ಸೂಕ್ತವಾದ ಔಷಧಿಗಳಿವೆ. ನಿಮ್ಮ ಕುಟುಂಬ ವೈದ್ಯರು ನಿಮ್ಮ ಆರೋಗ್ಯವನ್ನು ಗಮನಿಸಿ ಸೂಕ್ತವಾದ ಔಷಧಿಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಔಷಧಿ ಸೇವಿಸಿದಾಗ ವಾಯುಪ್ರಕೋಪ ಕಡಿಮೆಯಾಗಬಹುದು. ಆದರೆ ಕೆಲದಿನಗಳ ನಂತರ ಮತ್ತೆ ಕಾಣಿಸಿಕೊಂಡರೆ? ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಲು ಟಿಪ್ಸ್
ಇದಕ್ಕೆ ಮುಖ್ಯ ಕಾರಣ ನಿಮ್ಮ ವಾಯುಪ್ರಕೋಪ ಪೂರ್ಣವಾಗಿ ಗುಣವಾಗುವ ಮುನ್ನವೇ ನಿಮಗಾಗದ ಯಾವುದೋ ಆಹಾರ ಸೇವಿಸಿದ್ದರ ಪರಿಣಾಮವಾಗಿ ನಿಮ್ಮ ವೈದ್ಯರು ನೀಡಿದ್ದ ಔಷಧಿಯ ಪರಿಣಾಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು. ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?
ಈಗ ಮತ್ತೊಮ್ಮೆ ಹೋದಾಗ ವೈದ್ಯರ ಬಳಿ ಬೈಸಿಕೊಳ್ಳುವುದಂತೂ ಖಚಿತ. ಆದರೆ ಮುಂದಿನ ಬಾರಿ ಬೈಸಿಕೊಳ್ಳಬಾರದು ಎಂದಿದ್ದರೆ ನಿಮಗೆ ಸೂಕ್ತವಲ್ಲದ ಆಹಾರವನ್ನು ಸೇವಿಸದಿದ್ದರೆ ಸರಿ. ಆದರೆ ಈ ಆಹಾರಗಳು ಯಾವುವು? ವೈದ್ಯರ ಬಳಿ ಈಗ ಕೇಳಲಿಕ್ಕೆ ಧೈರ್ಯವಾಗುತ್ತಿಲ್ಲವೇ, ತೊಂದರೆಯಿಲ್ಲ, ಈ ಲೇಖನ ಓದಿ.....

ಎಲೆಕೋಸು
ಈ ಪಟ್ಟಿಯಲ್ಲಿ ಬರುವ ಮೊದಲ ಆಹಾರವೇ ಎಲೆಕೋಸು. ಇದರಲ್ಲಿ ನಾರು ತುಂಬಾ ಹೆಚ್ಚಾಗಿದ್ದು ಪದರ ಪದರವಾಗಿರುವ ಈ ತರಕಾರಿ ಸುಲಭವಾಗಿ ಜೀರ್ಣವಾಗದು. ಇದೇ ಕಾರಣಕ್ಕೆ ಅಜೀರ್ಣತೆಯಿಂದ ವಾಯುಪ್ರಕೋಪ ಕಂಡುಬಂದಿದ್ದರೆ ಎಲೆಕೋಸನ್ನು ಸರ್ವಥಾ ಸೇವಿಸಬಾರದು.

ಎಲೆಕೋಸು
ಏಕೆಂದರೆ ಮೊದಲೇ ಅಜೀರ್ಣದಿಂದ ಬಳಲಿದ್ದ ಕರುಳುಗಳು ಈ ನಾರನ್ನು ಸರ್ವಥಾ ಜೀರ್ಣಿಸಲಾರವು. ಅಪ್ಪಿ ತಪ್ಪಿ ಮದ್ಯಾಹ್ನ ಮರೆತಾದರೂ ಕೊಂಚ ತಿಂದರೆ ಪರವಾಗಿಲ್ಲ, ಆದರೆ ರಾತ್ರಿ ಮಾತ್ರ ತಿನ್ನಲೇಬಾರದು.

ಆಲೂಗಡ್ಡೆ
ಅತಿಹೆಚ್ಚಿನ ಸಂಖ್ಯೆಯ ಖಾದ್ಯಗಳಲ್ಲಿ ಸಾಮಾನ್ಯವಾಗಿರುವ ಆಲೂಗಡ್ಡೆಯ ಖ್ಯಾತಿ ಎಷ್ಟೇ ಇದ್ದರೂ ವಾಯುಪ್ರಕೋಪವಿದ್ದಾಗ ಇದು ಸರ್ವಥಾ ಸೇವಿಸಲು ಅಯೋಗ್ಯವಾದ ತರಕಾರಿಯಾಗಿದೆ. ಏಕೆಂದರೆ ಆಲುಗಡ್ಡೆಯಲ್ಲಿರುವ ಪಿಷ್ಟ ಜೀರ್ಣಕ್ರಿಯೆ ಸರಿಯಾಗಿಲ್ಲದ ಸಮಯದಲ್ಲಿ ಸರಿಯಾಗಿ ಜೀರ್ಣವಾಗದೇ ಹೊಟ್ಟೆಯನ್ನು ಕೆಡಿಸುತ್ತದೆ.

ಆಲೂಗಡ್ಡೆ
ಅಲ್ಲದೇ ಒಂದು ವೇಳೆ ಯಾವುದಾದರೂ ದ್ವಿದಳ ಧಾನ್ಯಗಳೊಂದಿಗೆ ಸೇವಿಸಿದರಂತೂ ಹೊಟ್ಟೆಯಲ್ಲಿ ಅತಿ ಹೆಚ್ಚಿನ ವಾಯು ತುಂಬಿಕೊಳ್ಳಲು ಪರೋಕ್ಷವಾಗಿ ಕಾರಣವಾಗುತ್ತದೆ.

ಸಿಹಿಲಿಂಬೆ
ಲಿಂಬೆಯಲ್ಲಿ ಕೊಂಚ ದೊಡ್ಡ ಗಾತ್ರದ ಸಿಹಿಲಿಂಬೆ(Citrus limetta) ಯ ಸೇವನೆಯೂ ಅಜೀರ್ಣದ ಸಮಯದಲ್ಲಿ ತರವಲ್ಲ. ಇದರಲ್ಲಿರುವ ವಿಟಮಿನ್ ಸಿ ಹೊಟ್ಟೆಯಲ್ಲಿ ಗಾಳಿ ತುಂಬಿದ್ದ ಸಮಯದಲ್ಲಿ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ.

ಲಿಂಬೆ
ಅಲ್ಲದೇ ಹೊಟ್ಟೆಯ ಒಳಗೋಡೆಗಳಲ್ಲಿ ಪ್ರಚೋದನೆಯುಂಟುಮಾಡಿ ಇನ್ನೂ ಹೆಚ್ಚಿನ ಜೀರ್ಣರಸಗಳು ಸ್ರವಿಸುವಂತೆ ಮಾಡುತ್ತದೆ. ಇದು ಇನ್ನಷ್ಟು ಅಜೀರ್ಣ, ಹೊಟ್ಟೆಯುರಿಗೆ ಕಾರಣವಾಗುತ್ತದೆ. ಆದ್ದರಿಂದ ಸಿಹಿಲಿಂಬೆಯ ರಸವನ್ನು ಈ ಸಮಯದಲ್ಲಿ ಸರ್ವಥಾ ಸೇವಿಸಬಾರದು.

ಸೌತೆಕಾಯಿ
ರಾತ್ರಿಯೂಟದ ಸಮಯದಲ್ಲಿ ಸೌತೆಕಾಯಿ ತಿನ್ನುವ ಮೂಲಕ ಬೊಜ್ಜು ಇಳಿಸಬಹುದು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಹೊಟ್ಟೆಯುಬ್ಬರವಿದ್ದ ಸಮಯದಲ್ಲಿ ಸೌತೆಕಾಯಿಯ ಸೇವನೆಯೂ ನಮ್ಮ ಲೆಕ್ಕಾಚಾರವೆನ್ನಲ್ಲಾ ತಲೆಕೆಳಗಾಗಿಸುತ್ತದೆ.

ಸೌತೆಕಾಯಿ
ಸೌತೆಯಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯನ್ನು ಇನ್ನಷ್ಟು ನಿಧಾನಗೊಳಿಸುವ ಮೂಲಕ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುತ್ತದೆ. ಇದೇ ಕಾರಣಕ್ಕೆ ರಾತ್ರಿಯೂಟದ ಬಳಿಕ ಸೌತೆಕಾಯಿ ತಿಂದರೆ ಹೊಟ್ಟೆ ವಿಪರೀತವಾಗಿ ಉಬ್ಬಿರುತ್ತದೆ.

ಕಲ್ಲಂಗಡಿ ಹಣ್ಣು
ನೀರು ಅತಿಹೆಚ್ಚು ಇರುವ ಹಣ್ಣಾದ ಕಲ್ಲಂಗಡಿಯಲ್ಲಿಯೂ ಕರಗದ ನಾರು ಉತ್ತಮ ಪ್ರಮಾಣದಲ್ಲಿದೆ. ಇದೂ ಈಗಾಗಲೇ ವಾಯುಪ್ರಕೋಪದಿಂದ ನರಳುತ್ತಿರುವ ಜೀರ್ಣಾಂಗಗಳ ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಲ್ಲಂಗಡಿ ಹಣ್ಣು
ಅಲ್ಲದೇ ಇದರಲ್ಲಿರುವ ಮ್ಯಾನಿಟ್ಟಾಲ್ ಎಂಬ ಸಕ್ಕರೆ ಜೀರ್ಣರಸಗಳಲ್ಲಿ ಬೆರೆತಾಗ ಹೆಚ್ಚಿನ ಪ್ರಮಾಣದಲ್ಲಿ ವಾಯು ಉತ್ಪತ್ತಿಯಾಗುತ್ತದೆ. ಇದು ವಾಯುಪ್ರಕೋಪವನ್ನು ಬಹಳಷ್ಟು ಹೆಚ್ಚಿಸುತ್ತದೆ.



Click it and Unblock the Notifications